ನಗರದಲ್ಲಿ ರಸಮಂಜರಿ ಕಾರ್ಯಕ್ರಮ ವೇಳೆ ಪ್ರೇಕ್ಷಕರ ಭಾರೀ ನೂಕುನುಗ್ಗಲು: ಉಸಿರುಗಟ್ಟುವ ವಾತಾವರಣ; ಕುಸಿದುಬಿದ್ದು 12ಕ್ಕೂ ಹೆಚ್ಚು

ಮಂದಿ ಆಸ್ಪತ್ರೆಯಲ್ಲಿ, ಲಾಠಿ ಪ್ರಯೋಗಿಸಿದ ಪೊಲೀಸರು, ಸಂಘಟಕರ ವಿರುದ್ಧ ಕೇಸು ಕಾಸರಗೋಡು: ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ  ಪ್ರೇಕ್ಷಕರ ಅಭೂತಪೂರ್ವ ಸಂದಣಿಯಿಂದಾಗಿ ಭಾರೀ ನೂಕುನುಗ್ಗಲು ಹಾಗೂ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿ ೧೨ಕ್ಕೂ ಹೆಚ್ಚು ಮಂದಿ ಕುಸಿದು ಬಿದ್ದು ಆಸ್ಪತ್ರೆಯಲ್ಲಿ ದಾಖಲಾದ ಘಟನೆ ನಗರದ ನುಳ್ಳಿಪ್ಪಾಡಿಯಲ್ಲಿ ನಿನ್ನೆ ಸಂಜೆ ನಡೆದಿದೆ. ನಗರದ ನುಳ್ಳಿಪ್ಪಾಡಿಯ ಶ್ರೀ ಅಯ್ಯಪ್ಪ ದೇವಸ್ಥಾನ ಬಳಿಯ ಖಾಸಗಿ ಸ್ಥಳದಲ್ಲಿ ಎಫ್‌ಎಲ್‌ಇಎ ಎಂಬ ಹೆಸರಲ್ಲಿ  ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅದರಲ್ಲಿ ೩೦೦೦ ಪ್ರೇಕ್ಷಕರು ಭಾಗವಹಿಸುವ ಸೌಕರ್ಯ ಏರ್ಪಡಿಸಲಾಗಿದೆ. ಆದರೆ …

ಪಂ. ಚುನಾವಣೆ: ಮಂಜೇಶ್ವರ, ಮಂಗಲ್ಪಾಡಿ, ಕುಂಬಳೆ ಪಂಚಾಯತ್‌ಗಳಲ್ಲಿ ಅಭ್ಯರ್ಥಿಗಳ ಮಧ್ಯೆ ಆವೇಶಭರಿತ ಪೈಪೋಟಿ ; ಮುಖ್ಯಸ್ಪರ್ಧೆ ಕಾಂಗ್ರೆಸ್ – ಲೀಗ್ ಮಧ್ಯೆ

ಮಂಜೇಶ್ವರ:  ತ್ರಿಸ್ತರ ಪಂಚಾಯತ್ ಚುನಾವಣೆಯ ಪ್ರಚಾರ  ಬಿರುಸುಗೊಳ್ಳುತ್ತಿರುವಂತೆ ಮಂಜೇಶ್ವರ, ಮಂಗಲ್ಪಾಡಿ, ಕುಂಬಳೆ ಗ್ರಾಮ ಪಂಚಾಯತ್‌ಗಳಲ್ಲಿ  ವಿವಿಧ ಪಕ್ಷಗಳ ಕಾರ್ಯಕರ್ತರಲ್ಲಿ ಕುತೂಹಲ ತೀವ್ರಗೊಂಡಿದೆ.  ಮುಂದೆ ಏನಾಗಲಿದೆಯೆಂದು ತಿಳಿಯಲು  ನಿರೀಕ್ಷೆಯೊಂದಿಗೆ ಮತದಾರರು ಕಾದುಕುಳಿತಿದ್ದಾರೆ.  ಪಂಚಾಯತ್ ಚುನಾವಣೆಯಲ್ಲಿ ಈ ಪಂಚಾಯತ್ ಗಳಲ್ಲಿ ಕಾಂಗ್ರೆಸ್ ನ ಅಡಿಪಾಯ ತಪ್ಪಿಸುವುದಾಗಿ ಲೀಗ್ ಕಾರ್ಯಕ ರ್ತರು ಒಂದೆಡೆ ಹೇಳುತ್ತಿದ್ದರೆ ಲೀಗ್‌ನ ಆಡಳಿತವನ್ನೇ ಇಲ್ಲದಾಗಿಸುವುದಾಗಿ  ಕಾಂಗ್ರೆಸ್ ಮತ್ತೊಂದೆಡೆ  ತಿಳಿಸುತ್ತಿದ್ದಾರೆ.  ಈಮಧ್ಯೆ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಉಪಾಧ್ಯಕ್ಷ ನಾಗೇಶ್ ಮಂಜೇಶ್ವರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಲೀಗ್‌ಗೆ ಸೇರ್ಪಡೆಗೊಂಡಿದ್ದಾರೆ. …

ಪೆರ್ಲ  ಬಳಿ  ಮನೆಯಿಂದ ನಾಡಕೋವಿ, ಮದ್ದುಗುಂಡು ವಶ: ಬಂಧಿತ ಆರೋಪಿಗೆ ರಿಮಾಂಡ್

ಕಾಸರಗೋಡು: ಪೆರ್ಲ  ಬಳಿಯ ಕುರಿಯಡ್ಕದಲ್ಲಿ  ಮನೆಯಿಂದ ಕಳ್ಳಕೋವಿ ಹಾಗೂ   ಮದ್ದುಗುಂಡುಗಳ ಸಹಿತ ಸೆರೆಗೀಡಾದ  ವ್ಯಕ್ತಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.  ಕುರಿಯಡ್ಕ ನಿವಾಸಿ ಕೃಷ್ಣಪ್ಪ ನಾಯ್ಕ್‌ಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.  ಬದಿಯಡ್ಕ ಪೊಲೀಸರು ಮೊನ್ನೆ ನಡೆಸಿದ ದಾಳಿ ವೇಳೆ ಕೃಷ್ಣಪ್ಪ ನಾಯ್ಕನ ಮನೆಯಿಂದ ಕಳ್ಳಕೋವಿ, ಎರಡು ಮದ್ದುಗುಂಡುಗಳು ಹಾಗೂ ೪೨ ಖಾಲಿ ಕೇಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕೃಷ್ಣಪ್ಪ ನಾಯ್ಕ್‌ನನ್ನು ಬಂಧಿಸಲಾಗಿತ್ತು.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ ಭರತ್ ರೆಡ್ಡಿಗೆ ಲಭಿಸಿದ ಗುಪ್ತ ಮಾಹಿತಿಯಂತೆ ಬದಿಯಡ್ಕ ಪೊಲೀಸ್ ಇನ್‌ಸ್ಪೆಕ್ಟರ್ …

ಪೊಲೀಸರಿಗೆ ಹಲ್ಲೆ: ಕೊಲೆಯತ್ನ ಸಹಿತ 22 ಪ್ರಕರಣಗಳ ಆರೋಪಿ ಬಂಧನ

ಕಾಸರಗೋಡು: ನೀಲೇಶ್ವರದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ   ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಪ್ರಕರಣದಲ್ಲಿ  ಕೊಲೆಯತ್ನ ಸಹಿತ ೨೨ರಷ್ಟು ಪ್ರಕರಣಗಳಲ್ಲಿ ಆರೋಪಿ ಯಾದ ಕುಖ್ಯಾತ ಗೂಂಡಾನನ್ನು ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಕೂಡ್ಲು ಪಾರೆಕಟ್ಟೆ ಆರ್‌ಡಿನಗರದ   ಅಜಯ್ ಕುಮಾರ್ ಶೆಟ್ಟಿ ಯಾನೆ ತೇಜು (29) ಎಂಬಾತನನ್ನು ನೀಲೇಶ್ವರ ಪೊಲೀಸ್ ಇನ್‌ಸ್ಪೆಕ್ಟರ್ ನಿಬಿನ್ ಜೋಯ್ ಬಂಧಿಸಿದ್ದಾರೆ.  ನಿನ್ನೆ ರಾತ್ರಿ 10 ಗಂಟೆಗೆ ರಾಷ್ಟ್ರೀಯ ಹೆದ್ದಾರಿ ಕರುವಚ್ಚೇರಿ ಲೋಕೋಪಯೋಗಿ ಕಚೇರಿ ಮುಂದಿನ ರಸ್ತೆಯಲ್ಲಿ ತೇಜು ಜನರಿಗೆ  ಬೆದರಿಕೆಯೊಡ್ಡಿದ್ದನು.  ಈ ವಿಷಯ ತಿಳಿದು …

ಸೀತಾಂಗೋಳಿಯಲ್ಲಿ ಗೂಡಂಗಡಿಯಿಂದ ಗ್ಯಾಸ್ ಸೀಲಿಂಡರ್‌ಗಳು, ಅಕ್ಕಿ, ಮಿಠಾಯಿ ಕಳವು

ಸೀತಾಂಗೋಳಿ: ಸೀತಾಂಗೋಳಿ ಪೆಟ್ರೋಲ್ ಬಂಕ್ ಸಮೀಪದ ಗೂಡಂಗಡಿಗೆ  ಕಳ್ಳರು ದಾಳಿ ನಡೆಸಿದ್ದಾರೆ. ಅಂಗಡಿಯ ಕಬ್ಬಿಣದ  ಗ್ರಿಲ್ಸ್‌ನ  ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಮೂರು ಗ್ಯಾಸ್ ಸಿಲಿಂಡರ್, ಸ್ಟವ್,ಮಿಠಾಯಿಗಳು, ಅಕ್ಕಿ ಮೊದಲಾದವುಗಳನ್ನು ದೋಚಿ ದ್ದಾರೆ.   ಸೀತಾಂಗೋಳಿ ಸಮೀಪ ವಾಸಿಸುವ ನಬೀಸ ಎಂಬವರ ಗೂಡಂಗಡಿಯಿಂದ ಕಳವು ನಡೆದಿದೆ.  ಇಂದು ಬೆಳಿಗ್ಗೆ ಅಂಗಡಿ ತೆರೆಯಲೆಂದು ನಬೀಸ ತಲುಪಿದಾಗ ಬಾಗಿಲು ಮುರಿದ ಸ್ಥಿತಿಯಲ್ಲಿ ಕಂಡುಬಂದಿದೆ.  ಒಳಗೆ ಪ್ರವೇಶಿಸಿ ನೋಡಿದಾಗ ಗ್ಯಾಸ್ ಸಿಲಿಂಡರ್ ಸಹಿತ ವಿವಿಧ ವಸ್ತುಗಳು ಕಳವಿಗೀಡಾಗಿರುವುದು ತಿಳಿದುಬಂದಿದೆ. ಈ ಬಗ್ಗೆ …

ನಾಪತ್ತೆಯಾದ ಯುವಕನ ಮೃತದೇಹ ಬಾವಿಯಲ್ಲಿ ಪತ್ತೆ

ಕಾಸರಗೋಡು: ನಾಪತ್ತೆಯಾದ ಯುವಕನ ಮೃತದೇಹ ಬಾವಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ನಗರದ ನಾಗರಕಟ್ಟೆ  ಶ್ರೀ ಶಾರದಾ ಭಜನಾ ಮಂದಿರ ಬಳಿಯ ಚಂದ್ರದೇವಿ ಕೃಪಾದ ರಮಾನಂದ-ಆಶಾ ದಂಪತಿ ಪುತ್ರ ಪ್ರಸಾದ್ ನಾಗರಕಟ್ಟೆ (35) ಸಾವನ್ನಪ್ಪಿದ ಯುವಕ. ಕಾರ್ಪೆಂಟರ್ ಕೆಲಸ ನಿರ್ವಹಿಸುತ್ತಿದ್ದ ಪ್ರಸಾದ್ ಶನಿವಾರ ಮಧ್ಯಾಹ್ನ ಸ್ಕೂಟರ್‌ನಲ್ಲಿ ಮನೆಯಿಂದ ಹೊರ ಹೋದವರು ಬಳಿಕ  ಹಿಂತಿರುಗಲಿಲ್ಲವೆಂದು ಮನೆಯವರು ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ಶೋಧ ಆರಂಭಿಸಿರುವಂತೆ ನಿನ್ನೆ ಮಧ್ಯಾಹ್ನ ಕೊರಕ್ಕೋಡು  ಬೈಲಿನ ಮನೆಯೊಂದರ ಬಾವಿಯಲ್ಲಿ  ಪ್ರಸಾದ್‌ರ …

