ಪತ್ನಿಗೆ ಇರಿದು ಕೊಲೆ ಯತ್ನದ ಬಳಿಕ ನೇಣು ಬಿಗಿದು ಆತ್ಮಹತ್ಯೆಗೈದ ಇಬ್ರಾಹಿಂ

ಹೊಸದುರ್ಗ: ಗೃಹಿಣಿಯನ್ನು ಕಡಿದು ಕೊಲೆಗೈಯ್ಯಲು ಯತ್ನಿಸಿದ ಬಳಿಕ ಪತಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಸಂಭವಿಸಿದೆ. ಕಾಞಂಗಾಡ್, ಕಡಪ್ಪುರಂ, ಬಾವನಗರ ಇಲ್ಯಾಸ್‌ನಗರದಲ್ಲಿ ರಂಜಾನ್ ವ್ರತಾಚರಣೆ ಆರಂಭ ಗೊಂಡ ದಿನದಂದೇ ದಾರುಣವಾದ ಘಟನೆ ನಡೆದಿದೆ. ಇಬ್ರಾಹಿಂ (62) ಆತ್ಮಹತ್ಯೆಗೈದವರು. ಇವರ ಪತ್ನಿ ಮರಿಯ (೫೫)ರನ್ನು ಗಂಭೀರ ಇರಿತದ ಗಾಯದೊಂದಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಮುಂಜಾನೆ ಘಟನೆ ನಡೆದಿದೆ. ಕುಟುಂಬ ಸಮಸ್ಯೆ ಬಗ್ಗೆ ಇಬ್ಬರಲ್ಲಿ ವಾಗ್ವಾದ ವೇರ್ಪಟ್ಟಿರುವುದಾಗಿ ಹೇಳಲಾಗುತ್ತಿದೆ. ಈ ಮಧ್ಯೆ ರೋಷಗೊಂಡ ಇಬ್ರಾಹಿಂ ಕತ್ತಿ ತೆಗೆದು ಮರಿಯಂರ …

ಭಾರತೀಯ ನೌಕಾ ಪಡೆಯಲ್ಲಿ ಬೇಹುಗಾರಿಕೆ: ಬಾಂಗ್ಲಾದೇಶದ ಪ್ರಜೆ ಸೆರೆ

ಕೊಚ್ಚಿ: ಭಾರತೀಯ ನೌಕಾ ಪಡೆಯಲ್ಲಿ ಬೇಹುಗಾರಿಕೆ ನಡೆಸಿ ಅದರ ಗುಪ್ತ ಮಾಹಿತಿಗಳನ್ನು ಶತ್ರುರಾಷ್ಟ್ರವಾದ ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಮೂಲತಃ ಬಾಂಗ್ಲಾದೇಶದ  ಪ್ರಜೆಯಾಗಿ ರುವುದಾಗಿ ಶಂಕಿಸಲಾಗುತ್ತಿರುವ ಹಾಗೂ ಪಶ್ಚಿಮ ಬಂಗಾಲದ ಬರ್ಗಾರಿಯಾದಲ್ಲಿ ವಾಸಿಸುತ್ತಿರುವ ಅಲೀಫ ಇಸ್ಲಾಂ (21) ಎಂಬಾತನನ್ನು ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸರು ಇಡುಕ್ಕಿಯಿಂದ ಬಂಧಿಸಿದ್ದಾರೆ. ಭಾರತೀಯ ಸೇನಾ ಪಡೆಗೆ ಸೇರಿದ ಕೊಚ್ಚಿನ್ ಶಿಫ್ ಯಾರ್ಡ್‌ನ ಮಲ್ಪೆ ಘಟಕದ ಹಡಗು ನಿರ್ಮಾಣಗಳ ಬಗ್ಗೆ   ಭಾತೀಯ ನೌಕಾ ಪಡೆಯ  ಉಪಕರಣಗಳು,  ಇತರ ಚಟುವಟಿಕೆಗಳು ಹಾಗೂ ಭಾರತೀಯ ಸೇನಾ ಪಡೆಗೆ ಸಂಬಂಧಿಸಿದ …

ಕುಂಬಳೆ ಬಳಿಯ ಯುವಕ ಮಂಗಳೂರಿನ ವಾಸಸ್ಥಳದಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ:  ಕುಂಬಳೆ ಬಳಿಯ ಯುವಕನೋರ್ವ ಮಂಗಳೂರಿನ ವಾಸಸ್ಥಳದಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕುಂಬಳೆ ಮಾವಿನಕಟ್ಟೆ ಬಳಿಯ ವಾಳವಳಪ್ ನಿವಾಸಿ ಉದಯ ಎಂಬವರ ಪುತ್ರ  ರೋಶನ್ (22) ಮೃತ ಯುವಕನಾಗಿದ್ದಾನೆ. ಮೊನ್ನೆ ರಾತ್ರಿ  ಘಟನೆ ನಡೆದಿದೆ. ಕದ್ರಿ ಶಿವಭಾಗ್ ಬಳಿಯ ಅಪಾರ್ಟ್‌ಮೆಂಟ್‌ನ ಕೊಠಡಿಯಲ್ಲಿ ಮೃತದೇಹ ಕಂಡುಬಂದಿದೆ.  ಕೈಯ ನರ ಕತ್ತರಿಸಿದ ಬಳಿಕ ನೇಣು ಬಿಗಿದು ಸಾವಿಗೀಡಾಗಿರಬಹುದೆಂದು  ಸಂಶಯಿಸಲಾಗುತ್ತಿದೆ. ಕೊಠಡಿಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಕೂಲ್ ಬಾರ್‌ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ರೋಶನ್ ಒಂದು ವಾರ ಹಿಂದೆ ಮನೆಗೆ ಬಂದು  …

ನಿವೃತ್ತ ಡೆಪ್ಯುಟಿ ಕಲೆಕ್ಟರ್ ಜಿ.ಕೆ. ಶೆಟ್ಟಿ ನಿಧನ

ಕಾಸರಗೋಡು: ನಿವೃತ್ತ ಡೆಪ್ಯುಟಿ ಕಲೆಕ್ಟರ್, ಕಾಸರಗೋಡು ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ಸ್ಥಾಪಕ ಅಧ್ಯಕ್ಷ, ರಾಜ್ಯ ಕಾರ್ಯದರ್ಶಿ ಹಾಗೂ ಕೇರಳ ಕ್ರಿಕೆಟ್ ಅಸೋಸಿಯೇಶನ್ ಸೆಲೆಕ್ಷನ್ ಸಮಿತಿ ಸದಸ್ಯನಾಗಿದ್ದ ಎಚ್. ಗೋಪಾಲಕೃಷ್ಣ ಶೆಟ್ಟಿ ಎಂಬ ಜಿ.ಕೆ. ಶೆಟ್ಟಿ (80) ನಿಧನ ಹೊಂದಿದರು. ಕಾಸರಗೋಡು ಕೇಳುಗುಡ್ಡೆಯ ಗಿರಿಜ ನಿವಾಸದಲ್ಲಿ ಅಂತ್ಯ ಸಂಭವಿಸಿದೆ. ಕಾಸರಗೋಡು ಯವನಿಕ ಅಧ್ಯಕ್ಷ, ಬಂಟ್ಸ್ ಸಂಘದ ಜಿಲ್ಲಾಧ್ಯಕ್ಷ, ಕಾರ್ಯದರ್ಶಿ, ಆಲಪ್ಪುಳ, ಇಡುಕ್ಕಿ ಜಿಲ್ಲೆಗಳಲ್ಲಿ ಡೆಪ್ಯುಟಿ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಇವರ ಪತ್ನಿ ಗೀತ ಈ ಹಿಂದೆ ನಿಧನ …

ಪತಿ ಮಸೀದಿಗೆ ತೆರಳಿದ ಸಂದರ್ಭದಲ್ಲಿ ಪತ್ನಿ ನೇಣು ಬಿಗಿದು ಮೃತ್ಯು

ಉಪ್ಪಳ: ಪತಿ ಮಸೀದಿಗೆ ತೆರಳಿದ ಸಮಯದಲ್ಲಿ ಪತ್ನಿ ಫ್ಲ್ಯಾಟ್‌ನಲ್ಲಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಉಪ್ಪಳ ಅಲ್ಮಿನಾ ಫ್ಲ್ಯಾಟ್‌ನಲ್ಲಿ ವಾಸಿಸುವ ಮುಹಮ್ಮದ್ ತನ್ಸಿಲ್ ಅಬ್ದುಲ್ ರಶೀದ್‌ರ ಪತ್ನಿ ಅಪ್ಸೀನಾ ಬಾನು (28) ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದವರು. ನಿನ್ನೆ ರಾತ್ರಿ 9 ಗಂಟೆಯಿಂದ 10 ಗಂಟೆ ಮಧ್ಯೆ ಘಟನೆ ನಡೆದಿದೆ. ಪತಿ ನಮಾಜಿಗೆಂದು ಮಸೀದಿಗೆ ಹೋಗಿದ್ದರು. ಹಿಂತಿರುಗಿದಾಗ ಪತ್ನಿ ಮಲಗುವ ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಂದೆಯ ಸಹೋದರನ ದೂರಿನಂತೆ …

ವೈದ್ಯೆಯ ಕುರ್ಚಿ, ಮೇಜಿನ ಮೇಲೆ ತುರಿಕೆ ಹುಡಿ: ನೌಕರರ ವಿರುದ್ಧ ಕೇಸು

ಕಾಸರಗೋಡು:  ಪೂರ್ವದ್ವೇ ಷದ ಹಿನ್ನೆಲೆಯಲ್ಲಿ ವೈದ್ಯೆಯ ಕುರ್ಚಿ ಹಾಗೂ ಮೇಜಿನ ಮೇಲೆ ತುರಿಕೆಯ ಹುಡಿಯನ್ನು ಚೆಲ್ಲಿರುವುದಾಗಿ ದೂರಲಾಗಿದೆ.  ಘಟನೆ ಬಗ್ಗೆ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮಾವುಂಗಾಲ್‌ನ ಇಸಿಎಚ್‌ಎಸ್ ಆಸ್ಪತ್ರೆಯ ವೈದ್ಯೆ ಹೊಸದುರ್ಗ ಕೃಷ್ಣ ಮಂದಿರ ರಸ್ತೆಯ  ಡಾ| ಟಿ.ಕೆ. ಶರ್ಮಿನ(37) ನೀಡಿದ ದೂರಿನಂತೆ ನೌಕರ ಜಯಕೃಷ್ಣನ್, ಲ್ಯಾಬ್ ಟೆಕ್ನೀಶನ್ ಅಂಜಲಿ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ.  ಕಳೆದ ದಿನ ಬೆಳಿಗ್ಗೆ  ವೈದ್ಯೆಯ ತಪಾಸಣೆ ಕೊಠಡಿಯ ಕುರ್ಚಿ ಹಾಗೂ ಮೇಜಿನ ಮೇಲೆ ತುರಿಕೆ ಹುಡಿ  …

ನವ ಕೇರಳ ಸರ್ವೇ ಹೈಕೋರ್ಟ್ ರದ್ದುಗೊಳಿಸಿದ 24 ಗಂಟೆಯೊಳಗೆ ಸುಪ್ರೀಂಕೋರ್ಟ್‌ನಲ್ಲಿ ಸರಕಾರದಿಂದ ಅಪೀಲು

ತಿರುವನಂತಪುರ: ನವಕೇರಳ ಸಮೀಕ್ಷೆ ರದ್ದುಗೊಳಿಸಿದ ಹೈಕೋರ್ಟ್ ನ ತೀರ್ಪು ವಿರುದ್ಧ ರಾಜ್ಯ ಸರಕಾರ 24 ಗಂಟೆಯೊಳಗೆ ಸುಪ್ರೀಂಕೋರ್ಟ್ ನಲ್ಲಿ ಅಪೀಲು ಸಲ್ಲಿಸಿದೆ. ಸರಕಾರದ ಈ ಅತೀ ವೇಗ ನಡೆ ಜನರಲ್ಲಿ ಕೌತುಕಕ್ಕೆ ಕಾರಣವಾಗಿದೆ. ಸರಕಾರದ ನಿಲುವು ಪರವಾದ ತೀರ್ಮಾನವಾ ಗಿದೆ ನವಕೇರಳ ಸಮೀಕ್ಷೆಯೆಂದು, ಹೈಕೋರ್ಟ್ ತೀರ್ಪಿನಲ್ಲಿ ಲೋಪದೋಷವಿದೆಯೆಂದು ಅರ್ಜಿಯಲ್ಲಿ ಸರಕಾರ ಸೂಚಿಸಿದೆ. ಕ್ಯಾಬಿನೆಟ್ ತೀರ್ಮಾನವನ್ನು ಹೈಕೋರ್ಟ್ ಹೇಗೆ ರದ್ದುಗೊಳಿಸುವುದೆಂದು ಅಪೀಲಿನಲ್ಲಿ ಪ್ರಶ್ನಿಸಲಾಗಿದೆ. ಆದರೆ ಸಮೀಕ್ಷೆಗೆ ಅಗತ್ಯವಾದ ಮೊತ್ತ ಬಜೆಟ್‌ನಲ್ಲಿ ಮೀಸಲಿಟ್ಟಿಲ್ಲವೆಂದು ಹಣಕಾಸು ಇಲಾಖೆಯ ಅನುಮತಿ ಇಲ್ಲದೆ ಸರಕಾರ …

ವಿಧಾನಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಎಂ.ಎಲ್. ಅಶ್ವಿನಿ, ಕೆ. ಸುರೇಂದ್ರನ್

