ನುಳ್ಳಿಪ್ಪಾಡಿಯಲ್ಲಿ ಲಿಫ್ಟ್ ಹೊಂಡದಲ್ಲಿ ಮೃತದೇಹ ಪತ್ತೆ ಪ್ರಕರಣ :ಯುವಕನ ಸಾವು ಕೊಲೆಯೆಂದು ಸಾಬೀತು; ಇಬ್ಬರು ಪೊಲೀಸ್ ಕಸ್ಟಡಿಗೆ 

ಕಾಸರಗೋಡು: ನಗರದ ನುಳ್ಳಿಪ್ಪಾಡಿ ರಾಷ್ಟ್ರೀಯ ಹೆದ್ದಾರಿ ಸಮೀಪ ನಿರ್ಮಿಸಲಾಗುತ್ತಿರುವ ಬಹು ಅಂತಸ್ತಿನ ಕಟ್ಟಡಕ್ಕೆ ಲಿಫ್ಟ್ ನಿರ್ಮಿಸಲು ತೋಡಲಾದ ನೀರು ತುಂಬಿದ ಹೊಂಡದಲ್ಲಿ ಮೊನ್ನೆರಾತ್ರಿ ಪತ್ತೆಯಾದ  ವ್ಯಕ್ತಿಯ ಮೃತದೇಹದ ಮರಣೋತ್ತರ ಪರೀಕ್ಷಾ ವರದಿ ಪೊಲೀಸರಿಗೆ ಲಭಿಸಿದ್ದು, ಇದರಲ್ಲಿ ವ್ಯಕ್ತಿಯ ಸಾವು ಕೊಲೆಯಾಗಿದೆ ಯೆಂದು ಸ್ಪಷ್ಟಗೊಂಡಿದೆ. ಮಾತ್ರವಲ್ಲ ಕೊಲೆಗೈಯ್ಯಲ್ಪಟ್ಟ ವ್ಯಕ್ತಿಯ ಗುರುತು ಪತ್ತೆಹಚ್ಚುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಮೃತ ವ್ಯಕ್ತಿ ಕರ್ನಾಟಕದ ಗದಗ ಜಿಲ್ಲೆಯ ಬಲೇಶ್ವರ ಬಾಲಹೊಸೂರು ನಿವಾಸಿ ಚಂದ್ರಶೇಖರ್ ಸುರೇಶ್ ಪಟ್ಟಾಡ್ (38) ಎಂಬವರೆಂದು ಗುರುತಿಸಲಾಗಿದೆ. ಇವರು ವಲಸೆ ಕಾರ್ಮಿಕನಾಗಿದ್ದರು. …

ಅಡುಗೆ ಅನಿಲ ಕ್ಷಾಮ : ಜಿಲ್ಲಾ ಪಂಚಾಯತ್ ಕ್ಯಾಂಟೀನ್‌ನಲ್ಲಿ ಸೌದೆ ಉಪಯೋಗಿಸಿ ಪರಂಪರಾಗತ ಅಡುಗೆ

ಕಾಸರಗೋಡು: ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಉಂಟಾಗಿರುವ ಸಮಸ್ಯೆ ತಾರಕಕ್ಕೇರುವ ಲಕ್ಷಣಗಳು ಗೋಚರಿಸುತ್ತಿದೆ. ಬೆಂಗಳೂರು, ಮಂಗಳೂರು ಮೊದಲಾದ ಪೇಟೆಗಳಲ್ಲಿ ವಾಣಿಜ್ಯ ಬಳಕೆಯ ಅಡುಗೆ ಅನಿಲ ಜಾಡಿಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಹೋಟೆಲ್, ರೆಸ್ಟೋರೆಂಟ್‌ಗಳನ್ನು ಮುಚ್ಚುವ ಪರಿಸ್ಥಿತಿ ಉಂಟಾಗಿರುವ ಮಧ್ಯೆ ಕಾಸರಗೋಡು ಜಿಲ್ಲೆಯಲ್ಲೂ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗೆ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ಹೋಟೆಲ್ಗಳು ಸೌದೆ ಒಲೆಯತ್ತ ತಿರುಗಿವೆ. ಕಾಸರಗೋಡು ಜಿಲ್ಲಾ ಪಂಚಾಯತ್‌ನ ನೇತೃತ್ವದ ಕುಟುಂಬಶ್ರೀ ಕಫೆಯಲ್ಲಿ ನಿನ್ನೆಯಿಂದ ಅಡುಗೆ ಒಲೆಯಲ್ಲಿ ಮಾಡಲು ಆರಂಭಿಸಿದ್ದಾರೆ. …

ಗೂಂಡಾ ಆಕ್ಟ್ ಪ್ರಕಾರ ಹಲವು ಪ್ರಕರಣಗಳ ಆರೋಪಿ ಬಂಧನ

ಕಾಸರಗೋಡು: ಗೂಂಡಾ ಆಕ್ಟ್ ಪ್ರಕಾರ ಹಲವು ಪ್ರಕರಣಗಳ ಆರೋಪಿಯನ್ನು ವಿದ್ಯಾನಗರ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಎಸ್. ಅನೂಬ್ ಬಂಧಿಸಿದ್ದಾರೆ. ಮಧೂರು ಶಿರಿಬಾಗಿಲು ಬಿ.ಆರ್.ಎಂ. ಹೌಸ್‌ನ ಅಬೂಬಕರ್ ಸಿದ್ದಿಕ್ ಬಿ.ಎ (31) ಬಂಧಿತ ಆರೋಪಿ. ವಿದ್ಯಾನಗರ, ಕಾಸರಗೋಡು, ಬದಿಯಡ್ಕ ಮತ್ತು ಆದೂರು ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಹಲವು ಕೇಸುಗಳಿವೆ. ಇದರಲ್ಲಿ ಮಾದಕದ್ರವ್ಯ ಪ್ರಕರಣಗಳೂ  ಒಳಗೊಂಡಿವೆಯೆಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣವೊಂದಕ್ಕೆ ಸಂಬಂಧಿಸಿ ಈ ಹಿಂದೆ ಬಂಧಿತನಾಗಿ ಆರೋಪಿ ಕಾಸರಗೋಡು ಸಬ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ವೇಳೆ ಯಲ್ಲೇ ಆತನ …

ಮನೆಯಲ್ಲಿ ಫ್ಯಾನ್ ರಿಪೇರಿ ವೇಳೆ ದುರ್ಘಟನೆ: ಆಟೋ ಚಾಲಕ ಶಾಕ್ ತಗಲಿ ಮೃತ್ಯು; ನಾಡಿನಲ್ಲಿ ಶೋಕಸಾಗರ

ಪೆರ್ಲ: ಆಟೋ ಚಾಲಕನಾದ ಯುವಕ ವಿದ್ಯುತ್ ಶಾಕ್ ತಗಲಿ ಮೃತಪಟ್ಟ ದಾರುಣ ಘಟನೆಯಿಂದ ಪೆರ್ಲ ಹಾಗೂ ಪರಿಸರ ಪ್ರದೇಶಗ ಳಲ್ಲಿ ಶೋಕಸಾಗರ ಸೃಷ್ಟಿಸಿದೆ. ಪಡ್ರೆ ಪರ್ತಾಜೆ ಶಿವಗಿರಿ ಅಂಗನವಾಡಿ ಸಮೀಪದ ನಿವಾಸಿಯಾ ದ ಧನ್‌ರಾಜ್ (40) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಮನೆಯ ಬೆಡ್‌ರೂಂನಲ್ಲಿ ಕಾರ್ಯಾಚರಿಸದ ಫ್ಯಾನ್ ರಿಪೇರಿ ಮಾಡುತ್ತಿದ್ದಾಗ ನಿನ್ನೆ ಮಧ್ಯಾಹ್ನ ೨.೩೦ರ ವೇಳೆ ದುರ್ಘಟನೆ ಸಂಭವಿಸಿದೆ. ಫ್ಯಾನ್ ರಿಪೇರಿ ವೇಳೆ ವಿದ್ಯುತ್ ಶಾಕ್ ತಗಲಿದೆ. ಇದರಿಂದ ತೀವ್ರ ಅಸ್ವಸ್ಥಗೊಂಡ ಧನ್‌ರಾಜ್‌ರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ  ಜೀವ …

ಕಲೆಕ್ಟರೇಟ್ ಪರಿಸರದಲ್ಲಿ ಕಾಡಿನೊಳಗೆ ವಾಹನದ ಅಸ್ಥಿಪಂಜರ: ನೋಡುಗರಿಗೆ ಭೀತಿ

ಕಾಸರಗೋಡು: ಈ ಕಾಡಿನಲ್ಲಿ ಹುಲಿ ಅಥವಾ ಚಿರತೆ ಇಲ್ಲ. ಆದರೆ ಈ ಚಿತ್ರವನ್ನು ಕಂಡರೆ ಇಲ್ಲಿ ಯಾವುದೋ ವನ್ಯ ಮೃಗ ಇದೆಯೆಂದು ಭಯವುಂಟಾಗಬಹುದು. ಕಾಸರಗೋಡು ಕಲೆಕ್ಟರೇಟ್ ಕಟ್ಟಡದ ಹಿಂಭಾಗದಲ್ಲಿ ಇಂತಹ ಭೀತಿ ಹುಟ್ಟಿಸುವ ದೃಶ್ಯವಿದೆ. ಅದಕ್ಕೆ ಹೊಂದಿಕೊಂಡು ಪಂಚಾಯತ್ ಡೆಪ್ಯುಟಿ ಡೈರೆಕ್ಟರ್ ಕಚೇರಿ ಕಾರ್ಯಾ ಚರಿಸುತ್ತಿದೆ. ಈ ಪ್ರದೇಶದಲ್ಲಿ ಕಾಡು ಪೊದೆಗಳು ಬೆಳೆದಿವೆ.  ಈ ಕಾಡಿನೊಳಗೆ ಒಂದು ಟಿಪ್ಪರ್ ಲಾರಿಯನ್ನು ಕಾಣ ಬಹುದಾಗಿತ್ತು. ಲಾರಿಯಲ್ಲಿದ್ದ  ಹೊಯ್ಗೆ ಈಗಲೂ ಇದೆ. ದಶಕಗಳ ಕಾಲ ಲಾರಿಯಲ್ಲಿದ್ದ ಹೊಯ್ಗೆ ಮೇಲೆ ಕಾಡು …

ಮಣ್ಣಂಗುಳಿ ಮೈದಾನ, ಅಂಗನವಾಡಿ ಪರಿಸರದ ತ್ಯಾಜ್ಯರಾಶಿಯಿಂದ ಸ್ಥಳೀಯರಿಗೆ ರೋಗಭೀತಿ

ಉಪ್ಪಳ: ಮಂಗಲ್ಪಾಡಿ ಪಂಚಾ ಯತ್ ವ್ಯಾಪ್ತಿಯ ಮಣ್ಣಂಗುಳಿ ಮೈದಾನ ರಸ್ತೆ ಹಾಗೂ ಪರಿಸರದ ಅಂಗನವಾಡಿ ಬಳಿಯಲ್ಲಿ ಭಾರೀ ಪ್ರಮಾಣದ ತ್ಯಾಜ್ಯ ರಾಶಿ ಸಂಗ್ರಹ ಗೊಂಡಿದ್ದು , ದುರ್ವಾಸನೆ ಬೀರುತ್ತಿ ರುವ ಹಿನ್ನೆಲೆಯಲ್ಲಿ ಸಾರ್ವಜನಿ ಕರು ಹಾಗೂ ಮಕ್ಕಳು ಸಮಸ್ಯೆ ಅನು ಭವಿಸು ತ್ತಿರುವುದಾಗಿ ದೂರಲಾಗಿದೆ. ಕಳೆದ ಹಲವಾರು ತಿಂಗಳುಗಳಿAದ ಮಣ್ಣಂಗುಳಿ ಮೈದಾನ ಪರಿಸರದ ವಿವಿಧ ರಸ್ತೆಗಳಲ್ಲಿ ಹಾಗೂ ಅಂಗನ ವಾಡಿ ಸಮೀಪದಲ್ಲೇ ಭಾರೀ ಪ್ರಮಾಣದ ತ್ಯಾಜ್ಯವಿದ್ದರೂ ತೆರವು ಗೊಳಿಸಲು ಕ್ರಮಕೈಗೊಳ್ಳದಿರುವು ದರಿಂದ ಮೂಗಿಗೆ ಕೈ ಹಿಡಿದು ತೆರಳುವ …

ಕೇಂದ್ರ ಸರಕಾರದ ಯೋಜನೆಗಳನ್ನು ಕಮ್ಯೂನಿಸ್ಟ್ ಸರಕಾರದ್ದೆಂದು ಬಿಂಬಿಸಲಾಗುತ್ತಿದೆ- ನಳಿನ್ ಕುಮಾರ್ ಕಟೀಲ್

ಬದಿಯಡ್ಕ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಎಲ್ಲಾ ವಿಭಾಗದವರಿಗೆ ಸಮಾನವಾದ ರೀತಿಯಲ್ಲಿ ಯೋಜನೆಗಳನ್ನು ತಲುಪಿಸುವಾಗ ಕೇರಳದಲ್ಲಿ ಕಮ್ಯುನಿಸ್ಟ್ ಸರಕಾರ ಕೇಂದ್ರ ಯೋಜನೆಗಳನ್ನು ಅನುಷ್ಠಾನಗೊಳಿಸದೆ, ಯೋಜನೆಗಳು ತಮ್ಮದೆಂದು ಬಿಂಬಿಸುವ ದುಷ್ಠ ಆಡಳಿತ ನಡೆಸುತ್ತಿರುವುದಾಗಿ ಕರ್ನಾಟಕ ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು. ಕುಂಬ್ಡಾಜೆ ಪಂಚಾಯತ್ ಮೈಲ್ತೊಟ್ಟಿ ಎಸ್‌ಸಿ ಕಾಲನಿಯಲ್ಲಿ ನಿನ್ನೆ ನಡೆದ ಕುಟುಂಬ ಸಂಗಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿಯು ಎಲ್ಲರ ಕ್ಷೇಮಕ್ಕಾಗಿ ಎಲ್ಲಾ ಪಂಗಡದವರಿಗೆ ಆದ್ಯತೆ ನೀಡುವ ಮೂಲಕ ಆಡಳಿತ ನಡೆಸುತ್ತಿದ್ದು, …

4 ತಿಂಗಳ ಗರ್ಭಿಣಿ ಯುವತಿ ಪತಿ ಗೃಹದಲ್ಲಿ ನೇಣು ಬಿಗಿದು ಮೃತ್ಯು: ನಿಗೂಢತೆ ಆರೋಪ

ಕೊಲ್ಲಂ: ನಾಲ್ಕು ತಿಂಗಳ ಗರ್ಭಿಣಿ ಯಾದ ಯುವತಿ ಪತಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾಳೆ. ಕೊಲ್ಲಂ ಕಡೈಕಲ್ ಇಟ್ಟಿವ ಫಿಲ್ಗಿರಿಯ ನಿವಾಸಿ ಸುಬಿನ್‌ರ ಪತ್ನಿ ಶರಣ್ಯ (26)ರ ಮೃತದೇಹ ಮಲಗುವ ಕೊಠಡಿಯ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಘಟನೆಯಲ್ಲಿ ನಿಗೂಢತೆ ಆರೋಪಿಸಿ ಯುವತಿಯ ಕುಟುಂಬ ಪೊಲೀಸರಿಗೆ ದೂರು ನೀಡಿದೆ. ಕಣ್ಣೂರು ನಿವಾಸಿ ಯಾದ ಶರಣ್ಯ ಹಾಗೂ ಸುಬಿನ್ ಒಂದು ವರ್ಷದ ಹಿಂದೆ ವಿವಾಹಿತರಾ ಗಿದ್ದರು. ನಿನ್ನೆ ಸಂಜೆ ನೆರೆಮನೆಯ ವಿದ್ಯಾರ್ಥಿ ಶರಣ್ಯಳ …

ಕಡಂಬಾರು ಶಾಲೆಗೆ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಉದ್ಘಾಟನೆ

ಕಡಂಬಾರು: ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ಲಾನ್‌ಫಂಡ್ ಉಪಯೋಗಿಸಿ ಕಡಂಬಾರು ಸರಕಾರಿ ಹೈಸ್ಕೂಲ್‌ಗೆ 1.09 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಆರು ತರಗತಿ ಕೊಠಡಿಗಳ ನಿರ್ಮಾಣ ಕಾಮಗಾರಿಯ ಉದ್ಘಾಟನೆಯನ್ನು ಶಾಸಕ ಎಕೆಎಂ ಅಶ್ರಫ್ ನಿರ್ವಹಿಸಿದರು. ಮೀಂಜ ಪಂಚಾಯತ್ ಅಧ್ಯಕ್ಷ ಸಿ.ಎ. ತಾಜುದ್ದೀನ್ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಜಿಲ್ಲಾ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನಾ ಇಕ್ಬಾಲ್, ಪಿಟಿಎ ಅಧ್ಯಕ್ಷ ಮೊಯ್ದೀನ್ ಕುಂಞಿ, ಮುಖ್ಯೋಪಾಧ್ಯಾಯ ಎಂ. ಅಶೋಕ, ಅಧ್ಯಾಪಕ ಅಬೂಬಕ್ಕರ್ ಮಾತನಾಡಿದರು.

ಎಕೆಪಿಎ ವೆಸ್ಟ್ ಯೂನಿಟ್‌ನಿಂದ ಮಹಿಳಾ ದಿನಾಚರಣೆ

ಕಾಸರಗೋಡು: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇ ಶನ್ ವೆಸ್ಟ್ ಯೂನಿಟ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯಂಗ ವಾಗಿ ಯೂನಿಟ್ ಸದಸ್ಯರ ಕುಟುಂಬದ ಹಿರಿಯ ಮಹಿಳೆಯನ್ನು ಅಭಿನಂದಿಸಲಾಯಿತು. ಯೂನಿಟ್ ಅಧ್ಯಕ್ಷ ವಸಂತ ಕೆರೆಮನೆಯವರ ತಾಯಿ ಉಮಾವತಿ ನಾರಾಯಣ ಆಚಾರ್ಯ ಕೆರೆಮನೆ ಇವರನ್ನು ಅವರ ನಿವಾಸಕ್ಕೆ ತೆರಳಿ ಎಕೆಪಿಎ ಜಿಲ್ಲಾ ಸಮಿತಿ ಸದಸ್ಯ ಮೈಂದಪ್ಪ ಕೆ.ಎಂ. ಅಭಿನಂದಿಸಿದರು. ಕಾರ್ಯದರ್ಶಿ ಶಾಲಿನಿ ರಾಜೇಂ ದ್ರನ್, ವಾರ್ಡ್ ಕೌನ್ಸಿಲರ್ ಕೆ.ಎನ್. ರಾಮಕೃಷ್ಣ ಹೊಳ್ಳ ಭಾಗವಹಿಸಿದರು.ಯೂನಿಟ್ ಅಧ್ಯಕ್ಷ ವಸಂತ ಕೆರೆಮನೆ, ಜಿಲ್ಲಾ ಜತೆ ಕಾರ್ಯದರ್ಶಿ …