ನಿವೃತ್ತ ಸೆಕ್ಯೂರಿಟಿ ಗಾರ್ಡ್ ನಿಧನ

ವಿದ್ಯಾನಗರ: ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಸೆಕ್ಯೂರಿಟಿಗಾರ್ಡ್ ಆಗಿ ನಿವೃತ್ತರಾಗಿದ್ದ ಉದಯಗಿರಿ ನಿವಾಸಿ  ದಾಮೋದರನ್ ಸಿ.ಕೆ. (62) ನಿನ್ನೆ ರಾತ್ರಿ ನಿಧನ ಹೊಂದಿದರು.  ಮೃತರು ತಾಯಿ ಮಾಧವಿ ಚೆಂಬರಿಕ, ಪತ್ನಿ ಉಮಾ ಕೆ.ಎನ್, ಮಕ್ಕಳಾದ ವರುಣ್, ವರ್ಷ, ಸಹೋದರರಾದ ಅರವಿಂದನ್, ಸತೀಶ್, ಸಹೋದರಿಯರಾದ ಅನಿತ, ಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ತಂದೆ ಕುಂಞಿಕಣ್ಣನ್, ಓರ್ವ ಸಹೋದರ ಅನಿಲ್ ಈ ಹಿಂದೆ ನಿಧನ ಹೊಂದಿದ್ದಾರೆ.

ಮಾದಕವಸ್ತು ಪ್ರಕರಣದ ಆರೋಪಿ ಮುಂಜಾಗ್ರತಾ ಕ್ರಮದಂಗವಾಗಿ ಸೆರೆ

ಕುಂಬಳೆ: ಮಾದಕವಸ್ತು ಪ್ರಕರಣದಲ್ಲಿ ಈ ಹಿಂದೆ ಸೆರೆಗೀಡಾಗಿದ್ದ ಆರೋಪಿಯನ್ನು ಕುಂಬಳೆ ಪೊಲೀಸರು ಇದೀಗ ಮುಂಜಾಗ್ರತಾ ಕ್ರಮದಂಗವಾಗಿ ಸೆರೆಹಿಡಿದು ಪಿಟ್ ಎನ್‌ಡಿಪಿಎಸ್ ಆಕ್ಟ್ ಪ್ರಕಾರ ಕೇಸು ದಾಖಲಿಸಿ ಕೊಂಡಿದ್ದಾರೆ.ಕುಂಬಳೆ ಕೊಯಿಪ್ಪಾಡಿ ಕಡಪ್ಪುರ ಶಫೀರ ಮಂಜಿಲ್‌ನ ಸಾದಿಕ್ ಕೆ (34) ಎಂಬಾತನನ್ನು ಕುಂಬಳೆ ಠಾಣೆ ಇನ್‌ಸ್ಪೆಕ್ಟರ್ ಬೈಜು ಕೆ ಜೋಸ್,  ಎಸ್‌ಐ  ಗಳಾದ ಕೆ. ಸನಿತ್, ಅನಂತಕೃಷ್ಣನ್ ಆರ್ ಮೆನೋನ್ ನೇತೃತ್ವದಲ್ಲಿ ಸೆರೆಹಿಡಿಯಲಾಗಿದೆ.2025 ಡಿಸೆಂಬರ್ 6ರಂದು ಕುಂಬಳೆ ಪೊಲೀಸರು ಉಪ್ಪಳ ಸೋಂಕಾಲ್‌ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 43.77 ಗ್ರಾಂ ಎಂಡಿಎಂಎ ಮಾದಕವಸ್ತುವನ್ನು …