ಪಂಚಾಯತ್ ಚುನಾವಣೆ: ಬೆಳ್ಳೂರಿನಲ್ಲಿ ತೀವ್ರಗೊಂಡ ಪ್ರಚಾರ ಕಾವು: ಬಹುತೇಕ ವಾರ್ಡ್‌ಗಳಲ್ಲಿ ಬಿಜೆಪಿ-ಸಿಪಿಎಂ ಮಧ್ಯೆ ನೇರ ಸ್ಪರ್ಧೆ

ಮುಳ್ಳೇರಿಯ: ಜಿಲ್ಲೆಯ ಗ್ರಾಮೀಣ ಪ್ರದೇಶವಾದ ಬೆಳ್ಳೂರಿನಲ್ಲಿ ಚುನಾವಣಾ ಪ್ರಚಾರ ಕಾವು ತೀವ್ರ ಗೊಂಡಿದೆ. ಜಿಲ್ಲೆಯಲ್ಲಿ ಬಿಜೆಪಿ ಆಡ ಳಿತ ನಡೆಸುವ ಪಂಚಾಯತ್‌ಗಳಲ್ಲಿ ಬೆಳ್ಳೂರು ಕೂಡಾ ಒಳಗೊಂಡಿದೆ. ಕಳೆದ ಎರಡು ಅವಧಿಯಲ್ಲಿ ಈ ಪಂಚಾಯತ್‌ನಲ್ಲಿ ಬಿಜೆಪಿ ಆಡಳಿತ ನಡೆಸಿದ್ದು, ಈ ಬಾರಿಯ ಚುನಾವಣೆ ಯಲ್ಲೂ ಭಾರೀ ಬಹುಮತದೊಂದಿಗೆ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆಗೈಯ್ಯುವ ನಿರೀಕ್ಷೆಯನ್ನು ಬಿಜೆಪಿ ನೇತಾರರು ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಬಾರಿ ಈ ಪಂಚಾಯತ್‌ನಲ್ಲಿ ಒಟ್ಟು 13 ವಾರ್ಡ್‌ಗಳಿದ್ದವು. ಈ ಪೈಕಿ ಬಿಜೆಪಿ 9 ಸೀಟುಗಳನ್ನು ಗೆದ್ದುಕೊಂಡು …

ಮಂಜೇಶ್ವರದ ಅಭಿವೃದ್ಧಿಗೆ ಶಾಸಕರು ಪ್ರಯತ್ನಿಸುತ್ತಿಲ್ಲ- ವೇದವ್ಯಾಸ್ ಕಾಮತ್

ಮಂಜೇಶ್ವರ: ಮಂಜೇಶ್ವರ ಅಭಿವೃದ್ಧಿ ಹೊಂದದಿರಲು ಕಾರಣ ಯಾರು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಪ್ರಶ್ನಿಸಿದ್ದಾರೆ. ಸ್ವಾತಂತ್ರ್ಯಾ ನಂತರ ಮಂಜೇಶ್ವರದ ಜನತೆ ಎಲ್ಲಾ ಕಾರ್ಯಕ್ಕೂ ಮಂಗಳೂರನ್ನೇ ಅವಲಂಭಿಸುತ್ತಿದ್ದು, ಶಿಕ್ಷಣ, ಉದ್ಯೋಗ, ಆರೋಗ್ಯ, ಕ್ರೀಡೆ, ವ್ಯಾಪಾರ, ವ್ಯವಹಾರ ಎಲ್ಲದಕ್ಕೂ ಮಂಗಳೂರಿಗೆ ತೆರಳಬೇಕಾಗುತ್ತಿದೆ. ಮಂಜೇಶ್ವರದಿಂದ ಜಯ ಗಳಿಸುವ ಶಾಸಕರು ಮಂಜೇಶ್ವರದ ಅಭಿವೃದ್ಧಿಗೆ ಯಾಕೆ ಶ್ರಮಿಸುತ್ತಿಲ್ಲ ಎಂದು ಅವರು ಪ್ರಶ್ನಿಸಿದರು. ಬಿಜೆಪಿ ಮಂಜೇಶ್ವರ ಪಂಚಾಯತ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ವೇದವ್ಯಾಸ್ ಕಾಮತ್ ಮಾತನಾಡುತ್ತಿದ್ದರು. ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ. …

