ಸ್ಥಳೀಯಾಡಳಿತ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆ

ಕಾಸರಗೋಡು: ದಶಂಬರ್ 11ರಂದು ನಡೆಯಲಿರುವ ಸ್ಥಳೀಯಾಡಳಿತ ಚುನಾವಣೆಗೆ ಪಂಚಾಯತ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದೆ. ಮೊದಲ ಹಂತದ ಯಾದಿಯನ್ನು ವಿವಿಧ ಪಂಚಾಯತ್ಗಳಲ್ಲಿ ಪ್ರಕಟಿಸಲಾಗಿದೆ. ಕಾಸರಗೋಡು ನಗರಸಭೆ, ಮಧೂರು, ಮೊಗ್ರಾಲ್ ಪುತ್ತೂರು, ಮಡಿಕೈ, ಮೀಂಜ, ವರ್ಕಾಡಿ, ಅಜಾನೂರು, ಬದಿಯಡ್ಕ, ತೃಕರಿಪುರ, ಪಡನ್ನ, ಪಿಲಿಕ್ಕೋಡ್, ಈಸ್ಟ್ ಎಳೇರಿ, ವೆಸ್ಟ್ ಎಳೇರಿ, ಕಿನಾನೂರು ಕರಿಂದಳ ಮೊದಲಾದ ಪಂಚಾಯತ್ ಹಾಗೂ ನೀಲೇಶ್ವರ ನಗರಸಭೆಗಳ ಸ್ಪರ್ಧಾಳುಗಳ ಹೆಸರನ್ನು ಪ್ರಕಟಿಸಲಾಗಿದೆ.ಮೀಂಜ ಪಂಚಾಯತ್ ಹಾಗೂ ವರ್ಕಾಡಿ ಪಂಚಾಯತ್ನಲ್ಲಿ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಪ್ರಥಮ ಹಂತದ ಯಾದಿಯನ್ನು ಬಿಜೆಪಿ …

ಕುಂಬಳೆ ಪಂಚಾಯತ್ ಸಿಪಿಎಂ ಪ್ರಚಾರ ಸಮಾವೇಶ ಇಂದು: ಅಭ್ಯರ್ಥಿಗಳ ಯಾದಿ ಪ್ರಕಟ

ಕುಂಬಳೆ: ಕಳೆದ ಐದು ದಶಕಗಳಿಂದ ಪಂಚಾಯತ್ ಆಡಳಿತ ನಡೆಸುತ್ತಿರುವ ಐಕ್ಯರಂಗದ ಆಡಳಿತ ಸಮಿತಿ ಎಲ್ಲಾ ವಲಯಗಳಲ್ಲೂ ಅಭಿವೃದ್ಧಿರಹಿತ ಕೇರಳದ ಹಿಂದುಳಿದ ಪಂಚಾಯತ್ ಆಗಿ ಕುಂಬಳೆಯನ್ನು ಬದಲಿಸಿದೆ ಎಂದು ಎಡರಂಗ ಪಂಚಾಯತ್ ಸಮಿತಿ ಪದಾಧಿಕಾರಿಗಳು ಸುದ್ಧಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ವಿರೋಧ ಪಕ್ಷವಾದ ಬಿಜೆಪಿ ಐಕ್ಯರಂಗದ ಭ್ರಷ್ಟಾಚಾರ ವಿಷಯದಲ್ಲಿ ಮೌನ ಪಾಲಿಸುತ್ತಿದೆ ಎಂದು ಅವರು ಆರೋಪಿಸಿದರು. ಬಸ್ ತಂಗುದಾಣ, ಬೀದಿ ಬದಿ ವಿಶ್ರಾಂತಿ ಕೇಂದ್ರ, ಹೊಯ್ಗೆ ಕಡವ್ ಎಂಬಿವುಗಳಲ್ಲಿ ಭ್ರಷ್ಟಾಚಾರ ದಿಂದ ಆಡಳಿತ ಸಮಿತಿ ನಾಚಿಕೆ ಹೊಂದಿ ಚುನಾವಣೆಯನ್ನು ಎದುರಿಸ ಲಾಗದ …

