ಪ್ರಯಾಣಿಕರೆಲ್ಲ ಇಳಿದರೂ 10 ತಿಂಗಳ ಹಿಂದೆ ಜೈಲಿನಿಂದ ಹೊರ ಬಂದ ವ್ಯಕ್ತಿ ಮಾತ್ರ ಬಾಕಿ: ಕುಂಡಂಗುಳಿಯಲ್ಲಿ ದುರಂತ ಘಟನೆ

ಕಾಸರಗೋಡು: ಬಸ್ ಪ್ರಯಾಣ ಮಧ್ಯೆ ವೃದ್ದ ಕುಸಿದು ಬಿದ್ದು ಮೃತಪಟ್ಟರು. ಮೂನಾಡ್ ಪೇತಾಳಂಕಯದಲ್ಲಿ ವಾಸಿಸುವ  ಎಂ.ಕೆ. ರವೀಂದ್ರನ್ (65) ಕುಸಿದು ಬಿದ್ದು ಮೃತಪಟ್ಟವರು. ನಿನ್ನೆ ರಾತ್ರಿ 7.30ರ ವೇಳೆ ಘಟನೆ ನಡೆದಿದೆ. ಪೊಯಿನಾಚಿಯಿಂದ ಕುಂಡಂಗುಳಿಗಿರುವ ಖಾಸಗಿ ಬಸ್‌ನಲ್ಲಿ ಪೆರ್ಲಡ್ಕ ಬಸ್ ನಿಲ್ದಾಣದಿಂದ ರವೀಂದ್ರನ್ ಬಸ್‌ಗೇರಿದ್ದರು. ಕೊನೆಯ ಸ್ಟೋಪ್ ಆದ ಕುಂಡಂಗುಳಿಗೆ ಬಸ್ ತಲುಪಿದಾಗ ಇತರ ಪ್ರಯಾಣಿಕರೆಲ್ಲ ಇಳಿದು ಹೋದರೂ ಇವರು ಮಾತ್ರ ಇಳಿದಿರಲಿಲ್ಲ. ಸೀಟಿನಲ್ಲಿ ಕುಳಿತಿದ್ದ ಇವರನ್ನು ನಿರ್ವಾಹಕ ತಟ್ಟಿ ಕರೆದರು. ಆದರೂ ಮಿಸುಕಾಡಲಿಲ್ಲ. ಶಂಕೆ ತೋರಿ …

ಡ್ರೈವಿಂಗ್ ಟೆಸ್ಟ್‌ಗೆ ಹೋದ ಯುವತಿ ನಾಪತ್ತೆ

ಬದಿಯಡ್ಕ: ಡ್ರೈವಿಂಗ್ ಟೆಸ್ಟ್‌ಗೆಂದು ತಿಳಿಸಿ ಮನೆಯಿಂದ ಹೋದ ಯುವತಿ ನಾಪತ್ತೆಯಾಗಿ ರುವುದಾಗಿ   ಮನೆಯವರು ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ನೆಕ್ರಾಜೆ ನೆಲ್ಲಿಕಟ್ಟೆಯ ಪರಿಸರ ನಿವಾಸಿಯಾಗಿರುವ  31ರ ಹರೆಯದ ಯುವತಿ ನಾಪತ್ತೆಯಾಗಿ ರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.  ವಿದ್ಯಾನಗರದಲ್ಲಿ ಡ್ರೈವಿಂಗ್ ಟೆಸ್ಟ್ ಇದೆಯೆಂದು ತಿಳಿಸಿ ನಿನ್ನೆ ಬೆಳಿಗ್ಗೆ 7 ಗಂಟೆಗೆ ಮನೆಯಿಂದ ಹೋದ ಯುವತಿ ನಂತರ ಮನೆಗೆ ಹಿಂತಿರುಗಿಲ್ಲವೆಂದು ಪತಿ  ಪೊಲೀಸರಿಗೆ ದೂರು ನೀಡಿದ್ದಾರೆ. ಇದರಂತೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಪ್ರಾಕ್ಟಿಕಲ್ ಪರೀಕ್ಷೆಗೆಂದು ಮನೆಯಿಂದ ಹೋದ ವಿದ್ಯಾರ್ಥಿನಿ ನಾಪತ್ತೆ

ಬದಿಯಡ್ಕ: ಪ್ರಾಕ್ಟಿಕಲ್ ಪರೀಕ್ಷೆಗೆಂದು ತಿಳಿಸಿ ಮನೆಯಿಂದ ಹೋದ 17 ವರ್ಷದ ಪ್ಲಸ್‌ಟು ವಿದ್ಯಾರ್ಥಿನಿ ನಾಪತ್ತೆಯಾಗಿರು ವುದಾಗಿ ತಾಯಿ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಗೊಳಪಟ್ಟ ಪ್ರದೇಶ ನಿವಾಸಿ ಹಾಗೂ  ಕಾಸರಗೋಡಿನ ಶಾಲೆ ಯೊಂದರ ಪ್ಲಸ್‌ಟು ವಿದ್ಯಾರ್ಥಿನಿ ನಿನ್ನೆ ಬೆಳಿಗ್ಗೆ 7.45ಕ್ಕೆ ಪ್ರಾಕ್ಟಿಕಲ್ ಪರೀಕ್ಷೆಗೆಂದು ತಿಳಿಸಿ ಮನೆಯಿಂದ ಹೋಗಿದ್ದು, ಅನಂತರ ಮನೆಗೆ ಹಿಂತಿರುಗಿಲ್ಲವೆಂದು ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇದರಂತೆ ಬದಿಯಡ್ಕ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಬಿದ್ದು ಗಾಯಗೊಂಡಿದ್ದ ಯುವತಿ ಮೃತ್ಯು

ಉಪ್ಪಳ: ಮನೆಯೊಳಗೆ ಬಿದ್ದು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಯುವತಿ ಮೃತಪಟ್ಟರು. ಬಾಯಾರು ಸಜಂಕಿಲ ಕೋಡಿಯಡ್ಕ ನಿವಾಸಿ ಅನಂತ ಪದ್ಮನಾಭ ಎಂಬವರ ಪತ್ನಿ ಗಂಗ (37) ಮೃತಪಟ್ಟ ಯುವತಿ. ಈ ತಿಂಗಳ 8ರಂದು ಮುಂಜಾನೆ ಇವರು ಮನೆಯೊಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರೆ ನ್ನಲಾಗಿದೆ. ಇದರಿಂದ ಇವರನ್ನು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.  ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ನಿಧನ ಸಂಭವಿಸಿದೆ. ಮೃತರು ಪತಿ, ಪುತ್ರಿ ಧಾತ್ರಿ, ತಾಯಿ ಸಹಿತ ಅಪಾರ ಬಂಧು-ಮಿತ್ರರರನ್ನು ಅಗಲಿದ್ದಾರೆ.

ಖ್ಯಾತ ಜಾದೂಗಾರ ಪ್ರೊ. ಮಾಧವ ನಿಧನ

ಕಾಸರಗೋಡು: ಹಿರಿಯ ಜಾದುಗಾರ ಪ್ರೊ. ಮಾಧವ (73) ನಿನ್ನೆ ನಿಧನ ಹೊಂದಿದರು. ಮೂಲತಃ ಉಬ್ರಂಗಳ ನಿವಾಸಿಯಾಗಿರುವ ಇವರು ಕೂಡ್ಲುನಲ್ಲಿ ವಾಸವಾಗಿದ್ದರು. ನೋರ್ತ್ ಮಲಬಾರ್ ಮ್ಯಾಜಿಕ್ ಫೌಂಡೇಶನ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿದ್ದರು. ನೋರ್ತ್ ಮಲಬಾರ್ ಗ್ರಾಮೀಣ ಬ್ಯಾಂಕ್‌ನಲ್ಲಿ ಮೆನೇಜರ್ ಆಗಿದ್ದರು. ೧೫ ಕಲಾವಿದರನ್ನೊಳಗೊಂಡ ಮಾಯಾರಂಜಿನಿ ತಂಡವನ್ನು ಕಟ್ಟಿ ಇಲ್ಯೂಶ್ಯನ್ ಜಾದು ಸಾಮಗ್ರಿಗಳನ್ನು ಬಳಸಿ ಕರ್ನಾಟಕ, ಕೇರಳದ ವಿವಿಧೆಡೆ ೫ ದಶಕಗಳ ಕಾಲ ಪ್ರದರ್ಶನ ನೀಡಿದ್ದಾರೆ. ಇವರ ಪುತ್ರ ಮಾಸ್ಟರ್ ಚಿಂತನ್ ಜಾದೂಗಾರನಾಗಿದ್ದು, ರಾಷ್ಟ್ರದ ಗಮನ ಸೆಳೆದಿದ್ದರಾದರೂ ಈ ಹಿಂದೆ …

ಉದ್ಯಾವರಕ್ಕೆ ಜಾನುವಾರುಗಳನ್ನು ತಂದ ಮೂವರಿಗೆ ತಂಡದಿಂದ ಹಲ್ಲೆ

ಮಂಜೇಶ್ವರ: ಪಾಲಕ್ಕಾಡ್‌ನಿಂದ ಮಂಜೇಶ್ವರ ಉದ್ಯಾವರಕ್ಕೆ ಜಾನುವಾರುಗಳನ್ನು ತಂದ ಲಾರಿಯಲ್ಲಿದ್ದ ಮೂರು ಮಂದಿಗೆ ತಂಡವೊಂದು ಹಲ್ಲೆಗೈದು ಗಾಯಗೊಳಿಸಿದ ಬಗ್ಗೆ ದೂರಲಾಗಿದ. ಕಾಸರಗೋಡು ನಿವಾಸಿ ಅಬ್ಬಾಸ್, ಉತ್ತರಪ್ರದೇಶ ನಿವಾಸಿಗಳೂ ಪಾಲಕ್ಕಾಡ್‌ನಲ್ಲಿ ವಾಸಿಸುವ ಫುರ್ಖಾನ್ (47), ದಾವೂದ್ (28) ಎಂಬವರಿಗೆ ಹಲ್ಲೆಗೈಯ್ಯಲಾಗಿದೆ. ಈ ಪೈಕಿ ಫುರ್ಖಾನ್ ಹಾಗೂ ದಾವೂದ್‌ನನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಮುಂಜಾನೆ 1.30ರ  ವೇಳೆ ಘಟನೆ ನಡೆದಿದೆ. ಈ ಮೂರು  ಮಂದಿ ಪಾಲಕ್ಕಾಡ್‌ನಿಂದ ಜಾನುವಾರು ಗಳನ್ನು ಉದ್ಯಾವರಕ್ಕೆ ತಲುಪಿಸಿ ಅವುಗಳನ್ನು ಉದ್ಯಾವರ ಅಂಡರ್ ಪಾಸ್ …

ಮನೆಯ ಎರಡಂತಸ್ತಿನಿಂದ ಬಿದ್ದು ಪೈಂಟಿಂಗ್ ಕಾರ್ಮಿಕ ಮೃತ್ಯು

ಕುಂಬಳೆ: ಪೈಂಟಿಂಗ್ ಕೆಲಸದ ವೇಳೆ ಮನೆಯ ಎರಡಂತಸ್ತಿನಿಂದ ಬಿದ್ದ ಕಾರ್ಮಿಕ ಮೃತಪಟ್ಟ ಘಟನೆ ನಡೆದಿದೆ. ಉತ್ತರಪ್ರದೇಶ ನಿವಾಸಿ ಶಂಸಾದ್ (30) ಮೃತಪಟ್ಟ ದುರ್ದೈವಿ. ನಿನ್ನೆ ಮಧ್ಯಾಹ್ನ ಪೆರ್ಮುದೆಯಲ್ಲಿ ದುರ್ಘಟನೆ ಸಂಭವಿಸಿದೆ. ಪೆರ್ಮುದೆಯ ರಾಮಚಂದ್ರ ಎಂಬವರ ಮನೆಯ ಎರಡಂತಸ್ತಿನಲ್ಲಿ ಪೈಂಟಿಂಗ್ ನಡೆಸುತ್ತಿದ್ದಂತೆ ಶಂಸಾದ್ ಕಾಲು ಜಾರಿ ಕೆಳಕ್ಕೆ ಬಿದ್ದಿದ್ದರು. ಅಲ್ಲಿದ್ದವರು ಕೂಡಲೇ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಘಟನೆ ಬಗ್ಗೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಪಿಎಸ್‌ಸಿ ಜಿಲ್ಲಾ ಕಚೇರಿಗೆ ಬೀಗ ಜಡಿಯಲು ಕೆಎಸ್‌ಯು ಯತ್ನ: ತಡೆದ ಪೊಲೀಸರು; 11 ಮಂದಿ ವಿರುದ್ಧ ಕೇಸು

ಕಾಸರಗೋಡು: ಪಿಎಸ್ ಸಿಯನ್ನು ರಾಜ್ಯ ಸರಕಾರ ಕೇವಲ ಒಂದು ನೋಟದ ವಸ್ತುವನ್ನಾಗಿಸಿ ಉದ್ಯೋಗಾ ರ್ಥಿಗಳನ್ನು ವಂಚಿಸುತ್ತಿ ದೆಯೆಂದು ಆರೋಪಿಸಿ ಕೆಎಸ್‌ಯು ಕಾರ್ಯ ಕರ್ತರು ನಿನ್ನೆ ಪಿಎಸ್‌ಸಿ ಜಿಲ್ಲಾ ಕಚೇರಿಗೆ  ಬೀಗ ಜಡಿಯುವ ಯತ್ನ ನಡೆಸಿದ್ದು, ಅದನ್ನು ಪೊಲೀಸರು ತಡೆದಿದ್ದಾರೆ. ಕೆಎಸ್‌ಯು ಕಾರ್ಯಕರ್ತರು ಪ್ರತಿಭಟನೆ ಹಾಗೂ ಘೋಷಣೆಗಳೊಂ ದಿಗೆ ಪಿಎಸ್‌ಸಿ ಜಿಲ್ಲಾ ಕಚೇರಿಗೆ ಆಗಮಿಸಿ ಬೀಗ ಜಡಿಯಲೆತ್ನಿಸಿದ್ದಾರೆ. ಕೆಎಸ್‌ಯು ಜಿಲ್ಲಾ ಅಧ್ಯಕ್ಷ ಜವಾದ್ ಪುತ್ತೂರು, ಇತರ ಪದಾಧಿಕಾರಿಗಳಾದ ನುಹ್‌ಮಾನ್ ಪಳ್ಳಂಗೋಡು, ಅನ್ಸಾರಿ ಕೋಟೆಕುನ್ನು, ವಿಷ್ಣು ಇರಿಯಣ್ಣಿ, ವೈಷ್ಣವ್ ಕೋಳಿಚ್ಚಾಲು, …

 ಎಂಡಿಎಂಎ ಸಹಿತ ಓರ್ವ ಸೆರೆ

ಕಾಸರಗೋಡು: ನಗರದಲ್ಲಿ ನಿನ್ನೆ ರಾತ್ರಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕವಸ್ತು ಸಹಿತ ಓರ್ವನನ್ನು ಸೆರೆಹಿಡಿಯಲಾಗಿದೆ. ನೆಲ್ಲಿಕುಂಜೆ ಬಂಗರಕುನ್ನು ಸಿಂಗಪೂರ್ ಹೌಸ್‌ನ ಬಿ.ಎಂ. ಸಿದ್ದಿಕ್ (43) ಎಂಬಾತನನ್ನು ಬಂಧಿಸಿ ೩೨ ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ.  ನಗರಠಾಣೆ ಎಸ್‌ಐ ಸಿ ಆರ್. ಮೌಶಮಿ ಹಾಗೂ ತಂಡ ನಿನ್ನೆ ರಾತ್ರಿ 10.30ರ ವೇಳೆ  ಕರಂದಕ್ಕಾಡಿನಿಂದ ಈತನನ್ನು ಬಂಧಿಸಿರುವುದಾಗಿ ತಿಳಿಸಲಾಗಿದೆ. ಪಟ್ರೋಲಿಂಗ್ ನಡೆಸುತ್ತಿದ್ದ ಪೊಲೀಸ್ ತಂಡ ಕರಂದಕ್ಕಾಡ್‌ನ ಹೋಟೆಲೊಂ ದರ ಬಳಿಗೆ ತಲುಪಿದಾಗ ಕಾರೊಂದು ಸಂಶಯಾಸ್ಪದ ರೀತಿಯಲ್ಲಿ ಕಂಡುಬಂ ದಿದೆ. ಇದರಿಂದ ಪೊಲೀಸರು …

ಪುತ್ರಿಯನ್ನು ಕೊಲೆಗೈದು ತಂದೆ ಆತ್ಮಹತ್ಯೆಗೈದ ಘಟನೆ: ಬಾಲಕಿ ವರ್ಷಗಳ ಕಾಲ ದೌರ್ಜನ್ಯಕ್ಕೀಡಾಗಿದ್ದಾಳೆಂದು ವರದಿ

ಕೊಚ್ಚಿ: ಎಳಮಕ್ಕರದಲ್ಲಿ ಪುತ್ರಿಯನ್ನು ಕೊಲೆಗೈದು ತಂದೆ ಆತ್ಮಹತ್ಯೆಗೈದ ಘಟನೆಯಲ್ಲಿ ಆತಂಕಗೊಳ್ಳುವ ಮರಣೋತ್ತರ ಪರೀಕ್ಷಾ ವರದಿ ಬಹಿರಂಗಗೊಂಡಿದೆ. ಬಾಲಕಿ ಹಲವು ವರ್ಷಗಳಿಂದ ದೌರ್ಜನ್ಯಕ್ಕೀಡಾಗಿರುವುದಾಗಿಯೂ ಸಾವು ಸಂಭವಿಸುವ ಗಂಟೆಗಳ ಹಿಂದೆಯೂ ದೌರ್ಜನ್ಯ ನಡೆದಿದೆ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿದೆ. ಆದರೆ ಬಾಲಕಿಯನ್ನು ದೌರ್ಜನ್ಯಗೈದಿ ರುವುದು ಯಾರು, ಎಲ್ಲಿ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಎಳಮಕ್ಕರ ಪೊಲೀಸ್ ಪೋಕ್ಸೋ ಪ್ರಕಾರ ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಪುತ್ರಿ ದೌರ್ಜನ್ಯಕ್ಕೀಡಾದ ಮಾಹಿತಿ ತಿಳಿದಿಲ್ಲವೆಂದು ಕೊಚ್ಚಿಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ತಾಯಿ ಪೊಲೀಸರಲ್ಲಿ …