ಪಂ.ಚುನಾವಣೆ: ಕುಂಬಳೆಯಲ್ಲಿ ಇಂದು ಯುಡಿಎಫ್ ಕಾರ್ಯಕರ್ತರ ಮಹಾಸಂಗಮ

ಕುಂಬಳೆ: ತ್ರಿಸ್ತರ ಪಂಚಾಯತ್ ಚುನಾವಣೆಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿಯಿರುವಂತೆ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್ ಪ್ರಚಾರ ತೀವ್ರಗೊಳಿ ಸಿದೆ. ಇದರಂಗವಾಗಿ ಇಂದು ಮಧ್ಯಾಹ್ನ 2.30ಕ್ಕೆ ಕುಂಬಳೆಯಲ್ಲಿ ಯುಡಿಎಫ್ ಕಾರ್ಯಕರ್ತರ ಮಹಾ ಸಂಗಮ ನಡೆಯಲಿದೆ. ಇದರಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ತ್ರಿಸ್ತರ ಪಂಚಾಯ ತ್‌ಗಳ  ಯುಡಿಎಫ್‌ನ ೨೫೦ರಷ್ಟು ಅಭ್ಯರ್ಥಿಗಳು  ಭಾಗವಹಿಸುವರು.  ಎಐಸಿಸಿ ಪ್ರಧಾನ ಕಾರ್ಯದರ್ಶಿ, ಸಂಸದ ಕೆ.ಸಿ. ವೇಣುಗೋಪಾಲ್, ಕರ್ನಾಟಕ ಅಲ್ಪಸಂಖ್ಯಾತ ಕ್ಷೇಮ ಸಚಿವ ಸಮೀರ್ ಅಹಮ್ಮದ್‌ಖಾನ್, ಮುಸ್ಲಿಂ ಲೀಗ್ ರಾಜ್ಯ ಕಾರ್ಯದರ್ಶಿ …

ಮೊಗ್ರಾಲ್‌ನಲ್ಲಿ ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ಆರಂಭ

ಮೊಗ್ರಾಲ್: ಮೊಗ್ರಾಲ್ ಸರಕಾರಿ ವಿಎಚ್‌ಎಸ್‌ಎಸ್‌ನಲ್ಲಿ   ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ವೇದಿಕೆ ಸ್ಪರ್ಧೆಗಳು ನಿನ್ನೆ ಆರಂಭಗೊಂಡಿತು.  ನಿನ್ನೆ ಬೆಳಿಗ್ಗೆ ನಡೆದ ಸಮಾರಂಭದಲ್ಲಿ ಶಿಕ್ಷಣ ಉಪನಿರ್ದೇಶಕ ಟಿ.ವಿ. ಮಧುಸೂದನನ್ ಧ್ವಜಾರೋಹಣ ನಡೆಸುವ ಮೂಲಕ ವೇದಿಕೇತರ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಂಘಟಕ ಸಮಿತಿ ಪದಾಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು. ವೇದಿಕೇತರ ಸ್ಪರ್ಧೆ ಇಂದು ಸಂಜೆ ಮುಕ್ತಾಯಗೊಳ್ಳಲಿದೆ. ಏಳು ಶಿಕ್ಷಣ ಉಪಜಿಲ್ಲೆಗಳಿಂದಾಗಿ ೫೦೦ರಷ್ಟು ವಿದ್ಯಾರ್ಥಿಗಳು ಈ ಎರಡು ದಿನಗಳ ಸ್ಪರ್ಧಾ ಕಾರ್ಯಕ್ರಮಗಳಲ್ಲಾಗಿ ಭಾಗವಹಿಸುತ್ತಿದ್ದಾರೆ. ದ್ವಿತೀಯ ಹಂತದಲ್ಲಿ …

ಎಡ-ಕಾಂಗ್ರೆಸ್‌ನಿಂದ ಕೇರಳದಲ್ಲಿ ಅವಕಾಶ ರಾಜಕಾರಣ- ಕಿಶೋರ್ ಕುಮಾರ್

ಮೀಯಪದವು: ಕೇರಳದಲ್ಲಿ ಎಡರಂಗ ಮತ್ತು ಕಾಂಗ್ರೆಸ್, ಮುಸ್ಲಿ ಲೀಗ್ ಪಕ್ಷಗಳಿಗೆ ತತ್ವ ಸಿದ್ಧಾಂತಗಳಿಲ್ಲ. ಅವರು ಅಧಿಕಾರಕ್ಕಾಗಿ ಅವಕಾಶ ರಾಜಕಾರಣ ನಡೆಸುತ್ತಿರುವುದಾಗಿ ಕರ್ನಾಟಕ ವಿಧಾನ ಪರಿಷತ್ ಸದಸ್ಯ, ಬಿಜೆಪಿ ಮುಖಂಡ ಕಿಶೋರ್ ಕುಮಾರ್ ಆರೋಪಿಸಿದರು. ಮೀಂಜ ಪಂಚಾಯತ್ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಸ್ಥಳೀಯಾಡಳಿತ ಚುನಾವಣೆಯಲ್ಲಿ ಗ್ರಾಮಗಳಲ್ಲಿ ಬಿಜೆಪಿಯನ್ನು ಆಡಳಿತಕ್ಕೇರಿಸಬೇಕೆಂದು ಅವರು ಕರೆ ನೀಡಿದರು. ಶಬರಿಮಲೆಯಲ್ಲಿ ಲೂಟಿ ಮಾಡಿ ಜೈಲು ಸೇರಿರುವ ಎಡರಂಗಕ್ಕೆ ಆಸ್ತಿಕ ಬಂಧುಗಳು ಮತ ನೀಡುವುದಿಲ್ಲ ಎಂಬ ನಿರ್ಧಾರಕ್ಕೆ ಬರಬೇಕು ಎಂದು ಅವರು …

ಅಸೌಖ್ಯ: ಪೈಂಟಿಂಗ್ ಕಾರ್ಮಿಕ ನಿಧನ

ಮಂಗಲ್ಪಾಡಿ: ಪ್ರತಾಪನಗರ ನಿವಾಸಿ, ಪೈಂಟಿAಗ್ ಕಾರ್ಮಿಕ ರಾಮನ್.ಕೆ (68) ನಿಧನರಾದರು. ಇವರು ಅಸೌಖ್ಯದಿಂದ ಬಳಲುತ್ತಿ ದ್ದರು. ನಿನ್ನೆ ಮಧ್ಯಾಹ್ನ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಕಲ್ಯಾಣಿ.ಕೆ, ಮಕ್ಕಳಾದ ಸವಿತಾ, ಸುನೀತಾ, ಮಂಜುನಾಥ, ಸುಸ್ಮಿತಾ, ಅಳಿಯ ಪ್ರಶಾಂತ್, ಸಹೋದರರಾದ ಕೃಷ್ಣನ್, ರಾಜು, ಜನಾರ್ದನ, ಅನಿಲ್, ಶೋಭನ್‌ಬಾಬು, ಸುನಿಲ್ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಸಹೋದರಿ ದೇವಕಿ, ಸಹೋದರರಾದ ರವಿ, ಚಂದ್ರ ಈ ಹಿಂದೆ ನಿಧನರಾಗಿದ್ದಾರೆ.

ಲೀಗ್ ನೇತಾರ ಪಿ.ಕೆ. ಕುಂಞಾಲಿಕುಟ್ಟಿ ನಾಳೆ ಕಾಸರಗೋಡಿನಲ್ಲಿ

ಕಾಸರಗೋಡು:  ಮುಸ್ಲಿಂ ಲೀಗ್ ಕೇಂದ್ರ ಪ್ರಧಾನ ಕಾರ್ಯ ದರ್ಶಿ ಪಿ.ಕೆ. ಕುಂಞಾಲಿಕುಟ್ಟಿ ನಾಳೆ ಕಾಸರಗೋಡಿಗೆ ಆಗಮಿಸಿ, ಯುಡಿಎಫ್ ಪರ ಜಿಲ್ಲೆಯ ಹಲವೆಡೆಗಳಲ್ಲಿ ನಡೆಯಲಿರುವ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸುವರು. ನಾಳೆ ಬೆಳಿಗ್ಗೆ 10.30ಕ್ಕೆ ಕಾಸರಗೋಡು ಮುನಿಸಿಪಲ್ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆಯಲಿರುವ ವಕ್ಫ್ ಸೆಮಿನಾರ್, 12 ಗಂಟೆಗೆ ತೆಕ್ಕಿಲ್‌ನಲ್ಲಿ ನಡೆಯುವ ಕುಟುಂಬ ಸಂಗಮ, ಪಳ್ಳಿಕ್ಕಾಲ್, ಹೊಸದುರ್ಗ ಮತ್ತು ಚೆರ್ವತ್ತೂರಿನಲ್ಲಿ ನಡೆಯುವ ಹಲವು ಚುನಾವಣಾ ಪ್ರಚಾರಗಳಲ್ಲ್ಲೂ ಅವರು ಭಾಗವಹಿಸುವರು. 

ಬಿಜೆಪಿ ನೇತಾರ ಸಂಕಯ್ಯ ಭಂಡಾರಿ ಸಂಸ್ಮರಣೆ

ಉಪ್ಪಳ: ಬಿಜೆಪಿಯ ಹಿರಿಯ ನೇತಾರ ಸಂಕಯ್ಯ ಭಂಡಾರಿ ಅವರ 33ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಪಕ್ಷದ ಕಚೇರಿ ಕುಬಣೂರುನಲ್ಲಿ ಜರ ಗಿತು. ಪಕ್ಷದ ನೇತಾರರು, ಕಾರ್ಯ ಕರ್ತರು, ತ್ರಿಸ್ತರ ಪಂ. ಚುನಾವಣೆಯ ಅಭ್ಯರ್ಥಿಗಳು ಉಪಸ್ಥಿತರಿದ್ದರು. ಸಂಕಯ್ಯ ಭಂಡಾರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಇನ್ನು ನೆನಪಾಗಿ ಉಳಿಯಲಿರುವ ಕಾರಡ್ಕ ಶಾಲೆಯ ರಂಗಸ್ಥಳ

ಕಾಸರಗೋಡು: ಐದು ದಶಕಗಳ ಕಾಲ ಕಾರಡ್ಕದ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದ ವೇದಿಕೆಗೆ ಸ್ಥಳೀಯರ ನೇತೃತ್ವದಲ್ಲಿ ಕಣ್ಣೀರ ಕೋಡಿ ಮೂಲಕ ಬೀಳ್ಕೊಡುಗೆ ನೀಡಲಾಯಿತು. ಕೊನೆಯದಾಗಿ ಈ ವೇದಿಕೆಯಲ್ಲಿ ನಾಟಕ, ಯಕ್ಷಗಾನ, ಮಂಗಲಂಕಳಿ, ಜನಪದ ಹಾಡು ಮೊದಲಾದ ಕಾರ್ಯಕ್ರಮಗಳು ನಿನ್ನೆ ರಾತ್ರಿ ಜರಗಿದ್ದು, ಸ್ಥಳೀಯರಾದ ನೂರಾರು ಮಂದಿ ಭಾಗವಹಿಸಿದರು. ಕಾರಡ್ಕ ಜಿವಿಎಚ್‌ಎಸ್‌ಎಸ್‌ನಲ್ಲಿ ಸ್ಥಳೀ ಯರು ಹಾಗೂ ಸಾಂಸ್ಕೃತಿಕ ಕಾರ್ಯ ಕರ್ತರ ನೇತೃತ್ವದಲ್ಲಿ ೫೦ ವರ್ಷದ ಹಿಂದೆ ಈ ವೇದಿಕೆಯನ್ನು ನಿರ್ಮಿಸ ಲಾಗಿತ್ತು. ಇದರ ಬದಿಯಲ್ಲೇ ಈಗ ಹೊಸ ಶಾಲಾ …

ಮಾಜಿ ಲೋಕಸಭಾ ಸದಸ್ಯ ರಾಮ ರೈ ಸಂಸ್ಮರಣೆ

ಪೈವಳಿಕೆ: ಲೋಕಸಭಾ ಸದಸ್ಯರಾಗಿದ್ದ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಐ. ರಾಮ ರೈ ಅವರ ಸಂಸ್ಮರಣೆ ಅಂಗವಾಗಿ ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಪುಷ್ಪಾರ್ಚನೆ ನಡೆಸಲಾಯಿತು. ಪೈವಳಿಕೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ವಸಂತ ಕುಮಾರ್ ಸಂಸ್ಮರಣೆ ಭಾಷಣ ಮಾಡಿದರು. ಬ್ಲೋಕ್ ಕಾಂಗ್ರೆಸ್ ಉಪಾಧ್ಯಕ್ಷ ಮೋಹನ ರೈ ಕಯ್ಯಾರು, ನಾರಾಯಣ ಏದಾರು, ಕಾರ್ಯದರ್ಶಿಗಳಾದ ರಾಘವೇಂದ್ರ ಭಟ್, ಸಚ್ಚಿದಾನಂದ ರೈ, ಮಂಡಲ ಪದಾಧಿಕಾರಿಗಳಾದ ಶಾಜಿ ಎನ್.ಸಿ, ಶಿವರಾಮ ಶೆಟ್ಟಿ, ಗಂಗಾಧರ ನಾಯ್ಕ, ಎಡ್ವರ್ಡ್, ಜೋಯ್ ಕಯ್ಯಾರು, ಚನಿಯಪ್ಪ ಉಪಸ್ಥಿತರಿದ್ದರು.