ಕುಬಣೂರು ರಸ್ತೆಯಲ್ಲಿ ಮತ್ತೆ ತ್ಯಾಜ್ಯ ಉಪೇಕ್ಷೆ: ಸಂಚಾರ ಸಮಸ್ಯೆ

ಉಪ್ಪಳ: ರಸ್ತೆ ಬದಿಯಲ್ಲಿ ತ್ಯಾಜ್ಯ ಉಪೇಕ್ಷಿಸುತ್ತಿರುವ ಕೃತ್ಯ ಮತ್ತೆ ವ್ಯಾಪಕಗೊಂಡಿದ್ದು, ಸಂಚಾರಕ್ಕೆ ಸಮಸ್ಯೆಯಾಗಿದೆ. ತ್ಯಾಜ್ಯ ಎಸೆಯುವವರ ವಿರುದ್ದ ಕಠಿಣ ಕ್ರಮಕ್ಕೆ ಊರವರು ಒತ್ತಾಯಿಸಿದ್ದಾರೆ. ಶಾಂತಿಗುರಿ-ಕುಬಣೂರು ರಸ್ತೆಯ ವಿವಿಧೆಡೆಗಳಲ್ಲಿ ತ್ಯಾಜ್ಯ ದುರ್ವಾಸನೆ ಬೀರುತ್ತಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಸಮಸ್ಯೆಯಾಗಿದೆ. ರಾತ್ರಿ ವಾಹನ ಸಂಚಾರದ ವೇಳೆ ಇಲ್ಲಿ ಪ್ಲಾಸ್ಟಿಕ್ ಸಹಿತ ವಿವಿಧ ರೀತಿಯ ತ್ಯಾಜ್ಯವನ್ನು ಎಸೆಯಲಾಗುತ್ತಿರುವುದಾಗಿ ದೂರಲಾಗಿದೆ. ಹಲವು ವರ್ಷಗಳ ಹಿಂದೆ ಈ ಪರಿಸರದ ಸುವರ್ಣಗಿರಿ ಹೊಳೆಗೆ ಮದುವೆ ಸಮಾರಂಭದ ಅವಶಿಷ್ಠಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಎಸೆಯಲಾಗಿದ್ದು, ಇದನ್ನು …

ಬಾಯಿಕಟ್ಟೆ ಶ್ರೀ ಅಯ್ಯಪ್ಪ ಭಜನಾ ಮಂದಿರದ ವಾರ್ಷಿಕೋತ್ಸವ ಆರಂಭ

ಪೈವಳಿಕೆ: ಬಾಯಿಕಟ್ಟೆ ಶ್ರೀ ಅಯ್ಯಪ್ಪ ಭಜನಾ ಮಂದಿರದ ೧೮ನೇ ವಾರ್ಷಿಕೋತ್ಸವ ಇಂದು ಹಾಗೂ ನಾಳೆ ವಿವಿಧ ಕಾರ್ಯಕ್ರಮ ಗಳೊಂದಿಗೆ ನಡೆಯಲಿದ್ದು, ಇಂದು ಬೆಳಿಗ್ಗೆ ಮಂದಿರದ ಪ್ರಧಾನ ಅರ್ಚಕ ವೇ|ಮೂ| ವೆಂಕಟರಮಣ ಮೂಡಿತ್ತಾಯ ದೀಪ ಪ್ರಜ್ವಲನೆ ಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಭಜನೆ ಪ್ರಾರಂಭ ಗೊಂಡಿತು. ದ್ವಾದಶ ನಾಳೀಕೇರ ಗಣಯಾಗ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ೭ಕ್ಕೆ ನೃತ್ಯ ಸಂಭ್ರಮ, ೯ಕ್ಕೆ ಯಕ್ಷಗಾನ ನಾಟ್ಯ ವೈಭವ, ೧೦ಕ್ಕೆ ಕಲಾ …

