ಕಾರಿನಲ್ಲಿ ಸಾಗಿಸುತ್ತಿದ್ದ ನಿಷೇಧಿತ ತಂಬಾಕು ಉತ್ಪನ್ನ ವಶ: ಓರ್ವ ಸೆರೆ

ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ ಭಾರೀ ಪ್ರಮಾಣದ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಕಣ್ಣೂರು ಮುನೀಶ್ವರ ಕೋವಿಲ್‌ನಿಂದ ಪೊಲೀಸರು ಪತ್ತೆಹಚ್ಚಿ ವಶಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿ ತೃಕರಿಪುರ ನೋರ್ತ್ ನಿವಾಸಿ ಪಿ.ಕೆ. ಮುಹಮ್ಮದ್ ಸಫೀರ್ (26) ಎಂಬಾತನನ್ನು ಸೆರೆಹಿಡಿದು ಪ್ರಕರಣ ದಾಖಲಿಸಲಾಗಿದೆ. ಈತ ಚಲಾಯಿಸುತ್ತಿದ್ದ ಕಾರಿನಿಂದ ೧೦ ಗೋಣಿ ಚೀಲಗಳಲ್ಲಿ ತುಂಬಿಸಿಡಲಾಗಿದ್ದ ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಹಲವಾರು ಲೋಡ್ ಮಣ್ಣು ಸಾಗಾಟ: ಚಂದ್ರಗಿರಿ ಕೋಟೆ ಸಂರಕ್ಷಿಸಲು ಎಂ.ಎಲ್. ಅಶ್ವಿನಿ ಆಗ್ರಹ

ಕಾಸರಗೋಡು: ಅನಧಿಕೃತವಾಗಿ ಮಣ್ಣು ಸಾಗಿಸಿದ ಹಿನ್ನೆಲೆಯಲ್ಲಿ ಅಪಾಯಕರ ಸ್ಥಿತಿಗೆ ತಲುಪಿದ ಜಿಲ್ಲೆಯ ಚೆಮ್ಮನಾಡು ಪಂಚಾಯತ್‌ನ ಕಳನಾಡುನಲ್ಲಿರುವ ಚಂದ್ರಗಿರಿ ಕೋಟೆಯನ್ನು ಸಂರಕ್ಷಿಸಲು ಜಿಲ್ಲಾ- ರಾಜ್ಯ ಆಡಳಿತ ಕೂಟಗಳು ಸಿದ್ಧವಾಗಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆಗ್ರಹಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ಬಾಬುರಾಜ್, ಜಿಲ್ಲಾ ಕಾರ್ಯದರ್ಶಿ  ಕೆ.ಟಿ. ಪುರುಷೋತ್ತಮನ್, ಜಿಲ್ಲಾ ಸಮಿತಿ ಸದಸ್ಯ ಶ್ರೀನಿವಾಸನ್, ಉದುಮ ಮಂಡಲ ಉಪಾಧ್ಯಕ್ಷ ಸದಾಶಿವನ್ ಮಣಿಯಂಗಾನ, ಕಾರ್ಯದರ್ಶಿ ಸೌಮ್ಯಾ ಪದ್ಮನಾಭನ್, ಕೋಶಾಧಿಕಾರಿ ರತೀಶ್ ವಿ.ಎ., ರಾಜೇಶ್ ಕೈಂದಾರ್, ಪ್ರಮೋದ್ ಕೀಳೂರು, ಹರೀಶ್ …

ಅಸೌಖ್ಯ: ಇಲೆಕ್ಟ್ರೀಷನ್ ನಿಧನ

ಮಧೂರು: ಅರಂತೋಡು ಬಾಬು ಪಾಟಾಳಿ ಯವರ ಪುತ್ರ ಜಯರಾಮ (49) ಮೆದುಳು ಸಂಬಂಧ ಅಸೌಖ್ಯದಿಂದ ನಿಧನ ಹೊಂದಿದರು. ಇಲೆಕ್ಟ್ರೀಶ್ಯನ್ ಆಗಿದ್ದರು. ಮೃತರು ತಂದೆ, ಪತ್ನಿ ಮಮತ, ಮಕ್ಕಳಾದ ಅಹ್‌ನ, ಅಶ್‌ನ, ಸಹೋದರ ರಾದ ಬಾಲಕೃಷ್ಣ, ಚಂದ್ರ, ಸಹೋದರಿ ಪುಷ್ಪ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕಾಲ್ನಡೆ ಮೂಲಕ ಸಾಗಿ ಪುಸ್ತಕ ಮಾರಾಟ ಮಾಡುತ್ತಿದ್ದ ಉಪೇಂದ್ರ ಆಚಾರ್ಯ ನಿಧನ

ಕಾಸರಗೋಡು: ನಡೆದುಕೊಂಡು ಹೋಗಿ ಪುಸ್ತಕಗಳನ್ನು ಪುಸ್ತಕಪ್ರಿಯರಿಗೆ ತಲುಪಿಸುತ್ತಿದ್ದ ನಡೆದಾಡುವ ಗ್ರಂಥಾಲಯ ಎಂದೇ ಕರೆಸಿಕೊಂಡಿದ್ದ ಮೂಲತಃ ಅಣಂಗೂರು ನಿವಾಸಿ ಹಾಗೂ ಮೊಗ್ರಾಲ್ ಪುತ್ತೂರು ಬೆದ್ರಡ್ಕದ ಉಜಿತೆರೆಕೆ ಬಳಿ ವಾಸವಾಗಿದ್ದ ಉಪೇಂದ್ರ ಆಚಾರ್ಯ (80) ನಿಧನ ಹೊಂದಿದರು. ಮಕ್ಕಳ ಕಥೆಪುಸ್ತಕ, ಚಿತ್ರಕಥೆಪುಸ್ತಕಗಳು, ಸಾಮಾನ್ಯ ಜ್ಞಾನ ಪುಸ್ತಕ, ಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳನ್ನು ಶಾಲಾ, ಕಾಲೇಜು, ಕಚೇರಿಗಳಿಗೆ ತೆರಳಿ ಅಗತ್ಯದವರಿಗೆ ಮಾರಾಟ ಮಾಡುತ್ತಿದ್ದ ಇವರು ಈ ಮೊದಲು ಮುದ್ರಣ ತಂತ್ರಜ್ಞರಾಗಿಯೂ ಕಾರ್ಯನಿರ್ವಹಿಸಿದ್ದರು. ಮಣಿಪಾಲ ಹಾಗೂ ಕಾಸರಗೋಡಿನ ಮುದ್ರಣಾಲ ಯದಲ್ಲಿ ಕೆಲಸ ನಿರ್ವಹಿಸಿದ್ದರು. …