ಜಿಲ್ಲಾ ಕಲೋತ್ಸವ: ಯುಪಿ ಜನರಲ್ ವಿಭಾಗದಲ್ಲಿ ಕಯ್ಯಾರು ಡೋನ್‌ಬೋಸ್ಕೊ ಶಾಲೆ ಚಾಂಪ್ಯನ್

ಕಾಸರಗೋಡು: ಮೊಗ್ರಾಲ್ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ 64ನೇ ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ಯುಪಿ ಜನರಲ್ ವಿಭಾಗದಲ್ಲಿ ಕಯ್ಯಾರು ಡೋನ್ ಬೋಸ್ಕೊ ಎಯುಪಿ ಶಾಲೆಯು 48 ಅಂಕಗಳೊAದಿಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಯುಪಿ ಸಂಸ್ಕೃತ ವಿಭಾಗದಲ್ಲಿ 35 ಅಂಕಗಳೊAದಿಗೆ ರನ್ನರ್ಸ್ ಅಪ್ ಸ್ಥಾನವನ್ನು ಪಡೆದುಕೊಂಡಿದೆ. ಜಿಲ್ಲಾ ಕಲೋತ್ಸವದಲ್ಲಿ ಯುಪಿ ವಿಭಾಗದಲ್ಲಿ ನಡೆದ ಒಟ್ಟು ಹತ್ತು ಸ್ಪರ್ಧೆಗಳಲ್ಲಿ ಕಯ್ಯಾರು ಡೋನ್ ಬೋಸ್ಕೊ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಗ್ರೂಪ್ ವಿಭಾಗಗಳಲ್ಲಿ ಯುಪಿ ಸಮೂಹ ನೃತ್ಯ ಎ …

ಜಿಲ್ಲಾ ಶಾಲಾ ಕಲೋತ್ಸವ: ಯು.ಪಿ. ಅರೆಬಿಕ್ ವಿಭಾಗದಲ್ಲಿ ಜಿಎಸ್‌ಬಿಎಸ್ ಕುಂಬಳೆ ಚಾಂಪ್ಯನ್

ಕುಂಬಳೆ: ಮೊಗ್ರಾಲ್ ಶಾಲೆಯಲ್ಲಿ ಮುಕ್ತಾಯಗೊಂಡ 64 ನೇ ಜಿಲ್ಲಾ ಮಟ್ಟದ ಕೇರಳ ಶಾಲಾ ಕಲೋತ್ಸವ ದಲ್ಲಿ ಯು.ಪಿ ಅರೇಬಿಕ್ ವಿಭಾಗ ದಲ್ಲಿ ಜಿ.ಎಸ್.ಬಿ.ಎಸ್ ಕುಂಬಳೆ 30 ಅಂಕಗಳನ್ನು ಗಳಿಸಿ ಚಾಂಪ್ಯನ್ ಪ್ರಶಸ್ತಿ ಗಳಿಸಿತು. ಸಮಾರೋಪ ಸಮಾರಂಭದಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಪ್ರಶಸ್ತಿ ಫಲಕವನ್ನು ವಿತರಿಸಿದರು. ಭಾಗವಹಿಸಿದ ಎಲ್ಲ ಸ್ಪರ್ಧೆಗಳಲ್ಲಿ ಎ ಗ್ರೇಡ್ ಪಡೆದು ಈ ಸಾಧನೆ ಮಾಡಿದೆ. ಇಂಗ್ಲಿಷ್ ಸ್ಕಿಟ್ ಕೇವಲ ಶಾಲಾ ಅಧ್ಯಾಪಕರ ತರಬೇತಿಯಿಂದ ಎ ಗ್ರೇಡ್ ನೊಂ ದಿಗೆ ದ್ವಿತೀಯ ಸ್ಥಾನ ಪಡೆದಿರುವುದು …

