ತಂದೆಯ ಇರಿತದಿಂದ ಮುದ್ದಿನ ಮಗಳು ಬಲಿ; ಗಾಯಗೊಂಡಿದ್ದ ಸಂಬಂಧಿಕನೂ ಮೃತ್ಯು, ಅವಳಿ ಕೊಲೆಯಿಂದ ಶೋಕ ಸಾಗರವಾದ ತೂಮಿನಾಡು

ಉಪ್ಪಳ: ತಂದೆಯ ಇರಿತದಿಂದ ಮುದ್ದಿನ ಮಗಳು ಸಾವಿಗೀಡಾದ ಘಟನೆಯಿಂದ ನಾಡು ಶೋಕಸಾಗರದಲ್ಲಿ ಮುಳುಗಿರುವಂತೆಯೇ   ಇರಿತದಿಂದ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಸಂಬಂಧಿಕನೂ ಮೃತಪಟ್ಟ ಘಟನೆ ನಡೆದಿದೆ. ಒಟ್ಟಾರೆಯಾಗಿ ಅವಳಿ ಕೊಲೆ ನಡೆದ ತೂಮಿನಾಡು ಹಾಗೂ ಪರಿಸರ ಪ್ರದೇಶಗಳಲ್ಲಿ ಶೋಕಸಾಗರ  ಸೃಷ್ಟಿಯಾಗಿದೆ.  ಘಟನೆ ಸ್ಥಳಕ್ಕೆ ಸಂಬಂಧಿಕರು, ನಾಗರಿಕರು ಸಹಿತ ಭಾರೀ ಸಂಖ್ಯೆಯಲ್ಲಿ ಜನರು ತಲುಪುತ್ತಿದ್ದು ಇಡೀ ನಾಡೇ ದುಃಖದಲ್ಲಿ ಮುಳುಗಿದೆ. ಮಂಜೇಶ್ವರ ತೂಮಿನಾಡು ಹಿಲ್‌ಟಾಪ್ ನಗರದಲ್ಲಿ ನಿನ್ನೆ ಸಂಜೆ ಈ ಭೀಕರ  ಘಟನೆ ನಡೆದಿದೆ. ಈ ಸಂಬಂಧ ಮೂಲತಃ …

ಕುಂಬ್ಡಾಜೆ ಪಂಚಾಯತ್‌ನಲ್ಲಿ ಮಿಷನ್-2026ಕ್ಕೆ ಚಾಲನೆ

ಕುಂಬ್ಡಾಜೆ?:ಪಂಚಾಯತ್ ಮತ್ತು ಕುಟುಂಬ ಆರೋಗ್ಯ ಕೇಂದ್ರದಲ್ಲಿ ಆರು ಗುರಿಗಳನ್ನು ಸಾಧಿಸುವ ಮಿಷನ್ ೨೦೨೬ಕ್ಕೆ ಚಾಲನೆ ನೀಡಲಾಯಿತು. ಕುಂಬ್ಡಾಜೆ ಪಂಚಾಯತ್ ವ್ಯಾಪ್ತಿ ಯಲ್ಲಿರುವ ಏಳು ಶಾಲಾ ಆವರಣಗಳನ್ನು ತಂಬಾಕುಮುಕ್ತಗೊಳಿಸಲಾಗುವುದು, ಪಾಲಿಯೇಟಿವ್ ಕೇರ್ ಪಡೆಯುವ ರೋಗಿಗಳು ಮತ್ತು ನಿರ್ಗತಿಕ ರೋಗಿಗಳಿಗೆ ಸಾಂತ್ವನ ನೀಡಲು ಜನರ ಸಹಾಯ ಸಮಿತಿ ರಚಿಸಲಾಗುವುದು, ಮಲೇರಿಯ ತಡೆಗಟ್ಟುವ ಚಟುವಟಿಕೆಗಳಿಗಾಗಿ 14 ವಾರ್ಡ್‌ಗಳಲ್ಲಿ ಆರೋಗ್ಯ ಸ್ವಯಂ ಸೇವಕರನ್ನು ಆಯ್ಕೆ ಮಾಡಲಾಗುವುದು.  ಕುಂಬ್ಡಾಜೆ ಪಂಚಾಯತ್‌ನ್ನು ಕ್ಷಯಮುಕ್ತ ಪಂಚಾಯತ್ ಮಾಡಲಾಗುವುದು,  ಮೊದಲಾದ ಕಾರ್ಯಗಳಿಗೆ ಗುರಿ ಇರಿಸಲಾಗಿದೆ. ಈ ಕುರಿತು ಕುಂಬ್ಡಾಜೆ …

ಬೀದಿನಾಯಿಗಳ ಉಪಟಳಕ್ಕೆ ಕಠಿಣ ಕ್ರಮ- ಬದಿಯಡ್ಕ ಪಂ. ಅಧ್ಯಕ್ಷ

ಬದಿಯಡ್ಕ: ಬೀದಿನಾಯಿಗಳ ಕಾಟವನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಬದಿಯಡ್ಕ ಪಂಚಾಯತ್ ಅಧ್ಯಕ್ಷ ಶಂಕರ ಡಿ. ತಿಳಿಸಿದ್ದಾರೆ. ವಿವಿಧ ವಾರ್ಡ್‌ಗಳ ಸದಸ್ಯರಿಂದ ಮಾಹಿತಿ ಪಡೆದುಕೊಂಡು ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳು ವುದಕ್ಕೆ ಸೂಚಿಸಿದರು. ಕುಂಟಿಕಾನ ಚೆನ್ನೆಗುಳಿಯಲ್ಲಿ ಬೀದಿನಾಯಿಗಳ ಆಕ್ರಮಣದಿಂದ, ಶಾಲಾ ಮಕ್ಕಳು, ಜನರು ಭಯಭೀತರಾಗಿದ್ದರು. ಈ ಹಿನ್ನೆಲೆಯಲ್ಲಿ ಚೆನ್ನೆಗುಳಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿ, ಸಾಕುನಾಯಿಗಳನ್ನು ಕಟ್ಟಿಹಾಕುವಂತೆ ಜನರಲ್ಲಿ ಮನವಿ ಮಾಡಿದರು. ವಾರ್ಡ್ ಪ್ರತಿನಿಧಿ ಅನ್ನತ್ ಬೀವಿ, ಪೊಲೀಸ್ ಅಧಿಕಾರಿಗಳು, …