ದೈವದ ಹೊಡೆತದಿಂದ ಯುವಕನಿಗೆ ಗಾಯ : ಸಾಮಾಜಿಕ ತಾಣದಲ್ಲಿ ದೃಶ್ಯ ವೈರಲ್

ಕಾಸರಗೋಡು: ಪಳ್ಳಿಕ್ಕೆರೆಯ ಕ್ಷೇತ್ರವೊಂದರಲ್ಲಿ  ಉತ್ಸವ ವೇಳೆ ದೈವದ  ಹೊಡೆತದಿಂದ ಯುವಕನೋರ್ವ ಬೀಳುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ  ವ್ಯಾಪಕವಾಗಿ ಹರಿದಾಡುತ್ತಿದೆ. ನೀಲೇಶ್ವರ ಪಳ್ಳಿಕ್ಕೆರೆ ಪಾಲರೆಕೀಳಿಲ್ ಶ್ರೀ ವಿಷ್ಣುಮೂರ್ತಿ ಕ್ಷೇತ್ರದಲ್ಲಿ ದೈವದರ್ಶನ ವೇಳೆ ಈ ಘಟನೆ ನಡೆದಿದೆಯೆಂದು ಹೇಳಲಾಗುತ್ತಿದೆ. ಮೊನ್ನೆ ರಾತ್ರಿ ಪೂಮರುದನ್ ದೈವದ ವೆಳ್ಳಾಟ ನಡೆಯುತ್ತಿದ್ದಂತೆ  ದೈವ ಹೊಡೆದಿರುವುದಾಗಿಯೂ ಈ ವೇಳೆ ಗಾಯಗೊಂಡು ವ್ಯಕ್ತಿ ನೆಲಕ್ಕೆ ಬೀಳುವ ದೃಶ್ಯ ಬಹಿರಂಗಗೊಂಡಿದೆ.  ನೀಲೇಶ್ವರ ನಿವಾಸಿ ಮನು ಎಂಬವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡಲಾಯಿತು. ಭಯಪಡಿಸುವ ಆಚಾರದ ಅಂಗವಾಗಿ …