ಪ್ರಚಾರಕ್ಕೆ ಹುರುಪು ನೀಡಿ ಕಲ್ಲಟ್ರ ಮಾಹಿನ್ ಹಾಜಿಯವರ ವಾಕತ್ತೋನ್

ಕಾಸರಗೋಡು: ಯುಡಿವೈಎಫ್, ಯುಡಿಎಸ್‌ಎಫ್ ಕಾಸರಗೋಡು ವಿಧಾನಸಭಾ ಮಂಡಲ ಸಮಿತಿ ನೇತೃತ್ವದಲ್ಲಿ ಬೆಳಿಗ್ಗೆ ವಿದ್ಯಾನಗರ ಮೈದಾನ ಪರಿಸರದಲ್ಲಿ ನಡೆಸಿದ ವಾಕತ್ತೋನ್ ಚುನಾವಣಾ ಚಟುವಟಿಕೆಗಳಿಗೆ ಹುರುಪು ನೀಡಿತು. ಕಲ್ಲಟ್ರ ಮಾಹಿನ್ ಹಾಜಿ ಜೊತೆಯಲ್ಲೇ ಯುವಕರು, ವಿದ್ಯಾರ್ಥಿಗಳು ಭಾಗವಹಿಸಿದರು.  ವ್ಯಾಯಮಕ್ಕಾಗಿ ಮೈದಾನಕ್ಕೆ ತಲುಪಿದ ವ್ಯಕ್ತಿಗಳು ಐಕ್ಯರಂಗದ ಅಭ್ಯರ್ಥಿಯನ್ನು ಸ್ವಾಗತಿಸಿದರು. ವಿದ್ಯಾನಗರ ಮೈದಾನ ನವೀಕರಣೆ ಸಹಿತದ ಕ್ರೀಡಾವಲಯಕ್ಕೆ ಅಗತ್ಯವಾದ ಹಲವಾರು ಬೇಡಿಕೆಗಳನ್ನು ಅಲ್ಲಿದ್ದವರು ಅಭ್ಯರ್ಥಿಯೊಂದಿಗೆ ಚರ್ಚಿಸಿದರು. ಶಾಸಕ ಎನ್.ಎ. ನೆಲ್ಲಿಕುನ್ನು, ಪಿ.ಎಂ. ಮುನೀರ್ ಹಾಜಿ, ಗೋವಿಂದನ್ ನಾಯರ್ ಸಹಿತ ಹಲವರು ಭಾಗವಹಿಸಿದರು.

ಕೇರಳವನ್ನು ವೃದ್ಧರ ಕೇಂದ್ರವಾಗಿ ಮಾಡಿರುವುದೇ ಎಡ-ಬಲ ಒಕ್ಕೂಟಗಳ ಸಾಧನೆ-ಸಿ. ಸದಾನಂದನ್ ಮಾಸ್ತರ್

ಕಾಸರಗೋಡು:  ಉನ್ನತ ಶಿಕ್ಷಣ ಸಂಸ್ಥೆಗಳು, ಉತ್ತಮ ಉದ್ಯೋಗಾ ವಕಾಶಗಳ ಕೊರತೆಯಿಂದ ಸ್ಥಳೀಯ ರಾದ ಯುವಕರನ್ನು ಕೇರಳದಿಂದ ಹೊರಗೆ ಕಳುಹಿಸಿ ವೃದ್ಧರಾಜ್ಯವನ್ನಾಗಿ  ಮಾಡಿರುವುದು ಎಡ-ಬಲ ಒಕ್ಕೂಟಗಳ ಆಡಳಿತ ಸಾಧನೆಯೆಂದು ರಾಜ್ಯ ಸಭಾ ಸದಸ್ಯ ಸಿ. ಸದಾನಂದನ್ ಮಾಸ್ತರ್ ನುಡಿದರು.  ಮಹಿಳಾ ಮೋರ್ಛಾದ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಕಚೇರಿಯಲ್ಲಿ ನಡೆಸಿದ ಮಹಿಳಾ ನಾಯಕತ್ವ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಸ್ಥಳೀಯರಾದ ಕಾರ್ಮಿಕರ ಕೊರತೆ ಕಾರಣದಿಂದಾಗಿ ಕೃಷಿ,  ಕಿರು ಕೈಗಾರಿಗೆಗಳು ಸಹಿತ ಸಂದಿಗ್ಧತೆಯಲ್ಲಿದೆ. ಕೇಂದ್ರ ಸರಕಾರದ ಮೂಲಭೂತ ಸೌಲಭ್ಯ ಅಭಿವೃದ್ಧಿ …

