ಮಜಿಬೈಲ್ ತಿರುವಿನಲ್ಲಿ ಆವರಿಸಿದ ಕಾಡುಪೊದೆಗಳು: ಅಪಘಾತ ಭೀತಿ

ಮಂಜೇಶ್ವರ: ಮೀಂಜ ಪಂಚಾಯತ್ ವ್ಯಾಪ್ತಿಯ ಮೀಯಪದವು ರಸ್ತೆಯ ಮಜಿಬೈಲು ಸೇತುವೆ ಸಮೀಪದ ತಿರುವಿನಲ್ಲಿ ಕಾಡುಪೊದೆಗಳು ಆವರಿಸಿಕೊಂಡಿದ್ದು, ವಾಹನ ಸವಾರರಲ್ಲಿ ಅಪಘಾತದ ಭೀತಿ ಉಂಟುಮÁಡಿದೆ. ಈ ರಸ್ತೆ ಉದ್ದಕ್ಕೂ ಅಲ್ಲಲ್ಲಿ ತಿರುವುಗಳು ಇದ್ದು ಇಕ್ಕೆಡೆಗಳಲ್ಲಿ ಕಾಡುಪೊದೆಗಳು ತುಂಬಿಕೊAಡಿದೆ. ಆದರೆ ಸೇತುವೆ ಸಮೀಪದಲ್ಲಿ ದೊಡ್ಡ ತಿರುವುಯಿದ್ದು ಪೊದೆಗಳು ಆವರಿಸಿದ ಕಾರಣ ಮೀಯಪದವು ಭಾಗದಿಂದ ಹೊಸಂಗಡಿಗೂ ಹೊಸಂಗಡಿ ಭಾಗದಿಂದ ಮೀಯಪದವುಗೆ ತೆರಳುವ ವಾಹನ ಸವಾರರ ಗಮನಕ್ಕೆ ಬಾರ ದಿರುವುದು ಅಪಘಾತಕ್ಕೆ ಸಾಧ್ಯತೆ ಹೆಚ್ಚಾಗುತ್ತಿರುವುದಾಗಿ ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಸಂಬAಧಪಟ್ಟ ಪಂಚಾಯತ್ ಅಥವಾ ಸಂಘ …

ಮಧೂರು ಕ್ಷೇತ್ರಕ್ಕೆ ಶಿಲಾಮಯ ಮಹಾದ್ವಾರದ ಕೊಡುಗೆ

ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಪ್ರಗತಿಯಲ್ಲಿದ್ದು ಉದ್ಯಮಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಸದಾಶಿವ ಶೆಟ್ಟಿ, ಕೂಳೂರು ಕನ್ಯಾನ ಇವರು ಶಿಲಾಮಯ ಮಹಾದ್ವಾರದ ನಿರ್ಮಾಣದ ಪ್ರಾಯೋಜಕತ್ವವನ್ನು ವಹಿಸಿದ್ದಾರೆ. ಇದಕ್ಕೆ ಒಂದು ಕೋಟಿ ಒಂದು ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ಅವರು ಘೋಷಿಸಿದ್ದಾರೆ. ಇದರ ಹೊರತಾಗಿ ಅವರು ಈಗಾಗಲೇ ಶ್ರೀ ಕ್ಷೇತ್ರದ ರಾಜಾಂಗಣದ ಕಾಮಗಾರಿಗೆ ಎಪ್ಪತ್ತೈದು ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಇವರಿಗೆ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಪದಾಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ವಾಹನ ಪಾರ್ಕ್‌ಗೆ ನಿಷೇಧ

ಕಾಸರಗೋಡು: ಕಾಞಂಗಾಡ್- ಕಾಸರಗೋಡು ಓಲ್ಡ್ ಎಸ್.ಎಚ್ ರಸ್ತೆಯಲ್ಲಿ ಕಾಮಗಾರಿಗಳು ನಡೆಯುತ್ತಿರುವುದರಿಂದಾಗಿ ಕ್ಲಾಕ್ ಟವರ್‌ನಿಂದ ತೆರುವತ್ ವರೆಗಿನ ರಸ್ತೆ ಬದಿ ವಾಹನಗಳನ್ನು ನಿಲುಗಡೆಗೊಳಿಸುವುದು ಇಂದಿನಿಂದ ಇನ್ನೊಂದು ಸೂಚನೆ ಲಭಿಸುವವರೆಗೆ ನಿಷೇಧಿಸಲಾಗಿದೆ.  ಕಾಮಗಾರಿಯನ್ನು ಸೂಕ್ತ ರೀತಿಯಲ್ಲಿ ಪೂರ್ತಿಗೊಳಿಸಲು ವಶಪಡಿಸಿ ನಿರ್ಮಿಸಿದ ನಿರ್ಮಾಣಗಳು, ಗೂಡಂಗಡಿಗಳನ್ನು, ಇತರ ವ್ಯಾಪಾರಿಗಳು ಸ್ವಯಂ ಆಗಿ ಹೊರತುಪಡಿಸಬೇಕೆಂದು, ಕಾಮಗಾರಿಯಿಂದಾಗಿ ತೊಂದರೆಯಾಗುವ ಸಾರ್ವಜನಿಕರು ಸಹಕರಿಸಬೇಕೆಂದು ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ವಿನಂತಿಸಿದ್ದಾರೆ.

