ಬೆಂಗಳೂರು: ನಿಲ್ಲಿಸಿದ್ದ ರೈಲಿನಲ್ಲಿ ಬೆಂಕಿ ಅಪಘಾತ

ಬೆಂಗಳೂರು: ಇಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ (ಮೆಜಿಸ್ಟಿಕ್) ನಿಂತಿದ್ದ ರೈಲಿಗೆ ಬೆಂಕಿ ಹತ್ತಿಕೊಂಡಿದ್ದು, ಅದೃಷ್ಟವಶಾತ್ ಭಾರೀ ದುರಂತ ತಪ್ಪಿದೆ. ಇಂದು ಬೆಳಿಗ್ಗೆ ೭.೧೦ರ ವೇಳೆ ಘಟನೆ ನಡೆದಿದೆ. ಮುಂಬೈಯ ಛತ್ರಪತಿ ಶಿವಾಜಿ ಟರ್ಮಿನಲ್‌ನಿಂದ ಹೊರಟಿದ್ದ ಉದಾನ್ ಎಕ್ಸ್‌ಪ್ರೆಸ್ ರೈಲು ಇಂದು ಬೆಳಿಗ್ಗೆ ೫.೪೫ಕ್ಕೆ ಬೆಂಗಳೂರಿಗೆ ತಲುಪಿದೆ. ೭.೧೦ರ ವೇಳೆ ಎರಡು ಬೋಗಿ ಗಳಲ್ಲಿ ಬೆಂಕಿ ಕಾಣಿಸಿಕೊಂ ಡಿದೆ. ಈ ಕೂಡಲೇ ಅಗ್ನಿಶಾಮಕದಳ ತಲುಪಿ ಬೆಂಕಿ ನಂದಿಸಿದೆ. ರೈಲಿನಲ್ಲಿ ಪ್ರಯಾಣಿಕರು ಇರದಿ ದ್ದ ಕಾರಣ ಯಾವುದೇ …

ಬೆಲೆಯೇರಿಕೆ, ಸಾಮಗ್ರಿ ಅಲಭ್ಯ ಪ್ರತಿಭಟಿಸಿ ಕಾಂಗ್ರೆಸ್‌ನಿಂದ ಸಪ್ಲೈ ಆಫೀಸ್‌ಗೆ ಮಾರ್ಚ್

ಕಾಸರಗೋಡು: ತೀವ್ರಗೊಂಡ ಬೆಲೆ ಯೇರಿಕೆ ಹಾಗೂ ಸಾರ್ವಜನಿಕ ವಿತ ರಣೆ ಕೇಂದ್ರಗಳಲ್ಲಿ ನಿತ್ಯೋಪ ಯೋಗಿ ಸಾಮಗ್ರಿಗಳ ಅಲಭ್ಯವನ್ನು ಪ್ರತಿಭಟಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ  ಜಿಲ್ಲಾ ಸಪ್ಲೈ ಆಫೀಸ್‌ಗೆ ಇಂದು ಬೆಳಿಗ್ಗೆ ಬಹುಜನ ಮಾರ್ಚ್ ನಡೆಸಲಾಯಿತು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್, ನೇತಾರರಾದ ಪಿ.ಎ. ಅಶ್ರಫ್ ಅಲಿ, ಎ. ಗೋವಿಂದನ್ ನಾಯರ್, ವಿನೋದ್ ಕುಮಾರ್, ಎಂ. ಕುಂ ಞಂಬು ನಂಬ್ಯಾರ್, ಪಿ.ವಿ. ಸುರೇಶ್, ಎಂ.ಸಿ. ಪ್ರಭಾಕರನ್, ಎಂ. ರಾಜೀವನ್ ನಂಬ್ಯಾರ್, ವಿ. …

ರೈಲು ಹಳಿಯಲ್ಲಿ ಕಲ್ಲು, ಕ್ಲೋಸೆಟ್ ತುಂಡುಗಳನ್ನಿರಿಸಿ ಬುಡಮೇಲು ಕೃತ್ಯಕ್ಕೆ ಯತ್ನ: ಸಮಗ್ರ ತನಿಖೆ ಆರಂಭ

