10ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ: ಐದು ದಿನಗಳಲ್ಲಿ ನೇಣಿಗೆ ಶರಣಾಗಿದ್ದು ಮೂವರು ವಿದ್ಯಾರ್ಥಿಗಳು

ಕಾಸರಗೋಡು: ಹತ್ತನೇ ತರಗತಿಯ ವಿದ್ಯಾರ್ಥಿ ಮನೆಯೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ರಾವಣೇಶ್ವರ ಕುನ್ನುಪ್ಪಾರೆ ಕರಿಪ್ಪಾಡಕ್ಕನ್ ವೀಟಿಲ್ ರಾಧಾಕೃಷ್ಣನ್-ರಜಿತಾ ದಂಪತಿ ಪುತ್ರ, ಹೊಸದುರ್ಗ ಕೇಂದ್ರೀಯ ವಿದ್ಯಾಲಯದ ೧೦ನೇ ತರಗತಿ ವಿದ್ಯಾರ್ಥಿಯಾದ  ಪಿ. ರಮಿತ್ (15) ಸಾವನ್ನಪ್ಪಿದ ಬಾಲಕ. ನಿನ್ನೆ ಸಂಜೆ ಮನೆಯಲ್ಲಿ ರಮಿತ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಅದನ್ನು ಕಂಡ ಮನೆಯವರು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಕಲಿಕೆಯಲ್ಲಿ ಮುಂದಿದ್ದ ಈತ ಚೆಸ್ ತಾರೆಯೂ ಆಗಿದ್ದನು. ಮೃತನು ಹೆತ್ತವರ …

ಮಲೆಯಾಳಂ  ಸಿನಿಮಾಕ್ಕೆ ಹೊಸ ಆಯಾಮ ನೀಡಿದ್ದ ನಟ ಶ್ರೀನಿವಾಸನ್ ನಿಧನ

ಕೊಚ್ಚಿ: ಮಲೆಯಾಳಂ ಸಿನಿಮಾರಂಗದ ಖ್ಯಾತ ನಟ, ನಿರ್ದೇಶಕ ಹಾಗೂ ಚಿತ್ರರಚನೆ ಗಾರನಾಗಿದ್ದ ಶ್ರೀನಿವಾಸನ್ (69) ನಿಧನ ಹೊಂದಿದರು. ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಉದಯಂ ಪೇರೂರಿನಲ್ಲಿರುವ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ನಿನ್ನೆ ಅವರ ಆರೋಗ್ಯ ಸ್ಥಿತಿ ಹದಗೆಡತೊಡಗಿದಾಗ ಅವರನ್ನು ತ್ರಿಪುಣ್ಣಿತ್ತರ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತಾದರೂ ಫಲ ಕಾರಿಯಾಗದೆ ಇಂದು ಬೆಳಿಗ್ಗೆ ನಿಧನಹೊಂದಿದರು. 1956 ಎಪ್ರಿಲ್ 4ರಂದು ಕೂತುಪರಂಬ ಪಾಟ್ಯದಲ್ಲಿ ಜನಿಸಿದ ಶ್ರೀನಿವಾಸನ್ ಶಾಲಾ ಶಿಕ್ಷಣದ ಬಳಿಕ ಮದ್ರಾಸ್ ಇನ್‌ಸ್ಟಿಟ್ಯೂಟ್ ಗೆ  ಸೇರಿದರು. ಸೂಪರ್ ಸ್ಟಾರ್ …

ಅಯ್ಯಪ್ಪನ ಚಿನ್ನ ಎಗರಿಸಿದ ಪ್ರಕರಣ: ಚಿನ್ನದ ವ್ಯಾಪಾರಿ ಸೇರಿ ಮತ್ತೆ ಇಬ್ಬರ ಸೆರೆ: 480 ಗ್ರಾಂ ಚಿನ್ನ ವಶ

