ಮಂಜೇಶ್ವರದಲ್ಲಿ ಅಂಗಡಿಗಳಿಂದ ಕಳವು

ಮಂಜೇಶ್ವರ: ಮಂಜೇಶ್ವರ ರಾಗಂ ಜಂಕ್ಷನ್‌ನಲ್ಲಿ ಮೂರು ಅಂಗಡಿಗಳಿಗೆ ನಿನ್ನೆ ರಾತ್ರಿ ಕಳ್ಳರು ನುಗ್ಗಿ ಕಳವು ನಡೆಸಿದ್ದಾರೆ. ಇಲ್ಲಿನ ಅಶ್ರಫ್ ಎಂಬವರ ಭಾರತ್ ಜನರಲ್ ಸ್ಟೋರ್, ಜಾಬಿರ್‌ರ ಮೊಬೈಲ್ ಅಂಗಡಿ, ಶಫೀಕ್‌ರ ತರಕಾರಿ ಅಂಗಡಿಗಳಿಗೆ ಕಳ್ಳರು ನುಗ್ಗಿದ್ದಾರೆ. ಭಾರತ್ ಜನರಲ್ ಸ್ಟೋರ್‌ನಿಂದ ೩೫ ಸಾವಿರ ರೂಪಾಯಿ ನಗದು ಹಾಗೂ ಸಿಗರೇಟ್ ಮೊದಲಾದ ವುಗಳನ್ನು ಕಳವುಗೈಯ್ಯಲಾಗಿದೆ. ಮತ್ತೆರಡು ಅಂಗಡಿಗಳಿಂದ ಕಳವು ಯತ್ನ ಮಾತ್ರವೇ ನಡೆದಿದೆಯೆಂದು ಹೇಳಲಾಗುತ್ತಿದೆ. ವ್ಯಾಪಾರಿಗಳು ಇಂದು ಬೆಳಿಗ್ಗೆ ತಲುಪಿದಾಗಲೇ ಅಂಗಡಿಗಳ ಶಟರ್ ಮುರಿದ ಸ್ಥಿತಿಯಲ್ಲಿ ಕಂಡುಬಂದಿದೆ.  ಈ …

ಕಾರು, ರಿಕ್ಷಾದಲ್ಲಿ ಅಕ್ರಮ ಮದ್ಯ ಸಾಗಾಟ ಪ್ರಕರಣ: ಪರಾರಿಯಾಗಿದ್ದ ಆರೋಪಿ ಸೆರೆ

ಕಾಸರಗೋಡು: ಕಾರು ಮತ್ತು ಆಟೋ ರಿಕ್ಷಾಗಳಲ್ಲಾಗಿ ಇತ್ತೀಚೆಗೆ ಕರಂದಕ್ಕಾಡಿನಿಂದ ೧೦೮ ಲೀಟರ್ ಕರ್ನಾಟಕ ಮದ್ಯ ಹಾಗೂ ೩೪೫ ಲೀಟರ್ ಗೋವಾ ನಿರ್ಮಿತ ಮದ್ಯ ವಶಪಡಿಸಿಕೊಂಡ  ವೇಳೆ ತಪ್ಪಿಸಿಕೊಂಡಿದ್ದ ಆರೋಪಿಯನ್ನು ತಲಪ್ಪಾಡಿ ದೇವಿಪುರಂ ರಸ್ತೆ ತಚ್ಚಾಣಿ ಎಂಬಲ್ಲಿಂದ ಕಾಸರಗೋಡು ಅಸಿಸ್ಟೆಂಟ್ ಎಕ್ಸೈಸ್ ಕಮಿಶನರ್ ಜನಾರ್ದನನ್ ಪಿ.ಪಿ ನೇತೃತ್ವದ ಅಬಕಾರಿ ತಂಡ ನಿನ್ನೆ ಬಂಧಿಸಿದೆ. ಮಂಜೇಶ್ವರ ಸಮೀಪದ ಕುಂಜತ್ತೂರು ನಿವಾಸಿ ಅಣ್ಣು ಅಲಿಯಾಸ್ ಅರವಿಂದಾಕ್ಷ ಬಂಧಿತ ಆರೋಪಿ. ಬಂಧಿತನನ್ನು ನಂತರ ಕಾಸರಗೋಡು  ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಿ ನಂತರ …

