ಉಪ್ಪಳದಲ್ಲಿ ಗಲ್ಫ್ ಉದ್ಯೋಗಿ ಮನೆಗೆ ಗುಂಡು ಹಾರಿಸಿದ ಪ್ರಕರಣಕ್ಕೆ ಹೊಸ ತಿರುವು: ಗುಂಡು ಹಾರಿಸಿದ್ದು ಮನೆಯೊಡೆಯನ 14ರ ಹರೆಯದ ಪುತ್ರ

ಉಪ್ಪಳ:  ಉಪ್ಪಳದಲ್ಲಿ ಗಲ್ಫ್ ಉದ್ಯೋಗಿಯ ಮನೆಗೆ  ಗುಂಡು ಹಾರಿಸಲಾಯಿತೆಂಬ  ಪ್ರಕರಣಕ್ಕೆ ಹೊಸ ತಿರುವು ಮೂಡಿದೆ.  ಗುಂಡು ಹಾರಿಸಿರುವುದು ಮನೆ ಮಾಲಕನ ೧೪ರ ಹರೆಯದ ಪುತ್ರನಾಗಿದ್ದಾನೆಂದು ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ. ಇದರಿಂದ ನಾಗರಿಕರು ಹಾಗೂ ಪೊಲೀಸರನ್ನು ಕಾಡುತ್ತಿದ್ದ ಆತಂಕ ದೂರವಾಗಿದೆ.  ನಿನ್ನೆ ಸಂಜೆ ಪೊಲೀಸರು ನಡೆಸಿದ ತನಿಖೆ ವೇಳೆ ಬಾಲಕ ಘಟನೆಯ ಸತ್ಯಾವಸ್ಥೆಯನ್ನು ಬಹಿರಂಗಪಡಿಸಿ ದ್ದಾನೆ. ಗುಂಡು ಹಾರಿಸಲು ಬಳಸಿದ ಏರ್‌ಗನ್ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಮೊನ್ನೆ ಸಂಜೆ ಮನೆಗೆ ಗುಂಡು ಹಾರಿಸಿರುವುದಾಗಿ ದೂರು ಕೇಳಿಬಂದಿತ್ತು. ಘಟನೆ …

ಮುಳ್ಳೇರಿಯದಲ್ಲಿ ನಾಳೆಯಿಂದ ಶಾಲಾ ಕಲೋತ್ಸವ

ಮುಳ್ಳೇರಿಯ: 64ನೇ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ನಾಳೆಯಿಂದ 15ರವರೆಗೆ ಮುಳ್ಳೇರಿ ಯದಲ್ಲಿ ನಡೆಯಲಿದೆ. ಮುಳ್ಳೇ ರಿಯ ಜಿವಿಎಚ್‌ಎಸ್‌ಎಸ್‌ನಲ್ಲಿ ನಡೆಯುವ ಈ ಕಲೋತ್ಸವದಲ್ಲಿ 330 ಸ್ಪರ್ಧೆಗಳಲ್ಲಿ 6000ದಷ್ಟು ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ. ಕುಂಬಳೆ ಉಪಜಿಲ್ಲೆಯಲ್ಲಿ ಒಟ್ಟು 120 ಶಾಲೆಗಳಿದ್ದು, ಈ ಪೈಕಿ 98 ಶಾಲೆಗಳಿಂದ ಮಕ್ಕಳು ಹೆಸರು ನೋಂದಾಯಿಸಿದ್ದಾರೆ. ನಾಳೆ 18 ವೇದಿಕೆಗಳಲ್ಲಿ ಸ್ಪರ್ಧೆ ನಡೆಯಲಿರುವುದು. ಕಲೋತ್ಸವಕ್ಕಾಗಿ ಸಿದ್ಧತೆಗಳು ಪೂರ್ಣಗೊಂಡಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ವಸ್ತ್ರ ವ್ಯಾಪಾರಿ ನಿಧನ

ಮುಳ್ಳೇರಿಯ: ಹಲವಾರು ವರ್ಷಗಳಿಂದ ಮುಳ್ಳೇರಿಯ ಪೇಟೆಯಲ್ಲಿ ಎ.ವಿ. ಸುಮಿತ್ರನ್ ಕ್ಲೋತ್ ಸ್ಟೋರ್ ಮಾಲಕರಾಗಿದ್ದ ಎ.ವಿ. ಸುಮಿತ್ರನ್ (60) ನಿಧನ ಹೊಂದಿದರು. ಮೃತರು ಪತ್ನಿ ಉಷಾ, ಮಕ್ಕಳಾದ ಸುಮೇಶ್, ನಿತೀಶ್, ದೇವಿಕ, ಸೊಸೆ ರಾಧಿಕಾ, ಸಹೋದರಿಯರಾದ ಭಾರತಿ, ಶಾಂತಾ, ಇಂದಿರಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಹೋದರರಾದ ವಿಜಯನ್, ಶಶಿಧರನ್ ಈ ಹಿಂದೆ ನಿಧನ ಹೊಂದಿದ್ದಾರೆ.

