ವಿದ್ಯುತ್ ನಿಯಂತ್ರಣ: ತೀರ್ಮಾನ ಇಂದು
ತಿರುವನಂತಪುರ: ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ರಾಜ್ಯದಲ್ಲಿ ತೀವ್ರ ವಿದ್ಯುತ್ ಸಂದಿಗ್ಧಾವಸ್ಥೆ ಸೃಷ್ಟಿ ಯಾಗಿರುವ ಹಿನ್ನೆಲೆಯಲ್ಲಿ ವಿದ್ಯುತ್ ನಿಯಂತ್ರಣ ಹೇರಬೇಕೇ ಎಂಬುವುದರ ಬಗ್ಗೆ ಇಂದು ತೀರ್ಮಾನ ಉಂಟಾಗ ಲಿದೆ. ಈ ತಿಂಗಳು ಸುರಿಯುವ ಮಳೆ ಪ್ರಮಾಣಕ್ಕೆ ಹೊಂದಿಕೊಂಡು ವಿದ್ಯುತ್ ನಿಯಂತ್ರಣ ಏರ್ಪಡಿಸುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡರೆ ಸಾಕೆಂಬ ನಿಲುವನ್ನು ವಿದ್ಯುತ್ ಖಾತೆ ಸಚಿವರು ಈಗಾಗಲೇ ವ್ಯಕ್ತಪಡಿಸಿದ್ದಾರೆ. ಹೊರಗಿನಿಂದ ಹೆಚ್ಚು ದರಕ್ಕೆ ವಿದ್ಯುತ್ ಖರೀದಿಸುತ್ತಿರುವುದರಿಂದ ಮಂಡಳಿಗೆ ಉಂಟಾಗುವ ಹೆಚ್ಚುವರಿ ಆರ್ಥಿಕ ಹೊರೆಯನ್ನು ಸರ್ಚಾರ್ಜ್ ಮೂಲಕ ವಿದ್ಯುತ್ ಬಳಕೆದಾರರಿಂದ …