ಯುಡಿಎಫ್ ವಿರುದ್ಧ ಬಂಡುಕೋರರಾಗಿ ಸ್ಪರ್ಧೆ :15 ಅಭ್ಯರ್ಥಿಗಳನ್ನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ವಜಾ; ಸಹಾಯಕರಾದ ಐವರು ನೇತಾರರೂ ಹೊರಕ್ಕೆ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯುವ ಚುನಾವಣೆಯಲ್ಲಿ ಯುಡಿಎಫ್‌ನ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡುಕೋರರಾಗಿ ಸ್ಪರ್ಧಿಸುವ 15 ಅಭ್ಯರ್ಥಿಗಳನ್ನು ಹಾಗೂ ಅವರ ಸಹಾಯಕವಾದ ಐವರು ನೇತಾರರನ್ನು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದ ವಜಾಗೈದಿರುವುದಾಗಿ ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ತಿಳಿಸಿದ್ದಾರೆ. ಈಸ್ಟ್ ಎಳೇರಿ ಪಂಚಾಯತ್‌ನ 1ನೇ ವಾರ್ಡ್‌ನ ಜೈಸನ್ ಥೋಮಸ್, 3ನೇ ವಾರ್ಡ್‌ನ ಜೆಸ್ಸಿ ಟೋಂ, 7ನೇ ವಾರ್ಡ್‌ನ ಜೋನ್ ಪೇಂಡಾನಂ, 9ನೇ ವಾರ್ಡ್‌ನ ಮ್ಯಾಥ್ಯೂ ಸೆಬಾಸ್ಟಿಯನ್,೧೪ನೇ ವಾರ್ಡ್‌ನ ತ್ರೇಸಿಯಮ್ಮ ಟೋಮಿ, ಕಳ್ಳಾರು ಪಂಚಾಯತ್ 10ನೇ ವಾರ್ಡ್‌ನ ಪಿ.ಎಂ. ಬೇಬಿ, …

ವ್ಯಕ್ತಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಇಲ್ಲಿಗೆ ಸಮೀಪದ ಕೋಟೆಕ್ಕಾರ್ ಎಸ್‌ಸಿ ಕಾಲನಿಯ ಜನಾರ್ದನ (65) ಎಂಬವರು ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಿನ್ನೆ ರಾತ್ರಿ ಮನೆಯಿಂದ ಜನಾರ್ದನ ನಾಪತ್ತೆಯಾಗಿದ್ದರು. ಮನೆಯವರು ಹುಡುಕಾಡಿದಾಗ ಮನೆ ಪಕ್ಕದ ಮರದ ರೆಂಬೆಯಲ್ಲಿ  ನೇಣು ಬಿಗಿದ ಸ್ಥಿತಿಯಲ್ಲಿ ಜನಾರ್ದನ  ಪತ್ತೆಯಾಗಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.  ಕುಂಬಳೆ ಪೊಲೀಸರು ಈ ಬಗ್ಗೆ ಪ್ರಕರ ಣ ದಾಖಲಿಸಿ ತನಿಖೆ ನಡೆಸಿದರು. ಮೃತರು ಪತ್ನಿ ಕಮಲಾಕ್ಷಿ, ಮಕ್ಕಳಾದ ಉಷಾ ಕಿರಣ್, ತುಳಸಿ, ಸ್ವಾತಿ, ಶರತ್‌ಕಿರಣ್, …

ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಇನ್ನೊಂದು ಲೈಂಗಿಕ ಕಿರುಕುಳ ದೂರು 

ತಿರುವನಂತಪುರ:  ತಿರುವನಂತ ಪುರದ ಯುವತಿಯೋರ್ವೆಗೆ ಲೈಂಗಿಕ ಕಿರುಕುಳ ನೀಡಿ ಬಲವಂತವಾಗಿ ಆಕೆಯ ಗರ್ಭಪಾತ ನಡೆಸಿದ ಆರೋಪದಂತೆ ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ತಿರುವನಂತಪುರ  ನೇಮಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂ ಡಿರುವ ಬೆನ್ನಲ್ಲೇ ಅವರು ನನಗೂ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಇನ್ನೋರ್ವೆ ಯುವತಿ ದೂರು ನೀಡಿದ್ದಾಳೆ. ಈಗ ದೂರು ನೀಡಿರುವ ಯುವತಿ ಬೆಂಗಳೂರು ನಿವಾಸಿಯಾ ಗಿದ್ದು, ಕಿರುಕುಳ ಕುರಿತಾದ ದೂರನ್ನು ಕಾಂಗ್ರೆಸ್‌ನ ಕೇಂದ್ರ ನಾಯಕತ್ವ ಹಾಗೂ  ಕಾಂಗ್ರೆಸ್‌ನ ರಾಜ್ಯ ಅಧ್ಯಕ್ಷ ಸಣ್ಣಿ ಜೋಸೆಫ್‌ರಿಗೆ ಇ …

ವಿವಿಧ ಕಡೆಗಳಲ್ಲಿ ವಿವಿಧ ಹೆಸರುಗಳಲ್ಲಿ ವಾಸಿಸುತ್ತಿದ್ದ 25 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ತಲಪಾಡಿ: ತಲಶ್ಶೇರಿಯ ದೌರ್ಜನ್ಯ ಪ್ರಕರಣದ ಆರೋಪಿ 25 ವರ್ಷದ ಬಳಿಕ ಮಂಗಳೂರಿನಲ್ಲಿ ಸೆರೆಯಾಗಿದ್ದಾನೆ. ತಲಶ್ಶೇರಿ ವಸತಿಗೃಹದಲ್ಲಿ ನಡೆದ ದೌರ್ಜನ್ಯ ಪ್ರಕರಣದ ಮೂರನೇ ಆರೋಪಿ ಮಂಗಳೂರು ನಿವಾಸಿ ನಾಸರ್ (52)ನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಆರೋಪಿಯಾದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿ ಕೊಂಡಿದ್ದನು. ಕೇರಳ ಹಾಗೂ ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಹಲವು ಹೆಸರುಗಳಲ್ಲಿ ವಾಸಿಸಿದ್ದನು. ಕೇಸಿಗೆ ಹಾಜರಾಗದ ಹಿನ್ನೆಲೆಯಲ್ಲಿ ತಲಶ್ಶೇರಿ ಹೆಚ್ಚುವರಿ ಶೆಶನ್ಸ್ ನ್ಯಾಯಾಲಯ ನಾಸರ್ ವಿರುದ್ಧ  ವಾರಂಟ್ ಹೊರಡಿಸಿತ್ತು. ೨೦೦೦ ಸೆ. ೧೮ರಂದು ಕೇಸಿಗೆ ಆಸ್ಪದವಾದ ಘಟನೆ ನಡೆದಿತ್ತು. …

ಮದ್ರಸ ವಿದ್ಯಾರ್ಥಿಗೆ ಕಾರಿನಲ್ಲಿ ಲಿಫ್ಟ್ ನೀಡಿ ಚುಂಬಿಸಿದ 60ರ ವೃದ್ದನ ವಿರುದ್ಧ ಪೋಕ್ಸೋ ಕೇಸು

ಕಾಸರಗೋಡು: ಮದ್ರಸ ವಿದ್ಯಾರ್ಥಿಗೆ ಕಾರಿನಲ್ಲಿ ಲಿಫ್ಟ್ ನೀಡಿದ 60 ವರ್ಷ ಪ್ರಾಯದ ವೃದ್ದ ಪ್ರಯಾಣ ಮಧ್ಯೆ ದೌರ್ಜನ್ಯ ಗೈಯ್ಯಲು ಯತ್ನಿಸಿರುವುದಾಗಿ ದೂರಲಾಗಿದೆ. 13ರ ಹರೆಯದ ಬಾಲಕನ ದೂರಿನಂತೆ ಪರಪ್ಪ ನಿವಾಸಿ ರಜಾಕಾ (60) ಎಂಬಾತನ ವಿರುದ್ಧ ವೆಳ್ಳರಿಕುಂಡ್ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದಾರೆ. ನಿನ್ನೆ ಕೇಸಿಗೆ ಆಸ್ಪದವಾದ ಘಟನೆ ನಡೆದಿದೆ. ಮದ್ರಸ ತರಗತಿ ಮುಗಿಸಿ ಮನೆಗೆ ವಿದ್ಯಾರ್ಥಿ ನಡೆದು ಹೋಗುತ್ತಿದ್ದ. ಈ ಮಧ್ಯೆ ಕಾರಿನೊಂದಿಗೆ ತಲುಪಿದ ರಜಾಕ್ ಬಾಲಕನಿಗೆ ಲಿಫ್ಟ್ ನೀಡಿದ್ದಾನೆ. ಪ್ರಯಾಣ ಮಧ್ಯೆ ಬಾಲಕನನ್ನು …

ಬಸ್‌ನಲ್ಲಿ ಸಾಗಿಸುತ್ತಿದ್ದ 67.5 ಲಕ್ಷ ರೂ. ಕಾಳಧನ ವಶ: ಓರ್ವ ಸೆರೆ

ಮಂಜೇಶ್ವರ: ಬಸ್‌ನಲ್ಲಿ ಸಾಗಿಸುತ್ತಿದ್ದ ೬೭.೫ ಲಕ್ಷ ರೂಪಾಯಿ ಕಾಳಧನವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿ ಓರ್ವನನ್ನು ಬಂಧಿಸಿದ್ದಾರೆ. ವಾಮಂಜೂರು ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಅಧಿಕಾರಿಗಳು ನಿನ್ನೆ ನಡೆಸಿದ ವಾಹನ ತಪಾಸಣೆ ವೇಳೆ ತಲಪಾಡಿ ಭಾಗದಿಂದ ಬರುತ್ತಿದ್ದ  ಬಸ್‌ನಲ್ಲಿ ಹಣ ಸಾಗಾಟ ಪತ್ತೆಯಾಗಿದೆ. ಈ ಸಂಬಂಧ ತಳಿಪರಂಬ ಚೇಲೇರಿಮುಕ್ ನಿವಾಸಿ ಸಮೀರ್ (41) ಎಂಬಾತನನ್ನು ಬಂಧಿಸಲಾಗಿದೆ. ಸಿ.ಐ. ಶಿಜಿಲ್ ಕುಮಾರ್, ಅಬಕಾರಿ ಇನ್ಸ್‌ಪೆಕ್ಟರ್ ಸಂತೋಷ್ ಕುಮಾರ್ ಎಂಬಿವರ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಕಾಳಧನ ಪತ್ತೆಯಾಗಿದೆ. ಇದೇ ವೇಳೆ ಪ್ರಕರಣದಿಂದ ಪಾರು …

ಶಾಲಾ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಮದ್ದುಗುಂಡು ಪತ್ತೆ

ಆಲಪ್ಪುಳ: ೮ನೇ ತರಗತಿ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಮದ್ದುಗುಂಡು ಪತ್ತೆಯಾದ ಘಟನೆ ನಡೆದಿದೆ. ಆಲಪ್ಪುಳ ಸಮೀಪ ಕಾರ್ತಿಕಪ್ಪಳ್ಳಿ ಎಂಬಲ್ಲಿನ ಖಾಸಗಿ ಶಾಲೆಯ ೮ನೇ ತರಗತಿ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಮದ್ದುಗುಂಡುಗಳು ಪತ್ತೆಯಾಗಿದೆ. ವಿದ್ಯಾರ್ಥಿಗಳು ಮಾದಕವಸ್ತು ಉಪಯೋಗಿಸುತ್ತಿ ದ್ದಾರೆಯೇ ಎಂದು ತಿಳಿಯಲು ಅಧ್ಯಾಪಕರು ಬ್ಯಾಗ್ ಪರಿಶೀಲಿಸುತ್ತಿದ್ದ ವೇಳೆ ಮದ್ದುಗುಂಡು  ಪತ್ತೆಯಾಗಿದೆ. ಈ ಬಗ್ಗೆ ಶಾಲಾ ಅಧಿಕಾರಿಗಳು ನೀಡಿದ ಮಾಹಿತಿ ಯಂತೆ ಪೊಲೀ ಸರು ತಲುಪಿ ಮದ್ದುಗುಂಡುಗಳನ್ನು ವಶಪಡಿಸಿ ತನಿಖೆ ಆರಂಭಿಸಿದ್ದಾರೆ. ಇದೇ ವೇಳೆ ಟ್ಯೂಶನ್‌ಗೆ ಹೋ ಗುತ್ತಿದ್ದಾಗ ಹಿತ್ತಿಲೊಂದರಿಂದ ಈ ಮದ್ದು …

ಅನಧಿಕೃತ ಹೊಯ್ಗೆ ಸಂಗ್ರಹ : ಐದು ದೋಣಿ ವಶಪಡಿಸಿ ನಾಶ

ಕುಂಬಳೆ: ಹೊಳೆ, ಸಮುದ್ರದಿಂದ ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸು ವುದರ ವಿರುದ್ಧ ಪೊಲೀಸ್ ಕಾರ್ಯಾಚರಣೆ ತೀವ್ರಗೊಂಡಿದ್ದರೂ ಅವರ ಕಣ್ತಪ್ಪಿಸಿ ಹೊಯ್ಗೆ ದಂಧೆ ಕೋರರು ತಮ್ಮ ಚಟುವಟಿಕೆ  ತೀವ್ರಗೊಳಿಸಿದ್ದಾರೆ. ಇದರಂತೆ ನಿನ್ನೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಹೊಯ್ಗೆ ಸಂಗ್ರಹಿಸಲು ಬಳಸುತ್ತಿದ್ದ ಐದು ದೋಣಿಗಳನ್ನು ವಶಪಡಿಸಿ ನಾಶಗೈಯ್ಯಲಾಗಿದೆ. ಶಿರಿಯ ಹೊಳೆಯ ಉಳುವಾರಿನಿಂದ ನಾಲ್ಕು ದೋಣಿಗಳು, ಹೇರೂರಿನಿಂದ ಒಂದು ದೋಣಿಯನ್ನು  ವಶಪಡಿಸಲಾಗಿದೆ. ಇವುಗಳನ್ನು ಬಳಿಕ ಜೆಸಿಬಿ ಬಳಸಿ ನಾಶಗೊಳಿಸಲಾಯಿತು. ಹೊಳೆಯಿಂ ದ ಹೊಯ್ಗೆ ಸಂಗ್ರಹ ದಂಧೆ ನಡೆಯುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಕುಂಬಳೆ …