ದೆಹಲಿಯಲ್ಲಿ ಭಾರೀ ಭಯೋತ್ಪಾದನಾ ಕೃತ್ಯಕ್ಕೆ ಪಾಕ್ ಸಂಚು : . ವಿಫಲಗೊಳಿಸಿದ ಭಾರತೀಯ ಗುಪ್ತಚರ ವಿಭಾಗ ; ಇಬ್ಬರ ಸೆರೆ

ನವದೆಹಲಿ: ರಾಷ್ಟ್ರ ರಾಜಧಾನಿಯಾದ ನವದೆಹಲಿಯಲ್ಲಿ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯಾದ ಐಎಸ್‌ಐ ಭಾರೀ ಭಯೋತ್ಪಾದನಾ ಕೃತ್ಯಕ್ಕೆ ರೂಪು ನೀಡಿದ್ದು, ಅದನ್ನು ಭಾರತೀಯ ಗುಪ್ತಚರ ವಿಭಾಗ ವಿಫಲಗೊಳಿಸಿದೆ. ಇದಕ್ಕೆ ಸಂಬಂಧಿಸಿ ಪಾಕಿಸ್ತಾನದ  ಬೇಹುಗಾರಿಕಾ ಸಂಸ್ಥೆ ಸದಸ್ಯ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನೇಪಾಳ ನಿವಾಸಿ ಅನ್ಸರುಲ್ ಮಿಯಾ ಮತ್ತು ರಾಂಚಿ ನಿವಾಸಿ ಅಖ್‌ಲಖ್ ಅಸಾಂ ಎಂಬವರು ಬಂಧಿತರಾದ ಉಗ್ರರು. ಇವರು ಕಳೆದ ಮೂರು ತಿಂಗಳಿಂದ ದೆಹಲಿಯಲ್ಲಿ ವಿಧ್ವಂಸಕ ಕೃತ್ಯಗಳಿಗೆ ಸಂಚು ಹೂಡುತ್ತಿದ್ದರೆಂಬ  ಮಾಹಿತಿ ಭಾರತೀಯ ಗುಪ್ತಚರ ವಿಭಾಗಕ್ಕೆ ಲಭಿಸಿತ್ತು. ಅದರಂತೆ …

ಮಾವಿನ ಹಣ್ಣು ಗಂಟಲಲ್ಲಿ ಸಿಲುಕಿ ಟೈಲರ್ ಮೃತ್ಯು

ಕಾಸರಗೋಡು: ಮಾವಿನ ಹಣ್ಣು ಗಂಟಲಲ್ಲಿ ಸಿಲುಕಿ ಕಾಸರ ಗೋಡು ನಗರದ ಟೈಲರೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೊಗ್ರಾಲ್ ಪುತ್ತೂರು ಪಂಚಾ ಯತ್‌ನ ಶಾಸ್ತಾನಗರ  ಚಿನ್ಮಯ ನಿಲಯದ ರಾಘವನ್ (76) ಮೃತಪಟ್ಟ ದುರ್ದೈವಿಯಾಗಿದ್ದಾರೆ.  ನಿನ್ನೆ ಬೆಳಿಗ್ಗೆ ಇವರು  ಮಾವಿನ ಹಣ್ಣು ಸೇವಿಸುತ್ತಿದ್ದಾಗ ಅದು ಗಂಟಲಲ್ಲಿ ಸಿಲುಕಿ ಮೃತಪಟ್ಟಿರುವುದಾಗಿ ಹೇಳಲಾಗುತ್ತಿದೆ. ಮೃತರು ಪತ್ನಿ ನಿರ್ಮಲ, ಮಕ್ಕಳಾದ ಗಣೇಶ್, ಅವಿನಾಶ್, ಅನಿತ, ಸರಿತ, ಅಳಿಯಂದಿರಾದ ಮನೋಜ್, ಅಜಿತ್, ಸೊಸೆ ಸೌಮ್ಯ, ಸಹೋದರಿಯರಾದ ಪ್ರೇಮ, ಸೀಮಂತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಪೊಲೀಸರ ಕರ್ತವ್ಯಕ್ಕೆ ಅಡಚಣೆ: ಕಾರು ಚಾಲಕನ ವಿರುದ್ದ ಕೇಸು