ತಿರುವನಂತಪುರ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ಚಿನ್ನವನ್ನು ಕರಗಿಸಿ ತೆಗೆದ ಹಾಗೂ ಬಳಿಕ ಅದನ್ನು ಪಡೆದ ಇಬ್ಬರನ್ನು ವಿಶೇಷ ತನಿಖಾ ತಂಡ ಬಂಧಿಸಿದೆ. ಶಬರಿಮಲೆ ದೇಗುಲದ ದ್ವಾರಪಾಲಕ ಮೂರ್ತಿಗಳ ಚಿನ್ನದ  ಕವಚಗಳ ಚಿನ್ನವನ್ನು ಕರಗಿಸಿ ಬೇರ್ಪಡಿಸಿದ ಚೆನ್ನೈಯ ಸ್ಮಾರ್ಟ್ ಕ್ರಿಯೇಶನ್ಸ್ ಸಂಸ್ಥೆಯ ಸಿಇಒ ಪಂಕಜ್ ಭಂಡಾರಿ ಹಾಗೂ  ಆ ಚಿನ್ನವನ್ನು ಬಳಿಕ ಪಡೆದ ಕರ್ನಾಟಕ ಬಳ್ಳಾರಿಯ ರೊದ್ದಂ ಜ್ಯುವೆಲ್ಲರಿ ಮಾಲಕ ಗೋವರ್ಧನ್ ಬಂಧಿತರಾದ ಆರೋಪಿಗಳು.  ಆರೋಪಿಗಳ ಪೈಕಿ ಗೋವರ್ಧನ್‌ನ ಚಿನ್ನದಂಗಡಿಯಿಂದ ತನಿಖಾ ತಂಡ 480 …

ಕಾಸರಗೋಡು ನಿವಾಸಿಯನ್ನು ವಿಮಾನ ನಿಲ್ದಾಣದಲ್ಲಿ ಬಂದೂಕು ತೋರಿಸಿ ಅಪಹರಣ: ಕೊಲೆ ಬೆದರಿಕೆ

ಕೊಚ್ಚಿ: ದುಬಾಯಿಯಿಂದ ನಿನ್ನೆ ಮುಂಜಾನೆ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕಾಸರಗೋಡು ಕಿಳಕ್ಕೇಕರೆ ತವಕ್ಕಲ್ ಮಂಜಿಲ್‌ನ ನಿವಾಸಿ ಮುಹಮ್ಮದ್ ಶಾಫಿ (40)ನನ್ನು ಬಂಧೂಕು ತೋರಿಸಿ ಅಪಹರಿಸಿಕೊಂಡು ಹೋಗಿ ಹ್ಯಾಂಡ್ ಬ್ಯಾಗ್ ಹಾಗೂ ಐಫೋನ್ ಮತ್ತು ಸಾಮಗ್ರಿಗಳನ್ನು ಅಪಹರಿಸಿದ ಘಟನೆ ನಡೆದಿದೆ. ಚಿನ್ನ ಎಲ್ಲಿದೆ ಎಂದು ಪ್ರಶ್ನಿಸಿ ಹಲ್ಲೆಗೈದ ಬಳಿಕ ೬ ಮಂದಿಯ ತಂಡ ಕಾರಿನಲ್ಲಿ ಸುತ್ತಾಟ ನಡೆಸಿ ಇವರನ್ನು ಪ್ರಶ್ನಿಸಿದ್ದು, ಬಳಿಕ ಬೆದರಿಕೆಯೂ ಒಡ್ಡಿದೆ ಎನ್ನಲಾಗಿದೆ. ಕೊನೆಗೆ ಆಲುವಾ ಪರವೂರ್‌ನಲ್ಲಿ ಕಾರಿನಿಂದ ಇವರನ್ನು ಇಳಿಸಿ ತಂಡ ಪರಾರಿಯಾಗಿದೆ. …

