ನಟ ಶಿಹಾಸ್ ಕರೀಂ ಆರೋಪಿಯಾದ  ಕಿರುಕುಳ ಪ್ರಕರಣ: ಮೂನಾರ್, ಮರೆಯೂರ್‌ನಲ್ಲಿ ಮಾಹಿತಿ ಸಂಗ್ರಹ

ಹೊಸದುರ್ಗ:  ಮದುವೆ ಭರವಸೆ ನೀಡಿ ೩೨ರ ಹರೆಯದ, ಜಿಮ್ನೇಶಿಯಂ ತರಬೇತುದಾರೆ ಯಾದ ಯುವತಿಗೆ  ಲೈಂಗಿಕ ಕಿರುಕುಳ ನೀಡಿ ಬಳಿಕ ಆಕೆ ಗರ್ಭಿಣಿಯಾದಾಗ ಎರಡು ಬಾರಿ ಗರ್ಭಛಿದ್ರ ನಡೆಸಿದ ಪ್ರಕರಣದಲ್ಲಿ  ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಪ್ರಕರಣದ ಆರೋಪಿ ಹಾಗೂ ಎರ್ನಾಕುಳಂ ನಿವಾಸಿಯಾದ ಸಿನಿಮಾ,  ಧಾರಾವಾಹಿ ನಟ ಶಿಹಾಸ್ ಕರೀಂನ ವಿರುದ್ಧ ಪ್ರಕರಣ ನಾಳೆ ನ್ಯಾಯಾಲಯ  ಪರಿಗಣಿಸಲಿರುವಂತೆಯೇ ಪೊಲೀಸರು ತನಿಖೆ ತೀವ್ರಗೊಳಿ ಸಿದ್ದಾರೆ. ಚಂದೇರ ಎಸ್‌ಐ ಎಂ.ವಿ. ಶ್ರೀದಾಸ್, ಸಿಪಿಒ ಗಳಾದ ದಿಲೀಶ್, ರಮೇಶ್ ಎಂಬಿವರನ್ನೊಳಗೊಂಡ  ತಂಡ ಮೂನಾರ್, ಮರೆಯೂರ್ …

ಮುಖ್ಯಮಂತ್ರಿಯ ರಾಜೀನಾಮೆ ಆಗ್ರಹಿಸಿ ಯುಡಿಎಫ್ ಚಳವಳಿ ಇಂದಿನಿಂದ

ಕಾಸರಗೋಡು: ಮುಖ್ಯಮಂತ್ರಿ  ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದ್ದಾ ರೆಂದೂ, ಅದರ ನೈತಿಕ ಹೊಣೆಗಾರಿಕೆ ಮತ್ತು ಅವರು ತಮ್ಮ ಆ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಪ್ರಧಾನ ಬೇಡಿಕೆ ಮುಂದಿರಿಸಿಕೊಂಡು ರಾಜ್ಯದಲ್ಲಿ ಇಂದಿನಿಂದ ಅ.೧೫ರ ತನಕ ರಾಜ್ಯದ ಎಲ್ಲಾ ವಿಧಾನಸಬಾ ಕ್ಷೇತ್ರಗಳ ಮಟ್ಟದಲ್ಲಿ ಚಳವಳಿ ಹೋರಾಟ ನಡೆಸಲು ಯುಡಿ ಎಫ್ ರಾಜ್ಯ ಸಮಿತಿ ತೀರ್ಮಾನಿಸಿದೆ. ‘ರೇಶನ್ ಅಂಗಡಿಯಿಂದ ಆರಂಭಗೊಂಡು ಸೆಕ್ರೆಟರಿಯೇಟ್ ತನಕ’ ಎಂಬ ಹೆಸರಲ್ಲಿ ಈ ಹೋರಾಟ ನಡೆಸಲಾಗುವುದೆಂದು ಯುಡಿಎಫ್ ರಾಜ್ಯ ಸಂಚಾಲಕ ಎಂ.ಎಂ. ಹಸ್ಸನ್ ತಿಳಿಸಿದ್ದಾರೆ. ಇದರ ಅಂಗವಾಗಿ ಅಕ್ಟೋಬರ್ …