ಉಪ್ಪಳ: ಟ್ರಾಫಿಕ್ ಡ್ಯೂಟಿಯಲ್ಲಿದ್ದ ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿ ಪಡಿಸಿದ ಆರೋಪ ಉಂಟಾಗಿದೆ. ಜಿಲ್ಲಾ ಪೊಲೀಸ್ ಹೆಡ್ ಕ್ವಾರ್ಟರ್ಸ್‌ನ  ಪೊಲೀಸರಾದ ಎಂ. ಸುನಿಲ್ (31), ಪ್ರವೀಣ್ (37) ಎಂಬಿವರ ದೂರಿನಂತೆ ಕಾರು ಚಾಲಕನ ವಿರುದ್ದ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಇವರು ನಿನ್ನೆ ಸಂಜೆ ೬.೩೦ರ ವೇಳೆ ಉಪ್ಪಳ ಬಸ್ ನಿಲ್ದಾಣದ ಮುಂಭಾಗ ಸರ್ವೀಸ್ ರಸ್ತೆಯಲ್ಲಿ ಟ್ರಾಫಿಕ್ ಡ್ಯೂಟಿ ನಡೆಸುತ್ತಿದ್ದರು. ಈವೇಳೆ ತಲುಪಿದ ಕಾರಿನ ಚಾಲಕ ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ  ದೂರಿನಲ್ಲಿ ತಿಳಿಸಲಾಗಿದೆ.

ಅಬಕಾರಿ ದಾಳಿ: ಗಾಂಜಾ, ಕರ್ನಾಟಕ ಮದ್ಯ ವಶ: ಇಬ್ಬರ ಸೆರೆ

ಕಾಸರಗೋಡು: ಜಿಲ್ಲೆಯ ವಿವಿಧೆಡೆಗಳಲ್ಲಿ ಅಬಕಾರಿ ತಂಡ ನಡೆಸಿದ  ಕಾರ್ಯಾಚರಣೆಯಲ್ಲಿ ಗಾಂಜಾ ಹಾಗೂ ಕರ್ನಾಟಕ ನಿರ್ಮಿ ತ ಮದ್ಯ ಪತ್ತೆಹಚ್ಚಿ ವಶಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ಇಬ್ಬರನ್ನು ಸೆರೆಹಿಡಿದು ಕೇಸು ದಾಖಲಿಸಲಾಗಿದೆ. ಬಾಡೂರು ಮಂಗಲಡ್ಕದಲ್ಲಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಪ್ರಮೋದ್ ಕುಮಾರ್ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 16 ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಮಂಗಲಡ್ಕದ ಹಸೀಬ್ (29) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಗ್ರೇಡ್ ಎಇಐ …

ಗಾಳಿ, ಮಳೆ: ಮನೆ ಕುಸಿತ

ಕುಂಬಳೆ: ನಿನ್ನೆ ರಾತ್ರಿ ಬೀಸಿದ ಗಾಳಿಗೆ ಸಿಲುಕಿ ಮನೆಯೊಂದು ಕುಸಿದಿದೆ. ಪೆರುವಾಡ್ ಮುಳಿಯಂಗರದ ನಫೀಸ ಎಂಬವರ ಮನೆ ಕುಸಿದು ಹಾನಿಗೀಡಾಗಿದೆ. ನಿನ್ನೆ ರಾತ್ರಿ 10 ಗಂಟೆ ವೇಳೆ ಈ ಘಟನೆ ನಡೆದಿದೆ. ಮನೆ ಛಾವಣಿ ಕುಸಿಯುವ ಶಬ್ದ ಕೇಳಿ ಕುಟುಂಬ ಹೊರಗೆ ಓಡಿದುದರಿಂದಿ ಭಾರೀ ಅಪಾಯ ತಪ್ಪಿದೆ.