ಕುಂಬಳೆ ಪಂಚಾಯತ್ ಎಸ್‌ಡಿಪಿಐ ಅಭ್ಯರ್ಥಿಗಳು

ಕುಂಬಳೆ: ಪಂಚಾಯತ್‌ನಿಂದ ಸ್ಪರ್ಧಿಸುವ ಎಸ್‌ಡಿಪಿಐ ಅಭ್ಯರ್ಥಿಗಳ ಮೊದಲ ಹಂತದ ಯಾದಿಯನ್ನು ಕುಂಬಳೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರು ಬಿಡುಗಡೆಗೊಳಿಸಿದರು. ವಾರ್ಡ್ 1 ಕುಂಬೋಳ್‌ನಲ್ಲಿ ರುಖಿಯ ಅನ್ವರ್,  ಕಕ್ಕಳಂಕುನ್ (3)ನಲ್ಲಿ ನಾಸರ್ ಬಂಬ್ರಾಣ, ರೈಲ್ವೇ ಸ್ಟೇಷನ್ (18)- ಫಹೀಮ ನೌಷಾದ್,  ಬದ್ರಿಯಾನಗರ್ (20)- ಅನ್ವರ್ ಆರಿಕ್ಕಾಡಿ ಸ್ಪರ್ಧಿಸುವರು. ಈ ಬಗ್ಗೆ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಖಾದರ್ ಅರಫ, ಮಂಜೇಶ್ವರ ಮಂಡಲ ಕಾರ್ಯದರ್ಶಿ ಶಬೀರ್, ಕುಂಬಳೆ ಪಂ. ಕಾರ್ಯದರ್ಶಿ ಶಾನಿಫ್ ಮೊಗ್ರಾಲ್, ಕೋಶಾಧಿಕಾರಿ ನೌಶಾದ್ ಮನ್ಸೂರ್ ಭಾಗವಹಿಸಿದರು.

ಪ್ರತಾಪನಗರದಲ್ಲಿ ಭರದಿಂದ ಸಾಗುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ

ಉಪ್ಪಳ: ಸ್ಥಳೀಯಾಡಳಿತ ಚುನಾವಣೆ ಡಿ.11ರಂದು ನಡೆಯಲಿ ರುವಂತೆ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ವಿವಿಧ ವಾರ್ಡ್ಗಳಲ್ಲಿ ಅಭಿವೃದ್ದಿ ಕಾಮಗಾರಿ ನಡೆಯುತ್ತಿದೆ. 7ನೇ ವಾರ್ಡ್ ಪ್ರತಾಪನಗರದಲ್ಲಿ ಹಲವಾರು ರಸ್ತೆಗಳ ಅಭಿವೃದ್ದಿ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ಸೋಂಕಾಲು ಪ್ರತಾಪನಗರ ರಸ್ತೆ 73 ಮೀಟರ್ ಕಾಂಕ್ರೀಟ್, ಸಮೀಪದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ನಿರ್ಮಾಣ ಹಾಗೂ ಪುಳಿಕುತ್ತಿ ಸೋಂಕಾಲು ಕ್ರಾಸ್ ರಸ್ತೆಯ 85 ಮೀಟರ್ ಐದು ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್, ಗುಳಿಗ ಬನ ಪರಿಸರದಲ್ಲಿ …

ದೇಲಂತೊಟ್ಟು ಬಜೆ ಶ್ರೀ ಕ್ಷೇತ್ರದಲ್ಲಿ ಕಾರ್ತಿಕ ದೀಪೋತ್ಸವ 21ರಂದು ಸಮಾಪ್ತಿ: ವಿವಿಧ ಕಾರ್ಯಕ್ರಮ

ಹೇರೂರು: ದೇಲಂತೊಟ್ಟು ಬಜೆ ಶ್ರೀ ಮಹಾವಿಷ್ಣು ದೇವಸ್ಥಾನ ದಲ್ಲಿ ಒಂದು ತಿಂಗಳ ಕಾಲ ನಡೆಯುತ್ತಿರುವ ವಿಶೇಷ ಕಾರ್ತಿಕ ದೀಪೋತ್ಸವ ಈ ತಿಂಗಳ 21ರಂದು ಸಮಾಪ್ತಿಗೊಳ್ಳಲಿದ್ದು, ಸಾಂಸ್ಕöÈತಿಕ ಕಾರ್ಯಕ್ರಮದ ಅಂಗವಾಗಿ ಅದೇ ದಿನ ಸಂಜೆ 7ರಿಂದ ಕಲಾರತ್ನ ಶಂನಾಡಿಗ ಕುಂಬಳೆ ಇವರಿಂದ ಭಕ್ತ ಪ್ರಹ್ಲಾದ ಹರಿಕಥಾ ಸತ್ಸಂಗ ಹಾಗೂ ರಾತ್ರಿ 8.30ರಿಂದ ಗಡಿನಾಡ ಸಾಂಸ್ಕöÈತಿಕ ಕಲಾ ವೇದಿಕೆ ಕಾಸರಗೋಡು ಇವರಿಂದ ಸಾಂಸ್ಕöÈ ತಿಕ ಕಲಾ ವೈಭವ ನಡೆಯಲಿದೆ. ಪ್ರತಿ ದಿನ ಸಂಜೆ 5.30ರಿಂದ ವಿವಿಧ ತಂಡಗಳಿAದ ಹರಿನಾಮ ಕೀರ್ತನೆ, …