ಆಂಬುಲೆನ್ಸ್ ಚಾಲಕ ಆತ್ಮಹತ್ಯೆ

ಕಾಸರಗೋಡು: ಈ ಹಿಂದೆ ಆಂಬುಲೆನ್ಸ್ ಚಾಲಕನಾಗಿದ್ದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಗಿದೆ. ಕಳ್ಳಾರ್ ಅರಕ್ಕನ್‌ಕಾಡ್ ಮಣಿಕಲ್ ನಿವಾಸಿ ಎ. ನಾರಾ ಯಣನ್ (56) ಮೃತಪಟ್ಟವರು. ಮನೆಯ ಕಾರು ಪೋರ್ಚರ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ ಯಾಗಿದೆ. ಸಂಘಟನೆಯೊಂದರ ಆಂಬು ಲೆನ್ಸ್‌ನಲ್ಲಿ ಕಾಞಂಗಾಡ್‌ನಲ್ಲಿ ಹಲವು ಕಾಲ ಚಾಲಕನಾಗಿ ದುಡಿದಿದ್ದರು. ಮೃತರು ಪತ್ನಿ ಮಿನಿ, ಮಕ್ಕಳಾದ ಪ್ರಾರ್ಥನಾ, ಅಭಿಷೇಕ್, ಅಳಿಯ ರಾಜೇಶ್, ಸಹೋದರರಾದ ಅಶೋಕನ್, ಚಂದ್ರನ್, ಸಹೋದರಿ ನಿರ್ಮಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page