ಕಾರು ಢಿಕ್ಕಿ: ಪಾದಚಾರಿ ವೃದ್ಧೆ ಮೃತ್ಯು

ಉಪ್ಪಳ: ಕಾರು ಢಿಕ್ಕಿ ಹೊಡೆದು ಪಾದಚಾರಿ ವೃದ್ಧೆ ಮೃತಪಟ್ಟ ಘಟನೆ ನಿನ್ನೆ ತುರ್ತಿಯಲ್ಲಿ ಸಂಭವಿಸಿದೆ. ಭಗವತಿ ಗೇಟ್ ಸಮೀಪದ ತುರ್ತಿ ಹೆದ್ದಾರಿ ಬದಿ ನಡೆದುಕೊಂಡು  ಹೋಗುತ್ತಿದ್ದ ಭಗವತೀ ಕ್ಷೇತ್ರ ಸಮೀಪ ನಿವಾಸಿ ಅಕ್ಕಮ್ಮ ಶೆಟ್ಟಿ (೮೫) ಮೃತಪಟ್ಟವರು. ಇವರಿಗೆ ತಲಪಾಡಜಿ ಭಾಗದಿಂದ ಆಗಮಿಸುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅಕ್ಕಮ್ಮರನ್ನು ಉಪ್ಪಳದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದರೂ ಅಲ್ಪ ಹೊತ್ತಿನಲ್ಲಿ ಮೃತಪಟ್ಟಿದ್ದಾರೆ. ಕಾರನ್ನು ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದು, ಚಾಲಕನ ವಿರುದ್ಧ ಕೇಸು ದಾಖಲಿಸಿದ್ದಾರೆ. ಮೃತದೇಹವನ್ನು ಮಂಗಲ್ಪಾಡಿ …

ಟಿಪ್ಪರ್ ಲಾರಿ ಢಿಕ್ಕಿ: ಶೋಭಾಯಾತ್ರೆ ನೋಡಲು ನಿಂತಿದ್ದ ಮಹಿಳೆ ಮೃತ್ಯು

ಬದಿಯಡ್ಕ: ಬದಿಯಡ್ಕದಲ್ಲಿ ನಡೆದ ಶ್ರೀ ಗಣೇಶೋತ್ಸವದ ವೈಭ ವದ ಶೋಭಾಯಾತ್ರೆಯನ್ನು ನೋq ಲೆಂದು ರಸ್ತೆ ವಿಭಾಜಕದಲ್ಲಿ ನಿಂತು ಕಾಯುತ್ತಿದ್ದ ಮಹಿಳೆ ಟಿಪ್ಪರ್ ಲಾರಿ ಢಿಕ್ಕಿ ಹೊಡೆದು ಮೃತಪಟ್ಟ ದಾರುಣ ಘಟನೆ ನಿನ್ನೆ ಸಂಜೆ ಸಂಭವಿಸಿದೆ. ಬದಿಯಡ್ಕ ವಳಮಲೆ ನಿವಾಸಿ ಸುನಿತಾ ಶೆಟ್ಟಿ (೫೫) ಮೃತಪಟ್ಟವರು. ಬದಿಯಡ್ಕ ಟ್ರಾಫಿಕ್ ಸರ್ಕಲ್ ಬಳಿ ಅಪಘಾತ ಸಂಭವಿಸಿದೆ. ಶೋಭಾಯಾತ್ರೆ ನೋಡಲೆಂದು ಪೇಟೆಯಲ್ಲಿ ಜನಸಂದಣಿ ಸೇರಿತ್ತು. ಈ ಮಧ್ಯೆ ರಸ್ತೆ ವಿಭಾಜಕದಲ್ಲಿ ನಿಂತಿದ್ದ ಮಹಿಳೆ ಅಕಸ್ಮಾತ್ ರಸ್ತೆಗೆ ಬಿದ್ದಿರಬೇಕೆಂದು ಶಂಕಿಸಿದ್ದು, ಈ ದಾರಿಯಾಗಿ …

ಶಾಲಾ ವಿದ್ಯಾರ್ಥಿನಿ ಅಸೌಖ್ಯ ಬಾಧಿಸಿ ಮೃತ್ಯು

ಬದಿಯಡ್ಕ: ಅಸೌಖ್ಯ ಬಾಧಿಸಿ ಶಾಲಾ ವಿದ್ಯಾರ್ಥಿನಿ ಮೃತಪಟ್ಟ ಘಟನೆ ನಡೆದಿದೆ. ಅಗಲ್ಪಾಡಿ  ಶ್ರೀ ಅನ್ನಪೂ ರ್ಣೇಶ್ವರಿ ಶಾಲೆಯ ೬ನೇ ತರಗತಿ ವಿದ್ಯಾ ರ್ಥಿನಿಯಾದ ಅರ್ಪಿತ (೧೧) ಮೃತಪಟ್ಟ ಮಗು.  ಮಾರ್ಪನಡ್ಕ ಕಾಲನಿಯ ಜನಾ ರ್ದನ-ಉಷಾ ದಂಪತಿಯ ಪುತ್ರಿಯಾ ದ ಈ ಮಗುವಿಗೆ ಬೆಳವಣಿಗೆ ಕಡಿಮೆ ಯಿದ್ದು, ಅಸೌಖ್ಯ ಬಾಧಿಸಿತ್ತು. ಒಂದು ವಾರ ಹಿಂದೆ ದೇರಳಕಟ್ಟೆ ಆಸ್ಪತ್ರೆಯಲ್ಲಿ ಮಗುವನ್ನು ದಾಖಲಿಸಲಾಗಿತ್ತು.  ಅಲ್ಲಿಂದ ನಿನ್ನೆ ಬಿಡುಗಡೆಗೊಳಿಸಿ ಕರೆದುಕೊಂಡು ಬರುತ್ತಿದ್ದಂತೆ ಮತ್ತೆ ಅಸೌಖ್ಯ ಉಲ್ಭಣಿಸಿದೆ. ಇದರಿಂದ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಿ …

ಸಂಚರಿಸುತ್ತಿದ್ದ ಬಸ್‌ನಲ್ಲಿ ಸ್ವಯಂಭಗ ಯುವತಿಯ ದೂರಿನಂತೆ ಕೇಸು ದಾಖಲು

ಕುಂಬಳೆ: ಸಂಚರಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಯುವತಿಯ ಮುಂದೆ ಯುವಕನೋರ್ವ ನಗ್ನತಾ ಪ್ರದರ್ಶನ ನಡೆಸಿ ಸ್ವಯಂಭಗ ನಡೆಸಿರುವುದಾಗಿ ದೂರುಂಟಾಗಿದೆ. ಘಟನೆಗೆ ಸಂಬಂಧಿಸಿ ೧೯ರ ಹರೆಯದ ಯುವತಿ ನೀಡಿದ ದೂರಿನಂತೆ ಕಂಡರೆ ಪತ್ತೆಹಚ್ಚಬಹುದಾದ ೪೦ರ ಹರೆಯದ ವ್ಯಕ್ತಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಿನ್ನೆ ಸಂಜೆ ಕಾಸರಗೋಡಿನಿಂದ ಕುಂಬಳೆಗೆ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಘಟನೆ ನಡೆದಿದೆ. ಬಸ್‌ನೊಳಗೆ ಜನರು ಕಿಕ್ಕಿರಿದಿದ್ದರೆಂದು ಹೇಳಲಾಗುತ್ತಿದೆ. ಈ ಮಧ್ಯೆ ಯುವತಿಯ ಎದುರು ಯುವಕ ನಗ್ನತಾ ಪ್ರದರ್ಶನ ನಡೆಸಿ ಬಳಿಕ ಸ್ವಯಂಭೋಗ …

ಡಾ| ವಿ. ಮಂಜುನಾಥ ಕಾಮತ್ ನಿಧನ

ಕಾಸರಗೋಡು: ತಳಂಗರೆ ಮಾಲೀಕ್ ದೀನಾರ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ವಿ. ಮಂಜುನಾಥ ಕಾಮತ್ (೭೧) ನಿಧನ ಹೊಂದಿದರು. ಇವರು ೧೯೮೦ರಿಂದ ಮಾಲೀಕ್ ದೀನಾರ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಆರಂಭಿಸಿ ಕೊನೆಯ ತನಕ ಅಲ್ಲೇ ಸೇವೆ ಮುಂದುವರಿಸಿದರು. ಕಾಸರಗೋಡು ವಿದ್ಯಾನಗರ ಕೃಷ್ಣನಗರ ಹೌಸಿಂಗ್ ಕಾಲನಿಯ ‘ಕಸ್ತೂರಿ’ಯಲ್ಲಿ ವಾಸಿಸುತ್ತ ಇವರು ಮಂಗಳೂರು ಅಶೋಕ್‌ನಗರ ಅಮರ್‌ಗಂಗಾ ಅಪಾರ್ಟ್‌ಮೆಂಟ್ ನಲ್ಲೂ ನಿವಾಸ ಹೊಂದಿದ್ದರು. ಇವರು ಮೂಲತಃ ಮುಲ್ಕಿ ನಿವಾಸಿಯಾಗಿದ್ದಾರೆ. ಅಲ್ಲೇ ಅವರು ಹೈಸ್ಕೂಲ್ ಮತ್ತು ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದ್ದರು. ನಂತರ ಮೈಸೂರು …