ಮರ ಕಡಿಯುತ್ತಿದ್ದ ವೇಳೆ ರೆಂಬೆ ದೇಹಕ್ಕೆ ಬಿದ್ದು ಗಾಯಗೊಂಡ ಯುವಕ ಸಾವು

ಕಾಸರಗೋಡು: ಮರ ಕಡಿಯುತ್ತಿದ್ದ ವೇಳೆ ಅದರ ರೆಂಬೆ ಮೈಮೇಲೆ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಬಂದಡ್ಕಕ್ಕೆ ಸಮೀಪದ ಕರಿವೇಡಗಂನ ಅಜಿ-ಅನಿತ ದಂಪತಿ ಪುತ್ರ ಸಜೋ ಅಜಿ (24) ಸಾವನ್ನಪ್ಪಿದ ಯುವಕ. ರೆಂಬೆ ದೇಹದ ಮೇಲೆ ಬಿದ್ದು ಗಂಭೀರ ಗಾಯಗೊಂಡ ಸಜೋ ಅಜಿಯನ್ನು ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾದೆ ಆತ ನಿಧನಹೊಂದಿದನು. ಮೃತನು ಹೆತ್ತವರ ಹೊರತಾಗಿ ಸಹೋದರ ಸಜಿತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.

ಪಿಣರಾಯಿಯಲ್ಲಿ ಸ್ಫೋಟ ಉಂಟಾಗಿರುವುದು ರೀಲ್ಸ್ ಚಿತ್ರೀಕರಣ ವೇಳೆ

ಕಣ್ಣೂರು: ಪಿಣರಾಯಿಯಲ್ಲಿ ಇತ್ತೀಚೆಗೆ ಉಂಟಾದ ಸ್ಫೋಟ ರೀಲ್ಸ್ ಚಿತ್ರೀಕರಣ ವೇಳೆ ನಡೆದಿರುವುದಾಗಿ  ಹೇಳ ಲಾಗುತ್ತಿದೆ.  ವಿಪಿನ್‌ರಾಜ್ ಎಂಬಾತನ ಕೈಯಲ್ಲಿ ಸ್ಫೋಟಕ ವಸ್ತು ಸಿಡಿದಿದ್ದು, ಇದು ರೀಲ್ಸ್ ಚಿತ್ರೀಕರಣ ವೇಳೆ ಸಂಭವಿಸಿ ದೆಯೆಂಬುವುದನ್ನು ಸಾಬೀತುಪಡಿಸುವ ದೃಶ್ಯಗಳು ಲಭಿಸಿರುವುದಾಗಿ ವರದಿ ಯಾಗಿದೆ. ಸ್ಫೋಟಕ ವಸ್ತುವಿಗೆ ಬೆಂಕಿ ಹಚ್ಚಿದ ಬಳಿಕ ಅದನ್ನು ಎಸೆಯಲು ಯತ್ನಿಸುತ್ತಿದ್ದಾಗ ಅದು ಕೈಯಲ್ಲೇ ಸಿಡಿದಿರುವುದು ದೃಶ್ಯದಲ್ಲಿದೆಯೆನ್ನಲಾಗುತ್ತಿದೆ. ಸ್ಫೋಟದಿಂದ ಕೈಗೆ ಗಂಭೀರ ಗಾಯಗೊಂಡಿರುವ ವಿಪಿನ್ ರಾಜ್ ಪ್ರಸ್ತುತ ಆಸ್ಪತ್ರೆಯಲ್ಲಿದ್ದಾನೆ. ಕಳೆದ ಮಂಗಳವಾರ ಮಧ್ಯಾಹ್ನ ಪಿಣರಾಯಿ ಕನಾಲ್‌ಕರ ಎಂಬಲ್ಲಿ ಘಟನೆ …

