ಆಚಾರ ಉಲ್ಲಂಘನೆ, ಶಬರಿಮಲೆ ಕ್ಷೇತ್ರದ ಚಿನ್ನ ಅಪಹರಣ ನಡೆಸಿದವರಿಗೆ ದೇವದೋಷ ತಪ್ಪದು- ಸಾಧ್ವಿ ಶ್ರೀ ಮಾತಾನಂದಮಯಿ
ಕಾಸರಗೋಡು: ಶಬರಿಮಲೆ ಚಿನ್ನ ಅಪಹರಣ ಮತ್ತು ಆಚಾರ ಉಲ್ಲಂಘನೆ ಮಾಡಿದವರಿಗೆ ದೋಷ ತಪ್ಪದು. ಎಲ್ಲಿ ಅನ್ಯಾಯ, ಅಧರ್ಮ, ಅಕ್ರಮ ನಡೆಯುತ್ತದೋ ಆವಾಗ ಮಹಿಳೆ ಅಬಲೆಯಾಗದೆ ಸಬಲೆಯಾಗುತ್ತಾಳೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಸಾಧ್ವಿ ಶ್ರೀ ಮಾತಾನಂದಮಯಿ ನುಡಿದರು. ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಭಜನಾಮಂದಿರದಲ್ಲಿ ನಡೆಯುವ ಮಂಡಲ ಭಜನೆ ಉದ್ಘಾಟಿಸಿ ಅವರು ಆಶೀರ್ವಚನ ನೀಡುತ್ತಿದ್ದರು. ಮನುಷ್ಯ ಇಂದ್ರಿಯಗಳ ದಾಸನಾಗದೆ ಭೂಮಿಯಲ್ಲಿ ಬದುಕುವ ಅವಕಾಶವಿತ್ತ ಭಗವಂತನ ದಾಸನಾಗಬೇಕು. ದೇವರು ಮೆಚ್ಚುವ ಕೆಲಸಗಳನ್ನಷ್ಟೇ ಮಾಡಬೇಕು. ಅದರಿಂದಲೇ ಮಾನವ ಜನ್ಮಕ್ಕೆ ಮಾಧವನಿಂದ …