ಸಾಕ್ಷ್ಯಬದಲಿಸಿದ ಪ್ರಕರಣ : ಕೇರಳದ ಶಾಸಕರು ಅನರ್ಹಗೊಳ್ಳುತ್ತಿರುವುದು ರಾಜ್ಯದ ಇತಿಹಾಸದಲ್ಲೇ ಇದು ಪ್ರಥಮ

ತಿರುವನಂತಪುರ: ಮಾದಕದ್ರವ್ಯ ಪ್ರಕರಣದ ಆರೋಪಿಯಾಗಿರುವ ವಿದೇಶಿ ಪ್ರಜೆಯನ್ನು ಶಿಕ್ಷೆಯಿಂದ ರಕ್ಷಿಸಲು ಸಾಕ್ಷ್ಯ ಬದಲಿಸಿದ ಪ್ರಕರಣದಲ್ಲಿ ತಿರುವನಂತಪುರ ಶಾಸಕರು ಹಾಗೂ ಮಾಜಿ ಸಾರಿಗೆ ಸಚಿವರೂ ಆಗಿರುವ  ಆಂಟನಿ ರಾಜು ಶಿಕ್ಷೆಗೊಳಗಾಗಿ ಅದರಿಂದಾಗಿ ತಮ್ಮ ಶಾಸಕ ಸ್ಥಾನದಿಂದ ಅನರ್ಹಗೊಂಡಿ ದ್ದು, ಹೀಗೆ ಶಾಸಕರೋರ್ವರು ಶಿಕ್ಷೆಗೊಳಗಾಗಿ ಆ ಸ್ಥಾನದಿಂದ ಅನರ್ಹಗೊಂಡಿರುವುದು ಕೇರಳದ  ರಾಜಕೀಯ ಇತಿಹಾಸದಲ್ಲೇ ಇದು ಪ್ರಥಮವಾಗಿದೆ. 1990 ಎಪ್ರಿಲ್ 4ರಂದು ಆಸ್ಟ್ರೇಲಿಯ ಪ್ರಜೆಯಾಗಿರುವ ಆಂಡ್ರೂ ಸಾಲ್ವಡಾರ್ ಎಂಬಾತನನ್ನು  ಮಾದಕದ್ರವ್ಯವಾದ 61 ಗ್ರಾಂ ಹ್ಯಾಶಿಶ್ ಆಯಿಲ್‌ನೊಂದಿಗೆ ತಿರುವನಂತಪುರ ವಿಮಾನ ನಿಲ್ದಾಣದಿಂದ ವಲಿಯತ್ತೂರು …

ಪೆರಡಾಲ ವಾರ್ಡ್ ಬಿಜೆಪಿ ಕಾರ್ಯಕರ್ತರ ಸಮಾವೇಶ

ಬದಿಯಡ್ಕ: ಪಂಚಾಯತ್‌ನ 13ನೇ ವಾರ್ಡ್ ಬಿಜೆಪಿ ಕಾರ್ಯಕರ್ತರ ಸಮಾವೇಶ ಬೀಜಂತಡ್ಕ ಪರಿಸರದಲ್ಲಿ ಜರಗಿತು. ನಾರಾಯಣ ಮಣಿಯಾಣಿ ಅಧ್ಯಕ್ಷತೆ ವಹಿಸಿದರು. ಪಂಚಾಯತ್ ಅಧ್ಯಕ್ಷ ಡಿ. ಶಂಕರ ಉದ್ಘಾಟಿಸಿದರು. ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ, ಬ್ಲೋಕ್ ಪಂ. ಸದಸ್ಯ ಮಹೇಶ್ ವಳಕುಂಜ, ಜಯರಾಮ್ ಚೆಟ್ಟಿಯಾರ್, ವಾರ್ಡ್ ಸಮಿತಿ ಅಧ್ಯಕ್ಷ ನಾರಾಯಣ, ಜಿಲ್ಲಾ ಪಂಚಾಯತ್ ಸದಸ್ಯ ರಾಮಪ್ಪ ಮಂಜೇಶ್ವರ, ಪಂ. ಸದಸ್ಯರಾದ ಶ್ಯಾಮ್ ಪ್ರಸಾದ್ ಸರಳಿ, ಮಧುಸೂದನ್, ಅವಿನಾಶ್ ಉಪಸ್ಥಿತರಿದ್ದರು. ಗೆದ್ದ ಅಭ್ಯರ್ಥಿಗಳನ್ನು ಅಭಿನಂದಿಸಲಾಯಿತು. ವಾರ್ಡ್ ಪ್ರತಿನಿಧಿ ಅಶ್ವಿನಿ ಕೆ.ಎಂ. ಅವರ  ಕ್ಯಾಲೆಂಡರ್  …

ಸ್ತ್ರೀ ಸುರಕ್ಷಾ ಪಿಂಚಣಿ: ಅರ್ಜಿ ಭರ್ತಿಗೊಳಿಸಲು ಬಡವರಿಂದ ಅಧಿಕ ಮೊತ್ತ ವಸೂಲು ಮಾಡುತ್ತಿರುವುದಾಗಿ ಸಿಪಿಎಂ ಆರೋಪ

ಮೀಯಪದವು: ರಾಜ್ಯದ ಎಡರಂಗ ಸರಕಾರ ಘೋಷಿಸಿದ 36ವರ್ಷದಿಂದ 60 ವರ್ಷದವರೆಗಿನ  ಮಹಿಳೆಯರಿಗೆ ಸ್ತ್ರೀ ಸುರಕ್ಷಾ ಯೋಜನೆ ಪ್ರಕಾರ ತಿಂಗಳಿಗೆ 1000 ರೂ. ಲಭಿಸುವುದಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲಾಗುತ್ತಿದೆ. ಈ ಅರ್ಜಿ ಸಲ್ಲಿಕೆಗೆ ಮೀಯಪದವಿನಲ್ಲಿರುವ ಕೆಲವು ಆನ್‌ಲೈನ್ ಸಂಸ್ಥೆಗಳ ಮಾಲಿಕರು 100ರಿಂದ 150 ರೂ.ವರೆಗೆ ವಸೂಲಿ ಮಾಡುತ್ತಿರುವುದಾಗಿ ಸಿಪಿಎಂ ಆರೋಪಿಸಿದೆ. ಈ ಬಗ್ಗೆ ಅರ್ಜಿ ಸಲ್ಲಿಸಲು ತಲುಪಿದ ಮಹಿಳೆಯರು ಸಿಪಿಎಂಗೆ ದೂರಿರುವುದಾಗಿಯೂ ಮುಖಂಡರು ತಿಳಿಸಿದ್ದಾರೆ. ಅರ್ಜಿ ಭರ್ತಿಗೊಳಿಸಿ ನೀಡಲು ಅಧಿಕ ಮೊತ್ತ ವಸೂಲು ಮಾಡುವವರ ವಿರುದ್ಧ ಸಂಬಂಧಪಟ್ಟ …

ಪಂಜ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಭಜನೋತ್ಸವ ಸಮಾಪ್ತಿ

ಮಂಗಲ್ಪಾಡಿ: ಪಂಜ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ೨೭ನೇ ವರ್ಷದ ಶ್ರೀ ಅಯ್ಯಪ್ಪ ಭಜನೋತ್ಸವ ಸಮಾಪ್ತಿಗೊಂಡಿತು.  ಗುರುಸ್ವಾಮಿ ಈಶ್ವರ ಪಂಜ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಈ ವೇಳೆ ಮಂದಿರ ಸಮಿತಿ ಪದಾಧಿಕಾರಿಗಳಾದ ಕೇಶವ ಪಂಜ, ಹೇಮರಾಜ ಶೆಟ್ಟಿ ಪಂಜ, ರಾಮ ಚಂದ್ರ ಬಲ್ಲಾಳ್, ರವೀಂದ್ರ ಪಂಜ ಉಪಸ್ಥಿತರಿದ್ದರು. ಮಧ್ಯಾಹ್ನ ಮಹಾ ಪೂಜೆ, ಅನ್ನ ಸಂತರ್ಪಣೆ ನಡೆಯಿತು. ಸಂಜೆ  ಭಜನೋತ್ಸವ ಮಂಗಳಾರತಿ,  ಕುಣಿತ ಭಜನೆ,  ಶರಣು ಕರೆಯುವುದು,  ನೃತ್ಯ ವೈವಿದ್ಯ,  ಭಕ್ತಿಭಾವ ಸಂಗೀತ ನಡೆಯಿತು.

ಗಡಿನಾಡ ಸಾಂಸ್ಕೃತಿಕ ವಿನಿಮಯ ಪೂರ್ವಭಾವಿ ಸಭೆ, ಕನ್ನಡ ಪತ್ರಕರ್ತರ ಸಂಘದ ಮಹಾಸಭೆ

ಬದಿಯಡ್ಕ: ನಮ್ಮ ನಾಡಿನ ಪ್ರಾಚೀನ ಪರಂಪರೆಯಲ್ಲಿ ಮೂಡಿ ಬಂದ ಕಲಾ ಪ್ರಕಾರಗಳ ಸಂರಕ್ಷಣೆಗೆ ಪ್ರಯತ್ನಗಳನ್ನು ಮಾಡಬೇಕು, ನಮ್ಮ ಯೋಚನೆ, ಯೋಜನೆಗಳು ದೀರ್ಘಕಾಲೀನ ದೃಷ್ಟಿಯೊಂದಿಗೆ ಕಾರ್ಯಾನುಷ್ಠಾನಕ್ಕೆ ಒಳಗೊಳ್ಳುವಂತಿರಬೇಕು ಎಂದು ರಾಜ್ಯ ಜೀವವೈವಿಧ್ಯ ಮಂಡಳಿಯ ನಿರ್ದೇಶಕ, ಡಿವೈಎಸ್‌ಪಿ ಡಾ. ಎ. ಬಾಲಕೃಷ್ಣನ್ ಕರೆ ನೀಡಿದರು. ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿ ನಾಡ ಘಟಕ ಹಾಗೂ ಬೇಕಲದ ಕಣ್ಣನ್ ಪಾಟಾಳಿ ಸ್ಮಾರಕ ಟ್ರಸ್ಟ್ ಆಶ್ರಯದಲ್ಲಿ ಫೆ. ೧ರಂದು ಬೇಕಲದಲ್ಲಿ ನಡೆಯಲಿರುವ ಸಾಂಸ್ಕೃತಿಕ ಜಾನಪದ ವಿನಿಮಯದ ಅಂಗವಾಗಿ ಬಳ್ಳಪದವು ನಾರಾಯಣೀಯಂ ಸಂಗೀತ …

ಹಿಂದೂ ಸಾಮಂತ ಅರಸು ಬಲ್ಲಾಳ ಸಮಾಜ ಸೇವಾಸಂಘ ಅಡ್ವಳ ವಲಯ ವಾರ್ಷಿಕ ಮಹಾಸಭೆ

ಮುಳ್ಳೇರಿಯ: ಹಿಂದೂ ಸಾಮಂತ ಅರಸು ಬಲ್ಲಾಳ ಸಮಾಜ ಸೇವಾ ಸಂಘ ಅಡ್ವಳ ವಲಯ ಇದರ  ವಾರ್ಷಿಕ ಮಹಾಸಭೆ ನಿನ್ನೆ ಅಡ್ವಳಬೀಡಿನಲ್ಲಿ ಜರಗಿತು. ಕೇಂದ್ರ ಸಮಿತಿ ಅಧ್ಯಕ್ಷ ಎ.ಬಿ. ಗಂಗಾಧರ ಬಲ್ಲಾಳ್ ಉದ್ಘಾಟಿಸಿದರು. ವಲಯ ಸಮಿತಿ ಅಧ್ಯಕ್ಷ ಮರಿಯಯ್ಯ ಬಲ್ಲಾಳ್ ಅಧ್ಯಕ್ಷತೆ ವಹಿಸಿದರು. ವಲಯ ಕಾರ್ಯದರ್ಶಿ ಎ.ಬಿ. ಮಧುಸೂದನ ಬಲ್ಲಾಳ್ ವರದಿ ಮಂಡಿಸಿದರು. ವಲಯ ಸಮಿತಿ ಗೌರವಾಧ್ಯಕ್ಷರಾದ ಬಾಲಕೃಷ್ಣ ಬಲ್ಲಾಳ್ ಅಡ್ವಳಬೀಡು, ಮರಿಯಯ್ಯ ಬಲ್ಲಾಳ್ ಅಡ್ವಳಬೀಡು, ಕೇಂದ್ರ ಸಮಿತಿ ಕಾರ್ಯದರ್ಶಿ ಜಗದೀಶ್ ಬಲ್ಲಾಳ್, ಮಹಿಳಾ ಸಂಘ ಕಾರ್ಯದರ್ಶಿ ಶ್ಯಾಮಲ …

ಎಕೆಪಿಎ ಕಾಸರಗೋಡು ವೆಸ್ಟ್ ಘಟಕದಿಂದ ಹೊಸ ವರ್ಷಾಚರಣೆ

ಕಾಸರಗೋಡು: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿ ಯೇಷನ್ ಕಾಸರಗೋಡು ವೆಸ್ಟ್ ಘಟಕದ ವತಿಯಿಂದ ಹೊಸ ವರ್ಷಾಚರಣೆ ನಡೆಯಿತು. ಘಟಕದ ಅಧ್ಯಕ್ಷ ವಸಂತ ಕೆರೆಮನೆ ಅಧ್ಯಕ್ಷತೆ ವಹಿಸಿದರು. ಛಾಯಾಚಿತ್ರ ಸ್ಪರ್ಧೆ ಯಲ್ಲಿ ವಿಜೇತರಿಗೆ ಹಾಗೂ ಭಾಗ ವಹಿಸಿದವರಿಗೆ ಬಹುಮಾನ, ಪ್ರಮಾಣಪತ್ರ ನೀಡಲಾಯಿತು. ಪ್ರದೀಪ್ ಬೇಕಲ್ ಮುಖ್ಯ ಅತಿಥಿ ಯಾಗಿ ಭಾಗವಹಿಸಿದರು. ಹಿರಿಯ ಛಾಯಾಗ್ರಾಹಕ ಗೋವಿಂದನ್ ಚಂಗರಕ್ಕಾಡ್‌ರನ್ನು ಅಭಿನಂದಿಸ ಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದ ಮನೀಶ್‌ರಿಗೆ ದಿನೇಶ್  ಸ್ಮರಣಿಕೆ ನೀಡಿದರು. ವಲಯ ಅಧ್ಯಕ್ಷ ವಾಮನ್ ಕುಮಾರ್ ಮಾತನಾಡಿದರು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ …

ಮಿಂಚಿಪದವು ಕ್ಷೇತ್ರ ಬ್ರಹ್ಮಕಲಶೋತ್ಸವ: ಸಮಿತಿ ಪದಾಧಿಕಾರಿಗಳಿಂದ ಡಾ. ಡಿ. ವೀರೇಂದ್ರ ಹೆಗಡೆ ಭೇಟಿ

ಮಿಂಚಿಪದವು: ಇಲ್ಲಿನ ಶ್ರೀ ಕಾವೇರಮ್ಮ ಮಹಾಲಿಂಗೇಶ್ವರ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವ ಫೆಬ್ರವರಿ 22ರಿಂದ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸಮಿತಿ ಪದಾಧಿಕಾರಿಗಳು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಇಂದು ಬೆಳಿಗ್ಗೆ  ಭೇಟಿ ಮಾಡಿದ ತಂಡದಲ್ಲಿ ಸೇವಾ ಸಮಿತಿ ಅಧ್ಯಕ್ಷ  ಸದಾನಂದ ಅಡ್ಕ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಶಿವರಾಮ, ಕಾರ್ಯದರ್ಶಿ ಜಯಕರ, ಕೋಶಾಧಿಕಾರಿ ನಾರಾಯಣ ಕೇಕಡ್ಕ, ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ, ಸಮಿತಿ ಸದಸ್ಯರಾದ ಗೋಕುಲ ಯಾದವ್, …