ದೇಶದಲ್ಲಿ ಭಯೋತ್ಪಾದಕ ದಾಳಿಗೆ ಸಂಚು: ಬೃಹತ್ ಪ್ರಮಾಣದ ಸ್ಫೋಟಕ ಪತ್ತೆ

ದೆಹಲಿ: ದೇಶದಲ್ಲಿ ಬೃಹತ್ ಭಯೋತ್ಪಾದಕ ದಾಳಿ ನಡೆಸುವ ಸಂಚನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ಹರ್ಯಾಣದಲ್ಲಿ  300 ಕೆಜಿ ಆರ್‌ಡಿಎಕ್ಸ್ ಮತ್ತು ಇತರ ಭಾರೀ ಸ್ಫೋಟಕ ವಸ್ತುಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಹರ್ಯಾಣದ ಫರೀದಾಬಾದ್‌ನಲ್ಲಿ ಭಯೋತ್ಪಾದಕ ಸಂಪರ್ಕ ಹೊಂದಿರುವ ಶಂಕಿತ ವೈದ್ಯರೊಬ್ಬರಿಂದ  ಈ ಬೃಹತ್ ಪ್ರಮಾಣದ ಆರ್‌ಡಿಎಕ್ಸ್, ಎಕೆ 47  ಮತ್ತು ಮದ್ದುಗುಂಡುಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಇದಕ್ಕೆ ಸಂಬಂಧಿಸಿ ಶಂಕಿತ ವೈದ್ಯನನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ. ಪೊಲೀಸರ ವಶಕ್ಕೊ ಗಾದ ಈ ವೈದ್ಯ ಜಮ್ಮು  ಕಾಶ್ಮೀರಕ್ಕೆ ಸೇರಿದವನಾಗಿ ದ್ದಾನೆ. ಈ …

ಆಡಂಬರ ಕಾರುಗಳನ್ನು ಬಾಡಿಗೆಗೆ ಪಡೆದು ವಂಚನೆ: ಕೇಸು ದಾಖಲು

ಕಾಸರಗೋಡು: ರೈಲ್ವೇಯ ಅಗತ್ಯಕ್ಕೆಂದು ತಿಳಿಸಿ ಬಾಡಿಗೆಗೆ ಪಡೆದ ಆಡಂಬರ ಕಾರುಗಳನ್ನು ಮರಳಿ ನೀಡ ದೆ ವಂಚಿಸಿರುವುದಾಗಿ ದೂರಲಾಗಿದೆ. ಮೊಗ್ರಾಲ್ ಪೇರಾಲ್‌ನ ಮೆಹ್‌ರೂಫ್ ಮಂಜಿಲ್‌ನ ಕೆ.ಎಂ. ಮುಜೀಬ್  ರಹ್ಮಾನ್‌ರ ದೂರಿನ ಮೇರೆಗೆ ಹೊಸದುರ್ಗ ಬಿ.ಎಂ.ಜೆ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಶಂಸುದ್ದೀನ್ ಮುಹಮ್ಮದ್ (44) ವಿರುದ್ಧ ಕಾಸರಗೋಡು ನಗರ ಠಾಣೆ ಪೊಲೀಸರು ವಂಚನೆ ಕೇಸು ದಾಖಲಿಸಿದ್ದಾರೆ. 2025 ಜುಲೈ 1 ಹಾಗೂ ೩೧ರ ಮಧ್ಯೆಗಿನ ದಿನಗಳಲ್ಲಿ ಅಣಂಗೂರಿನಲ್ಲಿ  ದೂರುದಾತ ಹಾಗೂ ಅವರ ಸಹೋ ದರನ, ಮಾವನ ಮಾಲಕತ್ವದಲ್ಲಿರುವ ಎರಡು ಕ್ರೆಟ್ ಕಾರುಗಳು …