ಕಾಸರಗೋಡು: ಕಳನಾಡು ರೈಲು ಸುರಂಗದ ಬಳಿ ರೈಲು ಹಳಿಯಲ್ಲಿ ಕಲ್ಲು ಮತ್ತು ಕ್ಲೋಸೆಟ್‌ಗಳ ತುಂಡುಗಳನ್ನು ಇರಿಸಿ ದುಷ್ಕರ್ಮಿಗಳು ಬುಡಮೇಲು ಕೃತ್ಯಕ್ಕೆ ಯತ್ನಿಸಿದ್ದಾರೆ. ನಿನ್ನೆ ಅಪರಾಹ್ನ ಕೊಯಂಬ ತ್ತೂರು-ಮಂಗಳೂರು ಇಂಟರ್ ಸಿಟಿ ರೈಲು ಕಾಸರಗೋಡಿಗೆ ಆಗಮಿಸುತ್ತಿದ್ದ ವೇಳೆಯಲ್ಲಿ ಈ ದುಷ್ಕೃತ್ಯವೆಸಗಲಾಗಿದೆ. ರೈಲು ಮುಂದಕ್ಕೆ ಸಾಗುವಾಗ ಅದರ  ರಭಸಕ್ಕೆ ಹಳಿಯಲ್ಲಿ ಇರಿಸಲಾಗಿದ್ದ ಕಲ್ಲುಗಳು ಮತ್ತು ಕ್ಲೋಸೆಟ್ ತುಂಡುಗಳು ಅತ್ತಿತ್ತ ಚದುರಿ ಬಿದ್ದಿದೆ.  ಇದರಿಂದಾಗಿ ಸಂಭಾವ್ಯ ಭಾರೀ ದುರಂತ ಅದೃಷ್ಟವಶಾತ್ ತಪ್ಪಿಹೋಗುವಂತಾ ಯಿತು. ವಿಷಯ ತಿಳಿದ ಕಾಸರಗೋಡು ರೈಲ್ವೇ ಪೊಲೀಸರು,  ರೈಲ್ವೇ …

ವಿಕಲ ಚೇತನ ಬಾಲಕಿಗೆ ಆಸ್ಪತ್ರೆ ಕೊಠಡಿಯಲ್ಲಿ ಕಿರುಕುಳ: ಯುವತಿ, ಯುವಕ ಸೆರೆ

ಮಂಜೇಶ್ವರ: ವಾಹನ ಅಪಘಾ ತದಲ್ಲಿ ಗಾಯಗೊಂಡು, ಆಸ್ಪತ್ರೆ ಯಲ್ಲಿದಾಖಲಾದವರನ್ನು ಕಾಣಲು ತಲುಪಿದ ವಿಕಲ ಚೇತನಳಾದ ಬಾಲಕಿಗೆ ಕಿರುಕುಳ ನೀಡಿದ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಯುವತಿ ಸಹಿತ ಇಬ್ಬರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಬಿಹಾರ ನಿವಾಸಿ ಅಹಮ್ಮದ್ ಹಲೀಂ (೩೭), ಮಂಗಳೂರು ಕುಲಶೇಖರದ ಶಮೀನ ಬಾನು (೨೮) ಎಂಬಿವರನ್ನು ಮಂಗಳೂರು ಸಿಟಿ ಮಹಿಳಾ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ನಗರದ ಆಸ್ಪತ್ರೆಯೊಂದರಲ್ಲಿ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ.  ಈ ತಿಂಗಳ ೧೦ರಂದು ಅಹಮ್ಮದ್ ಹಲೀಂ ಹಾಗೂ ಶಮೀನರ ಸಂಬಂಧಿಕ …

ಮಂಜೇಶ್ವರ ತಾಲೂಕು ಕಚೇರಿ ಡೆಪ್ಯುಟಿ ತಹಶೀಲ್ದಾರ್ ಅಸೌಖ್ಯದಿಂದ ನಿಧನ

ಮಂಜೇಶ್ವರ: ಮಂಜೇಶ್ವರ ತಾಲೂಕು ಕಚೇರಿಯಲ್ಲಿ ಡೆಪ್ಯುಟಿ ತಹಶೀಲ್ದಾರ್ ಆಗಿದ್ದ ಪೆರ್ಲ ಬಳಿಯ ಅರೆಮಂಗಿಲ ನಿವಾಸಿ ಸುಬ್ಬಣ್ಣ ನಾಯ್ಕ್ ಪಿ (೫೩) ಅಸೌಖ್ಯ ಬಾಧಿಸಿ ನಿಧನ ಹೊಂದಿದರು. ಹಳದಿ ಕಾಮಾಲೆ ರೋಗದಿಂದ ಬಳಲುತ್ತಿದ್ದ ಇವರು ಬುಧವಾರ ರಾತ್ರಿ ನಿಧನ ಹೊಂದಿದ್ದಾರೆ. ಕಂದಾಯ ಇಲಾಖೆಯಲ್ಲಿ ವಿಲ್ಲೇಜ್ ಆಫೀಸರ್ ಆಗಿ ಶೇಣಿ, ಪೆರ್ಲ, ಕಾಟುಕುಕ್ಕೆ, ಬಾಯಾರು, ಮೀಂಜ, ವಿಲ್ಲೇಜ್ ಕಚೇರಿಗಳಲ್ಲಿ ಸೇವೆ ಗೈದಿದ್ದರು. ಬಳಿಕ ತಾಲೂಕು ಕಚೇರಿಯಲ್ಲಿ ಡೆಪ್ಯುಟಿ ತಹಶೀಲ್ದಾರ್ ಆಗಿ ಭಡ್ತಿ ಹೊಂದಿದ್ದರು. ಮೃತರು ಪತ್ನಿ ಭವಾನಿ, ಮಕ್ಕಳಾದ ಜಿತಿನ್ …