ಹೊಸಂಗಡಿಯಲ್ಲಿ ಎಡರಂಗದ ಚುನಾವಣಾ ಸಭೆ

ಮಂಜೇಶ್ವರ: ಎಡರಂಗದ ಮಂಜೇಶ್ವರ ಮಂಡಲ ಅಭ್ಯರ್ಥಿ ಕೆ.ಆರ್. ಜಯಾನಂದರ ಪರವಾಗಿ ನಿನ್ನೆ ಹೊಸಂಗಡಿಯಲ್ಲಿ ಚುನಾವಣಾ ಸಭೆ ಜರಗಿತು. ಸಿಪಿಐ ರಾಜ್ಯ ಕಾರ್ಯದರ್ಶಿ  ಬಿನೋಯ್ ವಿಶ್ವಂ ಪ್ರಧಾನ ಭಾಷಣ ಮಾಡಿದರು. ಸಿಪಿಐ ಜಿಲ್ಲಾ ಕೌನ್ಸಿಲ್ ಸದಸ್ಯ ಜಯರಾಮ ಬಲ್ಲಂಗುಡೇಲು ಅಧ್ಯಕ್ಷತೆ ವಹಿಸಿದರು. ಸಿಪಿಎಂನ ಸಿಜಿ ಮ್ಯಾಥ್ಯು ಪ್ರಸ್ತಾಪಿಸಿದರು. ಅಭ್ಯರ್ಥಿ ಕೆ.ಆರ್. ಜಯಾನಂದ, ಜಿಲ್ಲಾ ಪಂ. ಮಾಜಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಿ.ಪಿ. ಬಾಬು, ಜಿಲ್ಲಾ ಅಸಿಸ್ಟೆಂಟ್ ಸೆಕ್ರೆಟರಿ ಬಿ. ರಾಜನ್,  ಸಿಪಿಎಂ ಕುಂಬಳೆ ಏರಿಯಾ …

ಪೈವಳಿಕೆ, ಮೀಂಜದಲ್ಲಿ ನಿನ್ನೆ ಸುರೇಂದ್ರನ್ ಪರ್ಯಟನೆ

ಉಪ್ಪಳ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಪೈವಳಿಕೆ ಮತ್ತು ಮೀಂಜ ಪಂಚಾಯತ್ ವ್ಯಾಪ್ತಿಯ ವಿವಿಧೆಡೆ ಮತದಾರರನ್ನು ಭೇಟಿಯಾಗಿ ಮತ ಯಾಚಿಸಿದರು. ಕುರುಡಪದವಿನಿಂದ ಆರಂಭಗೊಂಡ ಪರ್ಯಟನೆ ಮಧ್ಯಾಹ್ನ ದುರ್ಗಿಪಳ್ಳ ಬಳಿಕ ಸಂಜೆ ಚೇವಾರಿನಲ್ಲಿ ಕೊನೆಗೊಂಡಿತು. ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. ವಿವಿಧ ಕಡೆಗಳ ಕಾರ್ಯಕ್ರಮಗಳಲ್ಲಿ ಈ ಮಧ್ಯೆ ಅವರು ಭಾಗವಹಿಸಿದರು.  ಇಂದು ಮಧ್ಯಾಹ್ನವರೆಗೆ ಎಣ್ಮಕಜೆ ಪಂಚಾಯತ್ ವ್ಯಾಪ್ತಿಯಲ್ಲೂ, ಆ ಬಳಿಕ  ಪುತ್ತಿಗೆ ಪಂಚಾಯತ್ ವ್ಯಾಪ್ತಿಯಲ್ಲಿ ಪರ್ಯಟನೆ ನಡೆಸುವರು.

ಎಕೆಎಂ ಅಶ್ರಫ್‌ರ ಮಂಡಲ ಪರ್ಯಟನೆ ಮುಂದುವರಿಕೆ

ಮಂಜೇಶ್ವರ:  ಯುಡಿಎಫ್ ಅಭ್ಯರ್ಥಿ ಎಕೆಎಂ ಅಶ್ರಫ್‌ರ ಚುನಾವಣಾ ಪ್ರಚಾರದ ಮಂಡಲ ಪರ್ಯಟನೆ ನಿನ್ನೆ ಮೀಂಜ, ಪೈವಳಿಕೆ ಪಂಚಾಯತ್‌ನಲ್ಲಿ ಮುಂದುವರಿಯಿತು. ಹಲವೆಡೆ ಕಾರ್ನರ್ ಮೀಟಿಂಗ್ ಜರಗಿತು. ದೈಗೋಳಿಯಿಂದ ಆರಂಭಗೊಂಡ ಪರ್ಯಟನೆ ಮಜೀರ್ಪಳ್ಳ, ಗಾಂಧಿನಗರ, ಮದಂಗಲ್ಲು, ಮೀಯಪದವು ಮೂಲಕ  ಮೂಡಂಬೈಲು ಕಡಂಬಾರುಗಳಲ್ಲಿ ಸಾಗಿತು. ಅಪರಾಹ್ನ ಲಾಲ್‌ಬಾಗ್ ನಿಂದ ಕುರುಡಪದವು ಮುಳಿಗದ್ದೆಯಾಗಿ ಜೋಡುಕಲ್ಲು ಮೂಲಕ ಬಾಯಿಕಟ್ಟೆಯಲ್ಲಿ ಕೊನೆಗೊಂಡಿತು. ಯುಡಿಎಫ್ ಮಂಡಲ ಅಧ್ಯಕ್ಷ ಅಸೀಸ್ ಮರಿಕ್ಕೆ, ಸಂಚಾಲಕ ಮಂಜುನಾಥ ಆಳ್ವ, ಟಿ.ಎ ಮೂಸ, ಎಂ. ಅಬ್ಬಾಸ್, ಎ.ಕೆ. ಆರೀಫ್, ಲಕ್ಷ್ಮಣ ಪ್ರಭು, ಹರ್ಷಾದ್ …