ಮತದಾನ, ಮತಎಣಿಕೆ ದಿನಗಳಂದು ರಾಜ್ಯದಲ್ಲಿ ಮದ್ಯ  ಮಾರಾಟ ನಿಷೇಧ

ಕಾಸರಗೋಡು:ವಿಧಾನಸಭಾ ಚುನಾವಣೆಯ ಮತದಾನ ಹಾಗೂ ಮತ ಎಣಿಕೆ ದಿನಗಳಂದು ರಾಜ್ಯದಲ್ಲಿ ಸರಕಾರ ಡ್ರೈ ಡೇ ಘೋಷಿಸಿದೆ.  ಇದರಂತೆ  ಮತದಾನ ನಡೆಯುವ  ಈ ತಿಂಗಳ ೯ರಂದು ಹಾಗೂ  ಮತ ಎಣಿಕೆ ನಡೆಯುವ ಮೇ 4ರಂದು ರಾಜ್ಯದಲ್ಲಿ  ಪೂರ್ಣ ಮದ್ಯ ನಿಷೇಧ ಜ್ಯಾರಿಯಲ್ಲಿರುವುದು.  ಮತದಾನ ಕೊನೆಗೊಳ್ಳುವುದರ 48 ಗಂಟೆಗಳ ಮುಂಚಿತವಾಗಿ ಮದ್ಯ ಮಾರಾಟ ವನ್ನು ಕಡ್ಡಾಯವಾಗಿ ನಿಷೇಧಿಸಲಾ ಗಿದೆ. ಎಲ್ಲಾದರೂ ಮರು ಮತದಾನ ಅಗತ್ಯವಿದ್ದಲ್ಲಿ ಆ ದಿನಗಳಲ್ಲೂ ಡ್ರೈ ಡೇ ಆಗಿರುವುದು. ಇದರಂತೆ ಹೋಟೆಲ್ ಗಳು, ರೆಸ್ಟೋರೆಂಟ್‌ಗಳು, ಕ್ಲಬ್‌ಗಳು, ಸ್ಟಾರ್ …

ಸಿಪಿಐ ಕಚೇರಿಯಲ್ಲಿ ಕೃಷಿಕ ನೇಣುಬಿಗಿದು ಸಾವು

ಕೋಟ್ಟಯಂ: ಸಿಪಿಐ ಕಚೇರಿಯಲ್ಲಿ ಕೃಷಿಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವೈಕ್ಕಂ ತಲಯಾಳಂನಲ್ಲಿರುವ ಸಿಪಿಐ ಕಚೇರಿಯಲ್ಲಿ ಇಂದು ಬೆಳಿಗ್ಗೆ ಮೃತದೇಹ ಕಂಡುಬಂದಿದೆ. ಕೃಷಿಕನಾದ ಚೆಲ್ಲಪ್ಪನ್ (67) ಎಂಬವರು ಮೃತ ವ್ಯಕ್ತಿಯೆಂದು ತಿಳಿದುಬಂದಿದೆ. ಸಿಪಿಐ ಜಿಲ್ಲಾ ನೇತಾರರು ಉಪಜೀವನ ಮಾರ್ಗವನ್ನು ಇಲ್ಲದಾಗಿಸಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಚೆಲ್ಲಪ್ಪನ್ ಇತ್ತೀಚೆಗೆ ಆರೋಪಿಸಿದ್ದರು. ಕೃಷಿ ನಾಶಗೊಳಿಸಿದರೂ ತನ್ನ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದಂತೆ ಮಾಡಿದರು ಮುಂತಾದ ಆರೋಪಗಳನ ಚೆಲ್ಲಪ್ಪನ್ ಹೊರಿಸಿದ್ದರು. ಕಳೆದ ಕೆಲವು ಕಾಲದಿಂದ ಸಿಪಿಐ ನೇತಾರರೊಂದಿಗೆ ಚೆಲ್ಲಪ್ಪನ್ ತರ್ಕದಲ್ಲಿದ್ದರೆನ್ನಲಾಗಿದೆ.  ಇದೇ ವೇಳೆ …

ಸುಪ್ರಿಂಕೋರ್ಟ್‌ನಲ್ಲಿ ಮರು ಪರಿಶೀಲನಾ ಅರ್ಜಿಗಳ ವಿಚಾರಣೆ ಆರಂಭ: ಶಬರಿಮಲೆಗೆ ಯುವತಿಯರಿಗೆ ಪ್ರವೇಶ ಅನುಮತಿ ತೀರ್ಪು ತಪ್ಪು-ಕೇಂದ್ರ ಸರಕಾರ ವಾದ

