ಮೀಯಪದವು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ರಘುನಾಥ ಶೆಟ್ಟಿ, ಉಪಾಧ್ಯಕ್ಷೆಯಾಗಿ ನಬೀಸತ್ ಮಿಸಿರಿಯಾ ಆಯ್ಕೆ

ಮಂಜೇಶ್ವರ: ಮೀಯಪದವು ಸೇವಾ ಸಹಕಾರಿ ಬ್ಯಾಂಕ್ ೨೦೨೩-೨೮ ನೇ ವರ್ಷದ ನೂತನ ಆಡಳಿತ ಮಂಡಳಿಯ ಸದಸ್ಯರ ಪದಗ್ರಹಣ ಕಾರ್ಯಕ್ರಮ ಮೀಯಪದವು ಬ್ಯಾಂಕ್ ಪರಿಸರದಲ್ಲಿ ನಡೆಯಿತು. ನೂತನ ಅಧ್ಯ ಕ್ಷರಾಗಿ ರಘುನಾಥ ಶೆಟ್ಟಿ ಕೊಮ್ಮಂಗಳ, ಉಪಾಧ್ಯಕ್ಷೆ ಯಾಗಿ ನಬೀಸತ್ ಮಿಸಿರಿ ಯಾ ಅವಿರೋಧವಾಗಿ ಆಯ್ಕೆಯಾ ದರು. ನಂತರ ನಡೆದ ಕಾರ್ಯಕ್ರಮ ದಲ್ಲಿ ನೂತನ ಅಧ್ಯಕ್ಷರಾದ ರಘು ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮೀಂಜ ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ, ಉಪಾಧ್ಯಕ್ಷ ಜಯರಾಮ ಬಳ್ಳಂಗುಡೇಲ್, ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಬಾಬು ಕುಳೂರು, ಕ್ಯಾಂಪ್ಕೋ ನಿರ್ದೇ ಶಕ ಜಯಪ್ರಕಾಶ್ ನಾರಾಯಣ ತೊಟ್ಟೆ ತ್ತೋಡಿ, ವಿ ವಿ ಎ ಯು ಪಿ ಶಾಲಾ ಸಂಚಾಲಕ ಶ್ರೀಧರ ರಾವ್, ಪಂಚಾಯತ್ ಸದಸ್ಯ ಜನಾರ್ಧನ ಪೂಜಾರಿ, ಪ್ರಭಾಕರ ಶೆಟ್ಟಿ, ಚುನಾವಣಾ ಅಧಿಕಾರಿ ಸುನಿಲ್ ಕುಮಾರ್, ಬೈಜು ರಾಜ್, ಸಹಕಾರ ವೇದಿಕೆ ಸಂಚಾಲಕ ವಹೀದ್ ಕೂಡೆಲ್, ಬಾಲಪ್ಪ ಬಂಗೇರ, ಜೆ. ಮೊಹಮ್ಮದ್, ಚಂದ್ರಶೇಕರ ಶೆಟ್ಟಿ ಪಲ್ಲತಡ್ಕ, ಡಿ.ಕಮಲಾಕ್ಷ , ಮೊಹಮ್ಮದ್ ಕುಂಞ, ಮಜಿಬೈಲು ಬ್ಯಾಂಕ್ ಉಪಾಧ್ಯಕ್ಷರಾದ ಚಿಕ್ಕಪ್ಪ ಶೆಟ್ಟಿ ಮೊದಲಾದವರು ಮಾತನಾಡಿದರು. ಬ್ಯಾಂಕ್ ಕಾರ್ಯದರ್ಶಿ ಜಯಶ್ರೀ ಸ್ವಾಗತಿಸಿ, ರಾಮಚಂದ್ರ ಟಿ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page