ಮದ್ಯ ಸಹಿತ ಸ್ಕೂಟರ್ ಉಪೇಕ್ಷಿಸಿ ಪರಾರಿಯಾದ ಆರೋಪಿ ಠಾಣೆಯಲ್ಲಿ ಹಾಜರು

ಮಂಜೇಶ್ವರ: ಪೊಲೀಸರನ್ನು ಕಂಡು ಮದ್ಯ ಸಹಿತ ಸ್ಕೂಟರ್ ಉಪೇಕ್ಷಿಸಿ ಪರಾರಿಯಾದ ಆರೋಪಿ ಪೊಲೀಸ್ ಠಾಣೆಯಲ್ಲಿ ಹಾಜರಾಗಿ ದ್ದಾನೆ.  ಈ ವೇಳೆ ಆತನನ್ನು ಪೊಲೀಸ ರು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ.

ಕಣ್ವತೀರ್ಥ ನಿವಾಸಿ ಭವಿಷ್ (೩೯) ಎಂಬಾತ ಬಂಧಿತ ಆರೋಪಿ ಯಾಗಿದ್ದಾನೆ. ಈ ತಿಂಗಳ ೧೫ರಂದು ಸಂಜೆ ೬ ಗಂಟೆಗೆ ಭವಿಷ್ ಸ್ಕೂಟರ್ ನಲ್ಲಿ ಕಣ್ವತೀರ್ಥ ಗೇಟ್ ಬಳಿಯಿಂದ ಬೀಚ್ ಭಾಗಕ್ಕೆ ತೆರಳುತ್ತಿದ್ದನು. ಈ ವೇಳೆ ಎದುರಿನಿಂದ ಪೊಲೀಸ್ ವಾಹನ ಬರುತ್ತಿರುವುದನ್ನು ಕಂಡ ಈತ ಸ್ಕೂಟರ್ ಉಪೇಕ್ಷಿಸಿ ಪರಾರಿಯಾ ಗಿದ್ದನು. ಪೊಲೀಸರು ಸ್ಕೂಟರ್ ತಪಾಸಣೆ ನಡೆಸಿದಾಗ  ಅದರಲ್ಲಿ ೯೦ ಮಿಲ್ಲಿಯ ೩೨೦ ಪ್ಯಾಕೆಟ್ ಕರ್ನಾಟಕ ಮದ್ಯ ಪತ್ತೆಯಾಗಿತ್ತು. 

Leave a Reply

Your email address will not be published. Required fields are marked *

You cannot copy content of this page