ಚಟ್ಟಂಚಾಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು-ಲಾರಿ ಢಿಕ್ಕಿ: ಇಬ್ಬರು ಮೃತ್ಯು, ಇಬ್ಬರಿಗೆ ಗಾಯ

ಕಾಸರಗೋಡು: ಚಟ್ಟಂಚಾಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಹಾಗೂ ಲಾರಿ ಢಿಕ್ಕಿ ಹೊಡೆದು ಇಬ್ಬರು ಯುವಕರು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಮಂಗಳೂರು ದೇರಳಕಟ್ಟೆ ನಾಟೆಕಲ್  ಅಕ್ಬರ್ ಮಂಜಿಲ್‌ನ  ಮೊಹಮ್ಮದ್  ಶಫೀಕ್ (23),  ಉಳ್ಳಾಲ ತಾಲೂಕು ಸಜಿಪನಡು ಲಕ್ಷ್ಮಣಕಟ್ಟೆಯ ಆಸಿಫ್ ಮೊಹಮ್ಮದ್ (41) ಎಂಬಿವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ.  ಇವರ ಜೊತೆಗಿದ್ದ ಇಸಾಂ ಹಾಗೂ ರಿಯಾಸ್ ಎಂಬಿವರು   ಗಾಯಗೊಂಡಿದ್ದು ಇವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ನಿನ್ನೆ ರಾತ್ರಿ ೮.೩೦ರ ವೇಳೆ ರಾಷ್ಟ್ರೀಯ ಹೆದ್ದಾರಿಯ ಚಟ್ಟಂಚಾಲ್ ೫೫ನೇ ಮೈಲ್‌ನಲ್ಲಿ ಅಪಘಾತ …

ಶಬರಿಮಲೆ ಚಿನ್ನ ಕಳವು: ಇ.ಡಿಯಿಂದ ಮೂರು ರಾಜ್ಯಗಳ 21 ಕೇಂದ್ರಗಳಲ್ಲಿ ಏಕ ಕಾಲದಲ್ಲಿ ದಿಢೀರ್ ದಾಳಿ 

ಪತ್ತನಂತಿಟ್ಟ: ಶಬರಿಮಲೆ ದೇವಸ್ಥಾನದಿಂದ ಚಿನ್ನ ಕಳವುಗೈದ ಪ್ರಕರಣದಲ್ಲಿ ಕಾಳಧನ ವ್ಯವಹಾರ ನಡೆದಿರುವುದಾಗಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ  ಕೇರಳ,ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಪ್ರಸ್ತುತ ಪ್ರಕರಣದ ಆರೋಪಿಗಳ ಮನೆ ಹಾಗೂ ಕಚೇರಿಗಳಿಗೆ  ‘ಆಪರೇಶನ್ ಗೋಲ್ಡನ್ ಶಾಡೋ’ ಎಂಬ ಹೆಸರಲ್ಲಿ  ಎನ್‌ಫೋ ರ್ಸ್‌ಮೆಂಟ್ ಡೈರೆಕ್ಟರೇಟ್(ಇ.ಡಿ) ಇಂದು ಬೆಳಿಗ್ಗಿನಿಂದ ಏಕ ಕಾಲದಲ್ಲಿ   21 ಕೇಂದ್ರಗಳಲ್ಲಿ ಇ.ಡಿ ದಾಳಿ ನಡೆಸಿ ತಪಾಸಣೆ ಆರಂಭಿಸಿದೆ.  ಈ ಪ್ರಕರಣದ ಒಂದನೇ ಆರೋಪಿ ಪ್ರಾಯೋಜಕ ಉಣ್ಣಿಕೃಷ್ಣನ್ ಪೋತ್ತಿ, ಇತರ ಆರೋಪಿಗಳಾದ ತಿರುವಿದಾಂಕೂರ್ ಮುಜರಾಯಿ ಮಂಡಳಿಯ ಮಾಜಿ ಅಧ್ಯಕ್ಷ ಎ. ಪದ್ಮಕುಮಾರ್, …

ಲಾರಿಯಿಂದ ಮರ ಇಳಿಸುತ್ತಿದ್ದಾಗ ದುರ್ಘಟನೆ: ಮರ ದೇಹದ ಮೇಲೆ ಬಿದ್ದು ಯುವಕ ಮೃತ್ಯು

ಬದಿಯಡ್ಕ:  ಲಾರಿಯಿಂದ ಮರ ಇಳಿಸುತ್ತಿದ್ದ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ಯುವಕ ಮೃತಪಟ್ಟ ದಾರುಣ ಘಟನೆ ನಡೆದಿದೆ. ಬದಿಯಡ್ಕ ಮೂಕಂಪಾರೆಯ ಹೋಟೆಲ್ ಕಾರ್ಮಿಕನೂ, ಅಸ್ಸಾಂನ  ಜೋಗಿಕೋಪ ನಿವಾಸಿಯಾದ  ಚಮತ್ ಅಲಿ ಎಂಬವರ ಪುತ್ರ ಅಲಿ ಅಕ್ಬರ್ (32) ಮೃತಪಟ್ಟ ದುರ್ದೈವಿ. ನಿನ್ನೆ ರಾತ್ರಿ 12 ಗಂಟೆ ವೇಳೆ ಈ ದುರ್ಘಟನೆ ಸಂಭವಿಸಿದೆ. ಮರದ ದಿಮ್ಮಿಗಳನ್ನು ಲಾರಿಯಲ್ಲಿ ಮಿಲ್ಲಿಗೆ ತಲುಪಿಸಲಾಗಿತ್ತು. ಲಾರಿಯಿಂದ  ಮರಗಳನ್ನು ರಸ್ತೆ ಬದಿ ಇಳಿಸುತ್ತಿದ್ದಾಗ  ಟಾರ್ಚ್‌ನಿಂದ ಬೆಳಕು ಹಾಯಿಸ ಲೆಂದು ಹೋಟೆಲ್ ಕಾರ್ಮಿಕನಾದ ಅಲಿ ಅಕ್ಬರ್ ಅಲ್ಲಿಗೆ …

ಟೆಂಪೋ ಮಾಲಕ ನಿಧನ

ಮಧೂರು: ಮಧೂರು ಚೆಂಬರಿಗೆ ನಿವಾಸಿ ದಿ| ಅಮ್ಮು ನಾಯ್ಕ್‌ರ ಪುತ್ರ ರಘುನಾಥ ನಾಯ್ಕ್ (58) ನಿಧನ ಹೊಂದಿದರು. ಇವರು ಮಧೂರು ಗಣೇಶ್ ಟೆಂಪೋದ ಮಾಲಕನಾಗಿ ದ್ದಾರೆ. ಮೃತರು ಪತ್ನಿ ಹೇಮ, ಮಕ್ಕ ಳಾದ ರಶ್ಮಿತ, ಅನ್ವಿತ, ಸಹೋದರ- ಸಹೋದರಿ ಯರಾದ ಕೃಷ್ಣ ನಾಯ್ಕ್, ಸಂಜೀವ ನಾಯ್ಕ್, ನಾರಾಯಣ ನಾಯ್ಕ್, ಚಂದ್ರಶೇಖರ ನಾಯ್ಕ್, ರವಿ ನಾಯ್ಕ್, ಅಳಿಯ ನವೀನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಲೈಕ್‌ಗೋಸ್ಕರ ಯುವಕನ ಜೀವವನ್ನೇ ತೆಗೆದ ಯುವತಿ ವಿರುದ್ಧ ಕೊನೆಗೂ ಕೇಸು ದಾಖಲು

ಕಲ್ಲಿಕೋಟೆ: ಸಾಮಾಜಿಕ ಜಾಲತಾಣದಲ್ಲಿ ಲೈಕ್‌ಗೋಸ್ಕರ  ಬಸ್ಸಿನಲ್ಲಿ ದೇಹ ಸ್ಪರ್ಶಿಸಿರುವುದಾಗಿ ಆರೋಪಿಸಿ ಕಲ್ಲಿಕೋಟೆ ನಿವಾಸಿ ದೀಪಕ್ (41)ರ ವಿರುದ್ಧ  ವೀಡಿಯೋ ದೃಶ್ಯ ಪ್ರಚಾರ ಮಾಡಿದುದರಿಂದ ಮನನೊಂದು  ತನ್ನ ಹುಟ್ಟುಹಬ್ಬದ ದಿನದಂದೇ ದೀಪಕ್ ನೇಣಿಗೆ ಶರಣಾದ ಘಟನೆಗೆ ಸಂಬಂಧಿಸಿ ಆ ವೀಡಿಯೋ ದೃಶ್ಯಗಳನ್ನು ಪ್ರಚಾರ ಮಾಡಿದ ವಡಗರೆಯ ಶಂಜಿತ ಮುಸ್ತಫ ಎಂಬಾಕೆಯ ವಿರುದ್ಧ ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಪೊಲೀಸರು ಆತ್ಮಹತ್ಯೆಗೆ ಪ್ರೇರಣೆ ನೀಡಿದ  ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿ ಸಿಕೊಂಡಿದ್ದಾರೆ. ಮಾತ್ರವಲ್ಲ ಪೊಲೀಸರು ನಿನ್ನೆ ವಡಗರೆಯಲ್ಲಿರುವ ಶಂಜಿತಾಳ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.    …

ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ವಿರುದ್ಧ ಕಲೆಕ್ಟರೇಟ್ ಪರಿಸರದಲ್ಲಿ ಜನಪ್ರತಿನಿಧಿಗಳಿಂದ ಪ್ರತಿಭಟನೆ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಕುಂಬಳೆಯಲ್ಲಿ ಸ್ಥಾಪಿಸಿರುವ ಟೋಲ್ ಪ್ಲಾಸಾದಲ್ಲಿ ಅನ್ಯಾಯವಾಗಿ ಟೋಲ್ ಸಂಗ್ರಹಿಸುವುದನ್ನು ಪ್ರತಿಭಟಿಸಿ ಕಾಸರಗೋಡು ಕಲೆಕ್ಟರೇಟ್ ಪರಿಸರದಲ್ಲಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಜನಪ್ರತಿನಿಧಿಗಳು ಮಾರ್ಚ್ ಹಾಗೂ ಧರಣಿ ನಡೆಸಿದರು.  ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿದ್ದು, ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು.  ಸಿಪಿಎಂ ಕುಂಬಳೆ ಏರಿಯಾ ಸೆಕ್ರೆಟರಿ ಸಿ.ಎ. ಸುಬೈರ್ ಸ್ವಾಗತಿಸಿದರು. ಎಲ್‌ಡಿಎಫ್ ಕನ್ವೀನರ್  ಕೆ.ಪಿ.ಸತೀಶ್ಚಂದ್ರನ್, ಯುಡಿಎಫ್ ಕನ್ವೀನರ್ ಎ. ಗೋವಿಂದನ್ ನಾಯರ್, ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ, ಕಾಸರಗೋಡು ನಗರಸಭಾ ಚೆಯರ್ …

ಚೆರ್ಕಳ-ಉಕ್ಕಿನಡ್ಕ ರಸ್ತೆ, ಪಳ್ಳತ್ತಡ್ಕ ಸೇತುವೆ ಶೀಘ್ರ ದುರಸ್ತಿಗೊಳಿಸದಿದ್ದಲ್ಲಿ ಬಸ್ ಸಂಚಾರ ಮೊಟಕುಗೊಳಿಸಿ ಪ್ರತಿಭಟನೆ-ಕೇರಳ ಸ್ಟೇಟ್ ಪ್ರೈವೆಟ್ ಬಸ್ ಆಪರೇಟರ್ಸ್ ಫೆಡರೇಶನ್

ಕಾಸರಗೋಡು: ಚೆರ್ಕಳದಿಂದ ಉಕ್ಕಿನಡ್ಕ ಮೆಡಿಕಲ್ ಕಾಲೇಜು ಜಂಕ್ಷನ್‌ವರೆಗಿರುವ 19 ಕಿ.ಮೀ. ರಸ್ತೆ  ಶೋಚನೀಯ ಸ್ಥಿತಿಯಲ್ಲಿದ್ದು ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ. ಮಾತ್ರವಲ್ಲದೆ ಈ ರಸ್ತೆಯಲ್ಲಿರುವ  ಪಳ್ಳತ್ತಡ್ಕ ಸೇತುವೆ ಕೂಡಾ ಯಾವುದೇ ಸಮಯದಲ್ಲಿ ಕುಸಿಯುವ ಭೀತಿಯೊ ಡ್ಡುತ್ತಿದೆ. ಆದ್ದರಿಂದ ಈ ರಸ್ತೆ ಹಾಗೂ ಸೇತುವೆಯನ್ನು ಶೀಘ್ರ ಅಭಿವೃದ್ಧಿಪಡಿಸಬೇಕೆಂದು ಕೇರಳ ಸ್ಟೇಟ್ ಪ್ರೈವೆಟ್ ಬಸ್ ಆಪರೇಟರ್ಸ್ ಫೆಡರೇಶನ್ ಕಾಸರಗೋಡು ಜಿಲ್ಲಾ ಸಮಿತಿ ಒತ್ತಾಯಿಸಿದೆ.  ಪಳ್ಳತ್ತಡ್ಕ ಸೇತುವೆಯ ಒಂದು ಭಾಗದಲ್ಲಿ ರಸ್ತೆ ಹೊಂಡಗಳಿಂದ ತುಂಬಿಕೊಂಡು ಹಲವು ವರ್ಷಗಳಾದರೂ ಇದರ ದುರಸ್ತಿಗೆ ಕ್ರಮ ಕೈಗೊಂಡಿಲ್ಲ. …

ಮಂಡಲ, ಮಕರಜ್ಯೋತಿ ಉತ್ಸವ ಸಮಾಪ್ತಿ: ಶಬರಿಮಲೆ ಕ್ಷೇತ್ರದ ಬಾಗಿಲು ಮುಚ್ಚಿ ಕೀಲಿಕೈ ಹಸ್ತಾಂತರ

ಶಬರಿಮಲೆ: ಮಂಡಲ, ಮಕರ ಜ್ಯೋತಿ ಮಹೋತ್ಸವಕ್ಕೆ ಸಮಾಪ್ತಿ ಹಾಡಿ ಶಬರಿಮಲೆ ಶ್ರೀ ಧರ್ಮಶಾಸ್ತಾ ಕ್ಷೇತ್ರದ ಬಾಗಿಲು ಮುಚ್ಚಲಾಯಿತು. ಪಂದಳಂ ರಾಜಪ್ರತಿನಿಧಿ ಪುನರ್ತಂನಾಳ್ ನಾರಾಯಣವರ್ಮರವರ ಕ್ಷೇತ್ರ ಭೇಟಿಯ ಬಳಿಕ ಬೆಳಿಗ್ಗೆ 6.45ಕ್ಕೆ ಗರ್ಭಗುಡಿಯ ಬಾಗಿಲು ಮುಚ್ಚಲಾಗಿದೆ. 5 ಗಂಟೆಗೆ ಬಾಗಿಲು ತೆರೆದು ಗಣಪತಿ ಹೋಮ ನಡೆಸಲಾಯಿತು. ಬಳಿಕ ಚಿನ್ನಾಭರಣಗಳನ್ನು ವಾಪಸ್ ಅರಮನೆಗೆ ಕೊಂಡೊಯ್ಯುವ ಶೋಭಾಯಾತ್ರೆ ಆರಂಭಗೊಂಡಿತು. ಪೆರಿಯ ಸ್ವಾಮಿ ಮರುದವನ ಶಿವನ್‌ಕುಟ್ಟಿಯವರ ನೇತೃತ್ವದಲ್ಲಿ ೩೦ ಮಂದಿಯ ತಂಡ ಚಿನ್ನಾಭರಣಗಳ ಜೊತೆ ಅರಮನೆಗೆ ಹಿಂತಿರುಗಿದೆ. ಈ ತಿಂಗಳ ೨೩ರಂದು ಇದು …

ಮಂಜೇಶ್ವರ ಪಂ. ಮಾಜಿ ಸದಸ್ಯ ನಿಧನ

ಮಂಜೇಶ್ವರ: ಉದ್ಯಾವರ ನಿವಾಸಿ, ಮಂಜೇಶ್ವರ ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ರಹಿಮಾನ್ (೫೩)ನಿಧನ ಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಉಲ್ಬಣ ಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದರೂ ಮೊನ್ನೆ ರಾತ್ರಿ ನಿಧನ ಸಂಭವಿಸಿದೆ. ಪಂಚಾಯತ್‌ನ 20ನೇ ವಾರ್ಡ್ ಮಾಜಿ ಸದಸ್ಯರಾಗಿ ದ್ದರು. 10ನೇ ಮೈಲು ಹಾಗೂ ಕುಂಜತ್ತೂರಿನಲ್ಲಿ ಅಂಡರ್ ಪಾಸ್‌ಗಾಗಿ ಹೋರಾಟ ಸಮಿತಿ ರೂಪಿಸಿ ಅದರ ನೇತೃತ್ವ ವಹಿಸಿದ್ದರು. ವಿವಿಧ ಹೋರಾಟಗಳಲ್ಲಿ ಭಾಗಿಯಾಗಿದ್ದರು. ದಿ| ಮೊಹಮ್ಮದ್ ಹಾಜಿ- ದಿ| ಬಿಫಾತಿಮ ದಂಪತಿ ಪುತ್ರನಾಗಿರುವ ಮೃತರು ಪತ್ನಿ ಸಬೀನ …

ವಿಧಾನಸಭಾ ಚುನಾವಣೆ: ವಿದ್ಯುನ್ಮಾನ ಮತಯಂತ್ರಗಳು ಜಿಲ್ಲೆಯಲ್ಲಿ ಸಿದ್ಧವೆಂದು ಜಿಲ್ಲಾಧಿಕಾರಿ

ಕಾಸರಗೋಡು: ವಿಧಾನಸಭಾ ಚುನಾವಣೆಗೆ ಅಗತ್ಯವಾದ ಇಲೆಕ್ಟ್ರೋ ನಿಕ್ ಮತಯಂತ್ರಗಳು ಜಿಲ್ಲೆಯಲ್ಲಿ ಸಿದ್ಧವಾಗಿದೆ ಎಂದು ಜಿಲ್ಲಾ ಚುನಾ ವಣಾಧಿಕಾರಿ ಯಾಗಿರುವ ಜಿಲ್ಲಾಧಿಕಾರಿ ಕೆ. ಇಂಭಶೇಖರ್ ನುಡಿದರು. ವಿಧಾನ ಸಭಾ ಚುನಾವಣೆಗೆ ಅಗತ್ಯಕ್ಕಿರುವ ವಿದ್ಯುನ್ಮಾನ ಮತಯಂತ್ರಗಳ ಪ್ರಾಥಮಿಕ ತಪಾಸಣೆ ಜಿಲ್ಲೆಯಲ್ಲಿ ಪೂರ್ತಿಗೊಂಡಿದೆ. ಹೊಸತಾಗಿ ರೂಪೀಕರಿಸಿದ 158 ಬೂತ್‌ಗಳು ಸಹಿತ ಜಿಲ್ಲೆಯಲ್ಲಿ 1141 ಬೂತ್‌ಗಳು ಮುಂದಿನ ವಿಧಾನಸಭಾ ಚುನಾವಣೆಗಾಗಿ ಸಿದ್ಧವಾಗಿವೆ. ಮತದಾ ಕ್ಕಾಗಿ 1426 ಬ್ಯಾಲೆಟ್ ಘಟಕಗಳು, 1426 ಕಂಟ್ರೋಲ್ ಘಟಕಗಳು, 1536 ವಿವಿಪ್ಯಾಟ್ ಎಂಬಿವುಗಳ ಫಸ್ಟ್ ಲೆವೆಲ್ ಚೆಕ್ಕಿಂಗ್ ಪೂರ್ತಿಗೊಂಡಿದೆ. …