ಶಬರಿಮಲೆ ಮಾತ್ರವಲ್ಲ ತಿರುವನಂತಪುರ ಶ್ರೀ ಪದ್ಮನಾಭ ಕ್ಷೇತ್ರ ವಿಗ್ರಹಗಳನ್ನೂ ಸಾಗಿಸುವ ಯತ್ನ ನಡೆದಿತ್ತು- ಸ್ಪೋಟಕ ಹೇಳಿಕೆ

ತಿರುವನಂತಪುರ: ಶಬರಿಮಲೆ ದೇಗುಲದ ನಾಲ್ಕು ಪಂಚಲೋಹ ವಿಗ್ರಹಗಳನ್ನು ಸಾಗಿಸಲು ಯತ್ನಿಸಿದ ಅಂತಾರಾಷ್ಟ್ರೀಯ ವಿಗ್ರಹ ಸಾಗಾಟ ಮಾಫಿಯಾ ತಂಡ ಅತೀವ ಶ್ರೀಮಂತ ದೇಗುಲವೆಂದೇ ಖ್ಯಾತಿ ಹೊಂದಿರುವ ತಿರುವನಂತಪುರದ ಶ್ರೀ ಪದ್ಮನಾಭ ಕ್ಷೇತ್ರದ ಪಂಚಲೋಹ ವಿಗ್ರಹಗಳನ್ನೂ ಸಾಗಿಸುವ ಯತ್ನ ನಡೆಸಿತ್ತೆಂದೂ ಇದಕ್ಕಾಗಿ ಆ ತಂಡದವರು ಹಣದೊಂದಿಗೆ ಈಗಲೂ ತಿರುವನಂತಪುರದಲ್ಲಿ ಸುತ್ತಾಡುತ್ತಿದ್ದಾರೆಂದು ದುಬೈಯ ಉದ್ಯಮಿ ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ  ಹೇಳಿಕೆ ನೀಡಿದ್ದಾರೆ. ಶಬರಿಮಲೆ ಕ್ಷೇತ್ರದ ಚಿನ್ನ ಮಾತ್ರವಲ್ಲ ಅಲ್ಲಿನ ನಾಲ್ಕು ಪಂಚಲೋಹ …

ಆಟೋ ರಿಕ್ಷಾ ಚಾಲಕ ಹೃದಯಾಘಾತದಿಂದ ನಿಧನ

ಉಪ್ಪಳ: ಆಟೋ ರಿಕ್ಷಾ ಚಾಲಕ ರೊಬ್ಬರು ಹೃದಯಾಘಾತದಿಂದ ನಿಧನ ಹೊಂದಿದರು. ಮೀಯ ಪದವು ಕುಳಬಯಲು ಪಾಲಡಿ ನಿವಾಸಿ ಅಬ್ದುಲ್ ಜಬ್ಬಾರ್ (45) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಹೊಸಂಗಡಿಯಲ್ಲಿ ಆಟೋ ಚಾಲಕ ರಾಗಿದ್ದರು. ಇಂದು ಮುಂಜಾನೆ 1 ಗಂಟೆ ವೇಳೆಗೆ ಇವರಿಗೆ ಮನೆಯಲ್ಲಿ ಹೃದಯಾಘಾತ ಉಂಟಾಗಿತ್ತು. ಕೂಡಲೇ ಕುಂಬಳೆ ಆಸ್ಪತ್ರೆಗೆ ತಲುಪಿಸಿದ್ದು. ಅಷ್ಟರಲ್ಲಿ ನಿಧನ ಸಂಭವಿಸಿತ್ತು. ಮೃತರು ಪತ್ನಿ ಫಾತಿಮತ್ ಸುಹರಾ, ಮಕ್ಕಳಾದ ಇಮ್ರಾನ್ ಸಾಲಿ, ಫಾತಿಮಾ, ರಝ ಹಾಗೂ ನಾಲ್ವರು ಸಹೋದರರು, ಏಳು ಮಂದಿ ಸಹೋದರಿಯರ …

ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿ ಹೊಡೆದು ಯುವಕ ಮೃತ್ಯು: ಸ್ನೇಹಿತನಿಗೆ ಗಂಭೀರ ಗಾಯ