ತಿರುವೋಣಂ ಬಂಪರ್ ೨೫ಕೋಟಿ ರೂ. ಕೊಯಂಬತ್ತೂರು ನಿವಾಸಿಗೆ

ಪಾಲಕ್ಕಾಡ್: ರಾಜ್ಯ ಸರಕಾರದ ತಿರುವೋಣಂ ಬಂಪರ್‌ನ ಪ್ರಥಮ ಬಹು ಮಾನವಾದ ೨೫ ಕೋಟಿ ರೂಪಾಯಿ ತಮಿಳುನಾಡಿನ ಕೊಯಂಬತ್ತೂರು ನಿವಾಸಿಗೆ ಲಭಿಸಿದೆ. ಕೊಯಂಬತ್ತೂರು ಅನ್ನೂರು ನಿವಾಸಿಯಾದ ನಟರಾಜನ್ ಎಂಬವರಿಗೆ ಈ ಅದೃಷ್ಟ ಒಲಿದಿದೆ. ಪಾಲಕ್ಕಾಡ್‌ನಿಂದ ಇವರು ೧೦ ಟಿಕೆಟ್‌ಗಳನ್ನು ಪಡೆದಿದ್ದಾರೆ. ಅವುಗಳ ಪೈಕಿ ಒಂದಕ್ಕೆ ಪ್ರಥಮ ಬಹುಮಾನ ಬಂದಿದೆ. ಈ ಬಾರಿಯ ತಿರುವೋಣಂ ಬಂಪರ್ ಟಿಕೆಟ್ ಮಾರಾಟದಲ್ಲಿ ಸಾರ್ವಜನಿಕ ದಾಖಲೆ ಸೃಷ್ಟಿಯಾಗಿದೆ. ಒಟ್ಟು ೭೫,೬೫,೦೦೦ ಟಿಕೆಟ್‌ಗಳು ಮಾರಾಟವಾಗಿದೆ. ಕಳೆದ ವರ್ಷಕ್ಕಿಂತ ೯ ಲಕ್ಷ ಟಿಕೆಟ್‌ಗಳ ಹೆಚ್ಚು ಮಾರಾಟವಾಗಿದೆ.

ಮಟ್ಕಾ ನಿರತ ಇಬ್ಬರ ಸೆರೆ

ಕುಂಬಳೆ: ಕಳತ್ತೂರಿನ ಎರಡು  ಕಡೆಗಳಲ್ಲಿ ಮಟ್ಕಾ ನಿರತರಾಗಿದ್ದ ಇಬ್ಬರನ್ನು ಕುಂಬಳೆ ಎಸ್.ಐ. ಗಣೇಶ್  ಸೆರೆ ಹಿಡಿದಿದ್ದಾರೆ. ಕಳತ್ತೂರು ಚೆಕ್‌ಪೋಸ್ಟ್ ನಿವಾಸಿಗಳಾದ ಮಧುಸೂದನ್ (೪೦), ಮಾಧವ (೪೪) ಎಂಬಿವರು ಬಂಧಿತ ವ್ಯಕ್ತಿಗಳು. ಇವರಿಂದ ಒಟ್ಟು ೧೭೯೦ ರೂ. ವಶಪಡಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಪಾನ್ ಮಸಾಲೆ ವಶ: ಮೂವರ ಸೆರೆ

ಕುಂಬಳೆ: ನಿಷೇಧಿತ ಪಾನ್‌ಮಸಾಲೆ ಸಹಿತ ಮೂರು ಮಂದಿಯನ್ನು ಕುಂಬಳೆ ಎಸ್.ಐ. ಗಣೇಶ್ ಸೆರೆ ಹಿಡಿದಿದ್ದಾರೆ. ಸೀತಾಂಗೋಳಿಯಿಂದ ಕುದ್ರೆಪ್ಪಾಡಿಯ ಕುಮಾರನ್ ಕೆ. (೫೮) ಎಂಬಿವರಿಂದ ೯೦ ಪ್ಯಾಕೆಟ್, ಮುಜುಂಗಾವಿನ ಮೋಹನ ಶೆಟ್ಟಿ (೪೦) ಕೈಯಿಂದ ೮೦ ಪ್ಯಾಕೆಟ್ ಪಾನ್ ಮಸಾಲೆ ವಶಪಡಿಸಲಾಗಿದೆ. ಅದೇ ರೀತಿ ಮುಳಿಯಡ್ಕದಲ್ಲಿ ಹೇರೂರು ನಿವಾಸಿ ಅಬೂಬಕರ್ (೫೦)ರ ಕೈಯಿಂದ ೫೫ ಪ್ಯಾಕೆಟ್ ಪಾನ್ ಮಸಾಲೆ ವಶಪಡಿಸಲಾಗಿದೆ.