ಕೇರಳವನ್ನು ಮತೀಯ ರಾಜ್ಯವನ್ನಾಗಿ ಮಾಡಲು ಯತ್ನ-ಸಿಪಿಎಂ

ಮಂಜೇಶ್ವರ: ದೇವರ ರಾಜ್ಯ ವೆಂದು ಹೆಸರು ಪಡೆದ ಕೇರಳವನ್ನು ಯುಡಿಎಫ್ ಮತ್ತು ಬಿಜೆಪಿ ಮತೀಯ ರಾಜ್ಯವನ್ನಾಗಿಸಲು ಶ್ರಮಿಸುತ್ತಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ ರಾಜಗೋಪಾಲನ್ ನುಡಿದರು. ಸಿಪಿಎಂ ನೇತಾರ, ರೈತ ಮುಖಂಡ ಬಿಎಂ ರಾಮಯ್ಯ ಶೆಟ್ಟಿಯವರ 23ನೇ ಸಂಸ್ಮರಣೆ ದಿನಾಚರಣೆಯನ್ನು ಹೊಸಂಗಡಿಯಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಬಿಜೆಪಿ ಆಡಳಿತದ ಉತ್ತರ ಪ್ರದೇಶ, ದೆಹಲಿ ರಾಜ್ಯಗಳಲ್ಲಿ ಮತೀಯ ಅಲ್ಪಸಂಖ್ಯಾತರ ನಿವಾಸಗಳ ಮೇಲೆ ಬುಲ್ಡೋಸರ್ ಹತ್ತಿಸಿದಾಗ ಅದಕ್ಕೆದುರಾಗಿ ಹೋರಾಟ ನಡೆಸಿದ್ದು ಸಿಪಿಎಂ ಆಗಿದೆ. ಸಿಪಿಎಂನ ಪೋಲೀಟ್ ಬ್ಯೂರೋ ಸದಸ್ಯೆ …

ತೂಮಿನಾಡು ಪರಿಸರದಿಂದ ಕಟೀಲು ಕ್ಷೇತ್ರಕ್ಕೆ ಪಾದಯಾತ್ರೆ

ಮಂಜೇಶ್ವರ: ತೂಮಿನಾಡು ಶ್ರೀ ಮಹಾಕಾಳಿ ದೈವಸ್ಥಾನ ಮತ್ತು ಮಹಾಕಾಳಿ ಭಜನಾ ಮಂದಿರದ ವಠಾರದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪಾದಯಾತ್ರೆ ನಡೆಯಿತು. ನಿನ್ನೆ ಸಂಜೆ 5.20 ರ ವೇಳೆ ಕ್ಷೇತ್ರ ಪರಿಸರದಿಂದ ಹೊರಟ ಪಾದಯಾತ್ರೆ ಇಂದು ಮುಂಜಾನೆ 6 ಗಂಟೆಗೆ ಕಟೀಲು ಕ್ಷೇತ್ರಕ್ಕೆ ತಲುಪಿದೆ. 40 ಮಂದಿ ಮಹಿಳೆಯರು, 20 ಪುರುಷರು ಸೇರಿದ 60 ಮಂದಿಯ ತಂಡ ಪಾದಯಾತ್ರೆ ನಡೆಸಿದೆ. ದೇವದಾಸ್ ಶೆಟ್ಟಿ ತೂಮಿನಾಡು, ಆಶಾ ಕಣ್ವತೀರ್ಥ ನೇತೃತ್ವ ವಹಿಸಿದರು.

ಬಡ ಕುಟುಂಬದ ಶೋಚನೀಯ ಸ್ಥಿತಿಯಲ್ಲಿದ್ದ ಮನೆ ಧರಾಶಾಯಿ: ನೂತನ ಮನೆ ಮಂಜೂರು ಮಾಡುವಂತೆ ಒತ್ತಾಯ

ಪೆರ್ಲ: ಬಡ ಕುಟುಂಬವೊಂದು ವಾಸಿಸುತ್ತಿದ್ದ ಮನೆ ಇತ್ತೀಚೆಗೆ ಕುಸಿದು ಬಿದ್ದಿದ್ದು ಇದರಿಂದ ಕುಟುಂಬಕ್ಕೆ ವಾಸಿಸಲು ಸೌಕರ್ಯವಿಲ್ಲದೆ ಸಂಕಷ್ಟ ಎದುರಿಸುತ್ತಿದೆ. ಎಣ್ಮಕಜೆ ಪಂಚಾಯತ್ ವ್ಯಾಪ್ತಿಯ ಕಜಂಪಾಡಿ ಸೆಟ್ಟಿಬೈಲ್ ಎಂಬಲ್ಲಿನ ಐತ್ತೆ ಎಂಬವರ ಹೆಂಚು ಹಾಸಿದ ಮನೆ ಕುಸಿದು ಬಿದ್ದಿದೆ. ಮನೆ ಕುಸಿಯುವ ಶಬ್ದ ಕೇಳಿ ಕುಟುಂಬ ಹೊರಗೆ ಓಡಿದುದರಿಂದ ಭಾರೀ ಅಪಾಯದಿಂದ ಪಾರಾಗಿದ್ದಾರೆ. ಹೆಂಚು ಹಾಸಿದ ಮನೆಯ ಛಾವಣಿ ಶಿಥಿಲಗೊಂಡು ನೀರು ಒಳಗೆ ಸೋರುತ್ತಿತ್ತು. ಇದರಿಂದ ಟರ್ಪಾಲು ಹೊದಿಸಿ ನೀರು ಒಳಗೆ ಬೀಳದಂತೆ ತಡೆಯಲಾಗಿತ್ತು. ಆದರೂ ಮನೆ ಕುಸಿದು …

