ಶಾಲೆಯಲ್ಲಿ ಆಹಾರ ತಯಾರಿಸುತ್ತಿದ್ದಾಗ ಬೆಂಕಿ ತಗಲಿ ಗಾಯಗೊಂಡ ಅಡುಗೆ ಕಾರ್ಮಿಕೆ ಮೃತ್ಯು

ಉಪ್ಪಳ: ಶಾಲೆಯಲ್ಲಿ ಆಹಾರ ತಯಾರಿಸುತ್ತಿದ್ದಾಗ ಸ್ಟವ್‌ನಿಂದ ದೇಹಕ್ಕೆ ಬೆಂಕಿ ತಗಲಿ ಗಂಭೀರ ಸುಟ್ಟು ಗಾಯಗೊಂಡ ಅಡುಗೆ ಕಾರ್ಮಿಕೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟರು. ಬಂಗ್ರಮಂಜೇಶ್ವರ  ಸರಕಾರಿ ಶಾಲೆಯ ಅಡುಗೆ ಕಾರ್ಮಿಕೆಯಾದ ಉದ್ಯಾವರ ಮಾಡ ನಿವಾಸಿ ಜಯ (56) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಧ್ಯೆ ನಿಧನ ಸಂಭವಿಸಿದೆ.  ಡಿಸೆಂಬರ್ 16ರಂದು ಬೆಳಿಗ್ಗೆ 11 ಗಂಟೆ ವೇಳೆ ದುರ್ಘಟನೆ ಸಂಭವಿಸಿತ್ತು. ಶಾಲೆಯ ಅಡುಗೆ ಕೋಣೆಯಲ್ಲಿ ಆಹಾರ ತಯಾರಿಸು ತ್ತಿದ್ದಾಗ ಗ್ಯಾಸ್ ಸ್ಟವ್‌ನಿಂದ ಸೀರೆಗೆ …

ಅಂಗಡಿಗೆ ಹಾನಿಗೈದು ವ್ಯಾಪಾರಿ, ಸಹೋದರನಿಗೆ ಹಲ್ಲೆ: 4 ಮಂದಿ ಬಂಧನ

ಕುಂಬಳೆ: ಕೇಳಿದ ಸಾಮಾನು ನೀಡಿಲ್ಲವೆಂಬ ದ್ವೇಷದಿಂದ ಅಂಗಡಿಗೆ ಹಾನಿಗೈದ ಪ್ರಕರಣದಲ್ಲಿ  ತಂದೆ, ಮಕ್ಕಳ ಸಹಿತ ನಾಲ್ಕು ಮಂದಿ ವಿರುದ್ಧ ಹತ್ಯೆ ಯತ್ನ ಕೇಸು ದಾಖಲಿಸಿ ಅವರನ್ನು  ಬಂಧಿಸಲಾಗಿದೆ. ಪೇರಾಲ್ ನಿವಾಸಿ ಸದಾಶಿವ (48), ಮಕ್ಕಳಾದ ಶ್ರವಣ್‌ರಾಜ್ (21) ಸುದರ್ಶನ್ (25), ಸಂಬಂಧಿಕ ಶರತ್ ಕುಮಾರ್ (26) ಎಂಬಿವರನ್ನು ಕುಂಬಳೆ ಎಸ್‌ಐ ಕೆ. ಶ್ರೀಜೇಶ್ ಹಾಗೂ ತಂಡ ಸೆರೆಹಿಡಿದಿದೆ.  ಕಳೆದ ಶನಿವಾರ ಸಂಜೆ 7.30ರ ವೇಳೆ ಮೊಗ್ರಾಲ್ ಪೇರಾಲ್‌ನ ಸಿ.ಎಂ. ಸ್ಟೋರ್ಸ್ ಎಂಬ ಅಂಗಡಿಯಲ್ಲಿ ಆರೋಪಿಗಳು  ಹಾನಿ ಗೊಳಿಸಿದ್ದಾರೆಂದು …

ಶಬರಿಮಲೆ ಚಿನ್ನಕಳವು ಪ್ರಕರಣ ತನಿಖೆ ಪೂರ್ತಿಗೊಳಿಸಲು 17ರಂದು ಅಂತಿಮ ಗಡು

ತಿರುವನಂತಪುರ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ತನಿಖೆಯನ್ನು ಈ ತಿಂಗಳ 17ರೊಳ ಗಾಗಿ ಪೂರ್ತಿಗೊಳಿಸುವಂತೆ ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ)ಗೆ ಕೇರಳ ಹೈಕೋರ್ಟ್ ನಿರ್ದೇಶ ನೀಡಿದೆ. ಇದರಂತೆ ಈ ಪ್ರಕರಣದ ಬಗ್ಗೆ ಈ ತನಕ ನಡೆಸಲಾದ ಎಲ್ಲಾ ತನಿಖಾ ವರದಿಯನ್ನು ಎಸ್‌ಐಟಿ ಇಂದು ಹೈಕೋರ್ಟ್‌ನ ದೇವಸ್ವಂ (ಮುಜರಾಯಿ)ಪೀಠಕ್ಕೆ ಸಲ್ಲಿಸಲಿದೆ.  ಶಬರಿಮಲೆ ಕ್ಷೇತ್ರ ಕಳವು ಪ್ರಕರಣದ ತನಿಖೆ ಹೈಕೋರ್ಟ್‌ನ ನೇರ ಮೇಲ್ನೋಟದಲ್ಲೇ ಈಗ ನಡೆಯುತ್ತಿದೆ. ಇದರಂತೆ ಎಸ್.ಪಿ. ಶಶಿಧರನ್ ನೇತೃತ್ವದ ಎಸ್‌ಐಟಿ …

ಅನಂತಪುರ ಕೈಗಾರಿಕಾ  ಸಂಸ್ಥೆಯ ಕಾರ್ಮಿಕ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಇಲ್ಲಿಗೆ ಸಮೀಪದ ಅನಂತಪುರ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ಕಾರ್ಯವೆಸಗುತ್ತಿರುವ  ಕಾರ್ಖಾನೆ ಯೊಂದರ ಸುಪರ್‌ವೈಸರ್ ಅವರು ವಾಸಿಸುತ್ತಿದ್ದ ಕೊಠಡಿಯೊಳಗೆ  ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಅನಂತಪುರ ಕೈಗಾರಿಕಾ ಎಸ್ಟೇಟ್‌ನಲ್ಲಿ  ಕಾರ್ಯವೆಸಗುತ್ತಿರುವ ಸ್ಟಾಂಡರ್ಡ್ ಗ್ರೀನ್ ಎನರ್ಜಿ ಎಂಬ ಕಾರ್ಖಾನೆಯ ಕಾರ್ಮಿಕ ಒಡಿಸ್ಸಾ ಮುಂಡ  ಖಾಮಾರಿ ನಿವಾಸಿ ಗ್ರಾಟಸ್ ಎಂಬವರ  ಪುತ್ರ  ಸ್ಯಾಮುವೆಲ್  ಟೋಪೋ (43)  ಈ ಕಾರ್ಖಾನೆಯ  ಕಾರ್ಮಿಕರು ವಾಸಿಸುತ್ತಿರುವ ಕೊಠಡಿಯಲ್ಲಿ ನಿನ್ನೆ  ಸಂಜೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅದನ್ನು ಕಂಡ ಪ್ರಸ್ತುತ ಕಾರ್ಖಾನೆಯ ಸುಪರ್ ವೈಸ್ ಶೇಣಿ …

ಕುಸಿದುಬಿದ್ದು ಮೃತ್ಯು

ಕಾಸರಗೋಡು: ಮೊಗ್ರಾಲ್ ಪುತ್ತೂರು ಮಜಲ್ ನಿವಾಸಿ ಎ. ಸಂಜೀವ(64) ನಿಧನಹೊಂದಿದರು. ಇಂದು ಬೆಳಿಗ್ಗೆ ಬಾತ್‌ರೂಂನಲ್ಲಿ ಕುಸಿದು ಬಿದ್ದ ಇವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದ್ದರೂ ಅಷ್ಟರೊಳಗೆ ನಿಧನ ಸಂಭವಿಸಿತ್ತು. ಇವರು ಸಿಪಿಸಿಆರ್‌ಐಯಲ್ಲಿ ನೌಕರನಾಗಿ ಸೇವೆ ಸಲ್ಲಿಸಿದ್ದರು. ಕುಂಟ್ಯಾನ-ಕುಂಭ ದಂಪತಿ ಪುತ್ರನಾದ  ಮೃತರು ಪತ್ನಿ ಉಷ, ಪುತ್ರಸುಜನ್‌ಪಾಲ್, ಸೊಸೆ ಶಾಲಿನಿ, ಸಹೋದರ ರಾಮಚಂದ್ರ, ಸಹೋದರಿ ನಿರ್ಮಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇತರ ಸಹೋದರರಾದ ನಾರಾಯಣ, ಶಂಕರ, ರಾಮ ಎಂಬವರುಈ ಹಿಂದೆ ನಿಧನರಾಗಿದ್ದಾರೆ.