ಎಂಡೋಸಲ್ಫಾನ್ ಸಂತ್ರಸ್ತ ನಿಧನ

ಪೆರ್ಲ: ಎಂಡೋಸಲ್ಫಾನ್ ಸಂತ್ರಸ್ತ ಯುವಕ ಅಸೌಖ್ಯ ಉಲ್ಭಣಗೊಂಡು ಮೃತಪಟ್ಟರು. ಕಾಟುಕುಕ್ಕೆ ಕರಿಂಬಿತ್ತಿಲು ನಿವಾಸಿ   ದೇವಣ್ಣ ನಾಯ್ಕರ ಪುತ್ರ ಮಧುಸೂದನ (37) ಮೃತಪಟ್ಟ ವ್ಯಕ್ತಿ. ಇವರು ಎಣ್ಮಕಜೆ ಪಂಚಾ ಯತ್‌ನ ಎಂಡೋಸಲ್ಫಾನ್ ಸಂತ್ರಸ್ತರ  ಯಾದಿಯಲ್ಲಿ ಒಳಗೊಂ ಡಿ ದ್ದರು. ಇತ್ತೀಚೆಗೆ ಅಸೌಖ್ಯ ಉಲ್ಬಣ ಗೊಂಡ ಇವರನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ನಿಧನ ಸಂಭವಿಸಿದೆ. ಮೃತರು ತಾಯಿ ದೇವಕಿ, ಸಹೋದರರಾದ ಬಾಲಕೃಷ್ಣ, ಶಿವಕುಮಾರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ತಮಿಳುನಾಡಿನಲ್ಲಿ ಭೀಕರ ಅಪಘಾತ: ಐವರು ಸ್ಥಳದಲ್ಲೇ ಮೃತ್ಯು

ಚೆನ್ನೈ: ತಮಿಳುನಾಡಿನ ತಂಜಾ ವೂರು ತಿರುಚನಾಪಳ್ಳಿ ರಾಷ್ಟ್ರೀಯ ಹೆದ್ದಾರಿಯ ಸೆಂಗಿಪತ್ತಿ ಸೇತುವೆ ಬಳಿ ಇಂದು ಮುಂಜಾನೆ ಸರಕಾರಿ ಬಸ್ ಮತ್ತು ಖಾಸಗಿ ಟೆಂಪೋ ವ್ಯಾನ್ ಮುಖಾಮುಖಿ ಯಾಗಿ ಢಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದಾರೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ರಕ್ಷಾ ಕಾರ್ಯಾಚರಣೆ ಈಗಲೂ ಮುಂದುವರಿಯುತ್ತಿದೆ.

aಉದ್ಯೋಗದ ಹೆಸರಲ್ಲಿ ಹಣ ಲಪಟಾವಣೆ : ಸೆಕ್ರೆಟರಿಯೇಟ್ ನೌಕರ ಸೆರೆ

ಪಾಲಕ್ಕಾಡ್: ಉದ್ಯೋಗ ದೊರ ಕಿಸಿ ಕೊಡುವುದಾಗಿ ಭರವಸೆಯೊಡ್ಡಿ ವ್ಯಕ್ತಿಯಿಂದ ಹಣ  ಲಪಟಾಯಿಸಿದ ಸೆಕ್ರೆಟರಿಯೇಟ್‌ನ ತಾತ್ಕಾಲಿಕ ನೌಕರ ಪೊಲೀಸರ ಸೆರೆಗೀಡಾಗಿದ್ದಾನೆ. ಪನಮಣ ನಿವಾಸಿ ಮಹಮ್ಮದಾಲಿ (39) ಎಂಬಾತ ಬಂಧಿತ ವ್ಯಕ್ತಿ. ಪಾಲಪ್ಪುರಂ ನಿವಾಸಿ ಹರಿದಾಸ್ ಎಂಬವರಿಂದ ಅವರ ಮಗಳಿಗೆ ಉದ್ಯೋಗ ದೊರಕಿಸಿಕೊ ಡುವುದಾಗಿ ಭರವಸೆಯೊಡ್ಡಿ ಮುಹಮ್ಮದಾಲಿ 9 ಲಕ್ಷರೂಪಾಯಿ ಪಡೆದು ವಂಚಿಸಿದ್ದಾನೆನ್ನಲಾಗಿದೆ. ಮುಖ್ಯಮಂತ್ರಿಯೊಂದಿಗೆ ಹತ್ತಿರದ ಸಂಬಂಧವಿದೆಯೆಂದೂ, ಅವರಲ್ಲಿ ಮಾತನಾಡಿ ಉದ್ಯೋಗ ದೊರಕಿ ಸುವುದಾಗಿ ಈತ ನಂಬಿಸಿದ್ದಾನೆನ್ನ ಲಾಗಿದೆ. ಬೇರೆ ಯಾರಾದರೂ ಮುಹ ಮ್ಮದಾಲಿಯ ವಂಚನೆಯಲ್ಲಿ ಸಿಲುಕಿ ದ್ದಾರೆಯೇ ಎಂದು …