ಯುವಕನಿಗೆ ಹಲ್ಲೆ: ೬ಮಂದಿ ವಿರುದ್ಧ ಕೇಸು

ಕುಂಬಳೆ: ಕುಬಣೂರು ಪಂಜದ ಸುನಿಲ್ ಕುಮಾರ್ (೩೨)ರಿಗೆ ಹಲ್ಲೆಗೈದು ಗಾಯ ಗೊಳಿಸಿದ ಘಟನೆಗೆ ಸಂಬಂಧಿಸಿ ಆರು ಮಂದಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿ ಸಿಕೊಂಡಿದ್ದಾರೆ. ಕುಬ ಣೂರು ಪಂಜ ಪರಿಸರ ನಿವಾಸಿಗಳಾದ ಧೀರಜ್, ರೋಶನ್, ಪ್ರದೀಶ್, ಕಿರಣ್, ಶಿವರಾಜ್, ರಜಿತ್ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಮೊನ್ನೆ ಸಂಜೆ ಪಂಜದಲ್ಲಿ ನಡೆದು ಹೋಗುತ್ತಿದ್ದ ಸುನಿಲ್ ಕುಮಾರ್‌ನನ್ನು ಬೈಕ್‌ನಲ್ಲಿ ತಲುಪಿದ ತಂಡ ತಡೆದು ನಿಲ್ಲಿಸಿ ಹಲ್ಲೆಗೈದಿದೆ. ಜುಗಾರಿ ಕೇಂದ್ರದ ಕುರಿತು ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ …

ಎಂಡೋಸಲ್ಫಾನ್ ಸಂತ್ರಸ್ಥೆ ನಿಧನ

ಬದಿಯಡ್ಕ: ಎಂಡೋ ಸಲ್ಫಾನ್ ಸಂತ್ರಸ್ಥೆ ಬದಿಯಡ್ಕ ನೀರ್ಚಾಲ್ ಕಡಂಬಳ ನಿವಾಸಿ ಮುಹ್‌ಸೀನ (೨೭) ನಿಧನಹೊಂದಿ ದರು.  ಜನ್ಮತಃ ರೋಗ ಬಾಧಿತ ರಾಗಿದ್ದ ಇವರು ಅವಿವಾಹಿತರಾಗಿ ದ್ದಾರೆ. ಇವರ ತಂದೆ ಕೆ.ಎಂ. ಜಲೀಲ್ ಈ ಹಿಂದೆ ನಿಧ ಹೊಂದಿದ್ದಾರೆ.  ಮೃತರು ತಾಯಿ ಮರಿಯುಮ್ಮ, ಸಹೋದರಿ ಸುಮೈರ, ಸಹೋದರರಾದ ನಿಸಾರ್, ಸಿರಾಜ್, ನೌಷಾದ್, ಜಾಫರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮೂರು ರಾಜ್ಯಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಹೊಸದಿಲ್ಲಿ: ಪಂಚ ರಾಜ್ಯ ಚುನಾವಣೆಗಳ ದಿನಾಂಕ ಘೋಷಣೆಯಾಗುತ್ತಿದ್ದಂತೆ ಮೂರು ರಾಜ್ಯಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್, ಮಧ್ಯಪ್ರದೇಶದ ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಹಲವು ಸಂಸದರಿಗೆ ಬಿಜೆಪಿ ಟಿಕೆಟ್ ನೀಡಿದೆ. ಛತ್ತೀಸ್‌ಗಢದಲ್ಲಿ ೬೪ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಇದರಿಂದ ಒಟ್ಟು ಅಭ್ಯರ್ಥಿಗಳ ಸಂಖ್ಯೆ ೮೫ಕ್ಕೇರಿದೆ. ರಾಜಸ್ಥಾನದಲ್ಲಿ ೪೧ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಹಾಲಿ ಸಂಸದ ರಾಜ್ಯವರ್ದನ್ ಸಿಂಗ್ …