ಮಾಡತ್ತಡ್ಕ ಶ್ರೀ ಹರಿಹರ ಭಜನಾ ಮಂದಿರದಲ್ಲಿ ಸಾಹಿತ್ಯ ಗಾನ ನೃತ್ಯ ವೈಭವ

ನೀರ್ಚಾಲು: ಮಾಡತ್ತಡ್ಕ ಶ್ರೀ ಹರಿಹರ ಭಜನಾ ಮಂದಿರದಲ್ಲಿ ಶ್ರೀ ಅಯ್ಯಪ್ಪ ದೀಪೋತ್ಸವದ ಅಂಗವಾಗಿ ಡಾ. ವಾಣಿಶ್ರೀ ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ವತಿಯಿಂದ 143ನೇ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮ ನಡೆಯಿತು. ಡಾ. ವಾಣಿಶ್ರೀ ಕಾಸರಗೋಡು ನಿರೂಪಿಸಿದರು. ಗಾನಾಮೃತ ಕಾರ್ಯಕ್ರಮದಲ್ಲಿ ಮೇ ಘರಾಜ್ ಆಚಾರ್ಯ ಹಾಡಿದರು. ಸಂಸ್ಥೆಯ ಸಾಧಕಿ ಪ್ರೀತಿಕಾ ಪ್ರಸಾದ್ ಅವರಿಂದ ರಿಂಗ್ ನೃತ್ಯ ಜರಗಿತು. ಪುಟಾಣಿ ಸಾಧಕಿ ಮಾನ್ವಿಸಾಗರ್ ಯೋಗ ನೃತ್ಯ ಕಾರ್ಯಕ್ರಮಕ್ಕೆ ರಂಗು ನೀಡಿತು. ಸಂಸ್ಥೆಯ ಶ್ರೇಯ ಸೂರ್ಯ, …

ವಿಶ್ರಾಂತಿಗೆ ಬೀಗ: ಲಕ್ಷಾಂತರ ರೂ. ವೆಚ್ಚದಲ್ಲಿ ಬೀದಿ ಬದಿ ಆರಂಭಿಸಿದ ಕಟ್ಟಡ ಮುಚ್ಚುಗಡೆ

ಬೋವಿಕ್ಕಾನ: ಸಾರ್ವಜನಿಕರಿಗೆ ಹಾಗೂ ದೀರ್ಘದೂರ ಪ್ರಯಾಣಿಕರಿಗೆ ಉಪಯೋಗವಾಗುವ ರೀತಿಯಲ್ಲಿ ಬೀದಿಬದಿ ವಿಶ್ರಾಂತಿ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಆದರೆ ಈಗ ಆ ಕೇಂದ್ರಗಳು ನಿರುಪಯುಕ್ತವಾಗಿ ಬದಲಾಗಿದೆ. ಕಾರಡ್ಕ ಬ್ಲೋಕ್ ಪಂ.ನ ವತಿಯಿಂದ ಪೊವ್ವಲ್ ಬೆಂಚ್‌ಕೋರ್ಟ್ ಹತ್ತಿರ ೨೨ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಈ ರೀತಿಯ ವಿಶ್ರಾಂತಿ ಕೇಂದ್ರವೊಂದು ಈಗ ಬೀಗ ಜಡಿದ ರೀತಿಯಲ್ಲಿ ಕಂಡು ಬರುತ್ತಿದೆ. ೨೦೨೪ ಡಿಸೆಂಬರ್ ತಿಂಗಳಲ್ಲಿ ಈ ಕೇಂದ್ರವನ್ನು ಉದ್ಘಾಟಿಸಲಾಗಿತ್ತು. ಚೆರ್ಕಳ- ಜಾಲ್ಸೂರು ರಸ್ತೆಯ ಪೊವ್ವಲ್ ಬಳಿ ನಿರ್ಮಿಸಿದ ಈ ವಿಶ್ರಾಂತಿ ಕೇಂದ್ರದ ಪರಿಸರದಲ್ಲಿ …

