ಮೊಬೈಲ್ ಫೋನ್ ದುರಸ್ತಿಪಡಿಸಿ ನೀಡದ ವ್ಯಥೆ :ಪಿಯುಸಿ ವಿದ್ಯಾರ್ಥಿನಿ ವಿಷ ಸೇವಿಸಿ ಸಾವಿಗೆ ಶರಣು

ಕುಂಬಳೆ: ಮೊಬೈಲ್ ಫೋನ್‌ನ ಡಿಸ್ಲೇ ರಿಪೇರಿ ಮಾಡಿ ಕೊಡದಿರುವು ದರಿಂದ ಮನನೊಂದು  17ರ ಹರೆಯದ ವಿದ್ಯಾರ್ಥಿನಿ ಇಲಿ ವಿಷ ಸೇವಿಸಿ ಸಾವಿಗೆ ಶರಣಾದ ಘಟನೆ ನಡೆದಿದೆ. ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಕಿದೂರು ಕಳತ್ತೂರು ಶರವಂಕರ ಲಕ್ಷ್ಮೀ ನಿಲಯದ ದಾಮೋದರ ಎಂಬವರ ಪುತ್ರಿ ಎಂ.ಡಿ. ಪೂಜಾ (17) ಮೃತಪಟ್ಟ ವಿದ್ಯಾರ್ಥಿನಿಯಾಗಿ ದ್ದಾಳೆ. ಈಕೆ ಮಂಗಳೂರಿನಲ್ಲಿ  ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು. ಈ ಮಧ್ಯೆ ಹಳದಿ ಕಾಮಾಲೆ ಬಾಧಿಸಿ ದೀರ್ಘಕಾಲ ಚಿಕಿತ್ಸೆಯಲ್ಲಿದ್ದುದರಿಂದ ಶಿಕ್ಷಣ ಮೊಟಕುಗೊಂಡಿತ್ತು. ಮುಂದಿನ ವರ್ಷ ಶಿಕ್ಷಣ ಮುಂದುವರಿಸಲು ನಿರ್ಧರಿಸಿದ್ದಳೆನ್ನಲಾಗಿದೆ. …

ಮುಳ್ಳೇರಿಯ: ತಂಡದಿಂದ ಹಲ್ಲೆ; ಇಬ್ಬರು ಆಸ್ಪತ್ರೆಯಲ್ಲಿ ದಾಖಲು

ಮುಳ್ಳೇರಿಯ: ಮುಳ್ಳೇರಿಯದಲ್ಲಿ ನಿನ್ನೆ ನಡೆದ ಘರ್ಷಣೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಇವರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಆದೂರು ಸಿಎ ನಗರ ನಿವಾಸಿ ಹಾಶಿಫ್ (28), ಮುಳ್ಳೇರಿಯ ಪೂತಪ್ಪಲದ ರಹೀಸ್ (18) ಎಂಬಿವರು ಗಾಯಗೊಂಡಿದ್ದು, ಇವರು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಿನ್ನೆ ರಾತ್ರಿ ೭ ಗಂಟೆ ವೇಳೆ ಮುಳ್ಳೇರಿಯದ ಮಸೀದಿಯಿಂದ ಮರಳುತ್ತಿದ್ದ ವೇಳೆ ತಂಡವೊಂದು ಹಲ್ಲೆಗೈದು ಗಾಯಗೊಳಿಸಿರುವುದಾಗಿ ಗಾಯಾಳುಗಳು ಆರೋಪಿಸಿದ್ದಾರೆ. ಪೂರ್ವದ್ವೇಷದಿಂದ ತಂಡ ತಡೆದು ನಿಲ್ಲಿಸಿ ವಿನಾಕಾರಣ ಹಲ್ಲೆಗೈದಿದೆ ಎಂದೂ ದೂರಲಾಗಿದೆ.

ಸುಖೋಯ್ ಫೈಟರ್ ಜೆಟ್ ಪಥನ: ಇಬ್ಬರು ಪೈಲಟ್‌ಗಳ ದುರ್ಮರಣ  

ನವದೆಹಲಿ: ಅಸ್ಸಾಂನ ಕರ್ಬಿ ಆಂಗ್ಲಾಗ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆದ ಸುಖೋಯ್  30  ಜೆಟ್ ವಿಮಾನ ಪಥನಗೊಂಡು ಅದರಲ್ಲಿದ್ದ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದಾರೆ. ನಿನ್ನೆ ಸಂಜೆ ಈ ಜೆಟ್ ವಿಮಾನ ಜೋಹರ್ಟ್‌ನಿಂದ ಟೇಕ್ ಆಫ್ ಆದ ಸ್ವಲ್ಪ ಸಮ ಯದ  ಬಳಿಕ ವಿಮಾನ ರಾಡರ್ ಸಂಪರ್ಕ ಕಳೆದುಕೊಂಡಿತ್ತು. ನಂತರ ಆ ಬಗ್ಗೆ ಶೋಧ ನಡೆಸಿದಾಗ ವಿಮಾನ ಸುಮಾರು 60 ಕಿ.ಮೀ. ದೂರದಲ್ಲಿರುವ ಅಂಗ್ಲಾಂಗ್‌ನಲ್ಲಿ ಪಥನಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದರ ಪೈಲೆಟ್‌ಗಳಾದ ಸ್ಕ್ವಾಡನ್ ಲೀಡರ್ ಅನುಜ್ ಮತ್ತು ಫ್ಲೈಟ್ ಲೆಫ್ಟಿನೆಂಟ್ …

ಪತ್ನಿ ನೀಡಿದ ವಿವಾಹ ವಿಚ್ಛೇಧನ ಪ್ರಕರಣ ನಾಳೆ ಪರಿಗಣಿಸಲಿರುವಂತೆ ಯುವಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಪೈವಳಿಕೆ: ಕಯ್ಯಾರಿನಲ್ಲಿ ಯುವಕನೋರ್ವ ಮನೆ ಸಮೀಪದ ಮರದಲ್ಲಿ ನೇಣುಬಿಗಿದು ಸಾವಿಗೀಡಾ ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪಿಲಿಯನ್ನೂರಿನ ಬಾಲಚಂದ್ರ (44) ಮೃತಪಟ್ಟ ವ್ಯಕ್ತಿ. ನಿನ್ನೆ ಮಧ್ಯಾಹ್ನ ಮನೆ ಸಮೀಪದ ಮರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ವಿವಾಹ ವಿಚ್ಛೇಧನ ಆಗ್ರಹಿಸಿ ಪತ್ನಿ ದೀಪಿಕಾ ನೀಡಿದ ಪ್ರಕರಣವನ್ನು ನಾಳೆ ಪರಿಗಣಿಸಲಿರುವಂತೆ ಬಾಲಚಂದ್ರ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುಂಬಳೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.  ಬಾಲಚಂದ್ರರ ತಾಯಿ ಲಲಿತ ಈ ಹಿಂದೆ ನಿಧನರಾಗಿದ್ದರು. ಪತ್ನಿ ಹಾಗೂ ನಾಲ್ಕು …

ಉಪ್ಪಳದಲ್ಲಿ ವೈದ್ಯರಿಗೆ ಹಲ್ಲೆ: ಮೂರು ಮಂದಿ ವಿರುದ್ಧ ಕೇಸು

ಉಪ್ಪಳ: ಉಪ್ಪಳದ ಖಾಸಗಿ ಆಸ್ಪತ್ರೆಯೊಂದರ ಆವರಣದೊಳಗೆ ನುಗ್ಗಿದ ತಂಡ ವೈದ್ಯರಿಗೆ ಹಲ್ಲೆಗೈದ ಬಗ್ಗೆ ದೂರಲಾಗಿದೆ. ಉಪ್ಪಳ ರೈಲು ನಿಲ್ದಾಣ ರಸ್ತೆಯಲ್ಲಿರುವ ದೇವಿ ಪ್ರಸಾದ್ ಮಾವೆ ಆಸ್ಪತ್ರೆಯ ವೈದ್ಯ ಕುಮಾರ್ ಶಾಶ್ವತ್ (42) ಅವರಿಗೆ   ತಂಡ ಹಲ್ಲೆಗೈದಿದೆ. ಬಿಹಾರ್ ನಿವಾಸಿಯಾದ ಡಾ| ಕುಮಾರ್ ಶಾಶ್ವತ್ ಪ್ರಸ್ತುತ ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಹಲ್ಲೆಗೆ ಸಂಬಂಧಿಸಿ ವೈದ್ಯ ನೀಡಿದ ದೂರಿನಂತೆ ಮೂರು ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದಾರೆ. ಬುಧವಾರ ರಾತ್ರಿ ೮.೩೦ರ ವೇಳೆ ಘಟನೆ ನಡೆದಿದೆ. ಆಸ್ಪತ್ರೆ ಆವರಣದೊಳಗೆ …

ಆನ್‌ಲೈನ್ ಆರ್ಥಿಕ ವಂಚಕರಿಗೆ ಬಾಡಿಗೆಗೆ ಬ್ಯಾಂಕ್ ಖಾತೆ ನೀಡುವಿಕೆ: ಆಪರೇಶನ್ ಸೈ ಹಂಟ್ ಪ್ರಕಾರ ವ್ಯಾಪಕ ದಾಳಿ; ಜಿಲ್ಲೆಯಲ್ಲಿ 36 ಪ್ರಕರಣ ದಾಖಲು , 34 ಮಂದಿ ಸೆರೆ

ಕಾಸರಗೋಡು: ಆನ್‌ಲೈನ್ ಮೂಲಕ ಆರ್ಥಿಕ ವಂಚನೆ ನಡೆಸುತ್ತಿರುವ ವಂಚಕರಿಗಾಗಿ ಬಾಡಿಗೆಗೆ ಬ್ಯಾಂಕ್ ಖಾತೆ ನೀಡುವವರನ್ನು ಪತ್ತೆಹಚ್ಚಲು ಆಪರೇಶನ್ ಸೈ-ಹಂಟ್ ಎಂಬ ಹೆಸರಲ್ಲಿ ಪೊಲೀಸರು ವ್ಯಾಪಕ ಕಾರ್ಯಾಚರಣೆ ಆರಂಭಿಸಿದ್ದು, ಇದರಂತೆ ನಿನ್ನೆ ತನಕ ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 36 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಇದರಲ್ಲಿ ಅತೀ ಹೆಚ್ಚು ಎಂಬಂತೆ ಕಾಸರಗೋಡು ಪೊಲೀಸ್ ಠಾಣೆಯಲ್ಲಿ 12 ಪ್ರಕರಣಗಳು ದಾಖಲುಗೊಂಡಿವೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ನೀಡಿದ ನಿರ್ದೇಶ ಪ್ರಕಾರ ಜಿಲ್ಲಾ ಸೈಬರ್ ಕ್ರೈಂ ಪೊಲೀಸರು ಮತ್ತು ಸೈಬರ್ ಸೆಲ್‌ನ ಸಹಾಯದೊಂದಿಗೆ ಎಎಸ್‌ಪಿ …

ನಿವೃತ್ತ ಪ್ರಧಾನ ಅಧ್ಯಾಪಿಕೆ ನಿಧನ

ಸ್ವರ್ಗ: ನಿವೃತ್ತ ಪ್ರಧಾನ ಅಧ್ಯಾಪಿಕೆ ಸ್ವರ್ಗ ನಿವಾಸಿ ಶೀಲಾವತಿ (62) ನಿಧನ ಹೊಂದಿದರು. ಪಾಣಾಜೆ ಸರಕಾರಿ ಶಾಲೆಯ ಪ್ರಧಾನ ಅಧ್ಯಾಪಿಕೆಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತರು ಪತಿ ಅಚ್ಯುತ ಸ್ವರ್ಗ (ಕಾಂಗ್ರೆಸ್ ಕಾರ್ಯಕರ್ತ, ಮಕ್ಕಳಾದ ಶ್ರೀದೇವಿ, ಜಯಪದ್ಮ, ಉದಯರಾಜ್, ಪ್ರೇಮಲತ, ಅಳಿಯಂದಿರಾದ ನವೀನ್ ಕುಮಾರ್ ಬಾಡೂರು, ದಿಲೀನ್, ದಿವಾಕರ ಬಾಡೂರು, ಸೊಸೆ ಶ್ರೀದೇವಿ ಅಡ್ಯನಡ್ಕ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ವಿನಯ ಯೂತ್ ಕ್ಲಬ್ ಬಾಡೂರು ಸಂತಾಪ ಸೂಚಿಸಿದೆ.

ಬದಿಯಡ್ಕದಲ್ಲಿ ಬಸ್ ನಿಲ್ದಾಣ, ಬೋಳುಕಟ್ಟೆ ಮೈದಾನ ಆಧುನೀಕರಣ ಸಹಿತ ವಿವಿಧ ಅಭಿವೃದ್ಧಿ ಗುರಿಯಿರಿಸಿದ  ಪಂಚಾಯತ್ ಬಜೆಟ್ ಮಂಡನೆ

ಬದಿಯಡ್ಕ: ಪೇಟೆಯಲ್ಲಿ ಆಧುನಿಕ ಸೌಕರ್ಯವಿರುವ ಬಸ್ ನಿಲ್ದಾಣ, ಬೋಳುಕಟ್ಟೆ ಮೈದಾನವನ್ನು ಆಧುನೀಕರಣಗೊಳಿಸುವುದು, ಕುಡಿಯುವ ನೀರು, ಕೃಷಿ, ರಸ್ತೆ ಸಹಿತ ಸಮಗ್ರ ಅಭಿವೃದ್ಧಿಯನ್ನು ಗುರಿಯಿರಿಸಿ ಬದಿಯಡ್ಕ ಪಂಚಾಯತ್ ಬಜೆಟ್ ಮಂಡಿಸಲಾಗಿದೆ. ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ವಿಕಸಿತ ಬದಿಯಡ್ಕ ಧ್ಯೇಯವಾಕ್ಯದೊಂದಿಗೆ ಮಂಡಿಸಿದ ಬಜೆಟ್‌ನಲ್ಲಿ 50,10,466,48 ರೂ. ಆದಾಯ ಹಾಗೂ 43,15,171,98 ರೂ. ಖರ್ಚು ಅಂದಾಜಿಸಲಾಗಿದೆ. 69529450 ರೂ. ಉಳಿದಾಯ ನಿರೀಕ್ಷಿಸಲಾಗಿದೆ. ವಿವಿಧ ಹೊಳೆಗಳಿಗೆ ಅಣೆಕಟ್ಟು, ಹಿರಿಯರಿಗೆ ಮನೆ ಬಾಗಿಲಿಗೆ ಚಿಕಿತ್ಸೆ ಮೊದಲಾದವು ಬಜೆಟ್‌ನ ಪ್ರಮುಖ ಅಂಶಗಳಾಗಿವೆ. ಪಂಚಾಯತ್ ಅಧ್ಯಕ್ಷ ಶಂಕರ …

ಮಲಯಾಳ ಭಾಷಾ ಮಸೂದೆಗೆ ರಾಜ್ಯಪಾಲರ ಅಂಕಿತ: ಕಳವಳಗೊಂಡಿರುವ ಕಾಸರಗೋಡು ಕನ್ನಡಿಗರಿಂದ ಪ್ರತಿಭಟನೆ ತೀರ್ಮಾನಿಸಲು 10ರಂದು ಸಭೆ

ಕಾಸರಗೋಡು : ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಒಂದರಿAದ ಹತ್ತನೇ ತರಗತಿಯ ತನಕ ಮಲಯಾಳಂ ಭಾಷೆಯನ್ನು ಕಡ್ಡಾಯಗೊಳಿಸುವ ಕೇರಳ ಸರಕಾರದ ಮಲಯಾಳ ಭಾಷಾ ಮಸೂದೆಗೆ ಕೇರಳ ರಾಜ್ಯಪಾಲರು ಸಹಿ ಹಾಕಿರುವುದಕ್ಕೆ ಕಾಸರಗೋಡಿನಲ್ಲಿ ಸೇರಿದ ವಿವಿಧ ಕನ್ನಡ ಪರ ಸಂಸ್ಥೆಗಳ ಪ್ರತಿನಿಧಿಗಳ ಸಭೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಮಸೂದೆಯ ವ್ಯಾಪ್ತಿಯಿಂದ ಕಾಸರಗೋಡನ್ನು ಹೊರತುಪಡಿಸಬೇಕೆಂದು ಸಭೆ ಒತ್ತಾಯಿಸಿದೆ. ಕನ್ನಡ ಮಾಧ್ಯಮ ಮಾತ್ರ ಇರುವ ಕಾಸರಗೋಡಿನ 84 ಕನ್ನಡ ಶಾಲೆಗಳ ವಿದ್ಯಾರ್ಥಿಗಳಿಗೆ ಮಲಯಾಳಂ ಹೇರಲು ಮಲಯಾಳ ಅಧ್ಯಾಪಕರನ್ನು ನೇಮಕ ಮಾಡಿರುವ …

ಪ್ರಾಕೃತಿಕ ದುರಂತ: ಮನೆಗಳ ನಾಶನಷ್ಟಕ್ಕೆ ಆರ್ಥಿಕ ನೆರವು ನೀಡಲು ಗ್ರೂಪ್ ಇನ್‌ಶೂರೆನ್ಸ್ ಯೋಜನೆ

ಕಾಸರಗೋಡು: ಪ್ರಾಕೃತಿಕ ದುರಂತದಿಂದ  ಮನೆಗಳಿಗೆ ಹಾನಿ ಅಥವಾ ನಾಶನಷ್ಟ ಉಂಟಾದಲ್ಲಿ ಅಂತಹವರಿಗೆ ಆರ್ಥಿಕ ಸುರಕ್ಷತೆ ಖಾತರಿಪಡಿಸಲು ಗ್ರೂಪ್ ಇನ್‌ಶೂರೆನ್ಸ್ ಯೋಜನೆ ಜ್ಯಾರಿಗೊಳಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ರಾಜ್ಯ ಯೋಜನಾ ಆಯೋಗದ ಸದಸ್ಯ ರವಿ ರಾಮನ್ ನೇತೃತ್ವದ ಸಮಿತಿ ಈ ಬಗ್ಗೆ ಅಧಯನ ನಡೆಸಿ ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಮಾಡಲಾದ ಶಿಫಾರಸ್ಸುಗಳನ್ನು ಅಂಗೀಕರಿಸಿ ಅದಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಂತೆ ಮಳೆ, ಪ್ರವಾಹ, ಬಿರುಗಾಳಿ ಇತ್ಯಾದಿ ಪ್ರಾಕೃತಿಕ ದುರಂತಗ ಳಿಂದಾಗಿ ಮನೆ ನಷ್ಟಹೊಂದು ವವರಿಗೆಈ ಯೋಜನೆಯಿಂದ …