ಶಬರಿಮಲೆಗೆ ಯುವತಿಯರ ಪ್ರವೇಶನಿಲುವು ಬದಲಾವಣೆಯತ್ತ ರಾಜ್ಯ ಸರಕಾರ

ನವದೆಹಲಿ: ಶಬರಿಮಲೆ ದೇವ ಸ್ಥಾನಕ್ಕೆ ಯುವತಿಯ ಪ್ರವೇಶಕ್ಕೆ ಅನುಕೂಲಕರವಾಗಿ  2018ರಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿರುವ  ಅರ್ಜಿಗಳ ಮೇಲಿನ ವಿಚಾರಣೆಯನ್ನು ಮುಖ್ಯ ನ್ಯಾಯ ಮೂರ್ತಿ ಸೂರ್ಯಕಾಂತ್ ನೇತೃತ್ವದ ಸುಪ್ರೀಂ ಕೋರ್ಟ್‌ನ 9 ನ್ಯಾಯಾಧೀ ಶರ ಪೀಠ ಎಪ್ರಿಲ್ 7ರಂದು  ಕೈಗೆತ್ತ ಲಿರುವಂತೆಯೆ   ಕೇರಳ ಸರಕಾರ ಆಸ್ತಿಕರ ಜತೆಗೆ ನಿಲ್ಲಲಿದೆ ಎಂದು  ರಾಜ್ಯದ ಕಾನೂನು ಸಚಿವ ಪಿ. ರಾಜೀವ್ ಹೇಳಿದ್ದಾರೆ. ಆ ಮೂಲಕ ಎಡರಂಗ ಸರಕಾರ ಯುವತಿಯರಿಗೆ ಶಬರಿಮಲೆ ಪ್ರವೇಶ ವಿಷಯದಲ್ಲಿ ಈ ಹಿಂದೆ ಹೊಂದಿದ್ದ್ದ …

ಶಬರಿಮಲೆ ದೇಗುಲದಿಂದ ಕದ್ದು ಸಾಗಿಸಿದ್ದು 1.7 ಕಿಲೋ ಚಿನ್ನ

ತಿರುವನಂತಪುರ: ಶಬರಿಮಲೆ ದೇಗುಲದ  ಗರ್ಭಗುಡಿಯ ಬಾಗಿಲು ಹಾಗೂ ದ್ವಾರಪಾಲಕ ಮೂರ್ತಿಗಳ ಕವಚ ಇತ್ಯಾದಿ ಗಳಿಂದಾಗಿ ಒಟ್ಟಾರೆಯಾಗಿ 1.7 ಕಿಲೋ ಗ್ರಾಂ ಚಿನ್ನ ಕದ್ದು  ಸಾಗಿಸಲಾಗಿದೆಯೆಂದು ಈ ಪ್ರಕರಣದ ತನಿಖೆ ನಡೆಸುವ ವಿಶೇಷ  ತನಿಖಾ ತಂಡ ತಿಳಿಸಿದೆ.   ವಿಎಸ್‌ಎಸ್‌ಸಿಯಲ್ಲಿ ನಡೆಸಲಾದ ವೈಜ್ಞಾನಿಕ ಪರೀಕ್ಷೆಯ ವರದಿಯ ಆಧಾರದಲ್ಲಿ ಈ ಲೆಕ್ಕಾಚಾರ ನೀಡಲಾಗಿದೆ. ಆದರೆ ಇದು ಅಂತಿಮ ಲೆಕ್ಕಾಚಾರವಲ್ಲವೆಂದೂ ಶ್ರೀ ಕ್ಷೇತ್ರದಿಂದ ಅದೆಷ್ಟು ಪ್ರಮಾಣದ ಚಿನ್ನ ಕದ್ದು ಸಾಗಿಸಲಾಗಿದೆಯೆಂಬುವುದರ  ಬಗ್ಗೆ  ಜಂಶದ್‌ಪುರ್‌ನಲ್ಲಿರುವ ನೇಶನಲ್ ಮೆಟಲಜಿಕಲ್  ಲ್ಯಾಬ್‌ನಲ್ಲಿ    ಪರೀಕ್ಷಿಸಲಾಗುತ್ತಿದ್ದು ಅದರ ವರದಿ ಕೈಸೇರಿದ …