ಕೆ.ಎನ್. ವೆಂಕಟ್ರಮಣ ಹೊಳ್ಳರಿಗೆ ಕೋಲಾರ-ಕಾಸರಗೋಡು ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಕಾಸರಗೋಡು : ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆಗೈಯುತ್ತಿರುವ ಕೆ. ಎನ್ ವೆಂಕಟ್ರಮಣ ಹೊಳ್ಳ- ರೂಪ ಕಲಾ ದಂಪತಿಯನ್ನು ನುಳ್ಳಿಪ್ಪಾಡಿ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ದಲ್ಲಿ ಇತ್ತೀಚೆಗೆ ನಡೆದ ಕಾರ್ಯ ಕ್ರಮದಲ್ಲಿ ಕೋಲಾರ- ಕಾಸರ ಗೋಡು ಗಡಿನಾಡ ಕನ್ನಡ ರಾಜ್ಯೋ ತ್ಸವ ಪ್ರಶಸ್ತಿ ಪ್ರದಾನ ಮಾಡ ಲಾಯಿತು. ವಾಮನ್ ರಾವ್ ಬೇಕಲ್- ಸಂಧ್ಯಾರಾಣಿ ಟೀಚರ್ ಹಾಗೂ ಸ್ವರ್ಣಭೂಮಿ ಫೌಂಡೇಶನ್ ಕೋಲಾರ ಇದರ ರೂವಾರಿ ಶಿವಕುಮಾರ್ ಪ್ರದಾನ ಮಾಡಿದರು.ಕರ್ನಾಟಕ ಸರಕಾರದ ಗಡಿ …

ಬ್ಯೂಟಿ ಪಾರ್ಲರ್‌ಗಳನ್ನು ಯೂಸರ್ ಫೀಸ್‌ನಿಂದ ಹೊರತುಪಡಿಸಬೇಕು-ಕೆಎಸ್‌ಬಿಎ

ಕಾಸರಗೋಡು: ಬ್ಯೂಟಿ ಪಾರ್ಲ ರ್‌ಗಳನ್ನು ಯೂಸರ್ ಫೀಸ್‌ನಿಂದ ಹೊರತುಪಡಿಸಬೇಕೆಂದು ಕೆಎಸ್‌ಬಿಎ ಲೇಡಿ ಬ್ಯೂಟೀಶ್ಯನ್ ಅಸೋಸಿ ಯೇಶನ್ ಜಿಲ್ಲಾ ಸಮ್ಮೇಳನ ರಾಜ್ಯ ಸರಕಾರವನ್ನು ಒತ್ತಾಯಿಸಿದೆ. ತರಬೇತಿ, ಲೈಸನ್ಸ್ ಇಲ್ಲದೆ ಈ ರಂಗದಲ್ಲಿ ಕಾರ್ಯಾ ಚರಿಸುವವರಿಗೆ ನಿಯಂತ್ರಣ ಹೇರಬೇ ಕೆಂದೂ ಸಮ್ಮೇಳನ ಒತ್ತಾಯಿಸಿದೆ. ಕುಂಬಳೆಯಲ್ಲಿ ನಡೆದ ಸಮ್ಮೇಳನವನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ನೆರಿನ್ ಜೋನ್ಸನ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷೆ ಸುನಿತ ಕುಲಾಲ್ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಪೂರ್ಣಿಮ, ಕೆಎಸ್‌ಬಿಎ ರಾಜ್ಯ ಕಾರ್ಯದರ್ಶಿ ಪಿ.ಕೆ.ಮಧು, ರಾಜ್ಯ ಅಧ್ಯಕ್ಷ ಶ್ಯಾಮ ನಾಯರ್,ಯೋಗಿತ ರಾಣಿ, ರೇವತಿ,  …