ಮದ್ಯ ವಶ:ಇಬ್ಬರ ವಿರುದ್ಧ ಪ್ರಕರಣ ದಾಖಲು, ಓರ್ವ ಸೆರೆ
ಬೇಳ: ಕಾಸರಗೋಡು ಎಕ್ಸೈಸ್ ಎನ್ಫೋರ್ಸ್ಮೆಂಟ್ ಆಂಡ್ ಆಂಟೀ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡಿನ ಪ್ರಿವೆಂಟಿವ್ ಆಫೀಸರ್ ಸಾಜನ್ ಅಪ್ಯಾಲ್ರ ನೇತೃತ್ವದ ಅಬಕಾರಿ ತಂಡ ಬೇಳ ಮೇಗಿನಡ್ಕದ ಜನವಾಸವಿಲ್ಲದ ಮನೆಗೆ ನಿನ್ನೆ ನಡೆಸಿದ ದಾಳಿಯಲ್ಲಿ ಅಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ ೨೦೭.೩೬ ಲೀಟರ್ ಗೋವಾ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಅದರಲ್ಲಿ ೧೮೦ ಎಂ.ಎಲ್.ನ ೧೧೫೨ ಬಾಟಲಿ ಮದ್ಯ ಒಳಗೊಂಡಿತ್ತು. ಆದರೆ ಗೋವಾ ನಿರ್ಮಿತ ಮದ್ಯವೆಂಬ ಹೆಸರಲ್ಲಿ ಬೇರೆ ಎಲ್ಲೋ ಇಂತಹ ನಿರ್ಮಿಸಲಾಗುತ್ತಿದೆ ಎಂಬ ಶಂಕೆಯನ್ನೂ ಅಬಕಾರಿ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಸಂಬಂಧಿಸಿ ಬೇಳ ಮೇಗಿನಡ್ಕದ ಕೃಷ್ಣ ನಾಯ್ಕ (೪೪) ಎಂಬಾತನನ್ನು ಬಂಧಿಸಲಾಗಿದೆ. ಮಾತ್ರವಲ್ಲ ಬೇಳ ಕಾರ್ಮಾರ್ ಪರಶ್ಶಿ ನಿಲಯದ ಚಂದ್ರನ್ ಕೆ. (೪೬) ಎಂಬಾತನ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಆದರೆ, ಆತ ತಪ್ಪಿಸಿಕೊಂಡಿದ್ದಾನೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ವಶಪಡಿಸಲಾದ ಮಾಲುಗಳನ್ನು ಬಳಿಕ ಬದಿಯಡ್ಕ ಅಬಕಾರಿ ರೇಂಜ್ ಕಚೇರಿಗೆ ಹಸ್ತಾಂತರಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ಸತೀಶನ್ ಕೆ, ಮಂಜುನಾಥ ವಿ, ಚಾಲಕ ಕ್ರಿಸ್ಟಿ ಪಿ.ಎ. ಎಂಬವರು ಒಳಗೊಂಡಿದ್ದರು. ಕೆಮು ಪ್ರಿವೆಂಟಿವ್ ಆಫೀಸರ್ ಸುಧೀಂದ್ರನ್ ಎಂ.ವಿ. ಮತ್ತು ಚಾಲಕ ದಿಲ್ಜಿತ್ ವಿ.ವಿ. ಎಂಬವರೂ ಇದಕ್ಕೆ ಅಗತ್ಯದ ಸಹಾಯ ಒದಗಿಸಿದರು. ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆ ಹೆಸರಲ್ಲಿ ಹೊರ ರಾಜ್ಯಗಳಿಂದ ಕಾಸರಗೋಡಿಗೆ ಕಲೆದ ಕೆಲವು ದಿನಗಳಿಂದ ಬೃಹತ್ ಪ್ರಮಾಣದಲ್ಲಿ ಮದ್ಯ ಹರಿದು ಬರತೊಡಗಿದೆ ಎಂದೂ, ಅದನ್ನು ಪತ್ತೆಹಚ್ಚಲು ಅಬಕಾರಿ ತಂಡ ಕಳೆದ ಹಲವು ದಿನಗಳಿಂದ ಜಿಲ್ಲೆಯಾದ್ಯಂತ ನಿರಂತರ ದಾಳಿ ಆರಂಭಿಸಿದೆ.ಈ ಪ್ರಕರಣದ ಎರಡನೇ ಆರೋಪಿ ಚಂದ್ರನ್ ಇತರ ಹಲವು ಅಬಕಾರಿ ಪ್ರಕರಣಗಳಲ್ಲೂ ಆರೋಪಿಯಾಗಿರುವುದಾಗಿ ಅಬಕಾರಿ ಅಧಿಕಾರಿಗಳು ಹೇಳುತ್ತಿದ್ದಾರೆ