ದೇಶದಲ್ಲಿ ದುಷ್ಕೃತ್ಯಕ್ಕೆ ಐಸಿಸ್, ಸಿಮಿ, ಐಎಂನಿಂದ ಜಂಟಿ ಪ್ಲಾನ್

ಮುಂಬೈ: ಇದುವರೆಗೂ ಭಾರತ ದಲ್ಲಿ ಪ್ರತ್ಯೇಕವಾಗಿ ಕಾರ್ಯವೆಸಗುತ್ತಾ ಬಂದಿರುವ ಇಸ್ಲಾಮಿಕ್ ಸ್ಟೇಟ್ (ಐಸಿಸ್), ಸಿಮಿ ಮತ್ತು ಇಂಡಿಯನ್ ಮುಜಾಹಿದ್ದೀನ್ (ಐಎಂ) ಭಯೋ ತ್ಪಾದಕ ಸಂಘಟನೆಗಳು ಇದೀಗ ಭಾರತದಲ್ಲಿ ದುಷ್ಕೃತ್ಯವೆಸಗಳು ಒಂದಾಗಿ ಕಾರ್ಯಾಚರಣೆ ನಡೆಸ ತೊಡಗಿದೆ ಯೆಂಬ ಸ್ಫೋಟಕ ಮಾಹಿತಿಯನ್ನು ತನಿಖಾ ಸಂಘಟನೆಗಳು ಹೊರಗೆಡಹಿವೆ.  ಪುಣೆಯ ಕೊಂಡ್ವಾ ಪ್ರದೇಶದಲ್ಲಿ ನಡೆದ ಬಾಂಬ್ ತಯಾರಿಕಾ ಶಿಬಿರದ ಕುರಿತು ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆಗಳು ಈ ಮಾಹಿತಿ ಪತ್ತೆಹಚ್ಚುವಲ್ಲಿ ಯಶಸ್ವಿಯಾ ಗಿವೆ. ಈ ಮೂರು ಉಗ್ರಗಾಮಿ ಸಂಘಟನೆಗಳ ಸಿದ್ದಾಂತದಲ್ಲಿ ಭಿನ್ನತೆ ಇದ್ದರೂ …

ಬಿಹಾರದಲ್ಲಿ ಮಾಧ್ಯಮ ಕಾರ್ಯಕರ್ತನನ್ನುಗುಂಡಿಕ್ಕಿ ಹತ್ಯೆ

ಪಾಟ್ನಾ: ಬಿಹಾರದಲ್ಲಿ ಮಾಧ್ಯಮ ಕಾರ್ಯಕರ್ತನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆಗೈದ ಘಟನೆ ನಡೆದಿದೆ. ದೈನಿಕ್ ಜಾಗರಣ್ ಪತ್ರಿಕೆಯ ಪತ್ರಕರ್ತನಾದ ವಿಮಲ್ ಕುಮಾರ್ ಯಾದವ್  ಎಂಬವರು ಕೊಲೆಗೀ ಡಾದ ದುರ್ದೈವಿಯಾಗಿದ್ದಾರೆ. ರಾನಿಗಂಜ್ ಜಿಲ್ಲೆಯ ಅರಾರ ಎಂಬಲ್ಲಿರುವ ಮನೆಗೆ ನುಗ್ಗಿದ ದುಷ್ಕರ್ಮಿಗಳು ವಿಮಲ್ ಕುಮಾರ್‌ರ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡೇಟು ತಗಲಿ ಗಂಭೀರ  ಗಾಯಗೊಂಡ ವಿಮಲ್ ಕುಮಾರ್ ತಕ್ಷಣ ಮೃತಪಟ್ಟಿದ್ದಾರೆ. ಬೈಕ್‌ಗಳಲ್ಲಿ ತಲುಪಿದ ನಾಲ್ಕು ಮಂದಿ ಆಕ್ರಮಣ ನಡೆಸಿ ತಕ್ಷಣ ಪರಾರಿಯಾಗಿದ್ದಾರೆನ್ನಲಾಗಿದೆ.

ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಕುಸಿದು ಬಿದ್ದು ಮೃತ್ಯು

ವರ್ಕಾಡಿ: ಕೋಳಿಯೂರು ಪದವಿನ ಮೊಯ್ದೀನ್ ಕುಂಞಿ ಹಾಜಿ (೬೯) ಹೃದಯಾಘಾತವುಂ ಟಾಗಿ ಬೈಕ್‌ನಿಂದ ಬಿದ್ದು ಮೃತಪಟ್ಟರು. ಸುಂಕದಕಟ್ಟೆಯಲ್ಲಿ ನಿನ್ನೆ ಈ ಘಟನೆ ನಡೆದಿದೆ.  ಪ್ರಯಾಣ ವೇಳೆ ಎದೆ ನೋವು ಕಾಣಿಸಿಕೊಂಡಿತ್ತೆನ್ನಲಾಗಿದೆ. ಇದರಿಂದ ಬೈಕ್ ನಿಲ್ಲಿಸಲು ಪ್ರಯತ್ನಿಸುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ. ಕೂಡಲೇ ನಾಗರಿಕರು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ಪತ್ನಿ ಉಮ್ಮು ಕುಲ್ಸು, ಮಕ್ಕಳಾದ ಮಹಮ್ಮದ್ ಅಶ್ರಫ್, ಬಕ್ಸಾಲ್, ಖದೀಜತ್ ಕುಬ್ರ, ಮುಹಮ್ಮದ್ ರಾಫಿ, ಅಳಿಯ-ಸೊಸೆಯಂದಿರಾದ ನಬೀಸ, ತಬ್ಸೀರ, ಕೌಸರ್, ಇಕ್ಭಾಲ್, ಸಹೋದರ-ಸಹೋದರಿ ಯರಾದ ಅಹಮ್ಮದ್, ನಫೀಸ, …

ಕುಂಟಾರು: ಜುಗಾರಿ ನಿರತ ಆರು ಮಂದಿ ಸೆರೆ

ಮುಳ್ಳೇರಿಯ: ಕುಂಟಾರಿನಲ್ಲಿ ಜುಗಾರಿ ನಿರತರಾಗಿದ್ದ ಆರು ಮಂದಿ ಯನ್ನು ಆದೂರು ಪೊಲೀಸರು ಸೆರೆಹಿಡಿದಿದ್ದಾರೆ.  ಕುಂಟಾರು ನಿವಾಸಿ ಕೀರ್ತಿ ಪ್ರಸಾದ್, ಕೂಡ್ಲು ವಿನ ದಿನೇಶ್, ಬೆಳ್ಳೂರಿನ ಸುಂದರ, ಶಿರಿಬಾಗಿಲಿನ ಉದಯ ಕುಮಾರ್, ಬೋಳುಕಟ್ಟೆಯ ಬದ್ರುದ್ದೀನ್, ಆದೂರಿನ ಶಶಿ ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ರಿಂದ ಒಟ್ಟು ೯೩೫೦ ರೂಪಾಯಿ  ವಶಪಡಿಸಲಾಗಿದೆ. ನಿನ್ನೆ ಆದೂರು ಸಿಐ ಅನಿಲ್ ಕುಮಾರ್ ನೇತೃತ್ವದ ಪೊಲೀಸರು ಜುಗಾರಿ ಅಡ್ಡೆಗೆ ದಾಳಿ ನಡೆಸಿದ್ದಾರೆ.

ಯುವಮೋರ್ಛಾ ನೇತಾರ, ತಂದೆಯ ನಿಗೂಢ ಸಾವು: ನಾಲ್ಕು ಮಂದಿ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಕೇಸು ದಾಖಲು

ಕುಂಬಳೆ: ನಾಪತ್ತೆಯಾಗಿದ್ದ ಯುವ ಮೋರ್ಛಾ ನೇತಾರ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಕೆಲವೇ ದಿನಗಳಲ್ಲಿ ತಂದೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೈದ ಘಟನೆಗೆ ಸಂಬಂಧಿಸಿ ಉಳ್ಳಾಲ ಠಾಣೆ ಪೊಲೀಸರು ನಾಲ್ಕು ಮಂದಿ ವಿರುದ್ದ ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮೃತಪಟ್ಟ  ಕುಂಬಳೆ ಬಳಿಯ ಬಂಬ್ರಾಣ  ಕಲ್ಕುಳ ಮೂಸ ಕ್ವಾರ್ಟರ್ಸ್ ನಿವಾಸಿ ಲೋಕನಾಥ್‌ರ ಸಹೋದರ ತೊಕ್ಕೋಟ್  ಮಂಚಿಲದಲ್ಲಿ ವಾಸಿಸುವ ಸುಧಾಕರ ಎಂಬವರು ನೀಡಿದ ದೂರಿನ ಪ್ರಕಾರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಬಂಬ್ರಾಣ ಆರಿಕ್ಕಾಡಿ ಪಳ್ಳದ ಸಂದೀಪ್ (೩೯), ಲೋಕನಾಥರ ಪತ್ನಿ ಕಲ್ಕುಳ …