ಕುಂಟಂಗೇರಡ್ಕ ಸ್ಮಶಾನದಿಂದ ಮರ ಕಡಿದು ಸಾಗಾಟ: ಕುಂಬಳೆ ಪಂ. ಕಾಂಗ್ರೆಸ್ ಸದಸ್ಯ ಬಂಧನ

ಕುಂಬಳೆ: ಕುಂಬಳೆ ಪಂಚಾ ಯತ್‌ನ ಅಧೀನದಲ್ಲಿ  ಕಿದೂರು ಕುಂಟಂಗೇರಡ್ಕದಲ್ಲಿರುವ ಸ್ಮಶಾನದಿಂದ ಮರಗಳನ್ನು ಕಡಿದು ಸಾಗಿಸಿದ ಪ್ರಕರಣದಲ್ಲಿ ಕುಂಬಳೆ ಪಂಚಾಯತ್ ಸದಸ್ಯನನ್ನು ಬಂಧಿಸಲಾಗಿದೆ. ಪಂ.ನ ೮ನೇ ವಾರ್ಡ್ (ಮಡ್ವ)ನ ಕಾಂಗ್ರೆಸ್ ಸದಸ್ಯನಾದ ರವಿರಾಜ್  ಯಾನೆ ತುಮ್ಮ (38) ಎಂಬಾತನನ್ನು ಕುಂ ಬಳೆ ಎಸ್‌ಐ ಅನೂಪ್‌ರ ನೇತೃತ್ವ ದಲ್ಲಿ ಬಂಧಿಸಲಾಗಿದೆ.  ಈತನನ್ನು ನ್ಯಾಯಾಲಯದಲ್ಲಿ ಹಾಜರುಪಡಿ ಸಿದ್ದು, ಈ ವೇಳೆ ಜಾಮೀನು ನೀಡಲಾಗಿದೆ. ಎರಡು ವಾರಗಳ ಹಿಂದೆ ಸ್ಮಶಾನ ಭೂಮಿಯಿಂದ ೧೨೪ ಮರಗಳನ್ನು ಕಡಿದು ಸಾಗಿಸಲಾಗಿತ್ತು. ಮರ ಸಾಗಾಟ ವಿವಾದಕ್ಕೆಡೆಯಾದ ಹಿನ್ನೆಲೆಯಲ್ಲಿ …

14ರ ಬಾಲಕಿಗೆ ಕಿರುಕುಳ: ಮೊಗ್ರಾಲ್‌ನಲ್ಲಿ ಗೂಡಂಗಡಿ ನಡೆಸುತ್ತಿದ್ದ ಯುವಕ ಸೆರೆ

ಕುಂಬಳೆ: 14ರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ಮೇಲ್ಪರಂಬ ಕಳನಾಡು ಕಟ್ಟೆಕ್ಕಾಲ್‌ನಲ್ಲಿ ಗೂಡಂಗಡಿ ನಡೆಸುವ ಮೊಹಮ್ಮದ್ ಮುನೀರ್ (24) ಎಂಬಾತ ಬಂಧಿತ ಆರೋಪಿ ಯಾಗಿದ್ದಾನೆ. ಈ ಹಿಂದೆ ಈತ ಮೊಗ್ರಾಲ್‌ನಲ್ಲಿ ಗೂಡಂಗಡಿ ನಡೆಸುತ್ತಿದ್ದನು. ಈ ವೇಳೆ ಬಾಲಕಿಗೆ ಕಿರುಕುಳ ನೀಡಿರುವುದಾಗಿ ದೂರಲಾ ಗಿತ್ತು. ಇದರಂತೆ ಮೊಹಮ್ಮದ್ ಮುನೀರ್ ವಿರುದ್ಧ ಪೊಲೀಸರು ಪೋಕ್ಸೋ ಕೇಸು ದಾಖಲಿ  ಸಿಕೊಂ ಡಿದ್ದರು. ಇನ್‌ಸ್ಪೆಕ್ಟರ್ ಟಿ.ಕೆ. ಮುಕುಂದನ್ ನೇತೃತ್ವದಲ್ಲಿ ಬಂಧಿಸಲಾಗಿದೆ.

