ಕುಂಟಂಗೇರಡ್ಕದಲ್ಲಿ ಸ್ಮಶಾನದಿಂದ 124 ಮರ ಕಡಿದು ಸಾಗಾಟ: ಪೊಲೀಸ್ ತನಿಖೆ ಆರಂಭ

ಕುಂಬಳೆ: ಕುಂಬಳೆ ಪಂಚಾ ಯತ್‌ನ ಅಧೀನದಲ್ಲಿ ಕಿದೂರು ಕುಂಟಂಗೇರಡ್ಕದಲ್ಲಿರುವ ಪರಿಶಿಷ್ಟ ಜಾತಿ ಸ್ಮಶಾನದಿಂದ ಎರಡು ಲಕ್ಷ ರೂಪಾಯಿ ಮೌಲ್ಯದ ಮರಗಳನ್ನು ಕಡಿದು ಸಾಗಾಟ ನಡೆಸಿದ ಘಟನೆಗೆ ಸಂಬಂಧಿಸಿ ಕುಂಬಳೆ ಪೊಲೀಸರು ಕೇಸು ದಾಖಲಿಸಿ ಕೊಂಡು ತನಿಖೆ ಆರಂಭಿಸಿದ್ದಾರೆ. ನವಂಬರ್ 6 ಅಥವಾ 7ರಂದು ಮರ ಕಡಿದು ಸಾಗಾಟ ನಡೆಸಿರುವುದಾಗಿ ಅಂದಾಜಿಸಲಾಗಿದೆ. ಸಣ್ಣ ಹಾಗೂ ದೊಡ್ಡ 124 ಮರಗಳನ್ನು ಕಡಿದು ಸಾಗಾಟ ನಡೆಸಲಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಮರಗಳನ್ನು ಅನಧಿಕೃತವಾಗಿ ಕಡಿದು ಸಾಗಾಟ ನಡೆಸಲಾಗಿದೆ ಎಂದು ಹೇಳಲಾಗು ತ್ತಿದೆ. ಮರಗಳನ್ನು ಅನಧಿಕೃತವಾಗಿ ಕಡಿದು ಸಾಗಾಟ ನಡೆಸಿರುವುದು ಭಾರೀ ವಿವಾದ ಹಾಗೂ ಪ್ರತಿಭಟನೆಗೆ ಕಾರಣವಾಗಿದೆ. ಮರ ಕಳವು ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿ ಅಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ.

You cannot copy contents of this page