ಪುತ್ರ ಶಾಲೆಯಿಂದ ಮನೆಗೆ ತಲುಪಿದಾಗ ತಾಯಿ ರಕ್ತದ ಮಡುವಿನಲ್ಲಿ: ತಲೆಗೆ ಬಡಿದು ಕೊಲೆಗೈದ ಪತಿ ಪರಾರಿ

ಇಡುಕ್ಕಿ: ಉಪ್ಪುತ್ತರದಲ್ಲಿ ಪತಿ ಪತ್ನಿಯನ್ನು ತಲೆಗೆ ಬಡಿದು ಕೊಲೆಗೈದ ಘಟನೆ ನಡೆದಿದೆ. ಉಪ್ಪುತ್ತರ ಮಲಯಕ್ಕಾವಿಲ್ ನಿವಾಸಿ  ರಜನಿ (37) ಕೊಲೆಗೀಡಾದ ಯುವತಿ.  ಪತಿ ಸುಬಿನ್‌ಗಾಗಿ ಪೊಲೀಸರು ತನಿಖೆ ಆರಂಭಿಸಿದ್ದು, ಈತ ಮಲೆಮರೆಸಿಕೊಂಡಿದ್ದಾ ನೆನ್ನಲಾಗಿದೆ.  ಪತಿ-ಪತ್ನಿಯ ಮಧ್ಯೆ ಪ್ರತಿದಿನ ವಾಗ್ವಾದ ಉಂಟಾಗುತ್ತಿತ್ತೆಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ಉಪ್ಪುತ್ತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಒಂದು ತಿಂಗಳ ಹಿಂದೆ ಇವರಿಬ್ಬರು ಒಂದೇ ಮನೆಯಲ್ಲಿ ವಾಸ ಆರಂಭಿಸಿದ್ದರು. ಮಂಗಳವಾರ ಇವರ ಸಣ್ಣ ಮಗ ಶಾಲೆಯಿಂದ ಬಂದಾಗ ರಜನಿ ರಕ್ತದ ಮಡುವಿನಲ್ಲಿ …

ಅಸೌಖ್ಯ:ನಿಧನ

 ಮಂಗಲ್ಪಾಡಿ: ಪ್ರತಾಪನಗರ ನಿವಾಸಿ ಮೋಹಿನಿ (48) ನಿಧನ ಹೊಂದಿದರು. ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಇವರಿಗೆ ನಿನ್ನೆ ಬೆಳಿಗ್ಗೆ ಮನೆಂiiಲ್ಲಿ ಅಸೌಖ್ಯ ಉಲ್ಭಣಗೊಂಡಿದ್ದು, ಮಂಗಲ್ಪಾಡಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನ ಹೊಂದಿದ್ದಾರೆ. ಅವಿವಾಹಿತರಾದ ಇವರು ದಿವಂಗತರಾದ  ಜಾನಕಿ-ಕುಟ್ಟಿ ಮೇಸ್ತ್ರಿ ದಂಪತಿ ಪುತ್ರಿಯಾಗಿದ್ದಾರೆ. ಸಹೋದರಿ ಸುಹಾಸಿನಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿ ದ್ದಾರೆ. ಸಹೋದರಿಯರಾದ ಬೇಬಿ, ಲಲಿತಾ ಈ ಹಿಂದೆ ನಿಧನರಾಗಿದ್ದಾರೆ.

ಮಾಜಿ ಸಚಿವ ಇಬ್ರಾಹಿಂ ಕುಂಞಿ ನಿಧನ

ಕೊಚ್ಚಿ: ಮಾಜಿ ಸಚಿವಹಾಗೂ ಮುಸ್ಲಿಂ ಲೀಗ್‌ನ ರಾಜ್ಯ ಉಪಾಧ್ಯಕ್ಷ ರಾಗಿರುವ ವಿ.ಕೆ.ಇಬ್ರಾಹಿಂ ಕುಂಞಿ (73)  ಅಸೌಖ್ಯದಿಂದ ಕೊಚ್ಚಿಯ ಪಾಲಿಯೇಟಿವ್ ಕೇರ್ ಆಸ್ಪತ್ರೆಯಲ್ಲಿ ನಿನ್ನೆ ನಿಧನಹೊಂದಿದರು. ಇಬ್ರಾಹಿಂ ಕುಂಞಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಗೊಂಡಿ ದ್ದರು. ಮುಸ್ಲಿಂ ಲೀಗ್ ನೇತಾರ ಪಿ.ಕೆ. ಕುಂಞಾಲಿಕುಟ್ಟಿ ಯವರು ೨೦೦೫ರಲ್ಲಿ ತಮ್ಮ ಕೈಗಾರಿಕಾ ಖಾತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ತೆರವುಗೊಂಡ ಆ ಸ್ಥಾನಕ್ಕೆ ಇಬ್ರಾಹಿಂ ಕುಂಞಿಯವರನ್ನು ನೇಮಿಸಲಾಗಿತ್ತು.  ಆಗ ಅವರು ಮಟ್ಟಾಂಚೇರಿಯ ಶಾಸಕರಾಗಿದ್ದರು. ನಂತರ 2011ರಲ್ಲಿ ಕಳಮಶ್ಶೇರಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ …

ಕರ್ನಾಟಕ ಮುಕ್ತ ವಿ.ವಿ ರಿಜಿಸ್ಟ್ರಾರ್ ಪೆರಡಾಲ ಕ್ಷೇತ್ರಕ್ಕೆ ಭೇಟಿ: ಸಹಾಯ ಭರವಸೆ

ಬದಿಯಡ್ಕ: ಜೀರ್ಣೋದ್ಧಾರಗೊ ಳ್ಳುತ್ತಿರುವ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ  ರಿಜಿಸ್ಟ್ರಾರ್ ಪ್ರೊ. ನವೀನ್ ಕುಮಾರ್ ಎಸ್.ಕೆ ಭೇಟಿ ನೀಡಿದರು. ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳಿಗೆ, ಬ್ರಹ್ಮಕಲಶೋತ್ಸವಕ್ಕೆ ಸಹಕಾರ ನೀಡುವುದಾಗಿ ಅವರು ಭರ ವಸೆ ನೀಡಿದರು. ದೇವಳದ ಹೊರಾಂ ಗಣದ ಎದುರುಭಾಗದ ಕಲ್ಲು ಹಾಸುವ ಮತ್ತು ಸುತ್ತಲಿನ ಇಂಟರ್ ಲಾಕ್ ಹಾಕಿಸುವ ವೆಚ್ಚವನ್ನು ಭರಿಸುವುದಾಗಿ ಅವರು ತಿಳಿಸಿದ್ದಾರೆ. ಈ ವೇಳೆ ಆಡಳಿತ ಮಂಡಳಿ ಪದಾಧಿಕಾರಿಗಳು, ಬ್ರಹ್ಮಕಲಶೋತ್ಸವ ಪದಾಧಿಕಾರಿಗಳು ಉಪಸ್ಥಿತರಿದ್ದರು.