ನೈತಿಕ ಪೊಲೀಸ್‌ಗಿರಿ: ಯುವಕನಿಗೆ ಹಲ್ಲೆಗೈದ ತಂಡದ ಓರ್ವ ಸೆರೆ

ಉಪ್ಪಳ: ನೈತಿಕ ಪೊಲೀಸ್‌ಗಿರಿ ಹೆಸರಲ್ಲಿ ಯುವಕನಿಗೆ ಹಲ್ಲೆಗೈದು ಗಾಯಗೊಳಿಸಿದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಮಂಜೇಶ್ವರ ಪೊಲೀಸರು  ಸೆರೆಹಿಡಿದಿದ್ದಾರೆ. ಉಪ್ಪಳ ನಯಾಬಜಾರ್‌ನ ಶೇಕ್ ಮೊಹಮ್ಮದ್ ಕೈಫ್ (21) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.  ಕುಂಜತ್ತೂರು ಕಣ್ವತೀರ್ಥ ನಿವಾಸಿ ಯೂ, ಉಪ್ಪಳ ರೈಲ್ವೇ ನಿಲ್ದಾಣ ರಸ್ತೆಯ ಬಾಡಿಗೆ ಕೊಠಡಿಯಲ್ಲಿ ವಾಸಿಸುವ ಇಬ್ರಾಹಿಂ ಕರೀಂ (30)ಗೆ ಹಲ್ಲೆಗೈದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಕಾಸರಗೋಡಿನಿಂದ ಥಿಯೇಟರ್ ವೊಂದರಲ್ಲಿ ಸಿನಿಮಾ ವೀಕ್ಷಿಸಿ ವಾಸಸ್ಥಳಕ್ಕೆ ಮರಳುತ್ತಿದ್ದ ಇಬ್ರಾಹಿಂ ಕರೀಂರನ್ನು ಉಪ್ಪಳ ರೈಲ್ವೇ ನಿಲ್ದಾಣ ರಸ್ತೆಯಲ್ಲಿ ತಂಡ ತಡೆದು …

ದೆಹಲಿ ಸ್ಫೋಟ: ಇನ್ನೋರ್ವ ವೈದ್ಯ ಸೆರೆ: ಕಾರಿನಲ್ಲಿ ಮೃತಪಟ್ಟದ್ದು ಉಗ್ರ ಡಾ| ಉಮ್ಮರ್ ಮೊಹಮ್ಮದ್ 

ನವದೆಹಲಿ: ನವದೆಹಲಿಯ ಕೆಂಪುಕೋಟೆಯಲ್ಲಿ ನ.೧೦ರಂದು ನಡೆದ ನಿಗೂಢ ಸ್ಫೋಟದ ಬಗ್ಗೆ ಇತರ ಹಲವು ವಿಚಾರಗಳು ಬಹಿರಂಗಗೊಂ ಡಿದೆ. ಕೆಂಪುಕೋಟೆ ಬಳಿ ಸ್ಫೋಟ ಗೊಂಡ ಕಾರನ್ನು ಚಲಾಯಿಸಿದ ವ್ಯಕ್ತಿ ಉಗ್ರ ಡಾ| ಉಮ್ಮರ್ ಮೊಹಮ್ಮದ್ ಆಗಿರುವುದಾಗಿ ಡಿಎನ್‌ಎ ಪರೀಕ್ಷೆಗಳು ದೃಢಪಡಿಸಿದೆ. ಕಾಶ್ಮೀರ  ಪುಲ್ವಾಮದ ಸಂಬೂರ ಗ್ರಾಮದ ನಿವಾಸಿಗಳಾದ ಉಮ್ಮರ್ ಮೊಹಮ್ಮದ್‌ನ ತಾಯಿ ಮತ್ತು ಸಹೋದರರ ಡಿಎನ್‌ಎ ಮಾದರಿಗಳು ಮತ್ತು  ದಿಲ್ಲಿಯಲ್ಲಿ ಸ್ಫೋಟಗೊಂಡ ಕಾರಿನಲ್ಲಿ ಕಂಡು ಬಂದ ದೇಹದ ಅವಶೇಷಗಳೊಂದಿಗೆ ಹೋಲಿಸಿದಾಗ ಅವು ಶೇ.೧೦೦ರಷ್ಟು ಹೋಲಿಕೆಯಾಗುತ್ತಿದೆ. ಆದ್ದರಿಂದ ಕಾರಿನಲ್ಲಿ ಮೃತಪಟ್ಟ …

ಗುರುಸ್ವಾಮಿ ನಿಧನ

ಮುಳ್ಳೇರಿಯ: ಕುಂಟಾರು ಶ್ರೀ ಅಯ್ಯಪ್ಪ ಭಜನಾ ಮಂದಿರದ ಗುರು ಸ್ವಾಮಿ, ಜಗತ್ತಾಪ್ ಮನೆತನದ ಎಲಿಕ್ಕಳ ದೇವರ ಮನೆಯ ಹಿರಿಯ ರಾದ ಯಾದವ ರಾವ್(68) ನಿನ್ನೆ ನಿಧನರಾದರು. ಅನಾರೋಗ್ಯ ತಗಲಿ ಚಿಕಿತೆ್ಸಯಲ್ಲಿ ದ್ದರು. ಆದೂರು ಗೇರು ಸಂತತಿ ತೋಟದ ಕಾರ್ಮಿಕರಾಗಿ ನಿವೃತ್ತರಾದ ಇವರು ಗಣೇಶ ವಿಗ್ರಹ ತಯಾರಿಯಲ್ಲಿ ನಿಷ್ಣಾತರೂ, ಯಕ್ಷ ಗಾನ ಕಲಾವಿದರೂ ಆಗಿದ್ದರು. 30 ಬಾರಿ ಶ್ರೀ ಶಬರಿಮಲೆ ಯಾತ್ರೆ ಕೈಗೊಂಡಿ ದ್ದರು. ಪತ್ನಿ ವಿಮಲ, ಮಕ್ಕಳಾದ ನಯನ, ಕವಿತ, ಅಳಿಯ ಗಿರಿಪ್ರಸಾದ್, ಸೊಸೆ ದಿವ್ಯಾ ಹಾಗೂ …

ಪನಯಾಲ್ ನಿವಾಸಿಯ 8 ಲಕ್ಷ ರೂ. ಲಪಟಾವಣೆ: ವೀಸಾ ವಂಚನೆ ಆರೋಪಿ ವಿರುದ್ಧ ಬೇಕಲ ಠಾಣೆಯಲ್ಲೂ ಕೇಸು

ಕಾಸರಗೋಡು: ವೀಸಾ ಭರವಸೆಯೊಡ್ಡಿ ಹಲವರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ ಪ್ರಕರಣದಲ್ಲಿ ಸೆರೆಗೀಡಾದ ನೀಲೇಶ್ವರ ಚಿರಪ್ಪುರಂ ಪಾಲಕ್ಕಾಟ್‌ನ ಉಲ್ಲಾಸ್ ಕುಞಂಬು (40) ಎಂಬಾತನ ವಿರುದ್ಧ ಬೇಕಲ ಪೊಲೀಸ್ ಠಾಣೆಯಲ್ಲೂ ಕೇಸು ದಾಖಲಿಸಲಾಗಿದೆ. ಪನಯಾಲ್ ದೇವನ್‌ಪೊಡಿಚ್ಚಪ್ಪಾರದ ಎಂ. ಗೋಪ ಕುಮಾರ್ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಫಿನ್‌ಲ್ಯಾಂಡ್ ವೀಸಾ ನೀಡುವುದಾಗಿ ತಿಳಿಸಿ ಹಲವು ಬಾರಿಯಾಗಿ 8 ಲಕ್ಷ ರೂಪಾಯಿಗಳನ್ನು ಪಡೆದು ವಂಚಿಸಿರುವುದಾಗಿ ಗೋಪ ಕುಮಾರ್ ಆರೋಪಿಸಿದ್ದಾರೆ. 2023 ಸೆಪ್ಟಂಬರ್‌ನಿಂದ ಹಲವು ಬಾರಿಯಾಗಿ ಬ್ಯಾಂಕ್ ಖಾತೆ   ಹಾಗೂ ಗೂಗಲ್ …

‘ನಗ್ನ ಫೋಟೋ ನೀಡಿದರೆ ಸಿನಿಮಾದಲ್ಲಿ ಅವಕಾಶ’ ಬಾಲಕಿಗೆ ಸಂದೇಶ ಕಳುಹಿಸಿದ ವ್ಯಕ್ತಿ ಸೆರೆ

ಕಾಸರಗೋಡು: ಸಿನಿಮಾದಲ್ಲಿ ಅವಕಾಶವೊದಗಿಸುವುದಾಗಿ ತಿಳಿಸಿ ಬಾಲಕಿಯ ನಗ್ನ ಚಿತ್ರಗಳನ್ನು ಕೇಳಿದ ಯುವಕ ಸೆರೆಗೀಡಾಗಿದ್ದಾನೆ. ಕಾಸ ರಗೋಡು ಕಾಟಿಪಳ್ಳ ನಾರಾಯಣೀ ಯಂನ ಶಿಬಿನ್ (29) ಎಂಬಾತನನ್ನು ಕಲ್ಲಿಕೋಟೆ ಬೇಪೂರು ಪೊಲೀಸರು ಪೋಕ್ಸೋ ಪ್ರಕಾರ ಬಂಧಿಸಿದ್ದಾರೆ.  ಬೇಪೂರು ನಿವಾಸಿಯಾದ 10ನೇ ತರಗತಿ ವಿದ್ಯಾರ್ಥಿನಿಯೊಂದಿಗೆ ತಾನು ಸಿನಿಮಾ ನಿರ್ದೇಶಕನೆಂದು ತಿಳಿಸಿ ಆರೋಪಿ ಸಿನಿಮಾದಲ್ಲಿ ಅಭಿನ ಯಿಸಲು ಅವಕಾಶ ಒದಗಿಸುವು ದಾಗಿಯೂ ಅದಕ್ಕಾಗಿ ನಗ್ನ ಫೋಟೋಗಳನ್ನು ನೀಡುವಂತೆ ತಿಳಿಸಿ ಬಾಲಕಿಗೆ ಫೋನ್ ಕರೆ ಮಾಡಿ ವಾಟ್ಸಪ್ ಮೂಲಕ ಸಂದೇಶ ಕಳುಹಿಸಿದ್ದಾನೆನ್ನಲಾಗಿದೆ. ಈ ಬಗ್ಗೆ  …

ಭೂತಾನ್‌ನಿಂದ ಕಾರು ಸಾಗಾಟ : ಇ.ಡಿ. ತನಿಖೆ ಆರಂಭ ; ಹಲವರಿಗೆ ನೋಟೀಸ್

ಕೊಚ್ಚಿ: ಭೂತಾನ್‌ನಿಂದ ಕಾರುಗಳನ್ನು ಅನಧಿಕೃತವಾಗಿ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಎನ್‌ಫೋರ್ಸ್‌ಮೆಂಟ್ ಡೈರಕ್ಟರೇಟ್ ತನಿಖೆ ಆರಂಭಿಸಿದೆ. ರಾಜ್ಯದ 17 ಕಡೆಗಳಲ್ಲಾಗಿ ಕಸ್ಟಮ್ಸ್ ಪ್ರಿವೆಂಟಿವ್ ವಿಭಾಗ ನಡೆಸಿದ ತನಿಖೆಯ ಮುಂದುವರಿಕೆಯಾಗಿ ಇ.ಡಿ ತನಿಖೆ ನಡೆಸಲಿದೆ. ನಕಲಿ ದಾಖಲೆಪತ್ರಗಳನ್ನು ಸಲ್ಲಿಸಿ ಕಾರು ಗಳನ್ನು ಆಮದುಮಾಡಿಕೊಳ್ಳಲಾಗಿದೆ ಎಂದು ಪತ್ತೆಯಾದ ಹಿನ್ನೆಲೆಯಲ್ಲಿ ನಟ ಅಮಿತ್ ಚಕ್ಕಾಲಯ್ಕಕಲ್ ಸಹಿತ ಕೆಲವರಿಗೆ ತನಿಖಾ ತಂಡ ನೋಟೀಸ್ ಜ್ಯಾರಿಗೊಳಿಸಿದೆ. ನಟ ದುಲ್ಕರ್‌ಗೂ ನೋಟೀಸು ನೀಡಲು ನಿರ್ಧರಿಸಿರುವುದಾಗಿ ಹೇಳಲಾಗು ತ್ತಿದೆ. ನಕಲಿ ದಾಖಲೆ ಪತ್ರಗಳನ್ನು ಸಲ್ಲಿಸಿ ಭಾರತಕ್ಕೆ ವಾಹನಗಳನ್ನು ತಲುಪಿಸಿದ …

ನಷ್ಟ ಪರಿಹಾರ ನೀಡದೆ ರಾಷ್ಟ್ರೀಯ ಹೆದ್ದಾರಿಗಾಗಿ ಮನೆ ವಶ ಜಿಲ್ಲಾಧಿಕಾರಿಯಿಂದ ಸ್ಪಷ್ಟೀಕರಣ ಕೇಳಿದ ಮಾನವಹಕ್ಕು ಆಯೋಗ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ನಷ್ಟ ಪರಿಹಾರ ನೀಡದೆ ಅಥವಾ ಪುನರ್ವಸತಿ ಖಚಿತಪಡಿಸದೆ ಸ್ಥಳ ವಶಪಡಿಸಲಾಗಿದೆ ಎಂಬ ದೂರಿನಂತೆ ಕಾಸರಗೋಡು ಜಿಲ್ಲಾಧಿಕಾರಿ ಎರಡು ವಾರದೊಳಗೆ ಸ್ಪಷ್ಟೀಕರಣ ನೀಡುವಂತೆ ತಿಳಿಸಿ ಮಾನವ ಹಕ್ಕು ಆಯೋಗ ಜ್ಯುಡೀಶ್ಯಲ್ ಸದಸ್ಯ ಕೆ. ಬೈಜುನಾಥ್ ನಿರ್ದೇಶಿಸಿದ್ದಾರೆ. ಚೆಂಗಳ ತೆಕ್ಕಿಲ್‌ಫೆರಿ ನಿವಾಸಿಗಳಾದ ಸಿ.ಎಂ. ಮಿಸ್ರಿಯ, ಕೆ. ಕೌಲತ್ ಎಂಬಿವರು ಸಲ್ಲಿಸಿದ ದೂರಿನಲ್ಲಿ ಆಯೋಗ ಈ ನಿರ್ದೇಶ ಹೊರಡಿಸಿದೆ. ಹೈಕೋರ್ಟ್‌ನ ಆದೇಶವನ್ನು ಪರಿಗಣಿಸದೆ 2025 ಮಾರ್ಚ್ 22ರಂದು ಸ್ಪೆಷಲ್ ಡೆಪ್ಯುಟಿ ಕಲೆಕ್ಟರ್‌ರ ನೇತೃತ್ವದಲ್ಲಿ ಮನೆಗೆ ತಲುಪಿದ …

ರಾಷ್ಟ್ರೀಯ ಹೆದ್ದಾರಿಯಲ್ಲಿ ಮಗುಚಿಬಿದ್ದ ಸರಕುಲಾರಿ

ಕಾಸರಗೋಡು: ನಿರ್ಮಾಣ ಕಾಮಗಾರಿ ನಡೆಯುತ್ತಿರುವ ತೆಕ್ಕಿಲ್‌ಫೆರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಣ್ಣೂರು ಭಾಗದಿಂದ ಮಂಗಳೂರಿ ನತ್ತ ಸಾಗುತ್ತಿದ್ದ ಸರಕು ಲಾರಿಯೊಂದು ನಿಯಂತ್ರಣ ತಪ್ಪಿಮಗುಚಿ ಬಿದ್ದ ಘಟನೆ ನಿನ್ನೆ ರಾತ್ರಿ ನಡೆದಿದೆ. ಈ ಅಪಘಾ ತದಲ್ಲಿ ಅದೃಷ್ಟವಶಾತ್ ಯಾರಿಗೂ ಗಾಯಉಂಟಾಗಿಲ್ಲ. ಇದೇ ಜಾಗದಲ್ಲಿ ಕಳೆದ ಗುರುವಾರ ಸರಣಿ ವಾಹನ ಅಪಘಾತ ನಡೆದಿತ್ತು. ಸರಕು ಲಾರಿಯೊಂದು ಖಾಸಗಿ ಬಸ್ಸಿನ  ಹಿಂದುಗಡೆ ಢಿಕ್ಕಿ ಹೊಡೆದು 19 ಮಂದಿ ಪ್ರಯಾಣಿ ಕರು ಗಾಯಗೊಂಡಿದ್ದರು. ಮಾತ್ರವಲ್ಲದೆ ಢಿಕ್ಕಿಯ ಆಘಾತದಿಂದ ಬಸ್‌ನ ಎದುರುಗಡೆ ಇದ್ದ ಇನ್ನೊಂದು ಸರಕು …