ರಾಜ್ಯ ಸಹಕಾರಿ ಕೃಷಿ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕರಾಗಿ ಜೆ.ಎಸ್. ಸೋಮಶೇಖರ್ ಆಯ್ಕೆ

ಪೆರ್ಲ: ರಾಜ್ಯ ಸಹಕಾರಿ ಕೃಷಿ ಗ್ರಾಮ ಅಭಿವೃದ್ಧಿ ಬ್ಯಾಂಕ್‌ನ ಡೈರೆ ಕ್ಟರ್ ಆಗಿ ಮಂಜೇಶ್ವರ ಪ್ರಾಥಮಿಕ ಕೃಷಿ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಹಾಗೂ ಡಿಸಿಸಿ ಪ್ರಧಾನ ಕಾರ್ಯ ದರ್ಶಿಯಾಗಿರುವ ಜೆ.ಎಸ್. ಸೋಮ ಶೇಖರರನ್ನು ಆಯ್ಕೆ ಮಾಡಲಾಗಿದೆ. ಪ್ರಾಥಮಿಕ ಸಹಕಾರಿ ಕೃಷಿ ಗ್ರಾಮ ಅಭಿವೃದ್ಧಿ ಬ್ಯಾಂಕ್‌ಗಳ ಅಪೆಕ್ಸ್ ಸಂಸ್ಥೆಯಾದ ರಾಜ್ಯ ಕೃಷಿ ಗ್ರಾಮ ಅಭಿವೃದ್ಧಿ ಬ್ಯಾಂಕ್ ಆಡಳಿತ ಸಮಿತಿಗೆ ಕಳೆದ ಆಗಸ್ಟ್‌ನಲ್ಲಿ ನಡೆದ ಚುನಾ ವಣೆಯಲ್ಲಿ ೨ ಮತದ ಅಂತರದಲ್ಲಿ ಐಕ್ಯರಂಗದ ಪ್ಯಾನಲ್ ಜಯಗಳಿಸಿತ್ತು. ಬ್ಯಾಂಕ್‌ನ ನಿಯಮಾವಳಿ ಯಂತೆ …

ಉದ್ಯಾವರ ಮಾಡದಲ್ಲಿ ಶ್ರೀ ಶಾರದಾ ಮಹೋತ್ಸವ ೨೩ರಂದು

ಮಂಜೇಶ್ವರ: ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಆಶ್ರಯದಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ, ಮಾತೃಮಂಡಳಿ, ಸೇವಾ ಭಾರತಿ ಉದ್ಯಾವರ ಮಾಡ ಇದರ ಸಹಕಾರÀದೊಂದಿಗೆ 34ನೇ ವರ್ಷದ ಶ್ರೀ ಶಾರದಾ ಮಹೋತ್ಸವ ಈ ತಿಂಗಳ 23ರಂದು ಉದ್ಯಾವರ ಮಾಡದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಬೆಳಿಗ್ಗೆ 7ಕ್ಕೆ ಶ್ರೀ ಶಾರದಾ ದೇವಿಯ ಪ್ರತಿಷ್ಠೆ, ಪ್ರತಿಷ್ಠಾ ಪೂಜೆ, ಬಳಿಕ ಗಣಹೋಮ, ಬೆಳಿಗ್ಗೆ 10ರಿಂದ ವಿವಿಧ ತಂಡಗಳಿAದ ಭಜನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಂಜೆ 5.30ಕ್ಕೆ ಶ್ರೀ ಶಾರದಾ ಮಾತೆಯ ಭವ್ಯ ಮೆರವಣಿಗೆ …

ಡ್ರೈವಿಂಗ್ ಟೆಸ್ಟ್ ವಿಳಂಬ ಬಗ್ಗೆ ತರಬೇತಿ ಕೇಂದ್ರ ಮಾಲಕರ ಮನವಿ: ಶೀಘ್ರ ಪ್ರತಿಕ್ರಿಯಿಸಿದ ಸಾರಿಗೆ ಸಚಿವ

