ವಾಹನ ಅಪಘಾತ: ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಯುವಕ ಮೃತ್ಯು

ಕುಂಬಳೆ: ಕಾಸರಗೋಡು- ಕಾಞಂಗಾಡ್ ಕೆಎಸ್‌ಟಿಪಿ ರಸ್ತೆಯ ಮೇಲ್ಪರಂಬ ಕಟ್ಟೆಕ್ಕಾಲ್‌ನಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಯುವಕ ಇಂದು ಮುಂಜಾನೆ ಮೃತಪಟ್ಟನು. ಕುಂಬಳೆ ಕುಂಟಂಗೇರಡ್ಕ ವೆಲ್ಫೇರ್ ಶಾಲೆ ಬಳಿಯ ಪುಷ್ಪ ನಿವಾಸ್‌ನ ವಿನೋದ್ ಎಂಬವರ ಪುತ್ರ ವಿನೀಶ್ ವಿ.ಎಸ್. (23) ಮೃತಪಟ್ಟ ದುರ್ದೈವಿಯಾಗಿದ್ದಾರೆ. ವಿನೀಶ್ ಮೇಲ್ಪರಂಬದಲ್ಲಿ ಲೈಟ್ ಆಂಡ್ ಸೌಂಡ್ಸ್ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಅಕ್ಟೋಬರ್ ೧೬ರಂದು ಬೆಳಿಗ್ಗೆ ಇವರು ಕಳನಾಡ್ ಭಾಗದಿಂದ ಬೈಕ್‌ನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಸ್ಕೂಟರ್ ಢಿಕ್ಕಿ ಹೊಡೆದಿತ್ತು. ಇದರಿಂದ …

ಮಿಠಾಯಿ ಖರೀದಿಸಲು ಅಂಗಡಿಗೆ ಬಂದ 10ರ ಬಾಲಕಿಗೆ ಕಿರುಕುಳ ಯತ್ನ: ಆರೋಪಿ ಸೆರೆ

ಬದಿಯಡ್ಕ: ಮಿಠಾಯಿ ಖರೀದಿಸಲು ಅಂಗಡಿಗೆ ಬಂದ 10ರ ಹರೆಯದ ಬಾಲಕಿಗೆ ಕಿರುಕುಳ ನೀಡಲೆತ್ನಿಸಿದ ಬಗ್ಗೆ ದೂರಲಾಗಿದೆ. ಈ ಸಂಬಂಧ ಅಂಗಡಿ ಮಾಲಕನನ್ನು ಪೋಕ್ಸೋ ಪ್ರಕಾರ ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಕುಂಬ್ಡಾಜೆ ತುಪ್ಪೆಕಲ್ಲು ನಿವಾಸಿಯಾದ ಅಬ್ದುಲ್ಲ (64) ಸೆರೆಗೀಡಾದ ವ್ಯಕ್ತಿಯಾಗಿದ್ದಾನೆ. ಈತನಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಇತ್ತೀಚೆಗೆ ಓರ್ವ ಬಾಲಕಿ ಅಂಗಡಿಗೆ ಬಂದಿದ್ದಾಗ ಆರೋಪಿ ಕಿರುಕುಳ ನೀಡಲೆತ್ನಿಸಿರುವುದಾಗಿ ದೂರಲಾಗಿದೆ. ಘಟನೆ ಬಗ್ಗೆ ಬಾಲಕಿ ಮನೆಯವರಲ್ಲಿ ವಿಷಯ ತಿಳಿಸಿದ್ದು ಬಳಿಕ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿತ್ತು.

