9 ಲಕ್ಷದ ಸೋಲಾರ್ ಬೇಲಿ ಕಾಡಾನೆಗಳಿಂದ ನಾಶ

ಮುಳ್ಳೇರಿಯ: ಕಾನತ್ತೂರು ಮೂಡಯಂವೀಡ್ ಎಂಬಲ್ಲಿ ನಾಗರಿಕರು ಒಂಭತ್ತ್ತು ಲಕ್ಷ ರೂಪಾಯಿಂದ ನಿರ್ಮಿಸಿದ ಸೋಲಾರ್ ಬೇಲಿಯನ್ನು ಕಾಡಾನೆಗಳು ನಾಶಗೊಳಿಸಿವೆ. ಕಾಡಾನೆಗಳ ಹಾವಳಿ ತೀವ್ರಗೊಂಡ ಹಿನ್ನೆಲೆಯಲ್ಲಿ 9 ತಿಂಗಳ ಹಿಂದೆ ನಾಗರಿಕರು ಹಣ ಸಂಗ್ರಹಿಸಿ 8 ಲಕ್ಷ ರೂ. ಖರ್ಚು ಮಾಡಿ ಸೋಲಾರ್ ಬೇಲಿ ನಿರ್ಮಿಸಿದರು. ಅದನ್ನು ನಿನ್ನೆ ಮುಂಜಾನೆ ತಲುಪಿದ ಕಾಡಾನೆಗಳು ನಾಶಗೊಳಿಸಿವೆ. ಕಾನತ್ತೂರು, ಕೂಡಾಲ, ಪಯಂ ಎಂಬಿಡೆಗಳಲ್ಲಿ ಎರಡು ಕಾಡಾನೆಗಳು ಕಳೆದ ಕೆಲವು ದಿನಗಳಿಂದ ವ್ಯಾಪಕ ಕೃಷಿ ನಾಶಗೊಳಿಸುತ್ತಿರುವುದಾಗಿ ದೂರಲಾಗಿದೆ.

Leave a Reply

Your email address will not be published. Required fields are marked *

You cannot copy content of this page