70ರ ವೃದ್ದೆ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ: ಕೊಲೆ ಶಂಕೆ

ಕೊಚ್ಚಿ: ಇಡಪ್ಪಳ್ಳಿಯಲ್ಲಿನ ನಿವೃತ್ತ ಅಧ್ಯಾಪಿಕೆಯ ಸಾವು ಕೊಲೆ ಕೃತ್ಯವೆಂದು ಶಂಕಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪೋನೇಕರ ನಿವಾಸಿ ವನಜ (70) ಸಾವಿಗೀಡಾದ ಮಹಿಳೆ. ಶುಕ್ರವಾರ ರಾತ್ರಿ ವನಜ ನಿಗೂಢವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ದೇಹದಲ್ಲಿ ಗಾಯಗಳಿತ್ತೆನ್ನಲಾಗಿದೆ. ಮಲಗುವ ಕೊಠಡಿಯಲ್ಲಿ ರಕ್ತ ಕಂಡುಬಂದಿದೆ. ಮೃತದೇಹದ ಸಮೀಪದಲ್ಲೇ ಒಂದು ಕತ್ತಿಯನ್ನು ಕೂಡಾ ಪತ್ತೆಹಚ್ಚಲಾಗಿದೆ. ಪ್ರಾಥಮಿಕ ತಪಾಸಣೆಯಲ್ಲಿ ಕೊಲೆಕೃತ್ಯ ವೆಂದು ಶಂಕಿಸುತ್ತಿರುವುದಾಗಿ ಎಳಮಕ್ಕರ ಪೊಲೀಸರು ತಿಳಿಸಿದ್ದಾರೆ. ಶ್ವಾನದಳ ರಾತ್ರಿಯೇ ಸ್ಥಳಕ್ಕೆ ತಲುಪಿದೆ. ಸಮೀಪದ ಸಿಸಿ ಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಘಟನೆ ನಡೆಯು …

ಸಾರ್ವಜನಿಕ ಸ್ಥಳಗಳಲ್ಲಿನ ಮಹಿಳೆಯರ ಸಮಸ್ಯೆ ಪರಿಹರಿಸಲು ಮಹಿಳಾ ಆಯೋಗದ ನೇತೃತ್ವದಲ್ಲಿ ಯೋಜನೆ ಆವಿಷ್ಕಾರ- ಪಿ. ಕುಂಞಾಯಿಷ

ಕಾಸರಗೋಡು: ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಕಂಡುಬರುವ ಸಮಸ್ಯೆಗಳನ್ನು ಪರಿಹರಿಸಲು ಮಹಿಳಾ ಆಯೋಗದ ನೇತೃತ್ವದಲ್ಲಿ ಯೋಜನೆ ಗಳನ್ನು ಆವಿಷ್ಕರಿಸಲಾಗುವುದೆಂದು ಕೇರಳ ಮಹಿಳಾ ಆಯೋಗದ ಸದಸ್ಯೆ ನ್ಯಾಯವಾದಿ ಪಿ. ಕುಂಞಾಯಿಷ ನುಡಿ ದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅದಾಲತ್‌ನಲ್ಲಿ ದೂರು ಆಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾ ಡುತ್ತಿದ್ದರು. ಇದರ ಮುಂಚಿತವಾಗಿ ಸಮಸ್ಯೆಗಳನ್ನು ತಿಳಿದು ನಿರ್ದೇಶಗಳನ್ನು ಸಮರ್ಪಿಸುವುದಕ್ಕಾಗಿ ಜನವರಿಯಿಂದ ವಿಚಾರಗೋಷ್ಠಿಗಳನ್ನು ಆರಂಭಿಸುವು ದಾಗಿಯೂ ಅವರು ನುಡಿದರು. ಮಹಿಳೆಯರ ವಿರುದ್ಧವಿರುವ ಆಕ್ರಮಣವನ್ನು ತಡೆಯುವುದಕ್ಕೆ ಪ್ರಯಾಣ ವೇಳೆಗಳಲ್ಲಿ, …