ಗೃಹಿಣಿಯನ್ನು ದೂಡಿ ಹಾಕಿ ಉಪಟಳ: ದೂರು ದಾಖಲು

ನೀಲೇಶ್ವರ: ಮನೆ ಹಿತ್ತಿಲಲ್ಲಿ ನಡೆದುಕೊಂಡು ಹೋಗುತ್ತಿರುವಾಗ ತಡೆದ ದ್ವೇಷದ ಹಿನ್ನೆಲೆಯಲ್ಲಿ   ಅವಾಚ್ಯವಾಗಿ ಬೈದು ದೂಡಿರುವು ದಾಗಿ ದೂರಲಾಗಿದೆ. ಘಟನೆಯಲ್ಲಿ ನೀಲೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಕಾಟಿಪೊಯಿಲ್ ಕಕ್ಕೋಡ್ ಕೆ. ರಾಘವನ್‌ರ ಪತ್ನಿ ಎಂ. ಕೌಸಲ್ಯ (57) ನೀಡಿದ ದೂರಿನಂತೆ ಕಿನಾನೂರು ಕಕ್ಕೋಟ್‌ನ ವಿನೋದ್‌ನ ವಿರುದ್ಧ ಕೇಸು ದಾಖಲಿಸಲಾಗಿದೆ. ಮಂಗಳವಾರ ಸಂಜೆ ೫ ಗಂಟೆ ವೇಳೆ ಕೇಸಿಗೆ ಆಸ್ಪದವಾದ ಘಟನೆ ನಡೆದಿದೆ. ದೂರುದಾತೆಯ ಮನೆ ಹಿತ್ತಿಲಿನ ಮೂಲಕ ವಿನೋದ್ ನಡೆದುಕೊಂಡು ಹೋಗುತ್ತಿದ್ದಾಗ ತಡೆದಿದ್ದರೆನ್ನಲಾಗಿದೆ. ಈ ದೇವೇಷದಿಂದ ದೂರುದಾತೆಯನ್ನು ತಡೆದು …

ವ್ಯಾಪಾರಿ ನಿಧನ

ಬಾಯಾರು: ಬಾಯಾರು ಪೆರ್ವೋಡಿ ಕುದ್ರಡ್ಕ ನಿವಾಸಿ ಹಿರಿಯ ವ್ಯಾಪಾರಿ ನಾರಾಯಣ ಪೂಜಾರಿ (68) ನಿಧನ ಹೊಂದಿದರು. ಅಸೌಖ್ಯ ಹಿನ್ನೆಲೆ ಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಮನೆ ಪರಿಸರದಲ್ಲಿ ಹಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದರು. ಮೃತರು ಪತ್ನಿ ಇಂದಿರ, ಮಕ್ಕಳಾದ ಅಶೋಕ್ ಪೂಜಾರಿ, ಅಜಿತ್ ಪೂಜಾರಿ, ಅನಿಲ್ ಪೂಜಾರಿ, ಸೊಸೆಯಂದಿ ರಾದ ಯಶ್ಚಿತ, ದೀಕ್ಷಿತ, ವಿದ್ಯಾಶ್ರೀ, ಸಹೋದರರಾದ ಐತ್ತಪ್ಪ ಪೂಜಾರಿ, ಕುಂಞಣ್ಣ ಪೂಜಾರಿ, ಸಹೋದರಿಯ ರಾದ ರಾಮಕ್ಕೆ, ಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ …

ಯತೀಶ್ ಕುಮಾರ್ ರೈಗೆ ಡಾಕ್ಟರೇಟ್

ಮುಳ್ಳೇರಿಯ: ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿಯಾಗಿ ನಿವೃತ್ತರಾದ ಯತೀಶ್ ಕುಮಾರ್ ರೈ ಮುಳ್ಳೇರಿಯ  ಹಂಪಿ ಕನ್ನಡ ವಿವಿಯಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಲಭಿಸಿದೆ. ಕರ್ನಾಟಕ ಮತ್ತು ಕೇರಳ ಕನ್ನಡ ಭಾಷಾ ಪಠ್ಯ ಪುಸ್ತಕಗಳ ತೌಲನಿಕ ಅಧ್ಯಯನ ವಿಷಯದ ಕುರಿತು ಇವರು ಪ್ರಬಂಧ ಮಂಡಿಸಿದ್ದರು. ಡಾ. ಹಾಮಾನ ಸಂಶೋಧನಾ ಕೇಂದ್ರ ಉಜಿರೆಯ ವಿದ್ಯಾರ್ಥಿಯಾಗಿ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಡಾ. ಸುಬ್ರಹ್ಮಣ್ಯ ಕೆ. ಇವರ ಮಾರ್ಗದರ್ಶನದಲ್ಲಿ ಇವರು ಅಧ್ಯಯನ ಕೈಗೊಂಡಿದ್ದರು. ಯತೀಶ್ ಕುಮಾರ್ ರೈ ಎಸ್‌ಎಸ್‌ಎ …

ಹಿಂದೂ ಸಮಾಜೋತ್ಸವ ಪ್ರತಾಪನಗರದಲ್ಲಿ ಮಾತೃಸಂಗಮ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ಮಟ್ಟದ ಹಿಂದೂ ಸಮಾಜೋತ್ಸವ ಮಾರ್ಚ್ ೧ರಂದು ಪ್ರತಾಪನಗರ ಶಿವಶಕ್ತಿ ಮೈದಾನದಲ್ಲಿ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಮಾತೃಸಂಗಮ ನಿನ್ನೆ ಸಂಜೆ ಗಣೇಶಮಂದಿರದಲ್ಲಿ ಜರಗಿತು. ಪಂಚಾಯತ್ ಸಮಿತಿಯ ಮಾತೃಮಂಡಳಿ ಅಧ್ಯಕ್ಷೆ ಪದ್ಮ ಮೋಹನ್‌ದಾಸ್ ಐಲ, ಆರ್‌ಎಸ್‌ಎಸ್ ತಾಲೂಕು ಸಹ ಕಾರ್ಯವಾಹ್ ಪವನ್ ಮುಟ್ಟಮ್ ಮಾತನಾಡಿದರು. ಸ್ಥಾನೀಯ ಸಮಿತಿ ಅಧ್ಯಕ್ಷ ರಮೇಶ್ ಆಳ್ವ ತಿಂಬರ, ವಾರ್ಡ್ ಪ್ರತಿನಿಧಿ ವಸಂತ ಕುಮಾರ್ ಮಯ್ಯ, ಗಣೇಶಮಂದಿರ ಸಮಿತಿ ಅಧ್ಯಕ್ಷ ನಾರಾಯಣ ಮಣಿಯಾಣಿ ಉಪಸ್ಥಿತರಿದ್ದರು. ವೀಣಾ ಹರಿಶ್ಚಂದ್ರ ಬಲ್ಲಾಳ್ ಸ್ವಾಗತಿಸಿ, ವ್ಯವಸ್ಥಾ …

ಬ್ರಹ್ಮಕುಮಾರಿ ಈಶ್ವರೀಯ ವಿ.ವಿಯಲ್ಲಿ ತ್ರಿಮೂರ್ತಿ ಶಿವಜಯಂತಿ

ಕಾಸರಗೋಡು: ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಕಾಸರಗೋಡು ಇದರ ವತಿಯಿಂದ ೯೦ನೇ ತ್ರಿಮೂರ್ತಿ ಶಿವಜಯಂತಿ ಕಾರ್ಯಕ್ರಮ ಶಿವರಾತ್ರಿಯಂದು ನಡೆಯಿತು. ನಿವೃತ್ತ ಎಎಸ್‌ಐ ಸಿ.ಎಚ್. ಬಾಬು ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಅನಂತರಾಮ ಪಿ. ಮುಖ್ಯ ಅತಿಥಿಯಾಗಿದ್ದರು. ಶಿವಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಈಶ್ವರೀಯ ವಿಶ್ವವಿದ್ಯಾಲಯ ಕಾಸರಗೋಡು ಇದರ ಮುಖ್ಯ ಸಂಚಾಲಕಿ ರಾಜಯೋಗಿನಿ ಬಿ.ಕೆ. ವಿಜಯಲಕ್ಷ್ಮಿ ಶಿವರಾತ್ರಿ ಸಂದೇಶ ನೀಡಿದರು. ಸರಕಾರಿ ಕಾಲೇಜಿನ ಸಹಾಯಕ ಪ್ರೊಫೆಸರ್ ರೋಹಿಣಿ, ಉಪನ್ಯಾಸಕ ಸತೀಶ್ ಡಿ. ಕರಿವೇಲಿ, ಎಸ್‌ಬಿಐ ಮೆನೇಜರ್ ರವಿಶಂಕರ್ ನಾಯರ್ ಶುಭ ಕೋರಿದರು. ಅತಿಥಿಗಳಾಗಿದ್ದ …