ಕುಂಬಳೆಯಲ್ಲಿ ಟೋಲ್ ಸಂಗ್ರಹಕ್ಕೆ ನಾಗರಿಕರಿಂದ ತಡೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಮೊಟಕು; ಶಾಸಕ ಸಹಿತ 60 ಮಂದಿ ಬಂಧನ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಕುಂಬಳೆ  ಟೋಲ್  ಪ್ಲಾಜಾದಲ್ಲಿ ಟೋಲ್ ಸಂಗ್ರಹ ಆರಂಭಿಸಿದ್ದು, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಈ ಕ್ರಮವನ್ನು ನಾಗರಿಕರು ತಡೆದಿದ್ದಾರೆ. ಶಾಸಕ ಎ.ಕೆ.ಎಂ. ಅಶ್ರಫ್‌ರ ನೇತೃತ್ವದಲ್ಲಿ ನಾಗರಿಕರು ಸ್ಥಳದಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಸಂಘರ್ಷಾವಸ್ಥೆ ಸೃಷ್ಟಿಯಾಗಿದೆ.  ಘಟನೆಗೆ ಸಂಬಂಧಿಸಿ ಶಾಸಕ ಸಹಿತ 60 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ಬೆಳಿಗ್ಗೆ ಟೋಲ್ ಸಂಗ್ರಹ ಆರಂಭಿಸಿರುವುದನ್ನು ತಿಳಿದು ಶಾಸಕರ ನೇತೃತ್ವದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸ್ಥಳಕ್ಕೆ ತಲುಪಿದ್ದಾರೆ. ಅನ್ಯಾಯ ರೀತಿಯಲ್ಲಿ ಟೋಲ್ ಸಂಗ್ರಹಕ್ಕೆ ಬಿಡಲಾರೆವೆಂದು ಚಳವಳಿನಿರತರು …

ಎಂಡಿಎಂಎ ಸಹಿತ ಮೂವರ ಸೆರೆ: ಆಟೋ ರಿಕ್ಷಾ, ಬೈಕ್ ವಶ

ಉಪ್ಪಳ: ಎಂಡಿಎಂಎ ಸಾಗಿಸುತ್ತಿದ್ದ ಮೂವರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಒಂದು ಆಟೋ ರಿಕ್ಷಾ ಹಾಗೂ ಬುಲ್ಲೆಟ್ ಬೈಕ್ ವಶಪಡಿಸಲಾಗಿದೆ. ಮಂಜೇಶ್ವರ ಪೊಸೋಟ್ ಆದರ್ಶ್‌ನಗರ ಅನ್ಸೀನ ಮಂಜಿಲ್‌ನ ಅನ್ಸಾರ್ ಐ.ಬಿ (36), ಉದ್ಯಾವರ ಸೆಕೆಂಡ್ ರೈಲ್ವೇ ಗೇಟ್ ಬಳಿಯ ಮದೀನಾ ಮಂಜಿಲ್‌ನ ಸಿರಾಜುದ್ದೀನ್ (24), ಪಾವೂರು ಮಚ್ಚಂಪಾಡಿ ಪಳ್ಳ ಗುಡ್ಡೆ ಹೌಸ್‌ನ ಅಹಮ್ಮದ್ ಸೈಫುದ್ದೀನ್ (21) ಎಂಬಿವರು ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ. ಇವರ ಕೈಯಿಂದ 3.39 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ನಿನ್ನೆ ಸಂಜೆ 6.15ರ …

ಸುಟ್ಟು ಗಾಯಗೊಂಡಿದ್ದ ಕಾವುಗೋಳಿ ನಿವಾಸಿ ಎಎಸ್‌ಐ ಮಂಗಳೂರಿನಲ್ಲಿ ನಿಧನ

ಕಾಸರಗೋಡು: ಸುಟ್ಟು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಮೂಲತಃ ಕಾವುಗೋಳಿ ನಿವಾಸಿ ಹಾಗೂ ಮಂಗಳೂರು ಪಾಂಡೇಶ್ವರ ಠಾಣೆಯಲ್ಲಿ ಎಎಸ್‌ಐ ಆಗಿರುವ ಹರಿಶ್ಚಂದ್ರ ಬೇರಿಕೆ (57) ನಿಧನಹೊಂದಿದರು.  ಇವರು ವಾಸಿಸುವ ಮಂಗಳೂರು ಕೆಪಿಟಿ ವ್ಯಾಸನಗರ  ಮನೆ ಬಳಿ ತರಗೆಲೆಗೆ ಬೆಂಕಿ ಹಚ್ಚಿದಾಗ ಅಕಸ್ಮಾತ್ ಬೆಂಕಿ ದೇಹಕ್ಕೆ ತಗಲಿ ಸುಟ್ಟು ಗಾಯಗೊಂಡಿದ್ದರು.  ಡಿಸೆಂಬರ್ ೨೮ರಂದು ಘಟನೆ ನಡೆದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ನಿನ್ನೆ ನಿಧನ ಸಂಭವಿಸಿದೆ. ಪಾಂಡೇಶ್ವರ ಠಾಣೆ, ಡಿವೈಎಸ್ಪಿ ಕಚೇರಿ, ಎಸಿಪಿ ಕಚೇರಿ, ಕರಾವಳಿ ಕಾವಲು ಪಡೆ, ಸಂಚಾರಪೂರ್ವ …

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಾದಕವಸ್ತು ಸಾಗಾಟ: ಓರ್ವ ಸೆರೆ

ಕುಂಬಳೆ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಉಪ್ಪಳ ಬಾಲಕುಂಡ ನಿವಾಸಿ ಮುಹಮ್ಮದ್ ರಫೀಕ್ (43) ಎಂಬಾತ ಸೆರೆಗೀಡಾದ ವ್ಯಕ್ತಿಯಾಗಿದ್ದಾನೆ. ನಿನ್ನೆ ರಾತ್ರಿ 7 ಗಂಟೆ ವೇಳೆ ಮಂಜೇಶ್ವರ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಅಧಿಕಾರಿಗಳು ನಡೆಸಿದ ತಪಾಸಣೆ ವೇಳೆ ಈತ ಸೆರೆಗೀಡಾಗಿದ್ದಾನೆ. ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಬಸ್‌ನಲ್ಲಿ ಪ್ರಯಾಣಿಕನಾಗಿದ್ದ ಈತನ ಕೈಯಲ್ಲಿದ್ದ 20 ಗ್ರಾಂ ಗಾಂಜಾ ಹಾಗೂ 1.79 ಗ್ರಾಂ ಮೆಥಾಫಿಟಮಿನ್‌ನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಬಕಾರಿ ಇನ್ಸ್‌ಪೆಕ್ಟರ್ ಸಿ. ಸಂತೋಷ್ ಕುಮಾರ್, ಸಿವಿಲ್ ಎಕ್ಸೈಸ್ …

ಸಮಸ್ತ ಸೀನಿಯರ್ ಉಪಾಧ್ಯಕ್ಷ ಯು.ಎಂ. ಅಬ್ದುಲ್ ರಹ್ಮಾನ್ ಮೌಲವಿ ನಿಧನ

ಕಾಸರಗೋಡು: ಸಮಸ್ತ ಕೇರಳ ಜಂಇಯತ್ತುಲ್ ಉಲಮ ಸೀನಿಯರ್ ಉಪಾಧ್ಯಕ್ಷ ಮೊಗ್ರಾಲ್ ಕಡವತ್ ದಾರುಲ್ ಸಲಾಮಿಲ್ ಯು.ಎಂ. ಅಬ್ದುಲ್ ರಹ್ಮಾನ್ ಮೌಲವಿ (86) ಇಂದು ಬೆಳಿಗ್ಗೆ ನಿಧನ ಹೊಂದಿದರು. ಚಟ್ಟಂಚಾಲ್ ಮಲಬಾರ್ ಇಸ್ಲಾಮಿಕ್ ಕಾಂಪ್ಲೆಕ್ಸ್ ಪ್ರಧಾನ ಕಾರ್ಯದರ್ಶಿ, ಕಣ್ಣಿಯತ್ ಉಸ್ತಾದ್ ಅಕಾಡೆಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. 1992ರಲ್ಲಿ ಸಮಸ್ತ ಕೇಂದ್ರ ಮುಷಾವರ ಸದಸ್ಯನಾಗಿದ್ದರು. 1991ರಿಂದ ಸಮಸ್ತ ಕೇರಳ ಇಸ್ಲಾಮ್ ಮತ ವಿದ್ಯಾಭ್ಯಾಸ ಮಂಡಳಿ ಸದಸ್ಯ, ಸಮಸ್ತ ಕಾಸರಗೋಡು ಜಿಲ್ಲಾ ಮುಷಾವರ ಸದಸ್ಯ, ಸಮಸ್ತ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ, ಎಂಎಸ್‌ಎಫ್ …

