ಕಾಸರಗೋಡು: ಅಸೌಖ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದ ಐಎನ್ಎಲ್ ಮುಖಂಡ ನಿಧನ ಹೊಂದಿದರು. ಚೌಕಿ ನಿವಾಸಿ ಸಾದಿಕ್ ಕಡಪ್ಪುರಂ (45) ಚಿಕಿತ್ಸೆ ಮಧ್ಯೆ ನಿಧನ ಹೊಂದಿದ್ದಾರೆ. ಹಲವು ತಿಂಗಳಿಂದ ಇವರು ಚಿಕಿತ್ಸೆಯಲ್ಲಿದ್ದರು. ಮೊಗ್ರಾಲ್ ಪುತ್ತೂರು ಪಂಚಾಯತ್ನ ರಾಜಕೀಯ, ಸಾಂಸ್ಕೃತಿಕ ವಲಯ ಗಳಲ್ಲಿ ಸಕ್ರಿಯರಾಗಿದ್ದರು. ಐಎನ್ಎಲ್ ಜಿಲ್ಲಾ ಕಾರ್ಯ ದರ್ಶಿ ಅಸೀಸ್ ಕಡಪ್ಪುರಂ ಇವರ ಸಹೋದರನಾಗಿದ್ದಾರೆ. ದಿ| ಅಬ್ಬಾಸ್- ಆಯಿಶಾಬಿ ದಂಪತಿ ಪುತ್ರನಾದ ಇವರು ತಾಯಿ, ಪತ್ನಿ ಶಮೀಮ, ಮಕ್ಕಳಾದ ಶಿಜಿನ, ಮುಹಮ್ಮದ್ ಮುಸ್ತಫ, ಸಲ್ಮಾನ್ ಹಾಗೂ ಇತರ ಸಹೋದರರಾದ ಹನೀಫ್ ಕಡಪ್ಪುರ (ಎನ್ಎಲ್ ಯು ಜಿಲ್ಲಾ ಕಾರ್ಯದರ್ಶಿ), ಮುಹಮ್ಮದ್ ಅಸರುದ್ದೀನ್, ಯಾಸರ್ ಅರಾಫತ್, ಖಾಲಿದ್, ಸಹೋದರಿಯರಾದ ಸಫಿಯ, ಹಾಜಿರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.





