ಗೋವಾದಲ್ಲಿ ವಾಹನ ಅಪಘಾತ: ನೀರ್ಚಾಲಿನ ಎಂಬಿಎ ವಿದ್ಯಾರ್ಥಿ ಮೃತ್ಯು

ನೀರ್ಚಾಲು: ಗೋವಾದಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ನೀರ್ಚಾಲು ಬಳಿಯ ಮಲ್ಲಡ್ಕ ನಿವಾಸಿ ವಿದ್ಯಾರ್ಥಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮಲ್ಲಡ್ಕ ನಿವಾಸಿ ನಿವೃತ್ತ ಶಿಕ್ಷಕ ವೀರೇಶ್ವರ ಕರ್ಮಲ್ಕರ್ ಎಂಬವರ ಪುತ್ರ ಪ್ರಜ್ವಲ್ ಕರ್ಮಲ್ಕರ್ (೨೬) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ಗೋವಾದಲ್ಲಿ ಎಂಬಿಎ ವಿದ್ಯಾರ್ಥಿಯಾಗಿದ್ದರು. ಕಳೆದ ಸೋಮವಾರ ಇವರು ಚಲಾಯಿಸಿದ ಸ್ಕೂಟರ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ತಂದೆ, ತಾಯಿ ಅನ್ನಪೂರ್ಣೇಶ್ವರಿ (ಶಿಕ್ಷಕಿ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಹೊಯ್ಗೆ ಮಾಫಿಯಾಗಳ ವಿರುದ್ಧ ಕಾಪಾ ಪ್ರಕಾರ ಕೇಸು ದಾಖಲಿಸಿ ಗಡಿಪಾರು -ಪೊಲೀಸ್ ಮುನ್ನೆಚ್ಚರಿಕೆ

ಕುಂಬಳೆ:  ಹೊಯ್ಗೆ ಸಾಗಾಟ ಮಾಫಿಯಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸರು ಮುನ್ನಚ್ಚರಿಕೆ ನೀಡಿದ್ದಾರೆ. ಇದರಂತೆ ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸಿ ಸಾಗಾಟ ನಡೆಸುವವರನ್ನು ಸೆರೆಹಿಡಿದು ಅವರ ವಿರುದ್ಧ ಕಳವು ಹಾಗೂ ಕಾಪಾ ಪ್ರಕರಣ ದಾಖಲಿಸಿ ಗಡಿಪಾರು ನಡೆಸಲಾಗುವುದು. ಗಡಿಪಾರು ಉಲ್ಲಂಘಿಸಿದಲ್ಲಿ  ಎರಡು ವರ್ಷ ವರೆಗೆ ಜೈಲು ಶಿಕ್ಷೆ ಲಭಿಸಬಹುದಾದ ಆರೋಪ ಹೊರಿಸಿ ಕೇಸು ದಾಖಲಿಸಲಾಗುವುದೆಂದು  ಕುಂಬಳೆ ಠಾಣೆ ಇನ್‌ಸ್ಪೆಕ್ಟರ್ ಬೈಜು ಕೆ ಥೋಮಸ್, ಎಸ್‌ಐಗಳಾದ ಕೆ. ಸನಿತ್, ಅನಂತಕೃಷ್ಣನ್ ಆರ್ ಮೆನೋನ್ ತಿಳಿಸಿದ್ದಾರೆ. ಹೊಳೆಗಳಿಂದ  ಅನಧಿಕೃತವಾಗಿ ಹೊಯ್ಗೆ …

ಬಿರು ಬೇಸಿಗೆಯಲ್ಲೂ ಸಮೃದ್ಧ ಜಲವಿರುವ ಕಾಡಾಯಿಕುಳಂ ಸಂರಕ್ಷಣೆಗೆ ಅಧಿಕೃತರಿಂದ ನಿರಾಸಕ್ತಿ

ಕಾಸರಗೋಡು: ಬಿರು ಬೇಸಿಗೆಯಲ್ಲೂ ಮೊಗ್ರಾಲ್ನ ಕಾಡಾಯಿಕುಳಂ ಜಲಸಮೃದ್ಧಿ ಯಲ್ಲಿದೆ. ಕೊಳವನ್ನು ಅಧಿಕೃತರು ಕೈ ಬಿಟ್ಟ ಕಾರಣ ಇದರ ನೀರಿನಲ್ಲಿ ಈಗ ಹಾವಸೆ ಹಾಗೂ ಸಸ್ಯಗಳು ಬೆಳೆದು ಕಾಡು ಆವರಿಸಿಕೊಂಡಿದೆ. ಮೊಗ್ರಾಲ್ ಶಾಲೆ ಬಳಿಯ ಜಲಸಮೃದ್ಧವಾದ ಕಾಡಾಯಿಕುಳಂ ನಾಶವಾಗುತ್ತಿದೆ. ಕಳೆದ ಮೂರು ದಶಕಗಳ ಮಧ್ಯೆ ಈ ಕೊಳವನ್ನು ಸಂರಕ್ಷಿಸಲು ಜಿಲ್ಲಾ ಪಂಚಾಯತ್ ಹಲವಾರು ಯೋಜನೆಗಳನ್ನು ಆವಿಷ್ಕರಿಸಿತ್ತು. ಅದರಲ್ಲಿ ಕೆಲವು ಯೋಜನೆಯಲ್ಲಿಯೇ ಕೊನೆಗೊಂಡಿತ್ತು. ಕೆಲವು ಆರಂಭಗೊಂಡರೂ ಮುಂದುವರಿ ಯಲಿಲ್ಲ. ಕಳೆದ ವರ್ಷ ಜಿಲ್ಲಾ ಪಂಚಾಯತ್ ಕಿರು ನೀರಾವರಿ ಇಲಾಖೆ ಅಧಿಕಾರಿಗಳನ್ನು …