ಆದೂರು ಗೇರು ಸಂತತಿ ತೋಟದಲ್ಲಿ ಫಾರ್ಮ್ ಫೆಸ್ಟ್: ಸಾರ್ವಜನಿಕರಿಗೆ ಪ್ರಕೃತಿ ಸೌಂದರ್ಯ ಆಸ್ವಾದಿಸಲು ಅವಕಾಶ

ಅಡೂರು: ಗಾಳಿಮುಖ ಗೇರುಬೀಜ ಸಂತತಿ ತೋಟದಲ್ಲಿ ಹಸಿರು ಉಡುಗೆ ತೊಟ್ಟ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ನಾಗರಿಕರಿಗೆ ಸುವರ್ಣಾವಕಾಶ ಒದಗಿಸಲಾಗುತ್ತಿದೆ. ಸರಕಾರದ ಅಧೀನದಲ್ಲಿರುವ ಫಾರ್ಮ್‌ಗಳನ್ನು ಜನಪರಗೊಳಿಸಬೇಕೆಂಬ ಕೃಷಿ ಸಚಿವರ ನಿರ್ದೇಶ ಪ್ರಕಾರ ಈ ತಿಂಗಳ 28, ಮಾರ್ಚ್ 1, 2ರಂದು ವಿಪುಲವಾದ ಫಾರ್ಮ್ ಫೆಸ್ಟ್ ನಡೆಯಲಿದೆ. ಮೂರು ದಿನಗಳಲ್ಲಾಗಿ ನಡೆಯುವ ಈ ಕೃಷಿ ಪ್ರದರ್ಶನ ಮಾರಾಟಮೇಳ ಆದೂರು ಗಾಳಿಮುಖ ಪ್ರದೇಶಗಳಲ್ಲಾಗಿ ವ್ಯಾಪಿಸಿರುವ ಗೇರುತೋಟದ ಸೌಂದರ್ಯವನ್ನು ಸಾರ್ವಜನಿಕರಿಗೆ ಸಮೀಪದಿಂದ ಸವಿಯಲು ಅವಕಾಶ ಒದಗಿಸಲಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಎಬ್ರಹಾಂ …

ಕಾರ್ಮಿಕಶ್ರೇಷ್ಠ ಪುರಸ್ಕಾರ ಜಿಲ್ಲೆಯ 3 ಮಂದಿಗೆ 27ರಂದು ಪ್ರದಾನ

ಕಾಸರಗೋಡು: ರಾಜ್ಯದ 20 ವಿಭಿನ್ನ ಉದ್ಯೋಗ ವಲಯಗಳ ಉತ್ತಮ ಕಾರ್ಮಿಕರಿಗಿರುವ ೨೦೨೪ನೇ ವರ್ಷದ ಉದ್ಯೋಗ ಶ್ರೇಷ್ಠ ಪುರಸ್ಕಾರಗಳಲ್ಲಿ ಮೂರು ಪುರಸ್ಕಾರಗಳು ಕಾಸರಗೋಡಿಗೆ ಲಭಿಸಿದೆ. ಮೇರಿಮೆಲ್ಡ (ಅಡುಗೆ), ಶಿಬು ಎ. (ಶೇಂದಿ ಕಾರ್ಮಿಕ), ಬಬಿತ ಬೇಬಿ (ಬಾರ್ಬರ್, ಬ್ಯೂಟೀಷ್ಯನ್) ಎಂಬಿವರಿಗೆ ಈ ಪುರಸ್ಕಾರ ಲಭಿಸಿದೆ. 1 ಲಕ್ಷ ರೂ. ಹಾಗೂ ಪ್ರಶಸ್ತಿ ಪತ್ರ ಅಡಕವಾಗಿರುವ ಪುರಸ್ಕಾರವನ್ನು ಈ ತಿಂಗಳ 27ರಂದು ತಿರುವನಂತಪುರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಚಿವ ವಿ. ಶಿವನ್ ಕುಟ್ಟಿ ಪ್ರದಾನ ಮಾಡುವರು. ಚೆರುವತ್ತೂರು ಮಡಕ್ಕರದ ರೆಸ್ಟೋರೆಂಟ್ ನಲ್ಲಿ …

ಬಿಜೆಪಿ ಬಜಕೂಡ್ಲು ಬೂತ್ ಸಮಿತಿ ರಚನಾ ಸಭೆ

ಪೆರ್ಲ: ಬಿಜೆಪಿ ಎಣ್ಮಕಜೆ ಪಂ. 12ನೇ ವಾರ್ಡು ಬಜಕೂಡ್ಲು 210ನೇ ಬೂತ್ ಸಮಿತಿ ಸಭೆ ಬಜಕೂಡ್ಲಿನ ಪದ್ಮನಾಭ ಸುವರ್ಣ ಅವರ ನಿವಾಸದಲ್ಲಿ ಜರುಗಿತು. ಪಂಚಾಯತ್ ಸಮಿತಿ ಅಧ್ಯಕ್ಷ ರಮಾನಂದ ಎಡಮಲೆ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಸಮಿತಿ ಕಾರ್ಯದರ್ಶಿ ಸುಮಿತ್‌ರಾಜ್, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಭಟ್ ಪತ್ತಡ್ಕ, ಕ್ಯಾಂಪ್ಕೋ ಮಾಜಿ ಉಪಾಧ್ಯಕ್ಷ ಶಂ.ನಾ ಖಂಡಿಗೆ, ಮಂ ಜೇಶ್ವರ ಬ್ಲಾಕ್ ಪಂ. ಸದಸ್ಯೆ ವಿದ್ಯಾ ಕುಮಾರಿ, ಗ್ರಾಮ ಪಂ. ಸದಸ್ಯ ಕೃಷ್ಣಪ್ಪ ಬಜಕೂಡ್ಲು, ಹಿರಿಯ ಕಾರ್ಯಕರ್ತ ಸದಾಶಿವ ಭಟ್ ಹರಿನಿಲಯ, …

ಸಜಿಪ ಕುಡೂರು ತರವಾಡಿನಲ್ಲಿ ಕೃಷ್ಣ ಕಾರ್ನವರ್ ಸಹಿತ ಹಿರಿಯರಿಗೆ ಸನ್ಮಾನ

ಉಪ್ಪಳ: ತೆನೆಕುಡಿಯ [ಸಾಲಿಯಾನ್] ಕುಟುಂಬಸ್ಥರ ವಯನಾಡು ಕುಲವನ್ ವಿಷ್ಣು ಮೂರ್ತಿ ಹಾಗೂ ಪರಿವಾರ ದೈವಗಳ ಕ್ಷೇತ್ರ ಸಜಿಪ ಕುಡೂರು ಇದರ ಮಾರ್ಗದರ್ಶಕ, ಶಿರಿಯ ಮಾವಿನಡಿ ಕೊಪ್ಪಳ ತರವಾಡು ಅಡ್ಕ ಶ್ರೀ ಭಗವತೀ ಕ್ಷೇತ್ರದ ಕೃಷ್ಣ ಕಾರ್ನ ವರ್‌ರಿಗೆ ಗೌರವರ್ಪಣೆ ನಡೆಯಿತು. ಇದೇ ಸಂದರ್ಭದಲ್ಲಿ ಅಡ್ಕ ಶ್ರೀ ಭಗವತೀ ಕ್ಷೇತ್ರದ ಪುಲ್ಲೂರಾಳಿ ತಂಬುರಾಟಿ ಪಾತ್ರಿ ಮೋನಪ್ಪ ಬೆಳ್ಚಪ್ಪಾಡ, ತರವಾಡಿನ ಹಿರಿಯ ಕೊಗ್ಗು ಬೆಳ್ಚಾಡ ಇವರನ್ನು ಸನ್ಮಾನಿಸ ಲಾಯಿತು. ಕಾರ್ಯಕ್ರಮದಲ್ಲಿ ತರವಾಡಿನ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು, ಉಪ್ಪಳ ಶ್ರೀ ಭಗವತೀ …