ಕಾಸರಗೋಡು: ಡ್ರೈವಿಂಗ್ ಟೆಸ್ಟ್ ನಡೆಸುವುದರಲ್ಲಿ ಉಂಟಾಗುವ ಕಾಲ ವಿಳಂಬದಿಂದಾಗಿ ಕಾಸರಗೋಡು ತಾಲೂಕಿನವರು ಎದುರಿಸುವ ಸಮಸ್ಯೆಗಳ ಬಗ್ಗೆ ಮನವಿ ನೀಡಿದಾಗ ಮಿಂಚಿನ ವೇಗದಲ್ಲಿ ಅದಕ್ಕೆ ಪರಿಹಾರಕ್ಕೆ ಸಾರಿಗೆ ಸಚಿವ ಆಂಟನಿ ರಾಜು ಮಧ್ಯೆಪ್ರವೇಶಿಸಿದ್ದಾರೆ. ತಾಲೂಕಿನ ಡ್ರೈವಿಂಗ್ ಶಾಲೆಗಳ ಮಾಲಕರ ಒಕ್ಕೂಟ ವತಿಯಿಂದ ನಿನ್ನೆ ಕಾಸರಗೋಡಿಗೆ ತಲುಪಿದ ಸಾರಿಗೆ ಸಚಿವರಿಗೆ ಮನವಿ ನೀಡಲಾಗಿತ್ತು. ಕಾಸರಗೋಡು ಅತಿಥಿ ಮಂದಿರದಲ್ಲಿ ಪ್ರಜಾಪ್ರಭುತ್ವವಾದಿ ಕೇರಳ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸನ್ನಿ, ಕಾರ್ಯದರ್ಶಿ ರತೀಶ್, ಡ್ರೈವಿಂಗ್ ಶಾಲೆ ಮಾಲಕರಾದ ಎಫ್.ಆರ್. ಮೇಲ್ಪರಂಬ, ಗಿರೀಶ್, ಸುಕುಮಾರನ್, ಮುತ್ತಪ್ಪನ್, …

ನೀರ್ಚಾಲು ಶಾಲೆಯಲ್ಲಿ ‘ವಿಶ್ವ ತುಳು ಲಿಪಿ ದಿನೊ’ ೧೦ರಂದು

ನೀರ್ಚಾಲು: ಜೈ ತುಳುನಾಡು ಇದರ ಕಾಸರಗೋಡು ಘಟಕ, ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಜಂಟಿ ಆಶ್ರಯದಲ್ಲಿ ತುಳು ಲಿಪಿ ಸಂಶೋಧಕ ಡಾ.  ವೆಂಕಟರಾಜ ಪುಣಿಂಚಿತ್ತಾಯರ ಜನ್ಮ ದಿನದಂಗವಾಗಿ ವಿಶ್ವ ತುಳು ಲಿಪಿ ದಿನೊ’ ಎಂಬ ಕಾರ್ಯಕ್ರಮ ಈ ತಿಂಗಳ ೧೦ರಂದು ಅಪರಾಹ್ನ ೩ರಿಂದ ನೀರ್ಚಾಲು ಮಹಾಜನ ಸಂಸ್ಕೃತ ಶಾಲೆಯಲ್ಲಿ ನಡೆಯಲಿದೆ. ಶಾಲೆಯ ಮೆನೇಜರ್ ಜಯದೇವ ಖಂಡಿಗೆ ಉದ್ಘಾಟಿಸುವರು. ಜೈ ತುಳುನಾಡು ಕಾಸರಗೋಡು ಘಟಕದ ಅಧ್ಯಕ್ಷೆ ಕುಶಾಲಾಕ್ಷಿ ವಿ ಕುಲಾಲ್ ಕಣ್ವತೀರ್ಥ ಅಧ್ಯಕ್ಷತೆ ವಹಿಸುವರು. …

ನವಕೇರಳ ವೇದಿಕೆ: ಮಂಜೇಶ್ವರ ವಿಧಾನಸಭಾ ಕ್ಷೇತ್ರ ಸ್ವಾಗತ ಸಮಿತಿ ರೂಪೀಕರಣ ೯ರಂದು

ಮಂಜೇಶ್ವರ: ನವಕೇರಳ ನಿರ್ಮಾಣದಂಗವಾಗಿ ರಾಜ್ಯ ಸರಕಾರ ಇಲ್ಲಿಯ ತನಕ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರೊಂದಿಗೆ ಸಂವಾದ ನಡೆಸಲು ಮುಖ್ಯಮಂತ್ರಿ ಯವರ ನೇತೃತ್ವದಲ್ಲಿ ಸಚಿವರು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪರ್ಯಟನೆ ನಡೆಸುತ್ತಿದ್ದಾರೆ. ಇದರಂಗವಾಗಿ ಜಿಲ್ಲಾ ಮಟ್ಟದ ಸಂದರ್ಶನ, ಜನಸ್ತೋಮ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಮಂಜೇಶ್ವರ ವಿಧಾನಸಭಾ ಕ್ಷೇತ್ಪ ನವಕೇರಳ ವೇದಿಕೆ ನ. ೧೮ರಂದು ಸಂಜೆ ೩.೩೦ಕ್ಕೆ ಪೈವಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಇದರ ಯಶಸ್ವಿಗೆ ಸ್ವಾಗತ ಸಮಿತಿ ರೂಪೀಕರಣ ಈ ತಿಂಗಳ ೯ರಂದು ಸಂಜೆ ೪ಕ್ಕೆ …

