ದೆಹಲಿಯಲ್ಲಿ ಭಾರೀ ಭಯೋತ್ಪಾದನಾ ಕೃತ್ಯಕ್ಕೆ ಪಾಕ್ ಸಂಚು : . ವಿಫಲಗೊಳಿಸಿದ ಭಾರತೀಯ ಗುಪ್ತಚರ ವಿಭಾಗ ; ಇಬ್ಬರ ಸೆರೆ
ನವದೆಹಲಿ: ರಾಷ್ಟ್ರ ರಾಜಧಾನಿಯಾದ ನವದೆಹಲಿಯಲ್ಲಿ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯಾದ ಐಎಸ್ಐ ಭಾರೀ ಭಯೋತ್ಪಾದನಾ ಕೃತ್ಯಕ್ಕೆ ರೂಪು ನೀಡಿದ್ದು, ಅದನ್ನು ಭಾರತೀಯ ಗುಪ್ತಚರ ವಿಭಾಗ ವಿಫಲಗೊಳಿಸಿದೆ. ಇದಕ್ಕೆ ಸಂಬಂಧಿಸಿ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಸದಸ್ಯ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನೇಪಾಳ ನಿವಾಸಿ ಅನ್ಸರುಲ್ ಮಿಯಾ ಮತ್ತು ರಾಂಚಿ ನಿವಾಸಿ ಅಖ್ಲಖ್ ಅಸಾಂ ಎಂಬವರು ಬಂಧಿತರಾದ ಉಗ್ರರು. ಇವರು ಕಳೆದ ಮೂರು ತಿಂಗಳಿಂದ ದೆಹಲಿಯಲ್ಲಿ ವಿಧ್ವಂಸಕ ಕೃತ್ಯಗಳಿಗೆ ಸಂಚು ಹೂಡುತ್ತಿದ್ದರೆಂಬ ಮಾಹಿತಿ ಭಾರತೀಯ ಗುಪ್ತಚರ ವಿಭಾಗಕ್ಕೆ ಲಭಿಸಿತ್ತು. ಅದರಂತೆ …