ಕುಂಟಂಗೇರಡ್ಕದಲ್ಲಿ ಸ್ಮಶಾನದಿಂದ 124 ಮರ ಕಡಿದು ಸಾಗಾಟ: ಪೊಲೀಸ್ ತನಿಖೆ ಆರಂಭ

ಕುಂಬಳೆ: ಕುಂಬಳೆ ಪಂಚಾ ಯತ್‌ನ ಅಧೀನದಲ್ಲಿ ಕಿದೂರು ಕುಂಟಂಗೇರಡ್ಕದಲ್ಲಿರುವ ಪರಿಶಿಷ್ಟ ಜಾತಿ ಸ್ಮಶಾನದಿಂದ ಎರಡು ಲಕ್ಷ ರೂಪಾಯಿ ಮೌಲ್ಯದ ಮರಗಳನ್ನು ಕಡಿದು ಸಾಗಾಟ ನಡೆಸಿದ ಘಟನೆಗೆ ಸಂಬಂಧಿಸಿ ಕುಂಬಳೆ ಪೊಲೀಸರು ಕೇಸು ದಾಖಲಿಸಿ ಕೊಂಡು ತನಿಖೆ ಆರಂಭಿಸಿದ್ದಾರೆ. ನವಂಬರ್ 6 ಅಥವಾ 7ರಂದು ಮರ ಕಡಿದು ಸಾಗಾಟ ನಡೆಸಿರುವುದಾಗಿ ಅಂದಾಜಿಸಲಾಗಿದೆ. ಸಣ್ಣ ಹಾಗೂ ದೊಡ್ಡ 124 ಮರಗಳನ್ನು ಕಡಿದು ಸಾಗಾಟ ನಡೆಸಲಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಮರಗಳನ್ನು ಅನಧಿಕೃತವಾಗಿ ಕಡಿದು ಸಾಗಾಟ ನಡೆಸಲಾಗಿದೆ ಎಂದು ಹೇಳಲಾಗು ತ್ತಿದೆ. …

ಬೆಂಕಿ ತಗಲಿ ಚಿಕಿತ್ಸೆಯಲ್ಲಿದ್ದ ವೃದ್ದೆ ಮೃತ್ಯು

ಹೊಸದುರ್ಗ: ಹಿತ್ತಿಲಲ್ಲಿ  ಬೆಂಕಿ ತಗಲಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ವೃದ್ದೆ ಮೃತಪಟ್ಟರು. ಪಿಲಿಕ್ಕೋಡ್‌ವಯಲ್‌ನ ಮೀನು ಕಾರ್ಮಿಕೆ ಪುದಿಯಡವನ್ ಮಾಧವಿ (73) ಮೃತಪಟ್ಟವರು. ಈ ತಿಂಗಳ ೨ರಂದು ಸಂಜೆ ಮನೆ ಹಿತ್ತಿಲಿನಲ್ಲಿ ಇವರಿಗೆ ಬೆಂಕಿ ತಗಲಿತ್ತು. ಕಣ್ಣೂರು ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ನಿನ್ನೆ ಇವರು ಮೃತಪಟ್ಟರು. ಚಂದೇರ ಪೊಲೀಸರು  ಮಹಜರು ನಡೆಸಿದರು. ಮೃತರು ಪುತ್ರ ಪಿ. ಚಂದ್ರನ್, ಸೊಸೆ ಎಂ. ಉಷಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಪತಿ ಕಾರ್ಯತ್ ಕಣ್ಣನ್ ಈ …

ಅಕ್ರಮ ಭೂ ಕಬಳಿಕೆ: ಕಬಳಿಸಿದ್ದು 1341 ದೇವಸ್ಥಾನಗಳ 24,693 ಎಕ್ರೆ ಜಮೀನು, ಮೀಸಲು ಫಂಡ್ ಅಕೌಂಟ್ ಸಮಿತಿ ಹೊರಬಿಟ್ಟ ಸ್ಫೋಟಕ ಮಾಹಿತಿ