ಸಿಪಿಎಂ, ಸಿಐಟಿಯು ನೇತಾರ ಕೆ. ಭಾಸ್ಕರನ್ ನಿಧನ

ಕಾಸರಗೋಡು: ಸಿಪಿಎಂ, ಸಿಐಟಿಯು ನೇತಾರನಾಗಿದ್ದ ನುಳ್ಳಿಪ್ಪಾಡಿ ಚೆನ್ನಿಕರೆ ದಿನೇಶ್ ಕೃಷ್ಣ ಭವನದ ಕೆ. ಭಾಸ್ಕರನ್ (72) ನಿಧನಹೊಂದಿದರು. ಅಸೌಖ್ಯ ಬಾಧಿಸಿದ್ದ ಇವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ ನಿಧನ ಸಂಭವಿಸಿದೆ. ಬೇಡಗ ಕೊಳತ್ತೂರು ಕಾಣಿಯಡ್ಕದ ದಿ| ಕೊರಗನ್-ಕುಂಞಮ್ಮಾರಮ್ಮ ದಂಪತಿಯ ಪುತ್ರನಾದ ಭಾಸ್ಕರನ್ ಬೀಡಿ ಕಾರ್ಮಿಕನಾಗಿ ರಾಜಕೀಯ ರಂಗಕ್ಕೆ ತಲುಪಿದ್ದರು. ಸಿಪಿಎಂ ಏರಿಯಾ ಕಮಿಟಿ ಸದಸ್ಯ, ಲೋಕಲ್ ಸೆಕ್ರೆಟರಿ, ಸಿಐಟಿಯು ಏರಿಯಾ ಸೆಕ್ರೆಟರಿ, ಜಿಲ್ಲಾ  ಕಾರ್ಯದರ್ಶಿ ಉಪಾಧ್ಯಕ್ಷ, ಬೀಡಿ ಕಾರ್ಮಿಕ ಯೂನಿಯನ್ ತಾಲೂಕು ಸೆಕ್ರೆಟರಿ, ರಾಜ್ಯಸಮಿತಿ ಸದಸ್ಯ, …

ಉಪ್ಪಳ ಶ್ರೀ ಭಗವತೀ ಕ್ಷೇತ್ರದ ಕಾರ್ನವರ್ ನಿಧನ

ಉಪ್ಪಳ: ಉಪ್ಪಳ ಶ್ರೀ ಭಗವತೀ ಕ್ಷೇತ್ರದ ಕಾರ್ನವರ್ ರಮೇಶ (ರಾಮಪ್ಪ) (38) ಅಲ್ಪ ಕಾಲದ ಅಸೌಖ್ಯದಿಂದ ಭಾನುವಾರ ಮಧ್ಯಾಹ್ನ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಇವರು ಕಳೆದ ಐದು ವರ್ಷಗಳಿಂದ ಶ್ರೀ ಕ್ಷೇತ್ರದಲ್ಲಿ ಕಾರ್ನವರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಮೂಲತ: ಮಂಗಲ್ಪಾಡಿ ಪ್ರತಾಪನಗರ ನಿವಾಸಿಯಾಗಿದ್ದು, ಮುಳಿಂಜ ಭಂಡಾರ ತರವಾಡು ಮನೆಯಲ್ಲಿ ವಾಸವಾಗಿದ್ದರು. ಮೃತರು ಪತ್ನಿ ಕೃಪಾ, ಪುತ್ರಿ ಮನಸ್ವಿ, ಸಹೋದರ ಗಣೇಶ, ಸಹೋದರಿ ರಮ್ಯ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಪ್ರತಾಪನಗರದ …

ಜಿಲ್ಲೆಯಲ್ಲಿ ಸುರಕ್ಷಾ ಪ್ರಮಾಣಪತ್ರಗಳಿಲ್ಲದೆ 76  ಶಾಲೆಗಳು ಕಾರ್ಯಾಚರಣೆ

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ 76 ಶಾಲೆಗಳು ಸುರಕ್ಷಾ ಪ್ರಮಾಣಪತ್ರಗಳಿಲ್ಲದೆ ಕಾರ್ಯಾಚರಿಸುತ್ತಿದೆಯೆಂದು ತಿಳಿದುಬಂದಿದೆ. ಇದರಲ್ಲಿ 69 ಸರಕಾರಿ ಶಾಲೆಗಳಾಗಿವೆ. 4 ಐಡೆಡ್, 3 ಅನ್‌ಐಡೆಡ್ ಶಾಲೆಗಳಾಗಿವೆ. ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಜಾಗ್ರತೆ ವಹಿಸಲಾಗುತ್ತಿದೆಯೆಂದು ಅಧಿಕಾರಿಗಳು ತಿಳಿಸುತ್ತಿರುವಾಗಲೇ ಇಷ್ಟೊಂದು ಸಂಖ್ಯೆಯಲ್ಲಿ ಶಾಲೆಗಳು ಜಿಲ್ಲೆಯಲ್ಲಿ ಸುರಕ್ಷತೆಯಿಲ್ಲದೆ ಕಾರ್ಯಾಚರಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದರಿಂದ ಈ ಶಾಲೆಗಳನ್ನು ತೆರವುಗೊಳಿಸಬೇಕೆಂದು ಶಿಫಾರಸ್ಸು ಮಾಡಲಾಗಿದೆ. ಕೆಲವೆಡೆ ಜೀರ್ಣಿಸಿದ ಕಟ್ಟಡಗಳ ಸಮೀಪ ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಆದ್ದರಿಂದ ಹೊಸ ಕಟ್ಟಡಗಳಿಗೂ ಸುರಕ್ಷಾ ಪ್ರಮಾಣಪತ್ರ ಲಭಿಸಿಲ್ಲವೆಂದು ತಿಳಿದುಬಂದಿದೆ. ಶಾಲೆಗಳು ಜೂನ್‌ನಲ್ಲಿ …

ಮಗಳ ಮನೆಯಲ್ಲಿ ತಾಯಿ ಕುಸಿದು ಬಿದ್ದು ಮೃತ್ಯು

ಕುಂಬಳೆ: ಕೊಯಿಪ್ಪಾಡಿಯಲ್ಲಿ ರುವ ಮಗಳ ಮನೆಗೆ ಬಂದಿದ್ದ ತಾಯಿ ಕುಸಿದು ಬಿದ್ದ್ದು ಮೃತಪಟ್ಟ ಘಟನೆ ನಡೆದಿದೆ. ಪಳಯಂಗಾಡಿ ನಿವಾಸಿ ಬಾಲಕೃಷ್ಣನ್ ಎಂಬವರ ಪತ್ನಿ ಶಾಂತ (68) ಮೃತಪಟ್ಟವರು. ನಿನ್ನೆ ಬೆಳಿಗ್ಗೆ  ಕೊಯಿಪ್ಪಾಡಿಯಲ್ಲಿರುವ  ಮಗಳು ಬಬಿತರ ಮನೆಯಲ್ಲಿ ಶಾಂತ ಕುಸಿದುಬಿದ್ದಿದ್ದರು. ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಅಷ್ಟರೊಳಗೆ ನಿಧನ ಸಂಭವಿಸಿತ್ತು.  ಮೃತರು ಇತರ ಮಕ್ಕಳಾದ  ಮನೋಜ್, ಮಹೇಶ್, ಮಣಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ದೇಶದಾದ್ಯಂತ 27ರಂದು ಬ್ಯಾಂಕ್ ಮುಷ್ಕರ

ದೆಹಲಿ: ಈ ತಿಂಗಳ 27ರಂದು ಬ್ಯಾಂಕ್ ನೌಕರರು ದೇಶವ್ಯಾಪಕ ಕೆಲಸ ಸ್ಥಗಿತ ಮುಷ್ಕರಕ್ಕೆ ಆಹ್ವಾನ ನೀಡಿದ್ದಾರೆ. ಬ್ಯಾಂಕ್‌ಗಳ ಚಟುವಟಿಕೆ ದಿನವನ್ನು ವಾರದಲ್ಲಿ 5ಆಗಿ ನಿಗದಿ ಪಡಿಸಬೇಕು ಎಂದು ಆಗ್ರಹಿಸಿ ಯುನೈಟೆಡ್ ಫಾರಂ ಆಫ್ ಬ್ಯಾಂಕ್ ಯೂನಿಯನ್ಸ್ ಕೆಲಸ ಸ್ಥಗಿತ ಮುಷ್ಕರಕ್ಕೆ ಆಹ್ವಾನ ನೀಡಿರುವುದು. ಬ್ಯಾಂಕ್ ನೌಕರರ ದೇಶದ ೯ನೇ ಯೂನಿಯನ್‌ಗಳ ಜಂಟಿ ಸಂಘಟನೆ ಕೆಲಸ ಸ್ಥಗಿತ ಮುಷ್ಕರಕ್ಕೆ ಆಹ್ವಾನ ನೀಡಿರುವುದು. 2023ರಲ್ಲಿ ಈ ಬಗ್ಗೆ ಬ್ಯಾಂಕ್ ಮೆನೇಜ್‌ಮೆಂಟ್ ತೀರ್ಮಾನಿಸಿತ್ತಾದರೂ ಕ್ರಮ ಉಂಟಾಗದೆ ಇರುವುದನ್ನು ಪ್ರತಿಭಟಿಸಿ ಕೆಲಸ ಸ್ಥಗಿತ …