ಅಧಿಕಾರಿಗಳು ಕಣ್ಮುಚ್ಚಿದ್ದಾರೆ: ಮಂಗಲ್ಪಾಡಿಯಲ್ಲಿ ಮಲಿನ ಜಲ ತೆರೆದ ಸ್ಥಳಕ್ಕೆ; ರೋಗಭೀತಿ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನಲ್ಲಿ ಆರೋಗ್ಯ ಸಂರಕ್ಷಣೆ ಮತ್ತೆ ಹಳಿತಪ್ಪುತ್ತಿದೆ ಎಂದು ದೂರಲಾಗಿದೆ. ಡೆಂಗ್ಯೂಜ್ವರ ಸಹಿತದ ಅಂಟು ಜಾಡ್ಯಗಳು ವ್ಯಾಪಕಗೊಳ್ಳುತ್ತಿರುವ ಮಧ್ಯೆ ಸಾರ್ವಜನಿಕ ಸ್ಥಳಗಳಿಗೆ ಮಲಿನ ಜಲವನ್ನು ಹರಿಯಬಿಡುತ್ತಿದ್ದರೂ ಪಂಚಾಯತ್ ಮೌನ ವಹಿಸಿದೆ ಎಂದು ಸ್ಥಳೀಯರು ದೂರಿದ್ದಾರೆ. ಕೈಕಂಬದ ಸೊಸೈಟಿ ಹಾಸ್ಪಿಟಲ್‌ನ ಸಮೀಪದ ತೆರೆದ ಸ್ಥಳಕ್ಕೆ ಫ್ಲಾಟ್‌ನ ಮಲಿನ ಜಲವನ್ನು ಹರಿಸಲಾಗುತ್ತಿದೆ. ಇದು ಈ ಪ್ರದೇಶದಲ್ಲಿ ದುರ್ನಾತವನ್ನುಂಟುಂಮಾಡಿದ್ದು, ರೋಗಭೀತಿಯನ್ನು ತಂದಿದೆ. ಈ ಬಗ್ಗೆ ಪಂಚಾಯತ್ ಹಾಗೂ ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ. ಇದು …

ವಿವಿಧ ಬೇಡಿಕೆಗಳೊಂದಿಗೆ ಕೇರಳ ಪ್ರಾಂತ್ಯ ಪೆನ್ಶನರ್ಸ್ ಸಂಘದ ಧರಣಿ

ಕುಂಬಳೆ: ಕೇರಳ ಪ್ರಾಂತ್ಯ ಪೆನ್ಶ ನರ್ಸ್ ಸಂಘದ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಂಜೇಶ್ವರ ಸಬ್ ಟ್ರಶರಿ ಯ ಮುಂಭಾಗದಲ್ಲಿ ವಿವಿಧ ಬೇಡಿP ೆಗಳನ್ನು ಮುಂದಿರಿಸಿ ಧರಣಿ ನಡೆಸಲಾ ಯಿತು. ಪ್ರಾಂತ ಉಪಾಧ್ಯಕ್ಷ ಈಶ್ವರ ರಾವ್ ಉದ್ಘಾಟಿಸಿದರು. ಪಿಂಚಣಿದಾ ರರಿಗೆ ಕಳೆದ ೨೦೧೯ರಿಂದ ಸಿಗಬೇಕಾ ಗಿದ್ದ ಬಾಕಿಯಾಗಿರುವ ಎರಡು ಕಂತು ಪಿಂಚಣಿ ಮತ್ತು ಮೂರು ವರ್ಷ ಗಳಿಂದ ಕೊಡಬೇಕಾಗಿದ್ದ ಒಟ್ಟು ಆರು ಕಂತು ತುಟ್ಟಿಭತ್ಯೆ ಅನುಕೂಲತೆಗಳನ್ನು ಕೂಡಲೇ ನೀಡುವಂತೆ ಸರಕಾರವನ್ನು ಒತ್ತಾಯಿಸಲಾಯಿತು. ಸಂಘದ ಜಿಲ್ಲಾ ಅಧ್ಯಕ್ಷ ಮುತ್ತುಕೃಷ್ಣನ್ ಅವರು …

