ಕಾಸರಗೋಡಿನಲ್ಲಿ ಆನ್‌ಲೈನ್ ಸೆಕ್ಸ್ ವ್ಯಾಪಾರ ದಂಧೆಯ ಬಲೆಯಲ್ಲಿ ಸಿಲುಕಿದ ಹಲವು ಪ್ರಮುಖರು

ಕಾಸರಗೋಡು: ಕಾಸರಗೋಡು ಕೇಂದ್ರೀಕರಿಸಿ ಆನ್‌ಲೈನ್ ಸೆಕ್ಸ್ ವ್ಯಾಪಾರ ಸಕ್ರಿಯಗೊಂಡಿದೆ. ಈ ಬಗ್ಗೆ ಲಭಿಸಿದ ಸೂಚನೆಗಳ ಮೇರೆಗೆ ಗುಪ್ತಚರ ವಿಭಾಗಗಳು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಿರುವುದಾಗಿ ಹೇಳಲಾಗುತ್ತಿದೆ. ನಗರದಲ್ಲಿ ಬಹು ಅಂತಸ್ತಿನ ಕಟ್ಟಡವೊಂದನ್ನು ಕೇಂದ್ರೀಕರಿಸಿ ಸೆಕ್ಸ್ ಮಾಫಿಯಾ ಕಾರ್ಯಾಚರಿಸುತ್ತಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ. ವಾಟ್ಸಪ್ ಬಳಸಿ ಈ ತಂಡ ಚಟುವಟಿಕೆ ನಡೆಸುತ್ತಿದೆ. ಯುವತಿಯರನ್ನು ಬಳಸಿಕೊಂಡು ಪುರುಷರ ಮೊಬೈಲ್ ಫೋನ್‌ಗೆ ಕರೆ ಮಾಡಿ ವ್ಯಾಪಾರಕ್ಕೆ ಆಹ್ವಾನಿಸುತ್ತಿರುವುದಾಗಿ ಹೇಳಲಾಗುತ್ತಿದೆ. ಮೊದಲ ಕರೆಯಾದರೆ ಈ ಹಿಂದೆಯೇ ಪರಿಚಯ ಇರುವುದಾಗಿ ತಿಳಿಸಿ ಮಾತುಕತೆ ಆರಂಭಿಸಲಾಗುತ್ತಿದೆ. …

ಜೀಪು-ಸ್ಕೂಟರ್ ಢಿಕ್ಕಿ ವಿದ್ಯಾರ್ಥಿ ಮೃತ್ಯು

ಉಪ್ಪಳ: ಜೀಪ್ ಹಾಗೂ ಸ್ಕೂಟರ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿ ಮೃತಪಟ್ಟಿದಾನೆ. ಪೈವಳಿಕೆ-ಚೇವಾರ್ ರಸ್ತ್ತೆ ಸಂಗಮಿಸುವ ಜಂಕ್ಷನ್‌ನಲ್ಲಿ ಅಪಘಾತ ನಡೆದಿದೆ. ಲಾಲ್‌ಬಾಗ್ ಸಮೀಪದ ಪಾಕ ನಿವಾಸಿ ವ್ಯಾಪಾರಿ ಇಬ್ರಾಹಿಂ ಮೊಯ್ದೀನ್‌ರ ಪುತ್ರ ವಿದ್ಯಾರ್ಥಿ ಮೊಯಿದೀನ್ ಇಪ್ರಾಝ್ (೧೬) ಮೃತಪಟ್ಟಿದ್ದಾನೆ. ಈತ ಉಪ್ಪಳ ಖಾಸಗಿ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿಯಾಗಿ ದ್ದಾನೆ. ಶನಿವಾರ  ರಾತ್ರಿ ೧೦.೩೦ರ ವೇಳೆ ಮನೆಯಿಂದ ಬಾಯಿಕಟ್ಟೆ ಸಮೀಪದ ಮಸೀದಿಯಲ್ಲಿರುವ ಉಸ್ತಾದ್‌ರಿಗೆ ಸ್ಕೂಟರ್‌ನಲ್ಲಿ ಊಟ ಕೊಂಡೊಯ್ಯುತ್ತಿದ್ದಾಗ ಮನೆಯ ಅಲ್ಪ ದೂರದ ಪೈವಳಿಕೆ-ಚೇವಾರು ರಸ್ತೆ ಜಂಕ್ಷನ್‌ಗೆ …

ಸ್ಕೂಟರ್‌ನಲ್ಲಿ ಮದ್ಯ ಸಾಗಾಟ: ತಡೆದ ಅಬಕಾರಿ ಅಧಿಕಾರಿಗಳಿಗೆ ಹಲ್ಲೆಗೆ ಯತ್ನಿಸಿ ಆರೋಪಿ ಪರಾರಿ

ಕಾಸರಗೋಡು:  ಸ್ಕೂಟರ್‌ನಲ್ಲಿ ಕರ್ನಾಟಕ ಮದ್ಯ ಸಹಿತ ತಲುಪಿದ ಆರೋಪಿ ಅಬಕಾರಿ ಅಧಿಕಾರಿಗಳಿಗೆ ಹಲ್ಲೆಗೈಯ್ಯಲೆತ್ನಿಸಿ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಾಗಿ ದೂರಲಾಗಿದೆ. ಚೆಂಗಳ ವಿಲ್ಲೇಜ್‌ನ ನಾಲ್ಕನೇ ಮೈಲು ತೈವಳಪ್ಪ್ ವೀಡ್‌ನ ಸುಧೀರ್  ಐ (೪೫) ಎಂಬಾತ ಪರಾಕ್ರಮ ಮೆರೆದಿರುವುದಿರುವುದಾಗಿ  ಕಾಸರಗೋಡು ಅಬಕಾರಿ ರೇಂಜ್ ಕಚೇರಿಯ ಅಡಿಶನಲ್ ಎಕ್ಸೈಸ್ ಇನ್ಸ್‌ಪೆಕ್ಟರ್ ಜೋಸೆಫ್ ಐ. ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದಾರೆ. ನಿನ್ನೆ ಸಂಜೆ ಚೆರ್ಕಳದಲ್ಲಿ ಅಬಕಾರಿ ಅಧಿಕಾರಿಗಳು ವಾಹನ ತಪಾಸಣೆ ನಡೆಸುತ್ತಿದ್ದಾಗ ಆ ದಾರಿಯಲ್ಲಿ ಬಂದ ಸ್ಕೂಟರ್‌ನ್ನು ತಡೆದು ನಿಲ್ಲಿಸಿ ತಪಾಸಣೆ …

ಆರಾಧನಾಲಯಗಳಲ್ಲಿ ಸುಡುಮದ್ದು ಪ್ರಯೋಗಕ್ಕೆ ನಿಷೇಧ: ಸರಕಾರ ಮೇಲ್ಮನವಿಯತ್ತ

ತಿರುವನಂತಪುರ: ಆರಾಧನಾಲಯಗಳಲ್ಲಿ ರಾತ್ರಿ ವೇಳೆ ಸುಡುಮದ್ದು ಪ್ರದರ್ಶನದ ಮೇಲೆ ನಿಷೇಧ ಹೇರಿದ ರಾಜ್ಯ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲ ರಾಜ್ಯ ಸರಕಾರ ಮತ್ತು ತಿರುವಿದಾಂಕೂರ್, ಕೊಚ್ಚಿ ಮತ್ತು ಮಲಬಾರ್ ಮುಜರಾಯಿ (ದೇವಸ್ವಂ) ಮಂಡಳಿಗಳು ತೀರ್ಮಾನಿಸಿವೆ. ದೇವಸ್ಥಾನಗಳು, ನಂಬುಗೆಗಳು ಮತ್ತು ಆರಾಧನಾಲಯಗಳ ಹಿತಾಸಕ್ತಿಗಳನ್ನು ಸಂರಕ್ಷಿಸಬೇಕಾಗಿದೆ ಎಂದು ಮುಜರಾಯಿ ಸಚಿವ ರಾಧಾಕೃಷ್ಣನ್ ಸ್ಪಷ್ಟಪಡಿಸಿದ್ದಾರೆ. ರಾತ್ರಿ ವೇಳೆಗಳಲ್ಲಿ ಸುಡುಮದ್ದು ಪ್ರದರ್ಶನ ಸಲ್ಲದೆಂದು ತೀರ್ಪಿನಲ್ಲಿ ತಿಳಿಸಲಾಗಿದ್ದರೂ, ಅದಕ್ಕೆ ಪೂರ್ಣ ರೂಪದ ಸ್ಪಷ್ಟತೆ ಹೈಕೋರ್ಟ್ ನೀಡಿದ ತೀರ್ಪಿನಲ್ಲಿ ಇಲ್ಲವೆಂದು ಸಚಿವರು ಹೇಳಿದ್ದಾರೆ. ಮುಜರಾಯಿ …

ಪಿಂಚಣಿ ಕೂಡಾ ನೀಡದೆ ಸರಕಾರದ ದಂದುವೆಚ್ಚ-ರಾಜ್ಯಪಾಲ

ತಿರುವನಂತಪುರ: ಕೇರಳ ಸರಕಾರವನ್ನು ಟೀಕಿಸಿ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಮತ್ತೆ ರಂಗಕ್ಕಿಳಿದಿದ್ದಾರೆ. ರಾಜ್ಯದಲ್ಲಿ ಸೇವೆಗಾಗಿ ಜೀವನವನ್ನು  ಮುಡಿಪಾಗಿಟ್ಟವರಿಗೆ ಪಿಂಚಣಿ ಕೂಡಾ ನೀಡದೆ ಸರಕಾರ ಹಣವನ್ನು ದುಂದು ವೆಚ್ಚ ಮಾಡುತ್ತಿದೆಯೆಂದು ರಾಜ್ಯಪಾಲರು ಆರೋಪಿಸಿದ್ದಾರೆ.  ರಾಜ್ಯ ಭಾರೀ ಆರ್ಥಿಕ ಸಂದಿಗ್ಧತೆಯಲ್ಲಿ ಸಿಲುಕಿಕೊಂಡಿದ್ದರೂ ಸರಕಾರದ ದುಂದು ವೆಚ್ಚಕ್ಕೆ ಯಾವುದೇ ಕಡಿಮೆಯಿಲ್ಲ. ನ್ಯಾಯಾಲಯಕ್ಕೆ ತೆರಳಿ ಆರ್ಥಿಕ ಸಂದಿಗ್ಧತೆಯೆಂದು ತಿಳಿಸುವ ಸರಕಾರ ಮತ್ತೊಂದೆಡೆ ಆಡಂಬರ ರೀತಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಿ ಹಣ ದುಂದುವೆಚ್ಚ ಮಾಡುತ್ತಿದೆಯೆಂದು ಅವರು ಆರೋಪಿಸಿದ್ದಾರೆ. ಇದೇ ವೇಳೆ ವಿಧಾನಸಭೆ ಮಂಜೂರು ಮಾಡಿದ …

ವಿದ್ಯುತ್ ದರ ಏರಿಕೆ: ಕುಂಬಳೆಯಲ್ಲಿ ಕಾಂಗ್ರೆಸ್ ಮಾರ್ಚ್

ಕುಂಬಳೆ: ವಿದ್ಯುತ್ ದರ ಹೆಚ್ಚಳವನ್ನು  ಪ್ರತಿಭಟಿಸಿ  ಕುಂಬಳೆ ಮಂಡಲ ಕಾಂಗ್ರೆಸ್ ಕೆಎಸ್‌ಇಬಿ ಕಚೇರಿಗೆ ಮಾರ್ಚ್ ನಡೆಸಿತು. ಕೆಪಿಸಿಸಿ ಸದಸ್ಯರಾದ ಸುಬ್ಬಯ್ಯ ರೈ, ಕೆ. ನೀಲಕಂಠನ್, ಮಂಡಲ ಅಧ್ಯಕ್ಷ  ರವಿ ಪೂಜಾರಿ, ಬ್ಲೋಕ್ ಅಧ್ಯಕ್ಷ ಲೋಕನಾಥ ಶೆಟ್ಟಿ ನೇತೃತ್ವ ನೀಡಿz ರು. ಸುಬ್ಬಯ್ಯ ರೈ ಉದ್ಘಾಟಿಸಿದರು.

ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್‌ನ ನೂತನ ಕಟ್ಟಡ ಕೇಂದ್ರ ಸಚಿವೆಯಿಂದ ಲೋಕಾರ್ಪಣೆ: ಗೃಹ ವೈಭವ ಸಾಲಪತ್ರ ಬಿಡುಗಡೆ

ಉಪ್ಪಳ: ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್‌ನ ಶತಮಾನೋ ತ್ಸವದ ಆಚರಣೆ ಹಾಗೂ ಇದರ ಅಂ ಗವಾಗಿ ಸ್ಥಾಪಕರ ಹೆಸರಿನಲ್ಲಿ ನಿರ್ಮಾಣಗೊಂಡಿರುವ ಎಲ್.ಆರ್ ಗುರು ಸಹಕಾರ ಸದನ ಹಾಗೂ ನೂತನ ಕೇಂದ್ರ ಕಚೇರಿಯ ಉದ್ಘಾ ಟನಾ ಸಮಾರಂಭ ಶನಿವಾರ ಜರ ಗಿತು. ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ನೂತನ ಕಟ್ಟಡದ ಉದ್ಘಾನೆಯನ್ನು ನೆರವೇರಿಸಿದರು. ಸಹಕಾರ ಬ್ಯಾಂಕ್ ಅಧಿಕಾರಿ ಚಂದ್ರನ್.ಎ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಸಚಿವೆ ಶೋಭಾ ಕರಂದ್ಲಾಜೆ ದೀಪ ಬೆಳಗಿಸಿ ಉದ್ಘಾಟಿಸಿ …

ಮೀಯಪದವು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ರಘುನಾಥ ಶೆಟ್ಟಿ, ಉಪಾಧ್ಯಕ್ಷೆಯಾಗಿ ನಬೀಸತ್ ಮಿಸಿರಿಯಾ ಆಯ್ಕೆ

ಮಂಜೇಶ್ವರ: ಮೀಯಪದವು ಸೇವಾ ಸಹಕಾರಿ ಬ್ಯಾಂಕ್ ೨೦೨೩-೨೮ ನೇ ವರ್ಷದ ನೂತನ ಆಡಳಿತ ಮಂಡಳಿಯ ಸದಸ್ಯರ ಪದಗ್ರಹಣ ಕಾರ್ಯಕ್ರಮ ಮೀಯಪದವು ಬ್ಯಾಂಕ್ ಪರಿಸರದಲ್ಲಿ ನಡೆಯಿತು. ನೂತನ ಅಧ್ಯ ಕ್ಷರಾಗಿ ರಘುನಾಥ ಶೆಟ್ಟಿ ಕೊಮ್ಮಂಗಳ, ಉಪಾಧ್ಯಕ್ಷೆ ಯಾಗಿ ನಬೀಸತ್ ಮಿಸಿರಿ ಯಾ ಅವಿರೋಧವಾಗಿ ಆಯ್ಕೆಯಾ ದರು. ನಂತರ ನಡೆದ ಕಾರ್ಯಕ್ರಮ ದಲ್ಲಿ ನೂತನ ಅಧ್ಯಕ್ಷರಾದ ರಘು ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮೀಂಜ ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ, ಉಪಾಧ್ಯಕ್ಷ ಜಯರಾಮ ಬಳ್ಳಂಗುಡೇಲ್, ಪಂಚಾಯತು ಸ್ಥಾಯೀ ಸಮಿತಿ …

ಬಿಜೆಪಿ ಕಾಸರಗೋಡು ಮಂಡಲ ಸಮಿತಿ ಸಭೆ

ಕಾಸರಗೋಡು: ಕೇಂದ್ರದ ನರೇಂದ್ರ ಮೋದಿ ನೇತೃತ್ವದಲ್ಲಿ ಇರುವ ಬಿಜೆಪಿ ಸರಕಾರ ರೂಪಿಸಿರುವ ಯೋ ಜನೆಗಳನ್ನು ಜನರಿಗೆ ತಲುಪಿಸುವ ಸಲುವಾಗಿ ಕೇರಳದಾದ್ಯಂತ ಕರಾವಳಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ನಡೆಯುವ ತೀರದೇಶ ಯಾತ್ರೆಯನ್ನು ಹಾಗೂ ಜನ ಪಂಚಾಯತ್ ಕಾರ್ಯಕ್ರಮವನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನಸಾಮಾನ್ಯ ರನ್ನು ಸೇರಿಸಿಕೊಂಡು ಯಶಸ್ವಿಗೊಳಿ ಸಲು ~್ಧÈ್ಣ್ಫ್ತ%¬ಸಲಾಯಿತು. ಮಂ ಡಲ ಪದಾಧಿಕಾರಿಗಳು, ಪಂಚಾಯತ್/ಪ್ರದೇಶ/ ನಗರ ಸಭೆ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ^್ಣ_%ಸಲಾಯಿತು.

ಮಂಜೇಶ್ವರ ಕನಿಲ ಶ್ರೀ ಭಗವತೀ ಕ್ಷೇತ್ರದಲ್ಲಿ ನಿಧಿ ಸಮರ್ಪಣಾ ಕಾರ್ಯಕ್ರಮ

ಮಂಜೇಶ್ವರ: ಭಗವತೀ ಐಶ್ವರ್ಯ ಸಂಪನ್ನೆ. ‘ಭಗ’ ಎಂದರೆ ಐಶ್ವರ್ಯ, ಸಂಪತ್ತು. ಸಂಪತ್ತಿನಿAದ ಕೂಡಿದವಳು ಭಗವತಿ. ಸಂಪತ್ತು ಇದ್ದರೆ ಭಗವತಿ ಇದ್ದಂತೆ. ಎಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದ ಶ್ರೀ ಗುರು ದೇವಾನಂದ ಸ್ವಾಮೀಜಿ ನುಡಿದರು. ಅವರು ನಿನ್ನೆ ಕನಿಲ ಶ್ರೀ ಭಗವತಿ ಕ್ಷೇತ್ರದಲ್ಲಿ ಜೀರ್ಣೋದ್ದಾರ ಸಮಿತಿಯ ನೇತೃತ್ವದಲ್ಲಿ ಪುನರ್ ನಿರ್ಮಾಣಗೊಳ್ಳಲಿರುವ ಸಮಗ್ರ ಕ್ಷೇತ್ರ ನಿರ್ಮಾಣ ಕಾರ್ಯಗಳ ನಿಧಿ ಸಂಗ್ರಹಕ್ಕಾಗಿ ನಿಧಿ ಸಮರ್ಪಣಾ ಕಾರ್ಯಕ್ರಮ ಹಾಗೂ ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭದಲ್ಲಿ ಆಶೀರ್ವಚನ ನೀಡುತ್ತಾ ಮಾತನಾಡಿದರು. ಭಗದ …