ನವದೆಹಲಿ: ಕೇರಳ ವಿಧಾನಸಭಾ ಚುನಾವಣೆಗೆ ಇನ್ನೇನು 48 ಗಂಟೆಗಳು ಬಾಕಿ ಇರುವಂತೆಯೇ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಯುವತಿ ಯರ ಪ್ರವೇಶಕ್ಕೆ ಸಂಬಂಧಿಸಿ 2018ರ ತೀರ್ಪಿನ ಮರು ಪರಿಶೀಲನಾ ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡಿದೆ. ಚುನಾವಣೆ ಹೊಸ್ತಿಲಲ್ಲೇ ಈ ಕಾನೂನು ಪ್ರಕ್ರಿಯೆಯು ನಡೆಯುತ್ತಿದ್ದು, ಅದು ಕೇರಳ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ೯ ನ್ಯಾಯಮೂರ್ತಿ ಗಳು ಒಳಗೊಂಡ ಸಂವಿಧಾನಪೀಠ ಈ ಅರ್ಜಿಗಳ ವಿಚಾರಣೆ ನಡೆಸುತ್ತಿದೆ. …

ಸಂಬಂಧಿಕರ ಮನೆಗೆ ತೆರಳಿದ ವ್ಯಕ್ತಿ ನಾಪತ್ತೆ

ಉಪ್ಪಳ: ಬಾಯಾರು ಬಳಿಯ ಸಂಬಂಧಿಕರ ಮನೆಗೆ ತೆರಳಿದ ಮುಜುಂಗಾವು ನಿವಾಸಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಕೊಯಿಪ್ಪಾಡಿ ಗ್ರಾಮದ ಮುಜುಂಗಾವು  ಕಾವಿ ಕನ್ನಿಮೂಲ ನಿವಾಸಿ ನಾರಾಯಣ ಎಂಬವರ ಪುತ್ರ ಈಶ್ವರ ಎಂ (42) ನಾಪತ್ತೆಯಾಗಿ ದ್ದಾರೆ. ಈ ಬಗ್ಗೆ ಇವರ ಪತ್ನಿ ಮೋಹಿನಿ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಬಾಯಾರು ಬಳಿಯ ಪೆಲ್ತಡ್ಕದಲ್ಲಿರುವ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ನಿಮಿತ್ತ ಈಶ್ವರ ಈ ತಿಂಗಳ 1ರಂದು ಅಲ್ಲಿಗೆ ತೆರಳಿದ್ದರು. ೫ರಂದು ಸಂಜೆ ಅಲ್ಲಿಂದ ನಾಪತ್ತೆಯಾಗಿದ್ದಾರೆ. ವಿವಿಧೆಡೆ ಹುಡುಕಿದರೂ …

ಚುನಾವಣೆ: 651 ಕೋಟಿ ರೂ. ಮೌಲ್ಯದ ಕಾಳಧನ, ಮದ್ಯ, ಮಾದಕವಸ್ತು, ಚಿನ್ನ ವಶ

ಕಾಸರಗೋಡು: ವಿಧಾನಸಭಾ ಚುನಾವಣೆ ನಡೆಯುವ  ಐದು ರಾಜ್ಯಗಳಲ್ಲಿ  ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ  651.51  ಕೋಟಿ ರೂಪಾಯಿ ಮೌಲ್ಯದ  ಸೊತ್ತುಗಳನ್ನು ವಶಪಡಿಸಿಕೊಳ್ಳ ಲಾಗಿದೆ. ವಿಧಾನಸಭಾ ಚುನಾವಣೆ ನಡೆಯುವ ಕೇರಳ, ತಮಿಳುನಾಡು, ಅಸ್ಸಾಂ, ಪುದುಚ್ಚೇರಿ, ಪಶ್ಚಿಮ ಬಂಗಾಲ ಹಾಗೂ ಆರು ರಾಜ್ಯಗಳ ಉಪಚುನಾವಣೆ ನಡೆಯುವ ಮಂಡಲಗಳಲ್ಲಿ ಕಾನೂನು ವಿರುದ್ಧವಾಗಿ ಸಾಗಿಸುತ್ತಿದ್ದ ಹಣ, ಮದ್ಯ, ಮಾದಕವಸ್ತು, ಚಿನ್ನ ಸಹಿತ ಬೆಲೆಬಾಳುವ ಲೋಹಗಳು, ಇತರ ಸಾಮಗ್ರಿಗಳನ್ನು ವಶಪಡಿಸಲಾಗಿದೆ.  ಕೇರಳದಿಂದ 57 ಕೋಟಿ ರೂಪಾ ಯಿಗಳ ಸೊತ್ತುಗಳನ್ನು  ಡಿಆರ್‌ಐ ವಶಪಡಿಸಿದೆ. ಇದರಲ್ಲಿ 41 ಕೋಟಿ …

ಸಾರ್ವಜನಿಕ ವೇದಿಕೆಯಲ್ಲಿ ನಟಿ ಮಂಜು ವಾರ್ಯರ್‌ಗೆ ಚುಂಬಿಸಿದ ಅಭಿಮಾನಿ

ಪಾಲಕ್ಕಾಡ್: ನಟಿ ಮಂಜುವಾರ್ಯರ್‌ಗೆ ಅಭಿಮಾನಿ ಚುಂಬಿಸಿದ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪಾಲಕ್ಕಾಡ್‌ನ ಜ್ಯುವೆಲ್ಲರಿ ಶೋರೂಂ ಒಂದರ ಉದ್ಘಾಟನಾ ಕಾರ್ಯಕ್ರಮ ಮಧ್ಯೆ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿದ್ದ ವೇಳೆ ಓರ್ವೆ ವೇದಿಕೆಗೆ ತಲುಪಿ ನಟಿಯನ್ನು ಅಪ್ಪಿ ಚುಂಬಿಸಿದ್ದಾಳೆ. ಈ ವೇಳೆ ನಿರೂಪಕಿ ಮೀರಾ ಅನಿಲ್ ವೇದಿಕೆಯಲ್ಲಿದ್ದರು. ಘಟನೆ ನಡೆದ ಕೂಡಲೇ ನಿರೂಪಕಿ ಹಾಗೂ ಭದ್ರತಾ ನೌಕರರು ಮಹಿಳೆಯನ್ನು ವೇದಿಕೆಯಿಂದ ದೂರ ಕರೆದೊಯ್ದರು. ಹೀಗಿದ್ದರೂ ಅನಿರೀಕ್ಷಿತವಾಗಿ ನಡೆದ ಈ ಘಟನೆಯಿಂದ ಮಂಜು ವಾರ್ಯರ್ …

ಕನ್ನೆಪ್ಪಾಡಿ ಆಶ್ರಯ ಆಶ್ರಮಕ್ಕೆ ಧನ ಸಹಾಯ ಹಸ್ತಾಂತರ

ಬದಿಯಡ್ಕ: ಪುತ್ತಿಗೆ ಪಂ ಚಾಯತ್ ವಿರಾಟ್ ಹಿಂದು ಸಂಗಮ ಕಾರ್ಯಕ್ರಮದಲ್ಲಿ ಸಂಗ್ರಹವಾದ ಮೊತ್ತದಲ್ಲಿ ಉಳಿತಾಯವಾಗಿರುವ 9250 ರೂ.ವನ್ನು ಕನ್ನೆಪ್ಪಾಡಿ ಆಶ್ರಯ ಆಶ್ರಮಕ್ಕೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ವಿರಾಟ್ ಹಿಂದು ಸಂಗಮ ಕಾರ್ಯಕ್ರಮದ ಅಧ್ಯಕ್ಷ ದಾಮೋದರ ಡಿ., ರಕ್ಷಾ ಅಧಿಕಾರಿಗಳಾದ ಅಶೋಕ ಮಾಸ್ತರ್, ವಿಘ್ನೇಶ್ವರ ಮಾಸ್ತರ್, ಆಶ್ರಮದ ಟ್ರಸ್ಟಿಗಳಾದ ರಮೇಶ ಕಳೇರಿ, ಬಾಲಕೃಷ್ಣ ಏಣಿಯರ್ಪ, ಇತರರಾದ ಗಂಗಾಧರ ಪಳ್ಳತ್ತಡ್ಕ, ಪ್ರೋ. ಶ್ರೀನಾಥ್ ಉಪಸ್ಥಿತರಿದ್ದರು.