ಮಧೂರು ಪಂ. ಎಡರಂಗ ಚುನಾವಣಾ ಸಭೆ: ಸಿಪಿಎಂ ಸೇರಿದವರಿಗೆ ಸ್ವಾಗತ

ಮಧೂರು: ಎಡರಂಗದ ಮಧೂರು ಪಂಚಾಯತ್ ಚುನಾವಣೆ ಸಭೆಯಲ್ಲಿ ವಿವಿಧ ಪಕ್ಷಗಳಿಗೆ ರಾಜೀನಾಮೆ ನೀಡಿ ಸಿಪಿಎಂಗೆ ಸೇರಿದವರಿಗೆ ಸ್ವಾಗತ ನೀಡಲಾಯಿತು. ಉಳಿಯತ್ತಡ್ಕದಲ್ಲಿ ನಡೆದ ಸಭೆಯನ್ನು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ. ರಾಜಗೋಪಾಲನ್ ಉದ್ಘಾಟಿಸಿದರು. ಕಿಶೋರ್ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ವಿ.ಪಿ.ಪಿ. ಮುಸ್ತಫ, ಟಿ.ಕೆ. ರಾಜನ್, ಬಿಜು ಉಣ್ಣಿತ್ತಾನ್, ಟಿ.ಎಂ.ಎ. ಕರೀಂ, ಹಸೈನಾರ್, ಎಂ. ಸುಮತಿ, ಕೆ. ರವೀಂದ್ರನ್, ಭುಜಂಗ ಶೆಟ್ಟಿ, ಕೆ. ಜಯಚಂದ್ರನ್ ಮಾತನಾಡಿದರು. ಎಂ.ಕೆ. ರವೀಂದ್ರನ್ ಸ್ವಾಗತಿಸಿದರು.

ಗೋಸಾಡ ಕ್ಷೇತ್ರ ಜಾತ್ರೆ: ಭರತನಾಟ್ಯ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ ಬಿಜೆಪಿ ಅಭ್ಯರ್ಥಿ

ಬದಿಯಡ್ಕ: ಗೋಸಾಡ ಶ್ರೀ ಮಹಿಷಮರ್ಧಿನಿ ಕ್ಷೇತ್ರದಲ್ಲಿ ಜಾತ್ರೆ ಮಹೋತ್ಸವದಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರು ನಡೆಸಿದ ಭರತ ನಾಟ್ಯ ಪ್ರದರ್ಶನ ಕಲಾಭಿಮಾ ನಿಗಳ ಮೆಚ್ಚುಗೆಗೆ  ಪಾತ್ರವಾಯಿತು. ಬದಿಯಡ್ಕ ಗ್ರಾಮ ಪಂಚಾ ಯತ್ ಪೆರಡಾಲ ೧೩ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ  ಸ್ಪರ್ಧಿಸುವ  ಕೆ.ಎಂ. ಅಶ್ವಿನಿಯವರು ತುಂಬಿ ತುಳುಕುತ್ತಿದ್ದ ಜನಸಾಗರದ ಮಧ್ಯೆ ಭರತನಾಟ್ಯ ಪ್ರದರ್ಶಿಸಿದ್ದು ಪ್ರೇಕ್ಷಕರು ಚಪ್ಪಾಳೆತಟ್ಟಿ ಅಭಿನಂದಿಸಿ ದರು. ಅಶ್ವಿನಿಯವರು ತನ್ನ ೧೪ನೇ ವಯಸ್ಸಿನಲ್ಲಿ ನೃತ್ಯ ಅಭ್ಯಾಸ ಆರಂಭಿಸಿ ದ್ದರು.  ಕುಂಬಳೆ ನಾಟ್ಯ ವಿದ್ಯಾನಿಲ ಯದ …