ಕಾಸರಗೋಡು: ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ಧಗೊಂಡಿದ್ದು, ಅದರಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಸಹಿತ ಹಲವರು ಪ್ರಮುಖರ ಹೆಸರುಗಳಿರು ವುದಾಗಿ ತಿಳಿದುಬಂದಿದೆ. ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಎಂ.ಎಲ್. ಅಶ್ವಿನಿ ಪರಿಗಣನೆಯಲ್ಲಿದ್ದಾರೆ. ಅದೇ ರೀತಿ ಮಂಜೇಶ್ವರದಲ್ಲಿ  ಕೆ. ಸುರೇಂದ್ರನ್ ರನ್ನು ಸ್ಪರ್ಧೆಗಿಳಿಸಲು ನಿರ್ಧರಿಸ ಲಾಗಿದೆ.  2016ರಲ್ಲಿ ನಡೆದ ಚುನಾವಣೆಯಲ್ಲಿ ಮಂಜೇಶ್ವರ ಮಂಡಲದಲ್ಲಿ  ಸ್ಪರ್ಧಿಸಿದ್ದ ಕೆ. ಸುರೇಂದ್ರನ್ ೮೯ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು. 2021 ರಲ್ಲಿ ಎ.ಕೆ.ಎಂ. ಅಶ್ರಫ್ 65,758 ಮತಗಳಿಸಿ ಗೆಲುವು ಸಾಧಿಸಿದ್ದರು. …

ಸೇವ್ ಬಾಕ್ಸ್ ವಂಚನೆ: ನಟ ಜಯಸೂರ್ಯರ 39.1 ಲಕ್ಷ ರೂ. ಮೌಲ್ಯದ ಆಸ್ತಿ ಇ.ಡಿ ಮುಟ್ಟುಗೋಲು

ಎರ್ನಾಕುಳಂ: ತೃಶೂರು ಕೇಂದ್ರವಾಗಿ ಕಾರ್ಯಾಚರಿಸುತ್ತಿರುವ ‘ಸೇವ್ ಬೋಕ್ಸ್ ಬಿಡ್ಡಿಂಗ್ ಆಪ್’  ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮಲಯಾಳಂ ಸಿನಿಮಾ ನಟ ಜಯಸೂರ್ಯರ 39.1 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶ ನಾಲಯ (ಇ.ಡಿ) ಮುಟ್ಟುಗೋಲು ಹಾಕಿದೆ. ಸೇವ್ ಬಾಕ್ಸ್ ಆಪ್‌ನ ರಾಯ ಬಾರಿಯಾಗಿರುವ ಜಯಸೂರ್ಯರನ್ನು ಇ.ಡಿ ಈ ಹಿಂದೆ ಎರಡು ಬಾರಿ ವಿಚಾ ರಣೆಗೊಳಪಡಿಸಿ ಅವರ ಹೇಳಿಕೆಗಳನ್ನು ದಾಖಲಿಸಿ ಕೊಂಡಿತ್ತು. ಅದಾದ ಬೆನ್ನಲ್ಲೇ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿರುವ ಈ ಕ್ರಮ ಕೈಗೊಂಡಿದೆ. ಠೇವಣಿ ಹೂಡುವಿಕೆ ಹಾಗೂ …

ಬಾಯಾರು- ಕನಿಯಾಲ ರಸ್ತೆ ಬದಿ ತುಂಬಿಕೊಂಡ ಪೊದೆ: ವಾಹನ ಸಂಚಾರಕ್ಕೆ ಸಮಸ್ಯೆ

ಪೈವಳಿಕೆ: ಪಂಚಾಯತ್ ವ್ಯಾಪ್ತಿಯ ಬಾಯಾರು ಸರ್ಕುತ್ತಿ- ಕನಿಯಾಲ ರಸ್ತೆಯ ಇಕ್ಕಡೆಗಳಲ್ಲಿ ಕಾಡು ಪೊದೆ ಆವರಿಸಿಕೊಂಡು ವಾಹನ ಸಂಚಾರಕ್ಕೆ ಸಮಸ್ಯೆಯಾ ಗುತ್ತಿರುವುದಾಗಿ ದೂರಲಾಗಿದೆ. ಬದಿಯಲ್ಲಿನ ಪೊದೆಗಳು ರಸ್ತೆಗೆ ಬಾಗಿಕೊಂಡಿದ್ದು, ಇದರಿಂದಾಗಿ ಮುಂದಿನಿಂದ ಆಗಮಿಸುವ ವಾಹನಗಳು ಕಣ್ಣಿಗೆ ಮರೆಯಾಗುತ್ತಿವೆ.  ವಾಹನಗಳಿಗೆ ಸೈಡ್ ನೀಡಲು ಕೂಡಾ ಇಲ್ಲಿ ಸಾಧ್ಯವಾಗುತ್ತಿಲ್ಲ ಎಂದು ಚಾಲಕರು ದೂರಿದ್ದು, ಇದು ಅಪಘಾತ ಭೀತಿ ಹೆಚ್ಚಿಸಿದೆ. ರಸ್ತೆಯುದ್ದಕ್ಕೂ ಚಾಚಿಕೊಂಡಿರುವ ಕಾಡುಪೊದೆಗಳನ್ನು ಕಡಿದು ಶುಚಿಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ಸಂಬಂಧಪಟ್ಟವರು ಮುಂದಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.