ರಾಷ್ಟ್ರೀಯ ಹೆದ್ದಾರಿ: ಜಿಲ್ಲೆಯಲ್ಲಿ 56 ಅಪಘಾತ ಸಾಧ್ಯತೆ ಪ್ರದೇಶಗಳು: ಮಳೆಗಾಲ ಆರಂಭಗೊಳ್ಳುವ ಮೊದಲೇ ಅಗತ್ಯದ ಕ್ರಮಕ್ಕೆ ಜಿಲ್ಲಾಧಿಕಾರಿ ನಿರ್ದೇಶ

ಕಾಸರಗೋಡು: ಜಿಲ್ಲೆಯ ರಾಷ್ಟ್ರೀಯಲ್ಲಿ 56 ಕೇಂದ್ರಗಳು ಅನಾಹುತ ಸಾಧ್ಯತೆಗಳಿರುವ ಪ್ರದೇಶಗಳಾಗಿವೆಯೆಂದು ಜಿಲ್ಲಾಧಿಕಾರಿ ನಿಯೋಜಿಸಿದ ತಜ್ಞರ ಸಮಿತಿ ತನ್ನ ವರದಿಯಲ್ಲಿ ಸೂಚಿಸಿದೆ. ಇದೇ ಸಂದರ್ಭದಲ್ಲಿ ಇಂತಹ ಅನಾಹುತ ನಡೆಯಲು ಸಾಧ್ಯತೆ ಇರುವ ಸ್ಥಳಗಳಲ್ಲಿ ಮಳೆಗಾಲ ಆರಂಭವಾಗುವ ಮೊದಲೇ ಅಗತ್ಯದ  ಕ್ರಮ  ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಇಂಭಶೇಖರ್ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶ ನೀಡಿದ್ದಾರೆ. ಭೂ ಕುಸಿತ ಹಾಗೂ ನೆರೆ  ಸಾಧ್ಯತೆ  ತಡೆಗಟ್ಟಲು ತುರ್ತು ಕ್ರಮ ಕೈಗೊಳ್ಳಬೇಕೆಂದೂ ಅವರು ನಿರ್ದೇಶ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಪತ್ತು  ನಿರ್ವಹಣೆಗೆ ಆದ್ಯತೆ ನೀಡಲಾಗುವುದು. ಎಲ್ಲದರ ಮೇಲೆ …

ರಾಜೀವ್ ಗಾಂಧಿ ಕನಸಿನ ನವಭಾರತ ನಿರ್ಮಾಣಕ್ಕೆ ಸಂಕಲ್ಪ ತೊಡಲು ಕಾಂಗ್ರೆಸ್ ಕರೆ

ಮಂಜೇಶ್ವರ: ಮಾಜಿ ಪ್ರಧಾನಿ ದಿ| ರಾಜೀವ್ ಗಾಂಧಿಯವರ ನವಭಾರತ ನಿರ್ಮಾಣದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ದೃಢ ಸಂಕಲ್ಪ ತೊಡುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಎಂದು ಸೇವಾದಳ ರಾಜ್ಯ ಅಧ್ಯಕ್ಷ ರಮೇಶನ್ ಕರುವಾಚೇರಿ ನುಡಿದರು. ಆಧುನಿಕ ಭಾರತದ ನಿರ್ಮಾಣ, ಭಯೋತ್ಪಾದನೆ ನಿಗ್ರಹ ಇತ್ಯಾದಿ ವಿಚಾರಗಳಲ್ಲಿ ತಮ್ಮದೇ ಆದ ದೃಷ್ಟಿಕೋನ ಹೊಂದಿದ್ದ ರಾಜೀವ್ ಗಾಂಧಿಯವರ ಉನ್ನತಿ ಸಹಿಸಲಾಗದೆ ರಾಜಕೀಯ ವಿರೋಧಿಗಳು ಕಿರುಕುಳ ನೀಡಿದರೂ, ಆತ್ಮವಿಶ್ವಾಸ ಕಳೆದುಕೊಳ್ಳದೆ ದೇಶವನ್ನು ಡಿಜಿಟಲ್ ಕ್ರಾಂತಿಗೆ ಮುನ್ನಡೆಸಿದರು. ರಾಜೀವ್ ಗಾಂಧಿಯವರ ಹತ್ಯೆಯು …