ಎರಡನೇ ‘ವಂದೇ ಭಾರತ್’ ಭಾನುವಾರ ಪ್ರಧಾನಮಂತ್ರಿ ಉದ್ಘಾಟನೆ

ಕಾಸರಗೋಡು: ಕಾಸರಗೋಡಿ ನಿಂದ ಆಲಪ್ಪುಳ ದಾರಿಯಾಗಿ ತಿರುವನಂತಪುರ ತನಕದ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಭಾನುವಾರ ಮಧ್ಯಾಹ್ನ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿ ಸುವರು. ಇದರ ಉದ್ಘಾಟನಾ ಸಮಾರಂಭ ಪಾಲ್ಘಾಟ್ ರೈಲ್ವೇ ವಿಭಾಗೀಯ ಕಚೇರಿಯಲ್ಲಿ ನಡೆಯಲಿದೆ. ಕೇರಳ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಾಗಿ ಒಂಭತ್ತು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗಳನ್ನೂ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಮಂತ್ರಿ ಸೆ. ೨೪ರಂದು ಉದ್ಘಾಟಿಸುವರು. ಉದ್ಘಾಟನಾ ಸಮಾರಂಭ ದಂಗವಾಗಿ ಅಂದು ಕಾಸರಗೋಡು ರೈಲು …

ರಾಜೀನಾಮೆ ಪತ್ರ ಹಿಂತೆಗೆದುಕೊಂಡಿರುವುದಾಗಿ ಸಿಯಾಸುನ್ನೀಸ ಹೇಳಿಕೆ: ಪೈವಳಿಕೆ ಪಂಚಾಯತ್ ಮುಸ್ಲಿಂ ಲೀಗ್

ಸದಸ್ಯೆಯ ರಾಜೀನಾಮೆ ಕಾನೂನು ಕುಣಿಕೆಯಲ್ಲಿ ಕುಂಬಳೆ: ಪೈವಳಿಕೆ ಗ್ರಾಮ ಪಂಚಾಯತ್‌ನ ೨ನೇ ವಾರ್ಡ್ ಸದಸ್ಯೆ ಮುಸ್ಲಿಂ ಲೀಗ್‌ನ ಸಿಯಾಸುನ್ನೀಸರ ರಾಜೀನಾಮೆ ಕಾನೂನು ಕುಣಿಕೆಯಲ್ಲಿ ಸಿಲುಕಿದೆ. ತನ್ನ ರಾಜೀನಾಮೆ ಪತ್ರವನ್ನು ರಿಜಿಸ್ಟರ್ಡ್ ಅಂಚೆ ಮೂಲಕ ಕಳುಹಿಸಿದ ಬೆನ್ನಲ್ಲೇ ರಾಜೀನಾಮೆ ಹಿಂತೆಗೆದುಕೊಳ್ಳುವುದಾಗಿ ತಿಳಿಸಿ ಸಿಯಾಸುನ್ನೀಸ ಪಂಚಾಯತ್ ಸೆಕ್ರೆಟರಿಗೆ ಪತ್ರ ನೀಡಿರುವುದರ ಬೆನ್ನಲ್ಲೇ ಈ ವಿದ್ಯಾಮಾನ ನಡೆದಿದೆ. ಮೊನ್ನೆ ಸಿಯಾಸುನ್ನೀಸ ತನ್ನ ರಾಜೀನಾಮೆ ಪತ್ರವನ್ನು ರಿಜಿಸ್ಟರ್ಸ್ ಅಂಚೆ ಮೂಲಕ ಪಂಚಾಯತ್ ಸೆಕ್ರೆಟರಿಗೆ ಕಳುಹಿಸಿದ್ದಾರೆ. ಪಕ್ಷದ ನಾಯಕತ್ವಕ್ಕೆ ಕೂಡಾ ತಿಳಿಸದೆ ಇವರು ರಾಜೀನಾಮೆ …