ಕಾಸರಗೋಡು: ಬೈಕ್ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಯುವಕ ಮೃತಪಟ್ಟ ದಾರುಣ ಘಟನೆ ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಮಾಲೋತ್ ಎಂಬಲ್ಲಿ ಸಂಭವಿಸಿದೆ. ಜೊತೆಗಿದ್ದ ಸ್ನೇಹಿತ ಗಂಭೀರ ಗಾಯಗೊಂಡಿದ್ದಾನೆ. ಮಾಲೋತ್‌ನ ಬಿನು ಕುಮಾರ್ – ಲತಾ ದಂಪತಿಯ ಪುತ್ರ ಮಿಥುನ್‌ರಾಜ್ (20) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಗಂಭೀರ ಗಾಯಗೊಂಡ ಸಚ್ಚು ಎಂಬಾತನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಮುಂಜಾನೆ 1 ಗಂಟೆ ವೇಳೆ ಅಪಘಾತವುಂಟಾಗಿದೆ. ಕ್ರಿಸ್ಮಸ್ ಕರೋಲ್ ತಂಡದೊಂದಿಗೆ ಸಕ್ರಿಯವಾಗಿ ಪಾಲ್ಗೊಂಡಿದ್ದ ಇವರು ಬಳಿಕ ಮಾಲೋತ್‌ಗೆ ತೆರಳುತ್ತಿದ್ದರು.  ಇವರು …

ಭೀಕರ ಬಸ್ ದುರಂತ: 12 ಮಂದಿ ಸಜೀವ ದಹನ; ಹಲವರಿಗೆ ಗಂಭೀರ

ಚಿತ್ರದುರ್ಗ: ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಖಾಸಗಿ  ಸ್ಲೀಪರ್ ಕೋಚ್ ಬಸ್‌ಗೆ ಖಾಸಗಿ ಕಂಟೈನರ್ ಲಾರಿ ಢಿಕ್ಕಿ ಹೊಡೆದು ಅದರಂದ ಬೆಂಕಿ ಎದ್ದು 12 ಮಂದಿ ಪ್ರಯಾಣಿ ಕರು ಸಜೀವ ದಹನಗೊಂಡು, ಹಲವರು ಗಂಭೀರ ಸುಟ್ಟು ಗಾಯ ಗೊಂಡ ಭೀಕರ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಜವನಗೊಂಡನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇಂದು ಮುಂಜಾನೆ ನಡೆದಿದೆ. ಬಸ್ಸಿನಲ್ಲಿ ಒಟ್ಟು 32 ಮಂದಿ ಪ್ರಯಾಣಿಕರಿದ್ದರು. ಢಿಕ್ಕಿಯ ರಭಸದಿಂದ ಬಸ್ ಮತ್ತು ಕಂಟೈನರ್ ಲಾರಿ ಎರಡೂ ಬೆಂಕಿ ತಗಲಿ ಸಂಪೂರ್ಣ …

ಆಲಂಪಾಡಿ ನಿವಾಸಿಯನ್ನು ತಡೆದು ನಿಲ್ಲಿಸಿ ಪರ್ಸ್, ಎಟಿಎಂ ಕಾರ್ಡ್ ವಶ: ಕೊಲೆ ಬೆದರಿಕೆಯೊಡ್ಡಿ 1 ಲಕ್ಷ ರೂ. ಲಪಟಾವಣೆ

ಕಾಸರಗೋಡು: ಆಲಂಪಾಡಿ ನಿವಾಸಿಯನ್ನು ತಡೆದು ನಿಲ್ಲಿಸಿದ ತಂಡವೊಂದು ಪರ್ಸ್ ಹಾಗೂ ಎಟಿಎಂ ಕಾರ್ಡ್ ಅಪಹರಿಸಿ 1,01,000 ರೂಪಾಯಿ ಲಪಟಾಯಿಸಿರುವುದಾಗಿ ದೂರಲಾಗಿದೆ. ಮುಟ್ಟತ್ತೋಡಿ ಆಲಂಪಾಡಿ ಮಿಹ್ರಾಜ್ ಹೌಸ್‌ನ ಪಿ.ಎಂ. ಖಮರುದ್ದೀನ್ ಎಂಬವರು ನೀಡಿದ ದೂರಿನಂತೆ ಅನಸ್ ಹಾಗೂ ಕಂಡರೆ ಪತ್ತೆಹಚ್ಚಬಹುದಾದ ಇತರ ಮೂರು ಮಂದಿ ವಿರುದ್ಧ ಕಾಸರಗೋಡು ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನಿನ್ನೆ ರಾತ್ರಿ 9.30ರ ವೇಳೆ ನೆಲ್ಲಿ ಕುಂಜೆಯಲ್ಲಿ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಖಮರುದ್ದೀನ್‌ರನ್ನು ತಡೆದು ನಿಲ್ಲಿಸಿದ ತಂಡ ಕೊಲೆಗೈಯ್ಯು ವುದಾಗಿ ಬೆದರಿಕೆಯೊಡ್ಡಿದ …