ಪದವಿ ವಿದ್ಯಾರ್ಥಿ ನೇಣು ಬಿಗಿದು ಮೃತಪಟ್ಟಸ್ಥಿತಿಯಲ್ಲಿ ಪತ್ತೆ: ನಾಡಿನಲ್ಲಿ ಶೋಕಸಾಗರ

ಕುಂಬಳೆ: ಕುಂಬಳೆ ಮೈಮೂನ್ ನಗರದಲ್ಲಿ ಪದವಿ ವಿದ್ಯಾರ್ಥಿ ನೇಣು ಬಿಗಿದು ಸಾವಿಗೀಡಾದ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಸೀತಾಂಗೋಳಿಯ ಖಾಸಗಿ ಕಾಲೇಜು ವಿದ್ಯಾರ್ಥಿಯೂ, ಕುಂಬಳೆ ಮೈಮೂನ್ ನಗರದ ಹಸನ್ ಎಂಬವರ ಪುತ್ರನಾದ ಮುಹಮ್ಮದ್ ಅಜ್ಸರ್ ಯಾನೆ ಅಜ್ಜು (19) ಮೃತಪಟ್ಟ ವಿದ್ಯಾರ್ಥಿ ಯಾಗಿದ್ದಾನೆ. ಶನಿವಾರ ಸಂಜೆ ಈತ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು.   ತಂದೆ, ತಾಯಿ ಖದೀಜ, ಸಹೋದರನಾದ ಅಬ್ದುಲ್ಲ ಎಂಬಿವರು ಮನೆಯಿಂದ ಹೊರಗೆ ತೆರಳಿದ್ದರು. ಅಬ್ದುಲ್ಲರಿಗೆ ಹೊಸ ಬುಲ್ಲೆಟ್ ಬೈಕ್ ಖರೀದಿಸಲೆಂದು ತೆರಳಿದ್ದರೆನ್ನಲಾಗಿದೆ. ಈ …

ಲೈಂಗಿಕ ಕಿರುಕುಳ: ಮೂರನೇ ಪ್ರಕರಣದಲ್ಲಿ ಸಿಲುಕಿ ಜೈಲು ಸೇರಿದ ಶಾಸಕ  ರಾಹುಲ್ ಮಾಂಕೂಟತ್ತಿಲ್

ಪಾಲಕ್ಕಾಡ್: ಈ ಹಿಂದೆ ದಾಖಲಿಸಲಾದ ಎರಡು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಲಭಿಸಿ ಬಂಧಿಸಲು ಸಾಧ್ಯವಾಗದ ಪಾಲಕ್ಕಾಡ್ ಶಾಸಕ ಹಾಗೂ ಕಾಂಗ್ರೆಸ್‌ನಿಂದ ಉಚ್ಛಾಲಿಸಲ್ಪಟ್ಟಿರುವ ರಾಹುಲ್ ಮಾಂಕೂಟತ್ತಿಲ್ ಅದೇ ರೀತಿಯ ಮೂರನೇ ಪ್ರಕಕರಣದಲ್ಲಿ ಕೊನೆಗೂ ಬಂಧಿತನಾಗಿ ನ್ಯಾಯಾಂಗ ಬಧನಕ್ಕೊಳಗಾಗಿ ಮಾವೇಲಿಕ್ಕರ ಸಬ್ ಜೈಲು ಸೇರಿದ್ದಾನೆ.   ವಿವಾಹಿತೆಯಾದ ಕೋಟ್ಟಯಂ ನಿವಾಸಿ ಹಾಗೂ ಈಗ ಕೆನಡಾದಲ್ಲಿರುವ 31ರ ಹರೆಯದ ಯುವತಿ ರಾಹುಲ್ ವಿರುದ್ಧ ಜನವರಿ 5ರಂದು ಇ ಮೈಲ್ ಮೂಲಕ ಪೊಲೀಸರಿಗೆ ದೂರು ನೀಡಿದ್ದಳು. 2024 ಎಪ್ರಿಲ್ 8ರಂದು …