ಮಾಡಾಯಿಕಾವು ಕ್ಷೇತ್ರದ ಸೇವಾ ರಶೀದಿಯ ನಕಲಿ ಉಪಯೋಗಿಸಿ ವಂಚನೆ: ನೌಕರ ಅಮಾನತು

ಪಯ್ಯನ್ನೂರು: ಪ್ರಸಿದ್ಧ ಕ್ಷೇತ್ರವಾದ ಮಾಡಾಯಿಕಾವುನಲ್ಲಿ ಬಲಿವಾಡು ಸೇವೆಗೆ ನಕಲಿ ರಶೀದಿ ಉಪಯೋಗಿಸಿ  ಹಣ ವಂಚಿಸಿದ ನೌಕರನನ್ನು ಅಮಾನತುಗೊಳಿಸಲಾಗಿದೆ. ಮಲಬಾರ್ ದೇವಸ್ವಂ ಎಂಪ್ಲೋಯಿಸ್ ಯೂನಿಯನ್ (ಸಿಐಟಿಯು) ಮಾಡಾಯಿ ಏರಿಯಾ ಕಾರ್ಯದರ್ಶಿ, ಜಿಲ್ಲಾ ಸಮಿತಿ ಸದಸ್ಯನಾದ ಎ.ವಿ. ಅನೀಶ್ (೪೫) ವಂಚನೆ ನಡೆಸಿರುವ ವ್ಯಕ್ತಿ. ಮಾಡಾಯಿಕಾವ್‌ನ ಕೌಂಟರ್‌ನಲ್ಲಿ ಕರ್ತವ್ಯದಲ್ಲಿದ್ದ ನೌಕರನಾಗಿದ್ದಾನೆ ಈತ. ಸೋಮವಾರ ಕ್ಷೇತ್ರದರ್ಶನಕ್ಕೆ ತಲುಪಿದ ಕರ್ನಾಟಕ ನಿವಾಸಿಗೆ ನೀಡಿದ ಸೇವಾ ರಶೀದಿಯ ನಕಲಿ ಪ್ರತಿಯನ್ನು ಇನ್ನೋರ್ವರಿಗೆ ರಶೀದಿಯಾಗಿ ನೀಡಿ ಹಣವನ್ನು ಜೇಬಿಗಿಳಿಸಿರುವುದಾಗಿ ದೂರಲಾಗಿದೆ. ಕರ್ನಾಟಕ ನಿವಾಸಿಗೆ ನೀಡಿದ ರಶೀದಿಯ …

ಬೇಳ ಕುಮಾರಮಂಗಲ ಕ್ಷೇತ್ರದಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಸಾಹಿತ್ಯ ಗಾನ ನೃತ್ಯ ವೈಭವ

ಬೇಳ: ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಪ್ರಯುಕ್ತ ಡಾ. ವಾಣಿಶ್ರೀ ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯ ಕ್ರಮ ಜರಗಿತು. ಡಾ. ವಾಣಿಶ್ರೀ ಪ್ರಸ್ತುತ ಪಡಿಸಿದರು. ವಿದ್ವಾಂಸ ನಾರಾಯಣ ಭಟ್ ರಚಿಸಿದ ಪದ್ಯಗಳಿಗೆ ಸಂಸ್ಥೆಯ ನವ್ಯಶ್ರೀ ಕುಲಾಲ್, ಶರಣ್ಯ ಶೆಟ್ಟಿ, ಯಶಿಕ ಸಂದೀಪ್, ದಿಯಾ ಸುಕೇಶ್ ನೃತ್ಯ ಮಾಡಿದರು. ನಾರಾಯಣ ಭಟ್‌ರ ಪುತ್ರ ಡಾ. ವೆಂಕಟ ಗಿರೀಶ್‌ರನ್ನು ಗೌರವಿಸಲಾಯಿತು. ಗೋಪಾಲಕೃಷ್ಣ, ವಿಶ್ವನಾಥ ಪುತ್ತಿಗೆ, …