ಮುಂಬೈಯಲ್ಲಿ ಘೋರ ಅಗ್ನಿ ದುರಂತ: ಏಳು ಮಂದಿ ಜೀವಂತ ದಹನ, ೫೧ ಮಂದಿಗೆ ಗಾಯ

ಮುಂಬೈ: ವಾಣಿಜ್ಯನಗರಿ ಮುಂಬೈಯ ಗೋರೆಗಾಂವ್ ವೆಸ್ಟ್‌ನಲ್ಲಿ ಇಂದು ಮುಂಜಾನೆ ಏಳು  ಅಂತಸ್ತಿನ ವಸತಿ ಕಟ್ಟಡದಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, ಇದರಲ್ಲಿ ಕನಿಷ್ಟ ಏಳು ಮಂದಿ  ಸಾವನ್ನಪ್ಪಿದ್ದಾರೆ.  ೫೧ ಮಂದಿ ಸುಟ್ಟ ಗಾಯಗೊಂಡಿದ್ದು, ಇವರಲ್ಲಿ ೫ ಮಂದಿಯ ಸ್ಥಿತಿ ಚಿಂತಾಜನಕವಾಗಿದೆಯೆಂದು ವೈದ್ಯರು ತಿಳಿಸಿದ್ದಾರೆ. ಗಾಯಾಳುಗಳನ್ನು  ಕೂಪರ್ ಆಸ್ಪತ್ರೆ ಮತ್ತು  ಬಾಳಾಸಾಹೇಬ್ ಠಾಕ್ರೆ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಾಗಿ ದಾಖಲಿಸಲಾಗಿದೆ. ಗೋರೆಗಾಂವ್  ಪಶ್ಚಿಮ ಆಜಾದ್ ಮೈದಾನ್‌ಬಳಿಯಿರುವ ಜೈ ಭವಾನಿ ಎಂಬಹೆಸರಿನ ಬಹುಮಹಡಿ ಕಟ್ಟಡದಲ್ಲಿ ಇಂದು ಮುಂಜಾನೆ ಸುಮಾರು ೩.೦೫ರ ವೇಳೆಗೆ ಬೆಂಕಿ …

ನಕಲಿ ಭೂ ದಾಖಲೆಪತ್ರ ಸಲ್ಲಿಸಿ ಸಾಲ ತೆಗೆದು ವಂಚನೆಗೈದ ಪ್ರಕರಣ: ಯೂತ್ ಕಾಂಗ್ರೆಸ್ ನೇತಾರ ಸೆರೆ

ಕಾಸರಗೋಡು: ಜಮೀನಿನ ನಕಲಿ ದಾಖಲುಪತ್ರಗಳನ್ನು ಸಲ್ಲಿಸಿ ಕೆಎಸ್‌ಎಫ್‌ಇಯ ಮಾಲಕಲ್ಲು ಶಾಖೆಯಿಂದ ೭೦ ಲಕ್ಷ ರೂ. ಸಾಲ ಪಡೆದು ವಂಚನೆಗೈದ ಪ್ರಕರಣಕ್ಕೆ ಸಂಬಂಧಿಸಿ ಯೂತ್ ಕಾಂಗ್ರೆಸ್ ಜಿಲ್ಲಾ ನೇತಾರನನ್ನು ರಾಜಪುರಂ ಪೊಲೀಸರು ಬಂಧಿಸಿದ್ದಾರೆ. ಯೂತ್ ಕಾಂಗ್ರೆಸ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಹೊಸದುರ್ಗ ಚಿತ್ತಾರಿ ಪಿ.ವಿ. ರಸ್ತೆಯ ಕೆ.ವಿ. ಹೌಸ್‌ನ ಎಂ. ಇಸ್ಮಾಯಿಲ್ (೩೭)ನನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದೆ.  ಈ ಪ್ರಕರಣದಲ್ಲಿ ಇಸ್ಮಾಯಿಲ್ ಸೇರಿದಂತೆ ಒಟ್ಟು ೮ ಮಂದಿ ವಿರುದ್ದ ರಾಜಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಸ್ಮಾಯಿಲ್ ಆತನ …