ನಗರಸಭೆ 4ನೇ ವಾರ್ಡ್ ಬಿಜೆಪಿ ಕುಟುಂಬ ಸಂಗಮ

ಕಾಸರಗೋಡು: ನಗರಸಭೆಯ 4ನೇ ವಾರ್ಡ್ ಬಿಜೆಪಿ ಕುಟುಂಬ ಸಂಗಮ ವನ್ನು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಉದ್ಘಾಟಿಸಿದರು. ಜನರಲ್ ಆಸ್ಪತ್ರೆ ಹಾಗೂ ನಗರದ ರಸ್ತೆಗಳು ರಾಜ್ಯ ದಲ್ಲಿಯೇ ಅತ್ಯಂತ ಕಳಪೆ ಮಟ್ಟದಲ್ಲಿರು ವುದು ಜಿಲ್ಲೆಯಲ್ಲಾಗಿದ್ದು, ಇದರ ಹೊಣೆಗಾರಿಕೆಯಿಂದ ಪಾರಾಗಲು ದಶಕಗಳಿಂದ ನಗರಸಭೆ ಹಾಗೂ ವಿಧಾನಮಂಡಲವನ್ನು ಪ್ರತಿನಿಧೀಕರಿ ಸುವ ಐಕ್ಯರಂಗಕ್ಕೆ ಸಾಧ್ಯವಿಲ್ಲವೆಂದು ಅಶ್ವಿನಿ ನುಡಿದರು. ನಗರಸಭಾ ವೆಸ್ಟ್ ಏರಿಯಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಅಧ್ಯಕ್ಷತೆ ವಹಿಸಿದರು. ಹಿರಿಯ ಮುಖಂಡರಾದ ಎ.ಟಿ. ನಾಯ್ಕ್, ನಾರಾಯಣನ್, ಮಂಡಲ ಅಧ್ಯಕ್ಷ, ವಾರ್ಡ್‌ನ ಅಭ್ಯರ್ಥಿ ಗುರುಪ್ರಸಾದ್ …

ಮಂಗಲ್ಪಾಡಿ, ಮಂಜೇಶ್ವರ ಪಂ.ನಿಂದ ವಿವಿಧ ಕಡೆ ಬೋಟಲ್ ಬೂತ್ ಸ್ಥಾಪನೆ

ಉಪ್ಪಳ: ತಂಪು ಪಾನೀಯ ಹಾಗೂ ನೀರನ್ನು ಕುಡಿದು ಬಾಟಲಿಯನ್ನು ಅಲ್ಲಲ್ಲಿ ಎಸೆಯು ವುದನ್ನು ತಡೆಗಟ್ಟುವ ಹಿನ್ನೆಲೆ ಯಲ್ಲಿ ಮಂಜೇಶ್ವರ ಹಾಗೂ ಮಂ ಗಲ್ಪಾಡಿ ಪಂಚಾಯತ್ ವತಿ ಯಿಂದ ಬೋಟಲ್ ಬೂತ್ ಸ್ಥಾಪಿಸಲಾಗಿದೆ. ಇನ್ನು ಸಾರ್ವ ಜನಿಕ ಸ್ಥಳದಲ್ಲಿ ಬಾಟಲಿ ಎಸೆ ಯದೆ ಸ್ವಚ್ಚತೆಯನ್ನು ಕಾಪಾಡಲು ಮಂಜೇಶ್ವರ ಪಂಚಾಯತ್‌ನಿAದ 5,22,600 ರೂಪಾಯಿ ವೆಚ್ಚದಲ್ಲಿ 25 ಕಡೆ ಬೋಟಲ್ ಬೂತ್‌ಗಳನ್ನು ಸ್ಥಾಪಿಸಲಾಗಿದೆ. ಹೊಸಂಗಡಿ ಪೇಟೆ, ಶಾಲಾ ಪರಿಸರ, ಬೀಚ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಇದನ್ನು ಇರಿಸಲಾಗಿದೆ. ಮಂಗಲ್ಪಾಡಿ ಪಂಚಾಯತ್‌ನಲ್ಲಿಯೂ ಉಪ್ಪಳ …