ಮತದಾರರ ಪಟ್ಟಿ ನವೀಕರಣೆ: ಸುಳ್ಳು ದೂರು ನೀಡುವವರ ವಿರುದ್ಧ ಕೇಸು-ಜಿಲ್ಲಾಧಿಕಾರಿ

ಕಾಸರಗೋಡು:  ಮತದಾರರ ಪಟ್ಟಿಯ ಕುರಿತು ಉದ್ದೇಶಪೂರ್ವಕ ವಾಗಿ ತಪ್ಪಾದ ಮಾಹಿತಿಗಳನ್ನು ಸೇರಿಸಿ ದೂರು ನೀಡುವುದು ಕಾನೂನುಪ್ರಕಾರ ಶಿಕ್ಷಾರ್ಹವಾದ ಅಪರಾಧವಾಗಿದೆ ಯೆಂದು ಪರಿಗಣಿಸಿ ದೂರುಗಾರನ ವಿರುದ್ಧ ಕೇಸು ದಾಖಲಿಸಿ ಕಾನೂನುಕ್ರಮ ಕೈಗೊಳ್ಳಲಾಗುವುದೆಂದು ಚುನಾವಣಾ ರಿಜಿಸ್ಟ್ರೇಶನ್ ಆಫೀಸರ್   ತಿಳಿಸಿದ್ದಾರೆ. ಆರೋಪ ಸಾಬೀತುಗೊಂಡಲ್ಲಿ ಒಂದು ವರ್ಷ ವರೆಗೆ ಸಜೆ, ದಂಡ ಅಥವಾ ಅವೆರಡೂ ಸೇರಿ ಶಿಕ್ಷೆ ಲಭಿಸುವು ದೆಂದು ಅಧಿಕೃತ ವರದಿಯಲ್ಲಿ ತಿಳಿಸಲಾಗಿದೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಪೈವಳಿಕೆ ಪ್ರದೇಶಕ್ಕೆ ಸಂಬಂಧಪಟ್ಟು  ಭಾರತೀಯ ಪೌರತ್ವವಿಲ್ಲ ಎಂದು ಆರೋಪಿಸಿ ಮುಹಮ್ಮದ್ ಎಂಬ ಮತ …

ಆರ್‌ಎಸ್‌ಎಸ್ ಹಿರಿಯ ಸ್ವಯಂ ಸೇವಕ ಆನಂದ ಶೆಟ್ಟಿ ವಾನಂದೆ ನಿಧನ

ಉಪ್ಪಳ: ಆರ್‌ಎಸ್‌ಎಸ್‌ನ ಹಿರಿಯ ಸ್ವಯಂ ಸೇವಕ ಶಿರಿಯ ವಾನಂದೆ ನಿವಾಸಿ ಆನಂದ ಶೆಟ್ಟಿ (81) ನಿಧನಹೊಂದಿದರು. ವೃದ್ಧಾಪ್ಯ ಸಹಜ ಅಸೌಖ್ಯ ಬಾಧಿಸಿದ್ದ ಇವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ  ನಿಧನ ಸಂಭವಿಸಿದೆ. ಆರ್‌ಎಸ್‌ಎಸ್‌ನ ಶಿರಿಯ ಶಾಖೆ ಮುಖ್ಯ ಶಿಕ್ಷಕ್ ಆಗಿ ಇವರು ಕಾರ್ಯಾಚರಿಸಿದ್ದರು. ಸಿರಿಯ ಸೀರೆ ಶ್ರೀ ಶಂಕರನಾರಾಯಣ ಕ್ಷೇತ್ರ ಸೇವಾ ಸಮಿತಿ ಮಾಜಿ ಅಧ್ಯಕ್ಷರೂ ಆಗಿದ್ದಾರೆ. ಉತ್ತಮ ಕೃಷಿಕರೂ ಆಗಿದ್ದ ಇವರಿಗೆ ಮಂಗಲ್ಪಾಡಿ ಪಂಚಾಯತ್ ಹಾಗೂ ಕೃಷಿ ಭವನ ಜಂಟಿಯಾಗಿ ಮಾದರಿ …

ಆಹಾರ ನೀಡಲು ತಡವಾಯಿತೆಂದು ಆರೋಪಿಸಿ  ನೌಕರನಿಗೆ ಹಲ್ಲೆ: ಮೂವರ ವಿರುದ್ಧ ಕೇಸು

ಕಾಸರಗೋಡು: ಆಹಾರ ನೀಡಲು ತಡವಾಯಿತು ಹಾಗೂ ಆಹಾರ ಕಡಿಮೆಯಾಯಿತೆಂದು ಆರೋಪಿಸಿ ಹೋಟೆಲ್ ನೌಕರನಿಗೆ ಹಲ್ಲೆಗೈದು ಹೋಟೆಲ್‌ನ ಗಾಜು ಪುಡಿಗೈದ ಘಟನೆಗೆ ಸಂಬಂಧಿಸಿ ಮೂವರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನಾಯಮ್ಮಾರಮೂಲೆ ಪಡಿಂಞ್ಞಾರೆಮೂಲೆಯ ಪಿ. ಉಮ್ಮರ್ (42)ರ ದೂರಿನಂತೆ ಮುಹಮ್ಮದಲಿ, ಅಬ್ದುಲ್ ಫಿರೋಸ್, ನೌಶಾದ್ ಎಂಬಿವರ ವಿರುದ್ಧ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಳೆದ ಆದಿತ್ಯವಾರ ಮಧ್ಯಾಹ್ನ ೧ ಗಂಟೆ ವೇಳೆ  ಕಾಸರಗೋಡು ಕೆಪಿಆರ್‌ರಾವ್ ರೋಡ್‌ನ ಮಲಬಾರ್ ಫಿಶ್ ಪಾಯಿಂಟ್ ಎಂಬ ಹೋಟೆಲ್‌ನಲ್ಲಿ ಘಟನೆ ನಡೆದಿದೆ. ಆಹಾರ …

10 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ಯತ್ನ: ಆರೋಪಿ ಸೆರೆ

ಕಾಸರಗೋಡು: ಸೈಕಲ್‌ನಲ್ಲಿ ಹೋಗುತ್ತಿದ್ದ ಹತ್ತರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲೆತ್ನಿಸಿದ ಪ್ರಕರಣದ ಆರೋಪಿಯನ್ನು ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಕೆ. ಅಜಿತ್ ಮತ್ತು ಜಿಲ್ಲಾ ಕ್ರೈಂ ಸ್ಕ್ವಾಡ್ ನೇತೃತ್ವದ ತಂಡ ಬಂಧಿಸಿದೆ. ಪಯ್ಯನ್ನೂರು ವೆಳ್ಳೂರು ಮೂಪನ್ನ ಡಗತ್ತ್ ವೀಟಿಲ್ ಫಿರ್ದೌಸ್ (36) ಬಂಧಿತ ಆರೋಪಿ. ಬಂಧಿತನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾ ಗಿದೆ. ಬಾಲಕಿಗೆ ಕಿರುಕುಳ ನೀಡಲೆತ್ನಿಸಿದ ವ್ಯಕ್ತಿ ಯಾರೆಂಬುವು ದನ್ನು ಗುರುತುಹಚ್ಚಲು ಪೊಲೀಸರಿಗೆ ಮೊದಲು ಸಾಧ್ಯವಾಗಿರಲಿಲ್ಲ. ಬಳಿಕ ಘಟನೆ ನಡೆದ ಪರಿಸರದ ಸಿಸಿ ಟಿವಿ …

ವಿವಾಹಕ್ಕೆ ಮುಂಚೆ ಯಾರನ್ನೂ ನಂಬಬಾರದು; ದೈಹಿಕ ಸಂಬಂಧಗಳಲ್ಲಿ ಏರ್ಪಡುವಾಗ ಜಾಗ್ರತೆ ಪಾಲಿಸಲು ಸುಪ್ರೀಂ ಕೋರ್ಟ್ ಮುನ್ನೆಚ್ಚರಿಕೆ

ದೆಹಲಿ: ವಿವಾಹಕ್ಕೆ ಮುಂಚಿತ ಗಂಡು ಮಕ್ಕಳು, ಹೆಣ್ಮಕ್ಕಳು ಸಂಪೂರ್ಣ ಅಪರಿಚಿತರಾಗಿದ್ದಾರೆಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ವಿವಾಹದ ಮುಂಚಿತ ಇರುವ ದೈಹಿಕ ಸಂಬಂಧಗಳಲ್ಲಿ ಏರ್ಪಡುವವರು ಅತ್ಯಂತ ಜಾಗ್ರತೆ ಪಾಲಿಸಬೇಕೆಂದು ಸುಪ್ರೀಂಕೋರ್ಟ್ ಮುನ್ನೆಚ್ಚರಿಕೆ ನೀಡಿದೆ. ವಿವಾಹ ಭರವಸೆ ನೀಡಿ ದೌರ್ಜನ್ಯಗೈದ ರೆಂಬ ಪ್ರಕರಣದಲ್ಲಿ ಆರೋಪಿಯ ಜಾಮೀನು ಅರ್ಜಿ ಪರಿಗಣಿಸುತ್ತಿದ್ದ ಮಧ್ಯೆ ನ್ಯಾಯಾಲಯ ಈ ಪರಾಮರ್ಶೆ ನಡೆಸಿದೆ. ನ್ಯಾಯಾಧೀಶರಾದ ಬಿ.ವಿ. ನಾಗರತ್ನ, ಉಜ್ಜಲ್ ಭೂಯಾನ್ ಎಂಬಿವರು ಸೇರಿದ ವಿಭಾಗೀಯ ಪೀಠ ಕೇಸು ಪರಿಗಣಿಸಿತ್ತು. ದುಬಾಯಿಯಲ್ಲಿ ಆರೋಪಿ ತನ್ನೊಂದಿಗೆ ದೈಹಿಕ ಸಂಬಂಧದಲ್ಲಿ ಏರ್ಪಟ್ಟಿರುವುದಾಗಿ …

ಅಪ್ರಾಪ್ತರ ವಾಹನ ಚಾಲನೆ ವಿರುದ್ಧ ಕಠಿಣ ಕ್ರಮ: ಆರ್‌ಸಿ ಮಾಲಕರಿಗೆ ದಂಡ ಮಾತ್ರವಲ್ಲದೆ 6 ತಿಂಗಳು ಜೈಲು ಶಿಕ್ಷೆ

ಕಾಸರಗೋಡು: ಪ್ರಾಯಪೂರ್ತಿಯಾಗದವರು ವಾಹನ ಚಲಾಯಿಸುತ್ತಿರುವುದು ಗಂಭೀರ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ಸರಕಾರ ಈ ಸಂಬಂಧ ಕಾನೂನುಗಳನ್ನು ಇನ್ನಷ್ಟು ಕಠಿಣಗೊಳಿಸಲು ತೀರ್ಮಾನಿಸಿದೆ. ಇದರಂಗವಾಗಿ 18 ವರ್ಷ ಪ್ರಾಯಪೂರ್ತಿಯಾಗದವರಿಗೆ ಇನ್ನು ವಾಹನಗಳನ್ನು ಚಲಾಯಿಸಲು ನೀಡಿದ ಆರ್‌ಸಿ ಮಾಲಕರು 25,೦೦೦ ರೂಪಾಯಿ ದಂಡ ಪಾವತಿ ಮಾತ್ರವಲ್ಲದೆ 6 ತಿಂಗಳು ಜೈಲು ಶಿಕ್ಷೆಯನ್ನು ಕೂಡಾ ಅನುಭವಿಸಬೇಕಾಗಿ ಬರಲಿದೆ. ಮಾತ್ರವಲ್ಲದೆ ಪ್ರಾಯಪೂರ್ತಿಯಾಗಿಲ್ಲವೆಂಬ ಹೆಸರಲ್ಲಿ ಇದುವರೆಗೆ ರಿಯಾಯಿತಿ ಲಭಿಸುತ್ತಿದ್ದ ಅಪ್ರಾಪ್ತ ವಾಹನ ಚಾಲಕರಿಗೆ ಇನ್ನುಮುಂದೆ ಜುವನೈಲ್ ಹೋಮ್‌ನಲ್ಲಿ 6 ತಿಂಗಳು ವಾಸಿಸಬೇಕಾಗಿ …

ಎಂ.ವಿ. ಗೋವಿಂದನ್‌ರ ಪ್ರಚಾರ ಜಾಥಾದಲ್ಲಿ ವೃದ್ದ ನೀಡಿದ ಕೊಡುಗೆಗೆ ಟ್ವಿಸ್ಟ್: ಹಣ ನೀಡಿದ್ದು ಮುಖಂಡರ ನಿರ್ದೇಶ ಪ್ರಕಾರವೆಂದು ಹೇಳಿಕೆ

ಕಲ್ಲಿಕೋಟೆ: ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಮುನ್ನಡೆಸುವ ಪ್ರಚಾರ ಜಾಥಾದ ವೇದಿಕೆಯಲ್ಲಿ ವೃದ್ದರೋರ್ವರು ನಗದು ಕೊಡುಗೆಯಾಗಿ ನೀಡಿದ ಘಟನೆಯಲ್ಲಿ ಟ್ವಿಸ್ಟ್ ಉಂಟಾಗಿದೆ. ಹಣ ನೀಡಿರುವುದು ಮುಖಂಡರ ನಿರ್ದೇಶ ಪ್ರಕಾರವೆಂದು ವೃದ್ದ ಬಹಿರಂಗಪಡಿಸಿದ್ದಾರೆ. ಫೆಬ್ರವರಿ ೯ರಂದು ಬಾಲುಶ್ಶೇರಿ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊಯ್ದೀನ್ ಎಂಬ ವೃದ್ದರು ವೇದಿಕೆಗೆ ತಲುಪಿ ಇದು ಪಿಂಚಣಿ ಹಣ, ಇದನ್ನು ಪಕ್ಷಕ್ಕೆ ಕೊಡು ಗೆಯಾಗಿ ನೀಡುತ್ತೇನೆ ಎಂದಿದ್ದರು. ಹಣವನ್ನು ಪಡೆದು ಕೊಂಡ ರಾಜ್ಯ ಕಾರ್ಯದರ್ಶಿ ಕೊಡು ಗೆಯನ್ನು ಸ್ವೀಕರಿಸಿ ರುವುದಾಗಿ ಕಲ್ಪಿಸಿಕೊಳ್ಳಿ ಎಂದು …

ಭಾರತದಲ್ಲಿ ಮುಸ್ಲಿಮರು ಸುರಕ್ಷಿತರು; ಯಾವುದೇ ಸಂದಿಗ್ಧತೆಯಿಲ್ಲ- ಕಾಂತಾಪುರಂ

ದೆಹಲಿ: ಭಾರತದಲ್ಲಿ ಮುಸ್ಲಿಮರು ಸುರಕ್ಷಿತರಾಗಿದ್ದಾರೆಂದು ಕಾಂತಾಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ನುಡಿದರು. ತನ್ನ ಇಷ್ಟ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಾಂತಾಪುರಂ ಗಮನಾರ್ಹವಾದ ಈ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಮುಸ್ಲಿಮರಿಗೆ ಯಾವುದೇ ಸಂದಿಗ್ಧತೆ ಇಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗಿನ ಮಾತುಕತೆಯಲ್ಲಿ ಸಂತೋಷವಿದೆ ಎಂದು ಕಾಂತಾಪುರಂ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ವಕ್ಫ್, ತೀವ್ರ ಮತದಾರರ ಯಾದಿ ಪರಿಷ್ಕರಣೆ ಎಂಬೀ ವಿಷಯಗಳಲ್ಲಿ ಪ್ರಧಾನಮಂತ್ರಿಗೆ ತನ್ನ ಆತಂಕವನ್ನು ತಿಳಿಸಿರುವುದಾಗಿಯೂ ಅವರು ನುಡಿದರು. ಪ್ರಧಾನಮಂತ್ರಿಯೊಂದಿಗಿನ ಮಾತುಕತೆಯ ಹೆಚ್ಚಿನ ಮಾಹಿತಿಗಳನ್ನು ಬಳಿಕ ಸ್ಪಷ್ಟಪಡಿಸುವುದಾಗಿ ಅವರು ಈ ಸಂದರ್ಭದಲ್ಲಿ …