ಕಾರು-ಸ್ಕೂಟರ್ ಢಿಕ್ಕಿ ಹೊಡೆದು ಇಬ್ಬರು ಯುವಕರಿಗೆ ಗಂಭೀರ

ಕುಂಬಳೆ: ಮೊಗ್ರಾಲ್ ಕೊಪ್ಪರ ಬಜಾರ್‌ನಲ್ಲಿ ನಿನ್ನೆ ಸಂಜೆ ಕಾರು-ಸ್ಕೂಟರ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ಗಂಭೀರ ಗಾಯಗೊಂ ಡಿದ್ದಾರೆ. ಮೊಗ್ರಾಲ್ ಪುತ್ತೂರು ಮುಂಡಕ್ಕಲ್ ಹೌಸ್‌ನ ಮುಹಮ್ಮದ್ ರಫ (18), ಜಬಲ್‌ನೂರ್ ಹೌಸ್‌ನ ಮುಹಸಿಲ್ ಅಬ್ದುಲ್ಲ (19) ಎಂಬಿವರು ಗಾಯಗೊಂಡಿ ದ್ದಾರೆ. ಇವರನ್ನು ಚೆಂಗಳ, ಇಂದಿರಾನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ನೀರು ಅಮೂಲ್ಯವೇ… ಪೋಲಾಗುತ್ತಿರುವ ನೀರಿಗೆ ಮೌಲ್ಯವಿಲ್ಲವೇ; ಬ್ಯಾಂಕ್‌ರಸ್ತೆಯಲ್ಲಿ ಕಳೆದೆರಡು ದಿನಗಳಿಂದ ಕಾರಂಜಿಯಂತೆ ಚಿಮ್ಮುತ್ತಿರುವ ಶುದ್ಧಜಲ

ಕಾಸರಗೋಡು: ‘ನೀರು ಅಮೂಲ್ಯ. ಅದನ್ನು ಹಾಳುಮಾಡಬಾರದು’ ಎಂಬು ದನ್ನು ಕಲಿತಿರುವ ನಾವೆಲ್ಲ  ಕಾಸರ ಗೋಡು ನಗರದಲ್ಲೇ ಪೋಲಾಗುತ್ತಿರುವ ನೀರನ್ನು ಕಾಣುವಾಗ ಈ ನೀರು ಅಮೂಲ್ಯವಲ್ಲವೇ? ಎಂಬ ಶಂಕೆ ಮೂಡುವುದು ಸಾಮಾನ್ಯವಾಗಿದೆ.  ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗ ಆಟೋ ರಿಕ್ಷಾ ನಿಲ್ದಾಣಕ್ಕೆ ಹೊಂದಿಕೊಂಡು ಕಾರಂಜಿಯಂತೆ ಚಿಮ್ಮುತ್ತಿರುವ ನೀರು ಅಧಿಕಾರಿಗಳ ಗಮನಕ್ಕೆ ಬಾರದಿರುವುದು ಸೋಜಿಗವಾ ಗಿದೆ. ಜಲಪ್ರಾಧಿಕಾರದ ಪೈಪ್ ತುಂಡಾಗಿ ಕಳೆದೆರಡು ದಿನಗಳಿಂದ ಇಲ್ಲಿ ನೀರು ಪೋಲಾಗುತ್ತಿದೆ. ನಗರ ಮಧ್ಯದ  ಬ್ಯಾಂಕ್ ರಸ್ತೆ  ಸದಾ ದಟ್ಟಣೆಯಲ್ಲಿದ್ದು ಈ ರಸ್ತೆಯಲ್ಲಿ …

ಹಿರಿಯ ಚಾಲಕ ನಿಧನ

ಕಾಸರಗೋಡು: ಖಾಸಗಿ ಬಸ್‌ನ ಹಿರಿಯ ಚಾಲಕರಾಗಿದ್ದ  ಕೇಳುಗುಡ್ಡೆ ಸಣ್ಣಕೂಡ್ಲು ನಿವಾಸಿ ಕೆ. ವಿಠಲ ನಾಯ್ಕ್ (78) ನಿಧನಹೊಂದಿದರು.  ಮೃತರು ಪತ್ನಿ ಗಿರಿಜಾ, ಮಕ್ಕಳಾದ ದೀಪ, ನಿಶಾ, ಅಳಿಯಂದಿರಾದ ವಸಂತ, ಪದ್ಮನಾಭ, ಸಹೋದರ ಸಂಜೀವ, ಸಹೋದರಿಯರಾದ ಗಿರಿಜಾ, ಅಂಬ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವೆ ಸಹೋದರಿ ಲಲಿತಾ ಈ ಹಿಂದೆ ನಿಧನಹೊಂದಿದ್ದಾರೆ.