ಕಾಸರಗೋಡು, ಮಂಜೇಶ್ವರ ಮಂಡಲದ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಭೇಟಿ: ಸಿದ್ಧತೆ ಪೂರ್ಣ

ಮಂಜೇಶ್ವರ: ಕಾಸರಗೋಡು, ಮಂಜೇಶ್ವರ ವಿಧಾನಸಭಾ ಮಂಡಲಗಳ ಬೂತ್‌ಗಳ ಸಿದ್ಧತೆಗಳನ್ನು ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಭೇಟಿ ನೀಡಿ ಮೌಲೀಕರಣ ನಡೆಸಿದರು. ಕಾಸರಗೋಡು ಸರಕಾರಿ ಕಾಲೇಜಿನ ಇಲೆಕ್ಟ್ರೋನಿಕ್ ಮತಯಂತ್ರಗಳು, ವಿ.ವಿ.ಪ್ಯಾಟ್‌ಗಳನ್ನು ಇರಿಸಿರುವ ಭದ್ರತಾ ಕೊಠಡಿಯನ್ನು ಜಿಲ್ಲಾಧಿಕಾರಿ ಸಂದರ್ಶಿಸಿದರು. ರಾಜ್ಯದ ಒಂದನೇ ನಂಬ್ರ ಬೂತ್ ಆಗಿರುವ ಕುಂಜತ್ತೂರು ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ, ಬೂತ್‌ಗೆ ಜಿಲ್ಲಾಧಿಕಾರಿ ಭೇಟಿ ನೀಡಿದರು. ಮಂಜೇಶ್ವರ ಮಂಡಲದ ಸೂಕ್ಷ್ಮ ಬೂತ್ ಆದ ಕಣ್ವತೀರ್ಥ ಸರಕಾರಿ ಎಲ್‌ಪಿ ಶಾಲೆಯ ಮತಗಟ್ಟೆಯನ್ನು ಕೂಡಾ ಜಿಲ್ಲಾಧಿಕಾರಿ …

ಎನ್‌ಡಿಎ ಜಯಕ್ಕೆ ಅಭಿಭಾಷಕ ಪರಿಷತ್ ರಂಗಕ್ಕೆ

ಕಾಸರಗೋಡು: ಅಭಿಭಾಷಕ ಪರಿಷತ್ ಜಿಲ್ಲಾ ಸಮಿತಿ ಆಶ್ರಯ ದಲ್ಲಿ ಎನ್‌ಡಿಎ ಅಭ್ಯರ್ಥಿಗಳ ಜಯಕ್ಕಾಗಿ ಅಭಿಭಾಷಕ ಒಕ್ಕೂಟ ನಡೆಸಲಾಯಿತು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು. ಅಭಿಭಾಷಕ ಪರಿಷತ್ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಎ.ಸಿ. ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದರು. ನ್ಯಾಯವಾದಿ ಬಿ. ರವೀಂದ್ರನ್, ನ್ಯಾಯವಾದಿ ಕರುಣಾಕರನ್ ನಂಬ್ಯಾರ್, ನ್ಯಾಯವಾದಿ ಪಿ. ಮರಳೀಧರನ್ ಮಾತನಾಡಿದರು. ನ್ಯಾಯವಾದಿ ಅನಿಲ್ ಕೆ.ಜಿ. ಸ್ವಾಗತಿಸಿ, ನ್ಯಾಯವಾದಿ ಎ. ಮಣಿಕಂಠನ್ ವಂದಿಸಿದರು.

ಕಾಸರಗೋಡನ್ನು ಮಾದರಿ ನಗರವಾಗಿ ಅಭಿವೃದ್ಧಿ- ಅಶ್ವಿನಿ ಎಂ.ಎಲ್.

ಬಾಲಡ್ಕ: ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯದ ಸಹಯೋಗದೊಂದಿಗೆ ಸಾರ್ವಜನಿಕ ಸಾರಿಗೆ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಕಾಸರಗೋಡನ್ನು ದೇಶದಲ್ಲೇ ಮಾದರಿ ನಗರವಾಗಿ ರೂಪಿಸ ಲಾಗುವುದು ಎಂದು ಕಾಸರಗೋಡು ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಅಶ್ವಿನಿ ಎಂ.ಎಲ್. ಹೇಳಿದರು.ರಾತ್ರಿ ಒಂಬತ್ತೂವರೆ ನಂತರ ಜನಸಂದಣಿ ಇಲ್ಲದ ರಾಜ್ಯದ ಏಕೈಕ ಜಿಲ್ಲಾ ಕೇಂದ್ರವೆAದರೆ ಅದು ಕಾಸರಗೋಡು. ಜಿಲ್ಲೆಯ ಇತರ ಮಧ್ಯಮ ಪಟ್ಟಣಗಳಿಗೆ ಹಾಗೂ ಮಂಗಳೂರು, ಕಾಞಂಗಾಡ್‌ಗಳಿಗೆ ರಾತ್ರಿ ಸಮಯದಲ್ಲಿ ಬಸ್ ಸೌಕರ್ಯವಿಲ್ಲ. ಕೆಎಸ್‌ಆರ್‌ಟಿಸಿ ಕಾಸರಗೋಡು ಜಿಲ್ಲೆಯನ್ನು …