ಮನೆಯ ಪ್ರಾರ್ಥನಾ ಕೊಠಡಿಯೊಳಗೆ ಸಿಲುಕಿದ 3ರ ಹರೆಯದ ಬಾಲಕನ ರಕ್ಷಣೆ

ಕಾಸರಗೋಡು: ಅಜಾಗರೂಕತೆ ಯಿಂದ ಪ್ರಾರ್ಥನಾ ಕೊಠಡಿಯ ಬಾಗಿಲಿನ ಬೀಗ ಲಾಕ್ ಆಗಿ ತೆರೆಯಲಾಗದ ಕಾರಣ  3 ವರ್ಷದ ಬಾಲಕ ಒಂದು ಗಂಟೆ ಕಾಲ ಕೊಠಡಿಯೊಳಗೆ ಸಿಲುಕಿಕೊಂಡ ಘಟನೆ ನಡೆದಿದೆ. ಚೆರ್ಕಳ ನಿವಾಸಿ ನೌಫಲ್‌ನ ಪುತ್ರ ಗಾಜು ಹಾಕಿದ ಪ್ರಾರ್ಥನಾ ಕೊಠಡಿಯಲ್ಲಿ ಸಿಲುಕಿಕೊಂಡಿದ್ದನು. ನಿನ್ನೆ ರಾತ್ರಿ 10 ಗಂಟೆಗೆ ಘಟನೆ ನಡೆದಿದೆ. ಹೆತ್ತವರು ಸೇರಿ ಬಹಳ ಹೊತ್ತು ಬಾಗಿಲು ತೆರೆಯಲು ಯತ್ನಿಸಿದರಾದರೂ ಸಫಲರಾಗಲಿಲ್ಲ. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎಂ. …

ಲೀಗ್ ಕೋಟೆಯಾದ ಕೊಡ್ಯಮ್ಮೆಯಲ್ಲಿ ಲೀಗ್ ಅಭ್ಯರ್ಥಿಗೆ ಸವಾಲೊಡ್ಡಿ ಲೀಗ್ ಕಾರ್ಯಕರ್ತ ಸ್ಪರ್ಧಾಕಣಕ್ಕೆ

ಕುಂಬಳೆ: ಯುಡಿಎಫ್‌ನ ಪ್ರಧಾನ ಘಟಕ ಪಕ್ಷಗಳಾದ ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್ ಮಧ್ಯೆ ಮತ್ತು ಲೀಗ್‌ನವರ ಮಧ್ಯೆ ತೀವ್ರ ಪೈಪೋಟಿ ನಡೆಯುವ ಕುಂಬಳೆ ಪಂಚಾಯತ್‌ನ ಲೀಗ್ ಕೋಟೆಯಾದ ಕೊಡ್ಯಮ್ಮೆ ೯ನೇ ವಾರ್ಡ್‌ನಲ್ಲಿ ಲೀಗ್ ಅಭ್ಯರ್ಥಿಗಳಿಗೆ ಭಾರೀ ಸವಾಲೊಡ್ಡಿ ಒಂದು ವಿಭಾಗ ಲೀಗ್ ಕಾರ್ಯಕರ್ತರು ಪಕ್ಷದ ಸಕ್ರಿ ಯ ಕಾರ್ಯಕರ್ತನನ್ನು ಕಣಕ್ಕಿಳಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಇಲ್ಲಿ ಎಡರಂಗಕ್ಕೆ ಲಭಿಸಿದ ಗೆಲುವು ಲೀಗ್ ನಾಯಕತ್ವವನ್ನು ಬೆಚ್ಚಿಬೀಳಿಸಿತ್ತು. ಈಬಾರಿ ಸ್ವಂತ ಕೋಟೆಯನ್ನು ವಶಪಡಿಸಿಕೊಳ್ಳಲು ಪಕ್ಷದ ಪ್ರಬಲನಾದ ಅಬ್ಬಾಸ್ ಕೊಡ್ಯಮ್ಮೆ ಅವರನ್ನು ಕಣಕ್ಕಿಳಿಸುವುದರೊಂದಿಗೆ  …

ಪುತ್ತಿಗೆ ಬ್ಲೋಕ್ ಪಂಚಾಯತ್ ಡಿವಿಶನ್‌ನಲ್ಲಿ ಪ್ರಧಾನ ಸ್ಪರ್ಧೆ ಕಾಂಗ್ರೆಸ್-ಕಾಂಗ್ರೆಸ್ ಮಧ್ಯೆ; ಬಿಜೆಪಿ, ಸಿಪಿಎಂಗೆ ಕೌತುಕ

ಕುಂಬಳೆ: ನಾಮಪತ್ರ ಸಮರ್ಪಣೆ ದಿನಾಂಕ ಕೊನೆಗೊಂಡ ಬಳಿಕ ಚುನಾವಣೆ ಚಿತ್ರ ಸ್ಪಷ್ಟಗೊಂಡಿದೆ. ಮಂಜೇಶ್ವರ ಬ್ಲೋಕ್ ಪಂಚಾಯತ್‌ನ ಪುತ್ತಿಗೆ ಡಿವಿಷನ್‌ನಲ್ಲಿ ಪ್ರದಾನ ಪಕ್ಷಗಳ ಅಭ್ಯರ್ಥಿಗಳೆಲ್ಲಾ ರಂಗದಲ್ಲಿದ್ದರೂ ಸ್ಪರ್ಧೆ ಕಾಂಗ್ರೆಸ್ ಅಭ್ಯರ್ಥಿಗಳ ಮಧ್ಯೆಯಾಗಿದೆ ಎಂಬುದು ಸ್ಪಷ್ಟಗೊಂಡಿತು. ಕಾಂಗ್ರೆಸ್‌ನ ಔದ್ಯೋಗಿಕ ಅಭ್ಯರ್ಥಿಯಾಗಿ ಯೂತ್ ಮುಖಂಡ ಜುನೈದ್ ಸ್ಪರ್ಧಿಸುವ ಈ ಡಿವಿಷನ್‌ನಲ್ಲಿ ಕಾಂಗ್ರೆಸ್‌ನ ಪ್ರಧಾನ ಮುಖಂಡ, ಕೃಷಿ ಸಂಘಟನಾ ನೇತಾರನಾದ ಶುಕೂರ್ ಕಾಣಾಜೆ ಕೂಡಾ ನಾಮಪತ್ರ ಸಮರ್ಪಿಸಿ ಸ್ಪರ್ಧಾರಂಗದಲ್ಲಿದ್ದಾರೆ. ಅಭ್ಯರ್ಥಿನಿರ್ಣ ಯದಲ್ಲಿ ಪಕ್ಷದ ನೇತೃತ್ವ ನಿಷ್ಪಕ್ಷವಾದ ನಿಲುವು ಕೈಗೊಂಡಿಲ್ಲವೆಂಬುದು ಶುಕೂರ್ ನಾಮಪತ್ರ ಸಲ್ಲಿಸಲು …

ಗಡಿನಾಡ ಕನ್ನಡ ರಾಜ್ಯೋತ್ಸವ ಆಚರಣೆ; ಪೌರ ಸನ್ಮಾನ, ಪ್ರಶಸ್ತಿ ಪ್ರದಾನ 26ರಂದು ಕಾಯರ್‌ಕಟ್ಟೆಯಲ್ಲಿ

ಕಾಸರಗೋಡು: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಆಶ್ರಯದಲ್ಲಿ ನ.29ರಂದು ಕಾಯರ್‌ಕಟ್ಟೆ ಸರಕಾರಿ ಹೈಯರ್ ಸೆಕೆಂಡರಿ ಶಾಲಾ ಸಭಾಂಗಣದಲ್ಲಿ ಗಡಿನಾಡ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.ಅಕಾಡೆಮಿ ಸಂಸ್ಥಾಪಕ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಉದ್ಘಾಟಿ ಸುವರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡುವರು.ದ.ಕ. ಜಿಲ್ಲೆ ಹಾಗೂ ಉಡುಪಿ ಜಿಲ್ಲೆ ರಾಜ್ಯೋತ್ಸವ ಪ್ರಶಸ್ತಿ …