ಪಂಚಾಯತ್ ಅಧ್ಯಕ್ಷ ಸ್ಥಾನ: ಕುಂಬಳೆಯಲ್ಲಿ ಮೊದಲು ಅಬ್ದುಲ್ ಖಾದರ್, ಮಂಗಲ್ಪಾಡಿಯಲ್ಲಿ ಗೋಲ್ಡನ್ ರಹ್ಮಾನ್, ಮಂಜೇಶ್ವರದಲ್ಲಿ ಬಷೀರ್ ಕನಿಲ

ಕುಂಬಳೆ: ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿ ಮುಸ್ಲಿಂಲೀಗ್‌ನಲ್ಲಿ ಒಪ್ಪಂದಕ್ಕೆ ಬರಲಾಗಿದೆ. ಮುಸ್ಲಿಂಲೀಗ್‌ಗೆ ಬಹುಮತವುಳ್ಳ ಪಂಚಾಯತ್‌ಗಳಲ್ಲಿ ಮೊದಲ ಎರಡು ವರ್ಷ ಒಬ್ಬರು, ಅನಂತರದ ಮೂರು ವರ್ಷ ಇನ್ನೊಬ್ಬರು ಪಂಚಾಯತ್ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ. ಈ ನಿರ್ಧಾರ ಕೈಗೊಳ್ಳುವುದರೊಂದಿಗೆ ಎಲ್ಲರನ್ನು ಸಮಾಧಾನಪಡಿಸಲು ಪಕ್ಷಕ್ಕೆ ಸಾಧ್ಯವಾಗಿದೆ. ನಿರ್ಧಾರ ಪ್ರಕಾರ ಕುಂಬಳೆಯಲ್ಲಿ ಮೊದಲ ಎರಡು ವರ್ಷ ವಿ.ಪಿ. ಅಬ್ದುಲ್ ಖಾದರ್ ಅಧ್ಯಕ್ಷರಾಗುವರು. ಅನಂತರದ ಮೂರು ವರ್ಷ ಎ.ಕೆ. ಹರೀಫ್ ಆ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ. ಲೀಗ್ ಜಿಲ್ಲಾ ಪಾರ್ಲಿಮೆಂಟರಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. …

ಅಸೌಖ್ಯ: ನಿಧನ

ಮೀಂಜ: ಬೆಜ್ಜ ಅಗ್ರಾಲ ನಿವಾಸಿ ದೇವರಾಜ್ ಶೆಟ್ಟಿಯವರ ಪತ್ನಿ ಶಾಂಭವಿ ಶೆಟ್ಟಿ (52) ನಿಧನ ಹೊಂದಿದರು. ಅಸೌಖ್ಯ ಬಾಧಿಸಿದ್ದ ಇವರನ್ನು ಕಳೆದ ಒಂದು ತಿಂಗಳಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿಲಾಗಿತ್ತು. ನಿನ್ನೆ ಸಂಜೆ ನಿಧನ ಸಂಭವಿಸಿದೆ. ಮೃತರು ಪತಿ, ಮಕ್ಕಳಾದ ಮಾನಸ, ಧನುಷ್, ಮನೀಷ, ಅಳಿಯ ರಮೇಶ್ ಶೆಟ್ಟಿ, ಸಹೋದರಿಯರಾದ ಗುಲಾಬಿ, ಚಂದ್ರಾವತಿ ಹಾಗೂ ಅಪಾರ  ಬಂಧು ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ಶ್ರೀನಿವಾಸ ಎಂಬವರು ಈ ಹಿಂದೆ ನಿಧನರಾಗಿದ್ದಾರೆ. ಶಾಂಭವಿ ಶೆಟ್ಟಿಯವರ ನಿಧನಕ್ಕೆ ಬಿಜೆಪಿ ಮೀಂಜ ಪಂಚಾಯತ್ …

ರಾಜ್ಯದಲ್ಲಿ ಆಡಳಿತಕ್ಕೇರಲು ಯುಡಿಎಫ್‌ನಿಂದ ತೀವ್ರ ಪ್ರಯತ್ನ : ಉದುಮದಲ್ಲಿ ರಾಜ್‌ಮೋಹನ್ ಉಣ್ಣಿತ್ತಾನ್‌ರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪರಿಗಣನೆ

ಕಾಸರಗೋಡು: ಎರಡು ಬಾರಿ ಕೈತಪ್ಪಿ ಹೋದ ರಾಜ್ಯ ಆಡಳಿತವನ್ನು ಈ ಬಾರಿಯಾದರೂ ಮರಳಿ ವಶಪಡಿಸಲು ಕಾಂಗ್ರೆಸ್ ಸಹಿತ ಯುಡಿಎಫ್ ದೃಢ ನಿರ್ಧಾರ ಕೈಗೊಂ ಡಿದ್ದು, ಅದಕ್ಕಾಗಿ ತೀವ್ರ ಪ್ರಯತ್ನ ನಡೆಸುತ್ತಿದೆ. ಈ ಬಾರಿ ಆಡಳಿತ ಹಿಡಿಯಲು ಸಾಧ್ಯವಾಗದಿದ್ದಲ್ಲಿ ಒಕ್ಕೂಟಕ್ಕೆ ಭಾರೀ ಸವಾಲು ಎದು ರಾಗಲಿದೆ  ಎಂಬ ಆತಂಕ ಹುಟ್ಟಿ ಕೊಂಡಿದೆ.  ಇದೇ ವೇಳೆ ಸ್ಥಳೀಯಾ ಡಳಿತ ಚುನಾವಣೆಯಲ್ಲಿ ಲಭಿಸಿದ ಗೆಲುವು ಯುಡಿಎಫ್‌ನ ಈಗಿನ ನಿರ್ಧಾರಕ್ಕೆ ಶಕ್ತಿ ತುಂಬುತ್ತಿದೆ. ರಾಜ್ಯದ ಉತ್ತರದ ತುದಿಯಲ್ಲಿರುವ ಮಂಜೇ ಶ್ವರ, ಕಾಸರಗೋಡು ವಿಧಾನಸಭಾ …

ಅಸೌಖ್ಯ: ನಿಧನ

ಉಪ್ಪಳ: ಮೂಲತಃ ಮಾಯಿಪ್ಪಾಡಿ ನಿವಾಸಿ ಕುಂಬಳೆ ಬಳಿಯ ಸೀತಾಂಗೋಳಿಯಲ್ಲಿ ವಾಸವಾಗಿದ್ದ ದೇವರಾಜ್ ಆಚಾರ್ಯರ ಪತ್ನಿ ಹೇಮಲತಾ (60) ನಿಧನಹೊಂದಿದರು. ಹಲವು ವರ್ಷಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಇವರಿಗೆ ನಿನ್ನೆ ರಾತ್ರಿ 7 ಗಂಟೆಗೆ ರೋಗ ಉಲ್ಭಣಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ತಲುಪಿಸಿದರೂ ಅಷ್ಟರಲ್ಲಿ ನಿಧನ ಹೊಂದಿದ್ದಾರೆ. ಮೃತರು ಪತಿ, ಮಕ್ಕಳಾದ ಅಮೃತ, ಅಕ್ಷಿತ, ಅಳಿಯಂದಿರಾದ ನಳಿನಾಕ್ಷ ಆಚಾರ್ಯ, ಧನುಷ್ ಆಚಾರ್ಯ, ಸಹೋದರ-ಸಹೋ ದರಿಯರಾದ ಗೋಪಾಲ ಆಚಾ ರ್ಯ, ಜನಾರ್ದನ ಆಚಾರ್ಯ, ಮೀನಾಕ್ಷಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ವಿವಿಧೆಡೆ ಕ್ರಿಸ್ಮಸ್ ಆಚರಣೆ: ಕಯ್ಯಾರ್ ಚರ್ಚ್‌ನಲ್ಲಿ ದಿವ್ಯ ಬಲಿಪೂಜೆ

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕ್ರೈಸ್ತ ಬಾಂಧವರು ಕ್ರಿಸ್ ಮಸ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು.ಕಯ್ಯಾರ್ ಕ್ರಿಸ್ತ ರಾಜ ದೇವಾಲಯದ ದಲ್ಲಿ ನಡೆದ ಬಲಿಪೂಜೆ ಯನ್ನು ರಾಂಚಿ ಸೆಮಿನರಿಯ ನಿರ್ದೇಶಕ ಫಾದರ್ ಜೋನ್ ಕ್ರಾಸ್ತ ನೆರವೇರಿಸಿದರು. ದೇವಾಲಯದ ಧರ್ಮಗುರು ಫಾದರ್ ವಿಶಾಲ್ ಮೋನಿಸ್ ವಿಧಿ ವಿಧಾನ ನೆರವೇರಿಸಿದರು . ಬಳಿಕ ವಿವಿಧ ಸಾಂಸ್ಕೃ ತಿಕ ಕಾರ್ಯಕ್ರಮಗಳು ಜರಗಿತು.ವಿವಿಧ ಚರ್ಚ್ಗಳಲ್ಲಿ ಕ್ರಿಸ್ಮಸ್‌ನ್ನು ಸಂಭ್ರಮ ದಿಂದ ಆಚರಿಸಲಾಯಿತು. ದಿವ್ಯ ಬಲಿಪೂಜೆಯಲ್ಲಿ ಅಪಾರ ಭಕ್ತರು ಪಾಲ್ಗೊಂಡಿದ್ದರು. ಗೋದಲಿ, ನಕ್ಷತ್ರ ಸೇರಿದಂತೆ ದೀಪಾಲಂಕಾರ ಗಳಿಂದ …