ಮಧೂರು ದೇವಸ್ಥಾನ ಸಂದರ್ಶಿಸಿದ ರಾಜ್ಯಪಾಲ ಅರ್ಲೇಕರ್

ಕಾಸರಗೋಡು: ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ನಿನ್ನೆ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಸಂದರ್ಶಿಸಿ ಪ್ರಾರ್ಥನೆ ನಡೆಸಿದರು. ಮಧ್ಯಾಹ್ನ ಪೂಜೆಯ ವೇಳೆ ಶ್ರೀ ಕ್ಷೇತ್ರಕ್ಕೆ ಆಗಮಿಸಿದ ರಾಜ್ಯಪಾಲರು  ವಿಶೇಷ ಪೂಜೆ ನಡೆಸಿದರು. ಮಾತ್ರವಲ್ಲ ದೇವಸ್ಥಾನದ ಇತಿಹಾಸದ ಬಗ್ಗೆಯೂ ಅವರು ಸಂಬಂಧಪಟ್ಟವರಿಂದ ಕೇಳಿ ತಿಳಿದರು. ಇನ್ನು ಮುಂದೆಯೂ ಶ್ರೀ ಕ್ಷೇತ್ರಕ್ಕೆ ಆಗಮಿಸುವುದಾಗಿ ತಿಳಿಸಿ ಹಿಂತಿರುಗಿದರು. ಈ ಹಿಂದೆ ನಡೆದ ಮಧೂರು ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಳ್ಳಲು ರಾಜ್ಯಪಾಲರನ್ನು ಆಹ್ವಾನಿಸಲಾಗಿತ್ತಾದರೂ ಕಾರಣಾಂತರಗಳಿಂದ ಅವರು ಆಗಮಿಸಿರಲಿಲ್ಲ. ಶ್ರೀ ಕ್ಷೇತ್ರದ ಪದಾಧಿಕಾರಿಗಳಾದ …

ಇಮಾಮ್ ಶಾಫಿಇ ಜಲ್ಸ ನಾಳೆಯಿಂದ

ಕುಂಬಳೆ: ಕುಂಬಳೆ ಇಮಾಮ್ ಶಾಫಿಇ ಅಕಾಡೆಮಿಯಲ್ಲಿ ಇಮಾಮ್ ಶಾಫಿಇ ಜಲ್ಸ, ವಾರ್ಷಿಕ ಹರಕೆ, ಖತ್‌ಮುಲ್ ಖುರ್‌ಆನ್ ಸದಸ್ಸ್ ನಾಳೆ ಹಾಗೂ ಶನಿವಾರ ಬದರಿಯ ನಗರ ಇಮಾಮ್ ಶಾಫಿಇ ಕ್ಯಾಂಪಸ್‌ನಲ್ಲಿ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ನಾಳೆ ಬೆಳಿಗ್ಗೆ 9 ಗಂಟೆಗೆ ಖಾಸಿ ಉಸ್ತಾದ್ ಮಖಾಂ ಸಿಯಾರತ್‌ಗೆ ಎಂ.ಪಿ. ಮುಹಮ್ಮದ್ ಸಅದಿ ನೇತೃತ್ವ ನೀಡುವರು. ಅರಬಿ ಹಾಜಿ ಕುಂಬಳೆ ಧ್ವಜಾರೋಹಣಗೈಯ್ಯುವರು. ಖತ್‌ಮುಲ್ ಖುರ್‌ಆನ್ ಸದಸ್ಸ್‌ಗೆ ಮದನಿ ತಂಙಳ್ ಮೊಗ್ರಾಲ್ ನೇತೃತ್ವ ನೀಡುವರು. ಸಂಜೆ 7 ಗಂಟೆಗೆ ಕೆ.ಎಸ್. ಅಲಿ …

ಕೆಎಸ್‌ಟಿಎ ಉಪ್ಪಳ ಯೂನಿಟ್ ಸಮ್ಮೇಳನ

ಉಪ್ಪಳ: ಕೇರಳ ಟೈಲರ್ಸ್ ಅಸೋಸಿ ಯೇಶನ್ ಉಪ್ಪಳ ಯೂನಿಟ್ ಸಮ್ಮೇಳನ ಕೈಕಂಬದಲ್ಲಿರುವ ಪಂಚಮಿ ಹಾಲ್‌ನಲ್ಲಿ ನಡೆಯಿತು. ಯೂನಿಟ್ ಅಧ್ಯಕ್ಷ ದಯಾನಂದ ಎಂ. ಅಧ್ಯಕ್ಷತೆ ವಹಿಸಿದರು. ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಮೋಹನದಾಸ್ ಕುಂಬಳೆ ಉದ್ಘಾಟಿಸಿ ದರು. ಅತಿಥಿಗಳಾಗಿ ಮಾಜಿ ರಾಜ್ಯ ಸಮಿತಿ ಸದಸ್ಯ ಬಾಲಕೃಷ್ಣ ಕರಿಪ್ಪಾರ್, ಮಂಜೇಶ್ವರ ತಾಲೂಕು ಅಧ್ಯಕ್ಷ ರಾಮ ಪೊಯ್ಯಕಂಡ, ತಾಲೂಕು ಪ್ರಧಾನ ಕಾರ್ಯದರ್ಶಿ ಸತೀಶ ಆಚಾರ್ಯ ಶುಭಾಂಶನೆಗೈದರು. ಈ ಸಂದರ್ಭದಲ್ಲಿ ಹಿರಿಯ ಕಾರ್ಯಕರ್ತರಾದ ಕೇಶವ ಮಯ್ಯ, ಶೋಭ ಪೆರಿಂಗಡಿ, ಮೋಹಿನಿ ಐಲ ಇವರನ್ನು …