ಪೈವಳಿಕೆ ಪಂಚಾಯತ್‌ನಲ್ಲಿ ತ್ರಿಕೋನ ಸ್ಪರ್ಧೆ: ಆಡಳಿತ ಸ್ವಾಧೀನಕ್ಕೆ ಬಿಜೆಪಿ, ಎಡ-ಬಲ ಒಕ್ಕೂಟಗಳಿಂದ ಪೈಪೋಟಿ

ಪೈವಳಿಕೆ: ಕಳೆದ ಬಾರಿ ಟಾಸ್ ಮೂಲಕ ಆಡಳಿತ ಲಭಿಸಿ ಎಡರಂಗದ ಆಡಳಿತವಿರುವ ಪೈವಳಿಕೆ ಪಂಚಾಯತ್‌ನಲ್ಲಿ ಈ ಬಾರಿ ತೀವ್ರ ಹೋರಾಟ ಕಂಡು ಬರುತ್ತಿದೆ. ಕಳೆದ ಬಾರಿ 19 ವಾರ್ಡ್‌ಗಳಿದ್ದ ಪಂಚಾಯತ್‌ನಲ್ಲಿ ಈ ಬಾರಿ 21 ವಾರ್ಡ್‌ಗಳಿದ್ದು, ಆಡಳಿತ ಯಾವ ಪಕ್ಷಕ್ಕೆ ಲಭಿಸುತ್ತದೆ ಎಂಬ ನಿರೀಕ್ಷೆ ಜನರಲ್ಲಿದೆ. ತ್ರಿಕೋನ ಸ್ಪರ್ಧೆ ನಡೆಯುತ್ತಿರುವ ಇಲ್ಲಿ ಬಿಜೆಪಿ ತಾವರೆ ಚಿಹ್ನೆಯಲ್ಲಿಯೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಆದರೆ ಎಡರಂಗ ಹಾಗೂ ಯುಡಿಎಫ್ ಪಕ್ಷಗಳಲ್ಲಿ ಕೆಲವು ಕಡೆ ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಪ್ರಸ್ತುತ ಪಂಚಾಯತ್‌ನಲ್ಲಿ 8 …

ಶಬರಿಮಲೆಯಲ್ಲಿ ಭಕ್ತರ ನಿಬಿಡತೆಗೆ ಹೊಂದಿಕೊಂಡು ಸ್ಪೋಟ್ ಬುಕ್ಕಿಂಗ್

ಪಂದಳಂ: ಶಬರಿಮಲೆಯಲ್ಲಿ ಇನ್ನು ತೀರ್ಥಾಟಕರ ನಿಬಿಡತೆಗೆ ಹೊಂದಿಕೊಂಡು ಸ್ಪೋಟ್ ಬುಕ್ಕಿಂಗ್ ಸೌಕ ರ್ಯಏರ್ಪಡಿಸಲು ಮುಜರಾಯಿ ಮಂಡಳಿ ತೀರ್ಮಾನಿಸಿದೆ. ಜ್ಯಾರಿಯಲ್ಲಿ ಪ್ರತಿದಿನ ತಲಾ 5೦೦೦ದಷ್ಟು ತೀರ್ಥಾಟಕರಿಗೆ ಸ್ಪೋಟ್ ಬುಕ್ಕಿಂಗ್ ಮೂಲಕ ಪ್ರವೇಶ ನೀಡಲಾಗುತ್ತಿದೆ. ಇದರ ಹೊರತಾಗಿ ವರ್ಚುವಲ್ ಕ್ಯೂ ಮೂಲಕವೂ ಪ್ರವೇಶ ನೀಡಲಾ ಗುತ್ತಿದೆ. ಶಬರಿಮಲೆ  ದೇಗುಲದ 18 ಮೆಟ್ಟಿಲು ಮೂಲಕ ಪ್ರತಿ ನಿಮಿಷಕ್ಕೆ ತಲಾ 85 ಮಂದಿಯನ್ನು ಏರಿಸಿ ಸನ್ನಿಧಾನಕ್ಕೆ ತಲುಪಿಸುವ ಕ್ರಮವನ್ನು ಈಗ ಆರಂಭಿಸಲಾಗಿದೆ. ಇದಕ್ಕೆ ಹೊಂದಿ ಕೊಂಡು ಅಗತ್ಯದಷ್ಟು ಪೊಲೀಸರನ್ನು 18 ಮೆಟ್ಟಿಲಲ್ಲಿ ಕರ್ತವ್ಯಕ್ಕಾಗಿ …

ಮಲಿನ ಜಲ ಚರಂಡಿಗೆ ಹರಿಯಬಿಟ್ಟ ಹೋಟೆಲ್ ಮಾಲಕನಿಗೆ ದಂಡ

ಕಾಸರಗೋಡು: ಕೇರಳ ಸ್ಟೇಟ್ ಹೌಸಿಂಗ್ ಬೋರ್ಡ್ ವಿದ್ಯಾನಗರದಲ್ಲಿ ನಿರ್ಮಿಸಿದ ಫ್ಲ್ಯಾಟ್ ಸಮುಚ್ಚಯದಿಂದ ಸಾರ್ವಜನಿಕ ಚರಂಡಿಗೆ ಹೋಟೆಲ್ ತ್ಯಾಜ್ಯ ಸಹಿತ ಮಲಿನ ಜಲವನ್ನು ಹರಿಯಬಿಟ್ಟಿರುವುದನ್ನು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಜಿಲ್ಲಾ ಎನ್‌ಫೋರ್ಸ್ ಮೆಂಟ್ ಸ್ಕ್ವಾಡ್ 2೦,೦೦೦ ರೂ. ದಂಡ ಹೇರಿದೆ. ಹೌಸಿಂಗ್ ಕಾಲನಿಯಲ್ಲಿ ವಾಸಿಸುವವರು ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಧಾನ ತೋಡಿಗೆ ಸಂಪರ್ಕಿಸುವ ಚರಂಡಿಗೆ ಮಲಿನ ಜಲವನ್ನು ಹರಿಯಬಿಟ್ಟಿರುವುದನ್ನು ಪತ್ತೆಹಚ್ಚಲಾಗಿದೆ. ಹೌಸಿಂಗ್ ಕಾಲನಿಯಲ್ಲಿ 104 ಕುಟುಂಬಗಳು ವಾಸಿಸುತ್ತಿವೆ. ಚರಂಡಿಗೆ ಹೋಟೆಲ್‌ನ ಮಲಿನ ಜಲ ಹರಿಯುವುದನ್ನು ತಡೆಯಬೇಕೆಂದು, ತ್ಯಾಜ್ಯವನ್ನು ಆವರಣದೊಳಗೇ ಸಂಸ್ಕರಿಸಬೇಕೆಂದು …

ಮಂಜೇಶ್ವರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿನಾಯಿಗಳಿಗೆ ರೇಬೀಸ್ ಲಸಿಕೆ

ಮಂಜೇಶ್ವರ: ಪಂಚಾಯತ್ ಜನತಾ ಯೋಜನ ಯೋಜನೆಯಂತೆ ಬೀದಿ ನಾಯಿಗಳಿಗೆ ರೇಬೀಸ್ ಲಸಿಕೆ ಅಭಿಯಾನ ಮಂಜೇಶ್ವರ ಪಶು ವೈದ್ಯಕೀಯ ಆಸ್ಪತ್ರೆಯ ನೇತೃತ್ವದಲ್ಲಿ ಆರಂಭಗೊAಡಿದೆ. ನಿನ್ನೆ ಮಂಜೇಶ್ವರ ಪೊಲೀಸ್ ಠಾಣಾ ಪರಿಸರದಲ್ಲಿ ಹಲವಾರು ನಾಯಿಗಳಿಗೆ ಲಸಿಕೆ ನೀಡಲಾಗಿದೆ. ಮಂಜೇಶ್ವರದ ವಿವಿಧ ಭಾಗಗಳಲ್ಲಿ ಕಾಯÁðಚರಣೆ ಮುಂದುವರಿಯಲಿದೆ.

ಅಂತಾರಾಷ್ಟ್ರೀಯ ಕನ್ನಡ ಸಂಸ್ಕೃತಿ ಉತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

ಪೈವಳಿಕೆ: ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಇದರ ಮಸ್ಕತ್, ಒಮಾನ್ ಘಟಕ ಹಾಗೂ ಕಾಸರಗೋಡು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಮಸ್ಕತ್, ಒಮಾನ್ ಘಟಕಗಳ ಆಶ್ರಯದಲ್ಲಿ 2026ರ ಮೇ.8 ರಂದು ಒಮಾನ್‌ನ ಮಸ್ಕತ್ ಸಿ.ಬಿ.ಎಫ್.ಸಿ. ಹಾಲ್ ಹೌಶೆರ್‌ನಲ್ಲಿ ಅಂತಾರಾಷ್ಟ್ರೀಯ ಕನ್ನಡ ಸಂಸ್ಕೃತಿ ಉತ್ಸವ ಆಯೋಜಿಸಲಾಗಿದೆ. ಇದರ ಕರಪತ್ರವನ್ನು ಇತ್ತೀಚೆಗೆ ಪೈವಳಿಕೆ ಕಾಯರ್ ಕಟ್ಟೆ ಸರಕಾರಿ ಹೈಸ್ಕೂಲಿನಲ್ಲಿ ನಡೆದ ಗಡಿನಾಡ ಕನ್ನಡ ರಾಜ್ಯೋತ್ಸವ ಸಮಾರಂಭದ ಉದ್ಘಾಟನಾ ವೇದಿಕೆಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ …