ಕುಂಬಳೆ ಟೋಲ್ ಬೂತ್ನ ಕ್ಯಾಮರಾ, ಗೇಟ್ ನಾಶ: ವಾಹನಗಳನ್ನು ತಡೆಯುವ ಹ್ಯಾಂಡಲ್ಗೆ ಹಾನಿ; 500 ಮಂದಿ ವಿರುದ್ಧ ಕೇಸು ದಾಖಲು, ಚಳವಳಿ ನಿರತ ಶಾಸಕ ಸಹಿತ 15 ಮಂದಿ ಬಂಧನ: ಚಪ್ಪರ ತೆರವು
ಕುಂಬಳೆ: ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ವಿರುದ್ಧ ಇಂದು ಬೆಳಿಗ್ಗೆ ಚಳವಳಿ ಪುನರಾರಂಭಿಸಿದ ಶಾಸಕ ಸಹಿತ ೧೫ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಳವಳಿಗಾಗಿ ನಿರ್ಮಿಸಿದ ಚಪ್ಪರವನ್ನು ಪೊಲೀಸರು ಮುರಿದು ತೆರವುಗೊಳಿಸಿದರು. ಶಾಸಕ ಎಕೆಎಂ ಅಶ್ರಫ್, ಪಂ. ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಹಾಜಿ, ಬ್ಲೋಕ್ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಳೆ, ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಎ.ಕೆ. ಆರಿಫ್, ಸಿಪಿಎಂ ಏರಿಯಾ ಸೆಕ್ರೆಟರಿ ಸಿ.ಎ.ಸುಬೈರ್, ಕಾಂಗ್ರೆಸ್ ನೇತಾರ ಲಕ್ಷ್ಮಣ ಪ್ರಭು ಮೊದಲಾದವರನ್ನು ಪೊಲೀಸರು …