ನೈತಿಕ ಪೊಲೀಸ್‌ಗಿರಿ: ಯುವಕನಿಗೆ ತಂಡದಿಂದ ಹಲ್ಲೆ

ಉಪ್ಪಳ:    ಯುವಕನನ್ನು ತಂಡ ವೊಂದು  ನೈತಿಕ ಪೊಲೀಸ್‌ಗಿರಿಯ ಹೆಸರಲ್ಲಿ ದಾರಿಯಲ್ಲಿ ತಡೆದು ನಿಲ್ಲಿಸಿ ಹಾಗೂ ವಾಸಸ್ಥಳದಲ್ಲಿ ಹಲ್ಲೆಗೈದು ಗಾಯಗೊಳಿಸಿದ ಬಗ್ಗೆ ದೂರಲಾಗಿದೆ.  ಈ ಸಂಬಂಧ ಓರ್ವನನ್ನು ಕಸ್ಟಡಿಗೆ ತೆಗೆದುಕೊಂಡಿರುವುದಾಗಿ ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ. ಉಪ್ಪಳ ರೈಲು ನಿಲ್ದಾಣ ಬಳಿ  ಬಾಡಿಗೆ ಕೊಠಡಿಯಲ್ಲಿ ವಾಸಿಸುವ ಇಬ್ರಾಹಿಂ ಕರೀಂ (30) ಎಂಬವರಿಗೆ ತಂಡ ಹಲ್ಲೆಗೈದಿರುವುದಾಗಿ ದೂರಲಾಗಿದೆ. ನಿನ್ನೆ ಮುಂಜಾನೆ  2 ಗಂಟೆ ವೇಳೆ ಸಿನಿಮಾ ವೀಕ್ಷಿಸಿ  ವಾಸಸ್ಥಳಕ್ಕೆ ನಡೆದು ಹೋಗುತ್ತಿದ್ದ ಇಬ್ರಾಹಿಂ ಕರೀಂರನ್ನು ಇಬ್ಬರು ವ್ಯಕ್ತಿಗಳು ಉಪ್ಪಳ ರೈಲು ನಿಲ್ದಾಣ …

ಶಬರಿಮಲೆ ಚಿನ್ನ ಕಳವು ಪ್ರಕರಣ: ಬಂಧಿತ ಮುಜರಾಯಿ ಮಂಡಳಿ ಮಾಜಿ ಅಧ್ಯಕ್ಷ ಜೈಲಿಗೆ

ತಿರುವನಂತಪುರ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ ನಿನ್ನೆ ಬಂಧಿಸಿದ ತಿರುವಿದಾಂಕೂರ್ ಮುಜ ರಾಯಿ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಆಯುಕ್ತರೂ ಆಗಿದ್ದ ಎನ್. ವಾಸುರನ್ನು ಬಳಿಕ ಪತ್ತನಂತಿಟ್ಟ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (ಪ್ರಥಮ) ನೀಡಿದ ನಿರ್ದೇಶ ಪ್ರಕಾರ ನವಂಬರ್ ೨೪ರ ತನಕ ನ್ಯಾಯಾಂಗ ಬಂಧನದಲ್ಲಿರಿ ಸಲಾಗಿದೆ. ಇದರಂತೆ ಅವರನ್ನು ಕೊಟ್ಟಾರಕರ ಸಬ್ ಜೈಲ್‌ಗೆ ಸಾಗಿಸಲಾಯಿತು. ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ವಾಸುರನ್ನು ಮೂರನೇ ಆರೋಪಿಯನ್ನಾಗಿ  ಸೇರಿಸಲಾಗಿದೆ. 2019ರಲ್ಲಿ ಶಬರಿಮಲೆ …

ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ತಳಂಗರೆ ಹೊಳೆಯಲ್ಲಿ ಪತ್ತೆ

ಕಾಸರಗೋಡು: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ತಳಂಗರೆ ಹೊಳೆಯಲ್ಲಿ ನಿನ್ನೆಸಂಜೆ ಪತ್ತೆಯಾಗಿದೆ. ಕೋಟಿಕುಳಂ ಬೈಕೆ ಮಸೀದಿ ಬಳಿಯ ಮುಕ್ರಿ ಹೌಸ್‌ನ ಹಾಶಿಂ (55) ಸಾವನ್ನಪ್ಪಿದ ವ್ಯಕ್ತಿ. ಇವರು ಸೋಮವಾರ ಬೆಳಿಗ್ಗೆ ನಮಾಜ್‌ಗಾಗಿ ಎಂದಿನಂತೆ ಕೋಟಿಕುಳಂನ ಮಸೀದಿಗೆ ಹೋಗಿದ್ದರು. ಸಂಜೆಯಾ ದರೂ ಮನೆಗೆ ಹಿಂತಿರುಗದಾಗ ಮನೆಯವರು ಬಳಿಕ ಆ ಬಗ್ಗೆ ಬೇಕಲ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿರುವಂ ತೆಯೇ ಹಾಶಿಂರ ಮೃತದೇಹ ತಳಂಗರೆ ಕಡವತ್‌ನ ಹೊಳೆಯಲ್ಲಿ ನಿನ್ನೆ ಸಂಜೆ …

ರಸ್ತೆ ಹದಗೆಟ್ಟು ಸಂಚಾರ ಸಮಸ್ಯೆ

ಉಪ್ಪಳ: ರಸ್ತೆ ಹದಗೆಟ್ಟು ಸಂಚಾರಕ್ಕೆ ಸಮಸ್ಯೆಯಾಗಿರುವುದಾಗಿ ಸಾರ್ವಜನಿಕರು ದೂರಿದ್ದಾರೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಕೋಡಿಬೈಲು ಎಂಬಲ್ಲಿ ಎರಡು ರಸ್ತೆ ಸಂಗಮಿಸುತ್ತಿದ್ದು ಇದು ಹಾನಿಗೊಂಡಿರುವುದಾಗಿ ಸ್ಥಳೀಯರು ದೂರಿದ್ದಾರೆ. ಮಣ್ಣಂಗುಳಿಯಿಂದ ಕೋಡಿಬೈಲು ಹಾಗೂ ಪತ್ವಾಡಿ ರಸ್ತೆಯಿಂದ ಕೋಡಿಬೈಲು ಸಂಗಮಿಸುವ ರಸ್ತೆಗಳು ಶೋಚನೀಯಗೊಂಡಿವೆ. ಈ ಪ್ರದೇಶದಲ್ಲಿ ಶಾಲೆ ಸಹಿತ ನೂರಾರು ಮನೆಗಳಿದ್ದು  ದಿನನಿತ್ಯ ಹಲವಾರು ವಾಹನಗಳು ಸಂಚರಿಸುತ್ತಿವೆ. ರಸ್ತೆಯ ಡಾಮರು, ಕಾಂಕ್ರೀಟ್, ಇಂಟರ್ ಲಾಕ್‌ಗಳೆಲ್ಲಾ ಹಾನಿಗೊಂಡು ಹೊಂಡಗಳು ಸೃಷ್ಟಿಯಾಗಿ ಸಂಚಾರ ದುಸ್ತರವಾಗಿದೆ. ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು  ಆಗ್ರಹಿಸಿದ್ದಾರೆ.

ಪತಿ ಗಲ್ಫ್‌ಗೆ ಹೋದ ಬೆನ್ನಲ್ಲೇ ಪರಾರಿಯಾದ ಪತ್ನಿ, ಪ್ರಿಯತಮ ಸೆರೆ

ಕಾಸರಗೋಡು: ಪತಿ ಗಲ್ಫ್‌ಗೆ ಹೋದ ಬೆನ್ನಲ್ಲೇ ಇಬ್ಬರು ಪುಟ್ಟ ಮಕ್ಕಳನ್ನು ಬಿಟ್ಟು ಪರಾರಿಯಾದ ಯುವತಿ ಹಾಗೂ ಪ್ರಿಯತಮನನ್ನು ಸೆರೆ ಹಿಡಿಯಲಾಗಿದೆ. ತಳಿಪರಂಬ ಪನ್ನಿಯೂರ್ ಮಳೂರ್‌ನ ಕೆ. ನೀತು (35) ಹಾಗೂ ಮಳೂರ್ ನಿವಾಸಿ  ಸುಮೇಶ್ (38) ಎಂಬಿವರು ಬಂಧಿತ ಯುವಕ ಹಾಗೂ ಯುವತಿ. ಇವರು ನಿನ್ನೆ ಚಟ್ಟಂಚಾಲ್‌ನ ಕ್ವಾರ್ಟರ್ಸ್‌ವೊಂದರಿಂದ ಕಾರಿನಲ್ಲಿ ಊರಿಗೆ ಮರಳುತ್ತಿದ್ದಾಗ ಚಿಟ್ಟಾರಿಕಲ್ ಎ.ಎಸ್.ಐ ಶ್ರೀಜು, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಸುಜಿತ್, ವನಿತಾ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಸನಿಲ ಎಂಬಿವರು ಸೇರಿ ಸೆರೆ …

ವೀಸಾ ಭರವಸೆಯೊಡ್ಡಿ 7 ಲಕ್ಷ ರೂ. ಪಡೆದು ವಂಚನೆ: ಆರೋಪಿ ಸೆರೆ

ಕಾಸರಗೋಡು: ನೆದರ್‌ಲ್ಯಾಂ ಡ್‌ಗೆ ವೀಸಾ ನೀಡುವುದಾಗಿ ತಿಳಿಸಿ ಯುವಕನಿಂದ 7 ಲಕ್ಷ ರೂಪಾಯಿ ಪಡೆದು ವಂಚಿಸಿದ ಪ್ರಕರಣದ ಆರೋಪಿ ಸೆರೆಗೀಡಾಗಿದ್ದಾನೆ. ನೀಲೇಶ್ವರ ಚಿರಪ್ಪುರಂ ಪಾಲಕ್ಕಾಟ್ ಕೃಷ್ಣ ಹೌಸ್‌ನ ಉಲ್ಲಾಸ್ (40) ಎಂಬಾತನನ್ನು ಚಿಟ್ಟಾರಿಕಲ್ ಪೊಲೀ ಸರು ಬಂಧಿಸಿದ್ದಾರೆ. ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಈತ ಊರಿಗೆ ಮರಳುತ್ತಿದ್ದಾಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೆರೆ ಹಿಡಿಯಲಾಗಿದೆ. ವೆಸ್ಟ್ ಎಳೇರಿ ಮಂಗತ್‌ನ ಸಜೀವ (47) ಎಂಬವರ ಹಣ ಪಡೆದು ವಂಚಿಸಿದ ಆರೋ ಪದಂತೆ ಉಲ್ಲಾಸ್‌ನನ್ನು ಬಂಧಿಸಲಾಗಿದೆ. 2023 ಸೆ. 13 ಹಾಗೂ 2025 …

ಬಾವಿಗೆ ಬಿದ್ದ ವೃದ್ದ ಹಾಗೂ ರಕ್ಷಿಸಲು ಇಳಿದ ಯುವಕನನ್ನು ಮೇಲೆತ್ತಿ ರಕ್ಷಿಸಿದ ಅಗ್ನಿಶಾಮಕದಳ

ಕಾಸರಗೋಡು: ಬಾವಿಗೆ ಬಿದ್ದ ವೃದ್ದನನ್ನು ರಕ್ಷಿಸಲು ಇಳಿದ ಉತ್ತರ ಪ್ರದೇಶ ನಿವಾಸಿಯಾದ ಯುವಕ ಕೂಡಾ ಬಾವಿಯೊಳಗೆ  ಸಿಲುಕಿಕೊಂಡಿದ್ದು, ಬಳಿಕ ಕಾಸರಗೋಡು ಅಗ್ನಿಶಾಮಕದಳ ತಲುಪಿ ಅವರನ್ನು ಮೇಲೆತ್ತಿ ರಕ್ಷಿಸಿದ ಘಟನೆ ನಡೆದಿದೆ. ನಿನ್ನೆ ಸಂಜೆ ೬.೩೦ರ ವೇಳೆ ತಳಂಗರೆ ಪಳ್ಳಿಕ್ಕಾಲ್‌ನ ಅಬ್ದುಲ್ ರಹ್ಮಾನ್‌ರ ಹಿತ್ತಿಲಲ್ಲಿರುವ ಬಾವಿಗೆ ನೆಲ್ಲಿಕುಂಜೆ ನಿವಾಸಿಯಾದ ಟಿ.ಎಂ. ಮುನೀರ್ (74) ಬಿದ್ದಿದ್ದರು.  ೧೫ ಕೋಲು ಆಳವಿರುವ ಬಾವಿಯಲ್ಲಿ 10 ಅಡಿ ನೀರು ತುಂಬಿಕೊಂಡಿದೆ. ಆವರಣಗೋಡೆಯಿಲ್ಲದ ಬಾವಿಗೆ ಮುನೀರ್ ಆಯ ತಪ್ಪಿ ಬಿದ್ದಿದ್ದರೆನ್ನಲಾ ಗಿದೆ. ಅದನ್ನು ಕಂಡ …

ಬಸ್ ಪ್ರಯಾಣ ವೇಳೆ ಚಿನ್ನದ ಸರ ನಾಪತ್ತೆ: ದೂರು

ಕುಂಬಳೆ: ಬಸ್ ಪ್ರಯಾಣ ವೇಳೆ ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಕುಂಬಳೆ ನಿವಾಸಿ ದಯಾನಂದ ಆಚಾರ್ಯರ ಪುತ್ರಿ ಮಿಶಿತಳ ಚಿನ್ನದ ಸರ ನಾಪತ್ತೆಯಾದ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ನಿನ್ನೆ ಸಂಜೆ ಕರ್ನಾಟಕ ಸಾರಿಗೆ ಬಸ್‌ಗೆ  ದಯಾನಂದ ಆಚಾರ್ಯ, ಪತ್ನಿ ಅಶ್ವಿನಿ ಹಾಗೂ ಪುತ್ರಿ ಹತ್ತಿದ್ದು ಚೌಕಿಗೆ ತಲುಪಿ ಇಳಿಯುವ ವೇಳೆ  ನಾಲ್ಕು ಗ್ರಾಂನ ಚಿನ್ನದ ಸರ ನಾಪತ್ತೆಯಾಗಿದೆ. ಕೂಡಲೇ ನಿರ್ವಾಹಕರಿಗೆ ತಿಳಿಸಿ ಹುಡುಕಾಡಿದಾಗ  ಸರದ ಕೊಂಡಿ ಪತ್ತೆಯಾಗಿದೆ. ಬಳಿಕ ಅಶ್ವಿನಿ …