‘ನವಕೇರಳ ಸಭೆ’ ನ.೧೮ರಂದು ಪೈವಳಿಕೆಯಲ್ಲಿ ಮುಖ್ಯಮಂತ್ರಿ ಉದ್ಘಾಟನೆ: ಸ್ವಾಗತಸಮಿತಿಗೆ ರೂಪು

ಮಂಜೇಶ್ವರ: ಮುಖ್ಯಮಂತ್ರಿ ಮತ್ತು ರಾಜ್ಯದ ಸಚಿವರುಗಳ ನೇತೃತ್ವದಲ್ಲಿ ನಡೆಯುವ ನವಕೇರಳ ಸಭೆ ಕಾರ್ಯಕ್ರಮದ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಮಟ್ಟದ ಕಾರ್ಯ ಕ್ರಮ  ಅಕ್ಟೋಬರ್ ೧೮ರಂದು ಪೈವಳಿಕೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸು ವರು. ಹಲವರು ಸಚಿವರುಗಳು ಭಾಗವಹಿಸುವರು. ಕಾರ್ಯಕ್ರಮದ ಯಸ್ವಿಗಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್‌ರನ್ನು ಅಧ್ಯಕ್ಷರಾಗಿ ಯೂ, ಆರ್‌ಡಿಒ ಅತುಲ್ ಸ್ವಾಮಿ ನಾಥ್ ಸಂಚಾಲಕರಾಗಿ ಹಾಗೂ ಇತರ ಆರು ಮಂದಿ ಸದಸ್ಯರನ್ನು ಒಳಗೊಂಡ ಸಮಿತಿಗೆ ರೂಪು …

ಮಲ್ಲ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವ

ಮಲ್ಲ: ಮಲ್ಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವದಂಗವಾಗಿ ಅ. ೧೫ರಿಂದ ೨೪ರವರೆಗೆ ವಿಶೇಷ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ ಅಭಿಷೇಕ, ಅರ್ಚನೆ, ಉಷಃಪೂಜೆ, ನವಕಾಭಿಷೇಕ, ತುಲಾಭಾರ, ಮಧ್ಯಾಹ್ನ ಪೂಜೆ, ಸಂಜೆ ದೀಪಾರಾಧನೆ, ಅರ್ಚನೆ, ನವರಾತ್ರಿ ಪೂಜೆ, ರಾತ್ರಿ ಪೂಜೆ, ೧೫ರಂದು ನವರಾತ್ರಿ ಪೂಜೆ ಪ್ರಾರಂಭ, ೨೦ರಂದು ಶಾರದಾಪೂಜೆ ಪ್ರಾರಂಭ, ೨೨ರಂದು ದುರ್ಗಾಷ್ಟಮಿ, ೨೩ರಂದು ಮಹಾನವಮಿ, ಚಂಡಿಕಾಹೋಮ, ವಾಹನ ಪೂಜೆ, ೨೪ರಂದು ವಿಜಯದಶಮಿ, ವಿದ್ಯಾರಂಭ, ಶಮಿ ಪೂಜೆ, ವಿಶೇಷ ಸೇವೆಯಾಗಿ ಅ. ೧೫ರಿಂದ ೨೨ರವರೆಗೆ ತುಲಾಭಾರ, ೨೦ರಿಂದ …

ಕುಂಬಳೆ ಉಪಜಿಲ್ಲಾ ಕ್ರೀಡಾಕೂಟ ಸಮಾರೋಪ

ಕುಂಬಳೆ: ನಾಲ್ಕು ದಿನಗಳಿಂದ ಬದಿಯಡ್ಕದ ಬೋಳುಕಟ್ಟೆ ಮೈದಾನದಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಮಟ್ಟದ ಕ್ರೀಡಾಕೂಟ ಸಮಾಪ್ತಿಗೊಂಡಿತು. ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಶೈಲಜಾ ಭಟ್ ಅಧ್ಯಕ್ಷತೆವಹಿಸಿದರು. ಬದಿಯಡ್ಕ ಸರ್ಕಲ್ ಇನ್ಸ್ಪೆಕ್ಟರ್ ವಿನೇಶ್ ವಿ.ಆರ್. ವಿಜೇತ ತಂಡ ಗಳಿಗೆ ಟ್ರೋಫಿಗಳನ್ನು ವಿತರಿಸಿದರು . ಬದಿಯಡ್ಕ ಸಬ್ ಇನ್ಸ್ಪÉಕ್ಟರ್ ವಿನೋದ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿ ಸಿದ್ದರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ ಎಂ, ಉಪಜಿಲ್ಲಾ ಕ್ರೀಡಾ ಕಾರ್ಯದರ್ಶಿ ಶಶಿಕಾಂತ, ಪೆರಡಾಲ ಸರಕಾರಿ ಪ್ರೌಢಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ …