ಸಾಲವಾಗಿ ನೀಡಿದ ಯಂತ್ರ ಮರಳಿ ನೀಡದ ದ್ವೇಷ: ವ್ಯಕ್ತಿಯನ್ನು ಕಗ್ಗಲ್ಲಿನಿಂದ ಹೊಡೆದು ಕೊಲೆಗೈಯ್ಯಲೆತ್ನಿಸಿದ ಆರೋಪಿಗೆ ಏಳು ವರ್ಷ ಕಠಿಣ ಸಜೆ, ಜುಲ್ಮಾನೆ

ಕಾಸರಗೋಡು: ಕೊಲೆಯತ್ನ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (3)ರ ನ್ಯಾಯಧೀಶರಾದ ಅಚಿಂತ್ಯಾ ರಾಜ್ ಉಣ್ಣಿ ಏಳು ವರ್ಷ ಕಠಿಣ ಸಜೆ ಹಾಗೂ ಒಂದು ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಮೂಲತಃ ಕರ್ನಾಟಕ ಶಿವಮೊಗ್ಗ ರಾಜೀವ್‌ನಗರ ನಿವಾಸಿ ಹಾಗೂ ಈಗ ಉಪ್ಪಳ ಅಂಚೆ ಕಚೇರಿ ಬಳಿ ವಾಸಿಸುತ್ತಿರುವ ವಿಜಯ ನಾಯ್ಕ (50) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಆರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆಯೆಂದು ತೀರ್ಪಿನಲ್ಲಿ ತಿಳಿಸಲಾಗಿದೆ.  …

ಆಂಬುಲೆನ್ಸ್ ಚಾಲಕ ಆತ್ಮಹತ್ಯೆ

ಕಾಸರಗೋಡು: ಈ ಹಿಂದೆ ಆಂಬುಲೆನ್ಸ್ ಚಾಲಕನಾಗಿದ್ದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಗಿದೆ. ಕಳ್ಳಾರ್ ಅರಕ್ಕನ್‌ಕಾಡ್ ಮಣಿಕಲ್ ನಿವಾಸಿ ಎ. ನಾರಾ ಯಣನ್ (56) ಮೃತಪಟ್ಟವರು. ಮನೆಯ ಕಾರು ಪೋರ್ಚರ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ ಯಾಗಿದೆ. ಸಂಘಟನೆಯೊಂದರ ಆಂಬು ಲೆನ್ಸ್‌ನಲ್ಲಿ ಕಾಞಂಗಾಡ್‌ನಲ್ಲಿ ಹಲವು ಕಾಲ ಚಾಲಕನಾಗಿ ದುಡಿದಿದ್ದರು. ಮೃತರು ಪತ್ನಿ ಮಿನಿ, ಮಕ್ಕಳಾದ ಪ್ರಾರ್ಥನಾ, ಅಭಿಷೇಕ್, ಅಳಿಯ ರಾಜೇಶ್, ಸಹೋದರರಾದ ಅಶೋಕನ್, ಚಂದ್ರನ್, ಸಹೋದರಿ ನಿರ್ಮಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಪಿಣರಾಯಿ ವಿಜಯನ್ ಸರಕಾರ ಸ್ಥಳೀಯಾಡಳಿತ ಸಂಸ್ಥೆಗಳ ಕತ್ತು ಹಿಚುಕುತ್ತಿದೆ- ಎಂ.ಎಲ್. ಅಶ್ವಿನಿ

ಕುಂಬಳೆ: ತೀವ್ರ ಆರ್ಥಿಕ ಸಂದಿಗ್ಧತೆಯನ್ನು ಹಿಮ್ಮೆಟ್ಟಿಸಲು ಸ್ಥಳೀಯಾಡಳಿತ ಸಂಸ್ಥೆಗಳ ನಿಧಿಯನ್ನು ಕಡಿತಗೊಳಿಸಿದ ಪಿಣರಾಯಿ ಸರಕಾರದ ಕ್ರಮ ಸ್ಥಳೀಯಾಡಳಿತ ಸಂಸ್ಥೆಗಳನ್ನು ಆರ್ಥಿಕವಾಗಿ ಹಿಚುಕುತ್ತಿದೆ,  ತ್ರಿಸ್ತರ ಪಂಚಾಯತ್‌ಗಳ ಚಟುವಟಿಗಳ ತಾಳ ತಪ್ಪಿಸುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆರೋಪಿಸಿದರು. ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿ ಆಯೋಜಿಸಿದ ಜನ ಪಂಚಾ ಯತ್ ಸಾರ್ವಜನಿಕ ಸಭೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕೊರೋನಾ ಸಮಯದಲ್ಲಿ ಕೆಲಸ ಕಳೆದು ಕೊಂಡು ಹಿಂತಿರುಗಿದ  ಅನಿವಾಸಿಗಳಿಗೆ ಆರು ತಿಂಗಳ ವೇತನ ನೀಡುವುದಾಗಿ ತಿಳಿಸಿ ವಂಚಿಸಿದ ಪಿಣರಾಯಿ ಸರಕಾರ …