ಕಾಸರಗೋಡು: ಮಲಬಾರ್ ಮುಜರಾಯಿ ಮಂಡಳಿಗೆ ಸೇರಿದ 1341 ದೇವಸ್ಥಾನಗಳಿಗೆ ಸೇರಿದ 24,693 ಎಕ್ರೆ ಜಮೀನನ್ನು ಅಕ್ರಮವಾಗಿ ಕಬಳಿಸಲಾಗಿದೆಯೆಂಬ ಸ್ಫೋಟಕ ಮಾಹಿತಿಯನ್ನು ವಿಧಾನಸಭೆಯ ಲೋಕಲ್ ಫಂಡ್ ಅಕೌಂಟ್ಸ್ ಸಮಿತಿ ವರದಿಯಲ್ಲಿ ಬಹಿರಂಗಪಡಿಸಲಾಗಿದೆ.ಅAದರೆ ಮಲಬಾರ್ ಮುಜರಾಯಿ ಮಂಡಳಿ ವ್ಯಾಪ್ತಿಗೊಳಪಟ್ಟ ದೇವಸ್ಥಾನ ಗಳಿಗೆ ಸೇರಿದ ಒಟ್ಟು ಜಮೀನಿನ ಪೈಕಿ ಶೇ. 87ರಷ್ಟನ್ನು ಈ ರೀತಿ ಅಕ್ರಮವಾಗಿ ಕಬಳಿಸಲಾಗಿದೆ. ಆದರೆ ಇದನ್ನು ಮರು ಸ್ವಾಧೀನಪಡಿಸುವ ವಿಷಯದಲ್ಲಿ ಮುಜರಾಯಿ ಮಂಡಳಿ ನಿರ್ಲಕ್ಷ್ಯ ಹಾಗೂ ನಿರಾಸಕ್ತಿ ತೋರಿದೆಯೆಂದೂ ಸಮಿತಿಯ ವರದಿಯಲ್ಲಿ ಹೇಳಲಾಗಿದ್ದು, ಈ ವಿಷಯವನ್ನು ಸರಕಾರದ …

ನಿಧನ

ಮಂಜೇಶ್ವರ: ವರ್ಕಾಡಿ ಉಜಾರ್‌ಪದವು ನಿವಾಸಿ ದಿ| ಸೂರ್ಯಮೂರ್ತಿ ಮಾಸ್ತರ್ ರವರ ಪುತ್ರ ಸುಮಂತ್‌ರಾಜ್ (44) ನಿಧನ ಹೊಂದಿದರು. ಒಂದು ವರ್ಷದಿಂದ ಅಸೌಖ್ಯದಿಂದ ಬಳಲುತ್ತಿದ್ದ ಇವರು ಕಳೆದ ಒಂದೂವರೆ ತಿಂಗಳಿAದ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದರು. ಬಸ್ ಚಾಲಕರಾಗಿ ದುಡಿಯುತ್ತಿದ್ದರು. ಮೃತರು ಪತ್ನಿ ಗೀತಾ, ಮಕ್ಕಳಾದ ಧನುಶ್ರೀ, ಅನುಶ್ರೀ, ಆದಿತ್ಯಮೂರ್ತಿ, ಅಳಿಯ ಶರತ್, ಸಹೋದರಿ ಸ್ಮಿತಾರಾಣಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಾಯಿ ಶಾಂತಲ ಈ ಹಿಂದೆ ನಿಧನರಾಗಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ: ಮಂಗಲ್ಪಾಡಿ ಪಂ.ಗೆ ಲಕ್ಷಾಂತರ ರೂ. ವೆಚ್ಚದಲ್ಲಿ ಖರೀದಿಸಿದ ಜನರೇಟರ್ ತುಕ್ಕು ಹಿಡಿದು ನಾಶ

ಉಪ್ಪಳ: ಮಂಗಲ್ಪಾಡಿ ಪಂಚಾ ಯತ್‌ಗೆ ಬೆಳಕು ನೀಡಲು ಖರೀದಿಸಿದ ಜನರೇಟರ್ ಈಗ ತುಕ್ಕು ಹಿಡಿದು ನಾಶವಾಗುತ್ತಿದೆ. 2022ರಲ್ಲಿ 4.98 ಲಕ್ಷ ರೂ. ವೆಚ್ಚದಲ್ಲಿ ಪಂಚಾಯತ್‌ಗೆ ಜನರೇಟರ್ ಖರೀದಿಸಲಾಗಿದೆ. ವಿದ್ಯುತ್ ಮೊಟಕುಗೊಂಡಾಗ ಉಪಯೋಗಿಸಲೆಂದು ಖರೀದಿಸಿದ ಜನರೇಟರ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೂಲೆಗುಂಪಾಗಿ  ತುಕ್ಕು ಹಿಡಿದು ನಾಶವಾಗುತ್ತಿದೆ. ಖರೀದಿಸಿದ ಬಳಿಕ ಬಿಸಿಲು,  ಮಳೆಗೆ ಅದನ್ನು ಇರಿಸಲಾಗಿದ್ದು, ಇದುವರೆಗೂ ಉಪಯೋಗಿಸಲಾಗಿಲ್ಲ. ಜನರೇಟರ್‌ನ ಉಪಯೋಗಕ್ಕಾಗಿ ಮಾಡಬೇಕಾದ ವಯರಿಂಗ್ ನಡೆಸದಿರುವುದೇ 4.98 ಲಕ್ಷ ರೂ. ಈ ರೀತಿ ತುಕ್ಕು ಹಿಡಿಯಲು ಕಾರಣವೆಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ. ಈ …