ಮಂಗಲ್ಪಾಡಿ ಪಂಚಾಯತ್‌ನಿಂದ ಸ್ಪರ್ಧಿಸುವ ವಿವಿಧ ಪಕ್ಷಗಳ ಅಭ್ಯರ್ಥಿಗಳು

ಉಪ್ಪಳ: ತ್ರಿಸ್ತರ ಪಂಚಾಯತ್ ಚುನಾವಣೆಗೆ ಮಂಗಲ್ಪಾಡಿ ಪಂಚಾಯತ್‌ನಿAದ ಸ್ಪರ್ಧಿಸುವ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳ ವಿವರ: 1ನೇ ವಾರ್ಡ್ ಮೂಸೋಡಿ ಕದೀಜ [ಸ್ವತಂತ್ರ], ರೇಷ್ಮ.ಕೆ. ಆರ್. [ಸ್ವತಂತ್ರ], ಸುಮಯ್ಯ.ವಿ [ಲೀಗ್], 2ನೇ ವಾರ್ಡ್ ಉಪ್ಪಳಗೇಟ್ ಗೋಲ್ಡನ್ ಅಬ್ದುಲ್ ರಹಿಮಾನ್ [ಲೀಗ್], ಅಶ್ರಫ್ [ಸ್ವತಂತ್ರ], ನಿತಿನ್ [ಬಿಜೆಪಿ], 3ನೇ ವಾರ್ಡ್ ಮುಳಿಂಜ ಮುನೀರ್ ಕೆ.ಪಿ [ಸ್ವತಂತ್ರ], ಮುಹಮ್ಮದ್ ಹನೀಫ್.ಬಿ [ಹನೀಫ್ ಬಾಬಾ] [ಲೀಗ್], ಮೊಹಮ್ಮದ್ ಇಂತ್ಯಾಸ್ [ಸ್ವತಂತ್ರ], ಹರಿನಾಥ ಭಂಡಾರಿ [ಬಿಜೆಪಿ], 4ನೇ ವಾರ್ಡ್ ಉಪ್ಪಳ …

ಡಾ. ಡಿ. ವೀರೇಂದ್ರ ಹೆಗಡೆಯವರ 78ನೇ ಹುಟ್ಟುಹಬ್ಬ: ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ವಿವಿಧ ಕಾರ್ಯಕ್ರಮ

ಬದಿಯಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆಯವರ ಜನ್ಮದಿನ ಪ್ರಯುಕ್ತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ತಾಲೂಕು ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಆಶ್ರಯ ಆಶ್ರಮ ಕನ್ನೆಪ್ಪಾಡಿಯಲ್ಲಿ  ಹುಟ್ಟುಹಬ್ಬ ಆಚರಿಸಲಾಯಿತು. ಬೆಳಿಗ್ಗೆ ಭಜನೆ ಬಳಿಕ ಸಭೆ ನಡೆಯಿತು. ಇದೇ ವೇಳೆ ತಾಲೂಕು ಜನಜಾಗೃತಿ ವೇದಿಕೆಯಿಂದ ಕೊಡುಗೆಯಾಗಿ ನೀಡಿದ ಪುಸ್ತಕವನ್ನು ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಆಶ್ರಮದ ರಮೇಶ್ ಕಳೇರಿಯವರಿಗೆ ಹಸ್ತಾಂತರಿಸಿದರು. ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ ಅಧ್ಯಕ್ಷತೆ ವಹಿಸಿದರು. ಕಾರಡ್ಕ ವಲಯ ಅಧ್ಯಕ್ಷ …

ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಜಿಲ್ಲಾ ಸಮ್ಮೇಳನ ಆರಂಭ

ಕಾಸರಗೋಡು: ಛಾಯಾಗ್ರಹಣ ವಲಯದಲ್ಲಿ ಕೆಲಸ ಮಾಡುವವರ ಅತ್ಯಂತ ದೊಡ್ಡ ಸಂಘಟನೆಯಾದ ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್ (ಎಕೆಪಿಎ) ೪೧ನೇ ಜಿಲ್ಲಾ ಸಮ್ಮೇಳನ ಕಾಞಂಗಾಡ್ ವ್ಯಾಪಾರ ಭವನದಲ್ಲಿ ಆರಂಭಗೊಂಡಿತು. ನಿಧನ ಹೊಂದಿದ ಫೊಟೋ ಗ್ರಾಫರ್‌ಗಳಾದ ವಿನೋದ್, ಚಿದಾನಂದ ಅರಿಬೈಲು ಎಂಬಿವರ ಸ್ಮರಣಾರ್ಥವಿರುವ ನಗರದಲ್ಲಿ ಎರಡು ದಿನಗಳಲ್ಲಾಗಿ ಸಮ್ಮೇಳನ ನಡೆಯಲಿದೆ. ನಿನ್ನೆ  ಬೆಳಿಗ್ಗೆ ಜಿಲ್ಲಾ ಅಧ್ಯಕ್ಷ ಸುಗುಣನ್ ಇರಿಯ ಧ್ವಜಾರೋಹಣಗೈದರು. ಬಳಿಕ ಟ್ರೇಡ್ ಫೇರ್‌ನ್ನು ರಾಜ್ಯಾಧ್ಯಕ್ಷ ಎ.ಸಿ. ಜೋನ್ಸನ್ ಉದ್ಘಾಟಿಸಿದರು. ರಾಜ್ಯ ಕೋಶಾಧಿಕಾರಿ ಉಣ್ಣಿ ಕೂವೋಡು ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿದರು. …